ಸೆಪ್ಟೆಂ 1, 2012

ಕೆ.ಪಿ.ಪೂರ್ಣಚಂದ್ರ ತೇಜಸ್ವಿ


[ಕನ್ನಡ]

"ಎದ್ದೇಳಿ ಎಚ್ಚರಗೊಳ್ಳಿ"
ಎಂದು ಸಂದಣಿಯಲ್ಲಿ ಅಬ್ಬರಿಸಿ ಕೂಗಿತೊಂದು ವಾಣಿ

"ಬೆಚ್ಚಿ ಬೀಳುವಿರೇನು ಪೆಚ್ಚುಗಳಿರಾ!
ಹತ್ತಿಪ್ಪತ್ತು ವರುಷ ಸುಪ್ಪತ್ತಿಗೆಯ ಮೇಲೆ
ಸರಸ ಸಲ್ಲಾಪದಲಿ ಕಳೆದುದ್ದಾಯ್ತು ಕಾಲ.
ಕವಿವ ಕಾಳರಾತ್ರಿಯ ಕೋಳ
ಕಾಣದೇ ಮರುಳ."

"ಉತ್ತರದ ಗಡಿಯ ನೆತ್ತರಿನ ಹೊನಲ
ಬಿತ್ತರದ ರಣಕಹಳೆ ಹೊಯ್ಲುಗಳ
ಕಂಡು ಕೇಳದ ನೀವು; ಕೀಟಗಳಿರಾ
ಎದ್ದೇಳಿ ಎಚ್ಚರಗೊಳ್ಳಿ"

ಎಂದಂದು ಬಾನುಲಿಯಲ್ಲಿ ಗಟ್ಟಿ
ಚೆಕ್ಕಿಗೊಂದು ರುಜು ಹೆಟ್ಟಿ
ಮಲಗಿದನು ಕವಿಯು
ಕಕ್ಕಾಬಿಕ್ಕಿಯಾಗಿ ರಾತ್ರಿಗೆ ಸರಿದಿತ್ತು ಬುವಿ

ಮಾರ್ಚ್ 28, 2012

‘ಕನ್ನಡ ಹಾಸ್ಯ’

‘ಕನ್ನಡ ಹಾಸ್ಯ’ »» ಸೊಳ್ಳೆ ಕಾಟ ತಡೆಯಲಾರದೆ ಬೂಬಣ್ಣ ಮಂಚದ ಕೆಳಗೆ ಮಲಗಿದ. ಆಗ ಅಲ್ಲಿಗೆ ಬಂದ ಮಿಂಚು ಹುಳವ ನೋಡಿ, ಸೊಳ್ಳೆ ಅಂದುಕೊಂಡು, "ಅಯ್ಯೋ ಪಾಪಿ! ಬ್ಯಾಟರಿ ತಗೊಂಡು ಇಲ್ಲಿಗೂ ಬಂದ್ಯಾ ನೀನು!!" »» ಹುಡುಗ: ಐ ಲವ್ ಯೂ ಕಣ್ರೀ… ಹುಡುಗಿ (ಗುರ್ರಾಯಿಸುತ್ತ): ನನ್ನ ಚಪ್ಪಲಿ ಸೈಜ಼್ ಗೊತ್ತಾ… ಹುಡುಗ: ಛೇ! ಏನ್ ಹುಡ್ಗೀರಪ್ಪಾ… ಐ ಲವ್ ಯೂ ಅಂದ್ರೆ ಸಾಕು, ಗಿಫ್ಟ್ ಕೇಳೋಕೆ ಶುರು ಮಾಡ್ತಾರೆ… »» ವೈದ್ಯ: ನಿಮ್ಮ ದೇಹದಲ್ಲಿ ೨೬೫ ಮೂಳೆಗಳಿವೆ.. ಬೂಬಣ್ಣ: ಮೆತ್ತಗೆ ಹೇಳೊ! ಹಿಂದ್ಗಡೆ ನನ್ನ ನಾಯಿ ಕುಳಿತಿದೆ.. »» ಒಂದು ಬೋರ್ಡ್ ಹೀಗಿತ್ತು: ಬನಾರಸ್ ಸೀರೆ- ರೂ.10 ನೈಲಾನ್ ಸೀರೆ- ರೂ.8 ಕಾಟನ್ ಸೀರೆ- ರೂ 5 ಇದನ್ನು ನೋಡಿದ ಹೆಂಗಸೊಬ್ಬಳು, ತನ್ನ ಗಂಡನ ಬಳಿ: ರೀ, ಐನೂರು ರೂಪಾಯಿ ಕೊಡಿ. ನಾನು ಐವತ್ತು ಸೀರೆ ತಗೊಂಡು ಬರ್ತೀನಿ.. ಗಂಡ: ಲೇ, "ಇಸ್ತ್ರೀ ಅಂಗಡಿ" ಕಣೇ ಅದು!! »» ವೈದ್ಯ: ನೀವು ನಿಮ್ಮ ಮಿತ್ರನನ್ನು ಒಂದು ಘಂಟೆ ಮೊದಲೇ ಆಸ್ಪತ್ರೆಗೆ ತಂದಿದ್ದರೆ ಆತ ಉಳಿಯುತ್ತಿದ್ದ… ಮಿತ್ರ (ಸಿಟ್ಟಿನಿಂದ): ಲೋ ಗೂಬೆ, ಅಪಘಾತ ಆಗಿ ಅರ್ಧ ಘಂಟೆ ಅಷ್ಟೇ ಆಯ್ತು… »» ಹೆಂಡತಿ ಗಂಡನಿಗೆ ವ್ಯಾಕರಣ ಕಲಿಸುತ್ತಿದ್ದಳು: "ನಾನು ಸುಂದರವಾಗಿದ್ದೇನೆ." ಇದು ಯಾವ ಕಾಲ? ಗಂಡ: ಭೂತಕಾಲ… »» ಪಾಶ್ಚಾತ್ಯ ಜೀವನಶೈಲಿಯ ದುಷ್ಪರಿಣಾಮಗಳು: ಹೆಂಡತಿ ಓಡೋಡಿ ಬಂದು, ಗಂಡನ ಬಳಿ: ರ್ರೀ!!! ಬೇಗ ಬನ್ರೀ.. "ನಿಮ್ಮ" ಮಕ್ಕಳು ಹಾಗೂ "ನನ್ನ" ಮಕ್ಕಳು ಸೇರಿಕೊಂಡು "ನಮ್ಮ" ಮಕ್ಕಳನ್ನು ಹೊಡೆಯುತ್ತಿದ್ದಾರೆ… »» ಹುಡುಗ: ಹುಡುಗರ ಹೃದಯ ದೇಗುಲದಷ್ಟು ಪವಿತ್ರವಾದುದು… ಹುಡುಗಿ: ಅದು ಹೇಗೆ? ಹುಡುಗ: ಐ ಲವ್ ಯೂ ಅಂದಾಕ್ಷಣ ಚಪ್ಪಲಿ ತೆಗೀತೀರಲ್ಲಾ.. ಅದಕ್ಕೆ »» ಅಂದು ಬೂಬಣ್ಣ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು.. ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ… ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ… »» ಒಮ್ಮೆ ಬೂಬಣ್ಣ ಹಾಗೂ ಚೋಮಣ್ಣ ಒಂದು ಉದ್ಯಾನವನಕ್ಕೆ ಹೋಗುತ್ತಾರೆ. ಅಲ್ಲಿ ಕೊಳದಲ್ಲಿ ಮೀನುಗಳು ಈಜಾಡುತ್ತಿರುತ್ತವೆ.. ಚೋಮಣ್ಣ: ಬೂಬಣ್ಣ! ಕೊಳಕ್ಕೆ ಬೆಂಕಿ ಬಿದ್ದರೆ ಅದರಲ್ಲಿರುವ ಮೀನುಗಳ ಪಾಡೇನಾಗುತ್ತದೆ? ಬೂಬಣ್ಣ: ಏನಾಗಲ್ಲ! ಅವುಗಳು ಪಕ್ಕದಲ್ಲಿರುವ ಮರಗಳನ್ನೇರಿ ಕುಳಿತುಕೊಳ್ಳುತ್ತವೆ ಅಷ್ಟೇ.. »» ಒಮ್ಮೆ ಬೂಬಣ್ಣ ಹಾಗೂ ಮಿತ್ರರು ಪ್ರವಾಸಕ್ಕೆ ಹೋಗುತ್ತರೆ.. ರಾಮಣ್ಣ: ಅಲ್ನೋಡು! ಆ ಪುರಾತನ ದೇವಸ್ತಾನ ಸುಮಾರು ೪೦೦೦ (4000)(ನಾಲ್ಕು ಸಾವಿರ) ವರ್ಷ ಹಳೆಯದು.. ಬೂಬಣ್ಣ: ಸುಮ್ನೆ ಬೋಗಳೆ ಬಿಡಬೇಡ! ಈಗಿನ್ನೂ ೨೦೦೯ (2009)! »» ಒಮ್ಮೆ ಬೂಬಣ್ಣನಿಗೊಂದು ಚಿಕ್ಕ ಹೊಟ್ಟೆಯ ಆಪರೇಷನ್ ಆಯ್ತು. ಅವನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮೊದಲು, ವೈದ್ಯರು(doctor) ಇನ್ನೊಂದು ಕ್ಷ-ಕಿರಣ ತಪಾಸಣೆಗೊಳಪಡಿಸಿದರು(x-ray test). ಆಗ ವೈದ್ಯರಿಗೆ ತಮ್ಮ ಕೈಗವಸು(gloves) ಇನ್ನೂ ಬೂಬಣ್ಣನ ಹೊಟ್ಟೆಯೊಳಗೇ ಇರುವ ಸಂಗತಿ ತಿಳಿಯಿತು! ವೈದ್ಯರು(ಈ ವಿಷಯ ಬೂಬಣ್ಣನಿಗೆ ತಿಳಿಸುತ್ತಾ..): ಬೂಬಣ್ಣ! ಈ ತಪ್ಪಿಗಾಗಿ ಕ್ಷಮಿಸು. ಅದನ್ನು ಹೊರತೆಗೆಯಲು ಇನ್ನೊಂದು ಚಿಕ್ಕ ಆಪರೇಷನ್ ಮಾಡಬೇಕಾಗಿದೆ… ಬೂಬಣ್ಣ: ಅಯ್ಯೋ! ಇಷ್ಟು ಚಿಕ್ಕ ವಿಷಯಕ್ಕೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ?! ಈ ಹಣ ತಗೊಂಡು ಒಂದು ಹೊಸಾ ಕೈಗವಸು ಕೊಂಡುಕೊಳ್ಳಿ… »» ಬೂಬಣ್ಣ: ನನ್ನ ಬೆಕ್ಕು ತನ್ನ ಹೆಸರು ತಾನೇ ಹೇಳುತ್ತದೆ! ರಾಮಣ್ಣ: ನಿಜವಾಗಿಯೂ?! ಏನದರ ಹೆಸರು? ಬೂಬಣ್ಣ: "ಮೀಯಾಂವ್"! »» ರಾಮಣ್ಣ: ನಾವು ನೀರಿನಿಂದೇಕೆ ವಿದ್ಯುತ್ ಶಕ್ತಿ ಉತ್ಪಾದಿಸುತ್ತೇವೆ? ಬೂಬಣ್ಣ: ಇಲ್ಲದಿದ್ದರೆ, ನಾವು ನೀರು ಕುಡಿಯುವಾಗ ನಮಗೆ ಶಾಕ್ ಹೊಡೆಯುವುದಿಲ್ಲವೇ?! »» ರಾಮಣ್ಣ: ಬರಲೇ ಬೂಬಣ್ಣ, ನಾನು ಹಂಪನಕಟ್ಟೆಯಲ್ಲಿ ಬಸ್ಸು ಹಿಡಿದು ಹೋಗುತ್ತೇನೆ… ಬೂಬಣ್ಣ: ಅದನ್ನು ಹಿಡಿಯಲು ಹೇಗೆ ಸಾಧ್ಯ?! ಬಸ್ಸುಗಳು ನಿನಗಿಂತ ತುಂಬಾ ದೊಡ್ಡ ಹಾಗೂ ಭಾರ ಇರುತ್ತವೆ.. »» ಬೂಬಣ್ಣ ಚಿಕ್ಕವನಿರುವಾಗ, ದೀಪಾವಳಿ ಸಮಯದಲ್ಲಿ ತನ್ನ ಅಮ್ಮನ ಜೊತೆಯಲ್ಲಿ ಖರೀದಿಗೆ ಹೊರಟಾಗ… ಚಿಕ್ಕ ಬೂಬಣ್ಣ: ಅಮ್ಮಾ! ಅಮ್ಮಾ!.. ನಂಗೆ ಆ ಕೆಂಪು ಬಣ್ಣದ ದೊಡ್ಡ ಪಟಾಕಿ ಬೇಕು! ಅದ್ರಿಂದ ದೊಡ್ಡ ಸದ್ದಾಗುತ್ತದೆ.. ನಂಗದೇ ಬೇಕು!.. ಅಮ್ಮ: ಏನು.. ..!!!!.. ಅಯ್ಯೊ! ದೇವರೇ!! ಮೂರ್ಖಾ! ಅದು ದೊಡ್ಡ ಪಟಾಕಿಯಲ್ಲ, ಗ್ಯಾಸ್ ಸಿಲಿಂಡರು!! »» ಚಿಕ್ಕವನಾಗಿದ್ದಾಗ, ಬೂಬಣ್ಣನಿಗೊಮ್ಮೆ ಒಂದು ಹುಲಿಮರಿ ಸಿಕ್ಕಿತು. ಅದನ್ನು ಹಿಡಿದುಕೊಂಡು ತನ್ನ ತಂದೆಯ ಬಳಿ ತಂದನು.. ಬೂಬಣ್ಣ: ಅಪ್ಪಾ! ನಂಗಿದು ದಾರಿಯಲ್ಲಿ ಸಿಕ್ಕಿತು. ಏನು ಮಾಡಲಿ? ಅಪ್ಪ(ಹೆದರಿಕೊಂಡು): ಅದನ್ನು ಈಗಲೇ ಮೃಗಾಲಯಕ್ಕೆ(zoo) ಕರೆದುಕೊಂಡು ಹೊಗು! ಮರುದಿನ ಬೂಬಣ್ಣನ ಅಪ್ಪ ನೋಡಿದ್ರೆ, ಆ ಹುಲಿಮರಿಯು ಇನ್ನೂ ಬೂಬಣ್ಣನ ಬಳಿಯೇ ಇತ್ತು! ಅಪ್ಪ: ನಿನಗೆ ಹೇಳಿದ್ರೆ ಭಾಷೆ ಇಲ್ಲವೇ?! ಅದನ್ನು ನಿನ್ನೆಯೇ ಮೃಗಾಲಯಕ್ಕೆ ಕರೆದುಕೊಂಡು ಹೋಗೆಂದು ಹೇಳಿದ್ದೆನಲ್ಲಾ.. ಬೂಬಣ್ಣ: ಆದ್ರೆ ಅಪ್ಪಾ! ನೀನು ಹೇಳಿದ ಹಾಗೆಯೇ ನಿನ್ನೆ ಮೃಗಾಲಯಕ್ಕೆ ಅದನ್ನು ಕೊಂಡೊಯ್ದಿದ್ದೆ.. ಇವತ್ತು ಅದನ್ನು ತಿರುಗಾಡಿಸಲು ಒಂದು ಸಿನಿಮಾಕ್ಕೆ ಕರೆದುಕೊಂಡು ಹೋಗೋಣ ಅಂತಿದ್ದೇನೆ.. »» ಚಿಕ್ಕವನಾಗಿದ್ದಾಗ, ಒಮ್ಮೆ ಬೂಬಣ್ಣ ತನ್ನ ತಂದೆಯೊಡನೆ ಊಟ ಮಾಡುತ್ತಿದ್ದನು… ಬೂಬಣ್ಣ: ಅಪ್ಪಾ! ಒಂದು ವಿಷಯ… ಅಪ್ಪ: ಸುಮ್ಮನಿರು! ಊಟ ಮಾಡುವಾಗ ಮಾತನಾಡಬಾರದು! ಬೂಬಣ್ಣ: ಆದ್ರೆ ಅಪ್ಪಾ!… ಅಪ್ಪ: ಹೇಳಿದ್ದು ಗೊತ್ತಾಗಲಿಲ್ವೇ?! ಸುಮ್ಮನಿರು! ಮತ್ತೆ ಬೂಬಣ್ಣ ಸುಮ್ಮನೇ ಊಟ ಮಾಡಿದ. ಅವರ ಊಟ ಮುಗಿದ ನಂತರ… ಅಪ್ಪ: ಈಗ ಹೇಳು, ನಿಂಗೇನು ಹೇಳ್ಬೇಕಿತ್ತು? ಬೂಬಣ್ಣ: ನಿಮ್ಮ ಊಟದಲ್ಲಿ ಒಂದು ಸತ್ತ ಜಿರಳೆ ಬಿದ್ದಿತ್ತು. ಇಷ್ಟೇ ಹೇಳ್ಲಿಕ್ಕಿತ್ತು… »» ಚೋಮಣ್ಣ: ಬೂಬಣ್ಣ! ಸೆಖೆ ಆದಾಗ ಏನು ಮಾಡುವುದು? ಬೂಬಣ್ಣ: ಹವಾನಿಯಂತ್ರಕದ(air conditioner) ಎದುರು ಕುಳಿತುಬಿಡು. ಚೋಮಣ್ಣ: ಇನ್ನೂ ಹೆಚ್ಚಿಗೆ ಸೆಖೆ ಆದರೆ….? ಬೂಬಣ್ಣ: ಆಗ ಹವಾನಿಯಂತ್ರಕವನ್ನು ಚಾಲೂ (on) ಮಾಡು… »» ರೋಗಿ: ನನಗೆ ಬಸ್ಸಿನಲ್ಲಿ ಕುಳಿತ ಕೂಡಲೇ ನಿದ್ರೆ ಬರುತ್ತದೆ… ವೈದ್ಯ: ಅದಕ್ಕೇನೀಗ? ಚೆನ್ನಾಗಿ ನಿದ್ರೆ ಮಾಡಿ. ಏನು ಗೊರಕೆ ಸಮಸ್ಯೆನಾ? ರೋಗಿ: ಪೂರ್ತಿ ಕೇಳಿಸ್ಕೊಳ್ಳಿ ಸಾರ್. ಗೊರಕೆ ಗಿರಕೆ ಆಮೇಲಾಯ್ತು ಬಿಡಿ, ಆ ಬಸ್ಸಿನ ಚಾಲಕ* (driver) ನಾನೇ! »» ಬೂಬಣ್ಣ: ಸ್ವಾಮೀಜಿ! ನಾನು ಏನೂ ಕೆಲಸ ಮಾಡುವ ಅಗತ್ಯವಿಲ್ಲದೇ ಇರೋ ನೌಕರಿ ಯಾವುದಿದೆ? ಅದರಲ್ಲಿ ಬೇರೆಯವರೇ ಕೆಲಸ ಮಾಡಬೇಕು, ಆದರೆ ಹಣ ನನಗೆ ಸಿಗಬೇಕು… ಸ್ವಾಮೀಜಿ: ಮಗೂ.. ಹೋಗು! ಶೌಚಾಲಯದಲ್ಲಿ ಕೆಲಸ ಮಾಡು… »» ಬೂಬಣ್ಣನವರು ಚಿಕ್ಕವರಾಗಿದ್ದಾಗ… ರಾಮಣ್ಣ: ಪರೀಕ್ಷೆಯಲ್ಲಿ ಬರೆಯಲು ನನಗೇನೂ ಗೋಚರಿಸಲಿಲ್ಲ. ಹಾಳೆ ಖಾಲಿ ಬಿಟ್ಟು ಬಂದೆ.. ಚೋಮಣ್ಣ: ನಾನೂ ಸಹ… ಖಾಲಿ ಹಾಳೆ ಕೊಟ್ಟು ಬಂದೆ.. ಬೂಬಣ್ಣ: ಆಯ್ಯಯ್ಯೋ! ನನ್ನ ಹಾಳೆಯೂ ಖಾಲಿಯಾಗೇ ಇತ್ತು! ನಾವು ನಕಲು*(copy) ಹೊಡೆದಿದ್ದೇವೆಂದು ಮೇಷ್ಟ್ರು ಭಾವಿಸುತ್ತಾರೆ!! »» ಜೀವಶಾಸ್ತ್ರದ ಶಿಕ್ಷಕಿ: ನಮಗೆ ಮೊಟ್ಟೆ ಕೊಡುವ ಯಾವುದಾದರೂ ನಾಲ್ಕು ಜೀವಿಗಳ ಹೆಸರು ಹೇಳು. ಬೂಬಣ್ಣ: ಭೌತಶಾಸ್ತ್ರ ಅಧ್ಯಾಪಕರು, ಗಣಿತಶಾಸ್ತ್ರ ಅಧ್ಯಾಪಕರು, ರಾಸಯನಶಾಸ್ತ್ರದ ಅಧ್ಯಾಪಕಿ, ಹಾಗೂ ಕನ್ನಡದ ಅಧ್ಯಾಪಕಿ… »» ತರಗತಿ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಚೋಮಣ್ಣ ಎದ್ದು ಹೊರಗೆ ನಡೆದ. ಶಿಕ್ಷಕ: ಇದೇನಿದು?! ಇವನಿಗೇನಾಗಿದೆ? ಬೂಬಣ್ಣ: ಸಾರ್, ಅವನಿಗೆ ಒಳ್ಳೇ ನಿದ್ರೆಯಲ್ಲಿ ನಡೆದಾಡುವ ಅಭ್ಯಾಸವಿದೆ… »» ಬೂಬಣ್ಣನ ಮನೆಯ ಪ್ಲಗ್ನಲ್ಲಿ ಹೊಗೆ ಬರ್ತಾ ಇತ್ತು. ತಕ್ಷಣ ಬೂಬಣ್ಣ ಮೆಸ್ಕೋಮ್ ಗೆ (MESCOM) ಫೋನ್ ಮಾಡಿ, "ಏಯ್! ಯಾರಯ್ಯಾ ಅದು? ಸಿಗರೇಟು ಸೇದಿ ನಮ್ಮನೆ ಪ್ಲಗ್ಗಿನಲ್ಲಿ ಹೊಗೇ ಬಿಡೋದು?!" »» ಬಸ್ ಕಂಡಕ್ಟರ್: ಅಜ್ಜಿ! ಮೂರು ಸಲ ನಿಮ್ಮ ಸ್ಟಾಪ್ ಬಂತು ಅಂತ ಶಿಳ್ಳೆ ಹೊಡೆದ್ರೂ ತಿರುಗಿಯೂ ನೋಡಿಲ್ವಲ್ಲಾ ನೀವು… ಅಜ್ಜಿ: ಮಗೂ, ಶಿಳ್ಳೆ ಹೊಡೆದ್ರೆ ತಿರುಗಿ ನೋಡೊ ವಯಸ್ಸಲ್ಲಪ್ಪಾ ನಂದು… ಹಾಗೂ ಇಂದಿಗೆ ಕೊನೆಯದಾಗಿ… »» ರಾಮಣ್ಣ: ನೀರು ಕುದಿಸಿದಾಗ ಅದರಲ್ಲಿರುವ ಕೀಟಾಣುಗಳೆಲ್ಲ ಸತ್ತು ಹೋಗುತ್ತವೆ. ಆದ್ದರಿಂದ ಕುದಿಸಿದ ನೀರನ್ನು ಸುರಕ್ಷಿತವಾಗಿ ಕುಡಿಯಬಹುದು… ಬೂಬಣ್ಣ: ಅಯ್ಯೋ! ಆದರೆ ಸತ್ತು ಹೋದ ಕೀಟಾಣುಗಳ ಶವಗಳು ಆ ನೀರಲ್ಲೇ ತೇಲುತ್ತಿರುತ್ತವಲ್ಲಾ!!! - ಬಸವರಾಜ್ ಎ.ಎನ್. Basavaraj. A.N. Bangalore. E-mail : angadi.com@gmail.com

ಕನ್ನಡಿಗರಿಗೆ ಏರ್‌ಟೆಲ್ ನಾಮ !

ಕನ್ನಡಿಗರಿಗೆ ಏರ್‌ಟೆಲ್ ನಾಮ !
ನಾನು ಏಳೆಂಟು ವರ್ಷದಿಂದ ಏರ್‌ಟೆಲ್ ಪ್ರೀಪೇಡ್ ಮೊಬೈಲ್ ಸಿಮ್‌ಕಾರ್ಡ್‌ ಉಪಯೋಗಿಸುತ್ತಿದ್ದೇನೆ. ಮೂರ್ನಾಲ್ಕು ವರ್ಷದಿಂದ ಮತ್ತೊಂದು ಪೋಸ್ಟ್‌ಪೇಡ್ ಸಿಮ್‌ಕಾರ್ಡ್‌ ಉಪಯೋಗಿಸುತ್ತಿದ್ದೇನೆ. ಒಂದು ವರ್ಷದಿಂದ ಏರ್‌ಟೆಲ್ ಡಿಶ್ ಟಿವಿ ಉಪಯೋಗಿಸುತ್ತಿದ್ದೇನೆ. ಆದರೂ ಇವರ ಸೇವೆ ನನಗೆ ತೃಪ್ತಿದಾಯಕವಾಗಿಲ್ಲ. ಪ್ರಿಪೇಡ್‌ ಸಿಮ್‌ನಲ್ಲಿ ಈ ಹಿಂದೆ ಆಗಾಗ ಇದ್ದಕ್ಕಿದ್ದಂತೆ ದುಡ್ಡು ಕಟಾವು ಆಗುತಿತ್ತು. ಕೇಳಿದರೆ ನೀವು "ಅದನ್ನು ಆಯ್ಕೆ ಮಾಡಿದ್ದೀರಿ, ಇದನ್ನು ಒತ್ತಿದ್ದೀರಿ" ಎಂದು ಕಾಗೆ ಹಾರಿಸುತ್ತಿದ್ದರು. ಒಂದು ಸಲ ಜಗಳ ಮಾಡಿದ ನಂತರ ಕಟಾವು ಆದ ಹಣ ಹಿಂದಿರುಗಿಸಿದ್ದರು. ಯಾವುದಾದರೂ ವಿಷಯವನ್ನು ನೀವು ಪಟ್ಟು ಹಿಡಿದು ಕೇಳಿದರೆ, "ಸರ‍್ ಅರ್ಧ ಗಂಟೆಯಲ್ಲಿ ಸರಿ ಮಾಡಿ ಕೊಡುತ್ತೇವೆ", ಎಂದು ಹೇಳುತ್ತಾರೆ. ಅರ್ಧ ಗಂಟೆ ಕಳೆದ ನಂತರ ಮತ್ತೆ ಕರೆ ಮಾಡಿದರೆ ’ಗ್ರಾಹಕ ಸೇವಾ ಪ್ರತಿನಿಧಿ’ಗಳಿಗೆ ಕರೆ ಹೋಗುವುದೇ ಇಲ್ಲ. ಕಂಪ್ಯೂಟರ‍್ ಆಂಟೀ "ಒಂದು ಒತ್ತಿ, ಎರಡು ಒತ್ತಿ, ಅದನ್ನು ಒತ್ತಿ, ಇದನ್ನು ಒತ್ತಿ’ ಎಂದು ನಮ್ಮ ಸಮಯ ತಿನ್ನುತ್ತಾಳೇಯೇ ಹೊರತೂ, ’ಒಂಬತ್ತು ಒತ್ತಿ’ ಎಂದು ಹೇಳುವುದೇ ಇಲ್ಲ. ಸುಮಾರು ಹದಿನೈದು ದಿನ ನಾವು ಏನೇ ತಿಪ್ಪರಲಾಗ ಹಾಕಿದರೂ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಷ್ಟರಲ್ಲಿ ಆ ವಿಷಯವೇ ಮರೆತು ಹೋಗಿರುತ್ತದೆ. ಎರಡು ವರ್ಷದ ಹಿಂದೆ ಟ್ರಾಯ್ ಸೂಚನೆ ಮೇರೆಗೆ "ಆಜೀವ ಸದಸ್ಯತ್ವ" ಎಂದು ಹೇಳಿ ರೂ. 1,200/- ಕಟ್ಟಿಸಿಕೊಂಡರು. ಆಗಲೂ ’ಆಜೀವ ಎಂದರೆ ಎಷ್ಟು ದಿನ?" ಎಂದು ಕೇಳಿದ್ದೆ. "ನೀವು ಜೀವಂತ ಇರುವವರೆಗೆ" ಎಂದು ತಿಳಿಸಿದ್ದರು. ನಾನೂ ಖುಷಿ ಆಗಿದ್ದೆ. ಆದರೆ ಈಗ ಅದು ಕೊನೆಗೊಳ್ಳುವ ದಿನಾಂಕವನ್ನು ಪರಿಶೀಲಿಸಿದರೆ 22 ಮೇ 2012 ಎಂದು ತೋರಿಸುತ್ತಿದೆ. ಅಂದರೆ ಏರ್‌ಟೆಲ್‌ನವರ ಪ್ರಕಾರ ನಾನು ಸಾಯಲು ಇನ್ನೆರಡೇ ತಿಂಗಳು ಬಾಕಿ ! ಇವರೇ ಬೇಗನೆ ಒಂದು ಪ್ರಳಯ ಮಾಡುತ್ತಾರೋ ಏನೋ !? ಅಥವಾ ಸುಪಾರಿ ಕೊಟ್ಟು ನನ್ನನ್ನು ಮುಗಿಸಲು ಸಂಚು ರೂಪಿಸಿದ್ದಾರೆಯೇ ? ಗೊತ್ತಿಲ್ಲ. ಆ ನಂತರ DND ಸೇವೆ ಬಂತು. ಈಗ ಆ ತೊಂದರೆ ಇಲ್ಲ. ಪೋಸ್ಟ್‌ಪೇಡ್ ಸಿಮ್‌ನಿಂದ ಅಷ್ಟೇನೂ ತೊಂದರೆ ಆಗಿಲ್ಲ. ಆದರೆ ಬಿಲ್ ಕಟ್ಟುವುದು ಒಂದು ದಿನ ತಡವಾದರೂ ದಿನಕ್ಕೆ ನಾಲ್ಕಾರು ಜನ ಕರೆ ಮಾಡಿ ಏನೋ ಲಕ್ಷ ರೂಪಾಯಿ ಸಾಲ ಕೊಟ್ಟವರಂತೆ "ಯಾವಾಗ ಕಟ್ಟುತ್ತೀರಿ?" ಎಂದು ಕೇಳುತ್ತಿದ್ದರು. ಮೊನ್ನೆ ಒಂದು ದಿನ "ನಾನು ಕಟ್ಟಲ್ಲ, ಡಿಸ್‌ಕನೆಕ್ಟ್ ಮಾಡಿ," ಎಂದು ಹೇಳಿದೆ. ಅದಾದ ನಂತರ ಕರೆ ಬಂದಿಲ್ಲ, ನಾನು ಬಿಲ್ ಕಟ್ಟಿಲ್ಲ, ಅವರು ಡಿಸ್‌ಕನೆಕ್ಟ್ ಸಹ ಮಾಡಿಲ್ಲ! ಅದೆಲ್ಲಾ ಒಂದೆಡೆಗಿರಲಿ, ಅಸಲಿ ವಿಷಯ ಇರುವುದು ಏರ್‌ಟೆಲ್‌ನವರ ಡಿಶ್ ಟಿವಿ ಒಳಗೆ. ರೂ 1,590/- ನೀಡಿ ಇವರ ಕೊಡೆ (ಆಂಟೆನಾ) ಹಾಕಿಸಿಕೊಳ್ಳುವಾಗ ಇವರು ಹೇಳಿದ್ದು ಕನ್ನಡದ ಎಲ್ಲಾ ವಾಹಿನಿಗಳೂ ಬರುತ್ತವೆ ಎಂದು. ನಾನು ಕ್ರಿಕೆಟ್ ವಿಶ್ವಕಪ್‌ ಸಮಯದಲ್ಲಿ ಹಾಕಿಸಿದ್ದು. ಹಾಗಾಗಿ ಆಗ ಸಮಯವಿದ್ದಾಗೆಲ್ಲಾ ಬರೀ ಕ್ರಿಕೆಟ್ ನೋಡೋದೇ ಆಯ್ತು. ಕ್ರಿಕೆಟ್ ಹಂಗಾಮ ಮುಗಿದ ನಂತರವೇ ನನಗೆ ತಿಳಿದಿದ್ದು, ಏರ್‌ಟೆಲ್‌ನವರ ಕೊಡೆ ಕೊಡೆಯಲ್ಲ, ಅದೊಂತರ ಟೋಪಿ ಎಂದು. ಇವರ ಡಿಶ್‌ನಲ್ಲಿ ಕನ್ನಡದ ಅನೇಕ ವಾಹಿನಿಗಳು ಸಿಗುವುದೇ ಇಲ್ಲ. (ಉದಾ : ರಾಜ್‌ ಮ್ಯುಸಿಕ್, ಸಮಯ, ಚಿಂಟೂ ಇತ್ಯಾದಿ). ಸುವರ್ಣಾ, ಜನಶ್ರೀ ವಾಹಿನಿಯನ್ನು ಕೇಳಿದ ನಂತರ ಹಾಕಿ ಕೊಟ್ಟರು. ಉದಯ ಕಾಮೆಡಿ ಬೇಕಾದರೆ ಮತ್ತೊಂದಿಷ್ಟು ಹಣ ನೀಡಬೇಕಂತೆ. ಹಣ ನೀಡಿದರೂ ರಾಜ್‌ ಮ್ಯುಸಿಕ್, ಚಿಂಟೂ ಹಾಗೂ ಇತ್ತೀಚಿನ ಪಬ್ಲಿಕ್ ಟಿವಿಗಳು ಸಿಗುವುದಿಲ್ಲವಂತೆ ! ಆದರೆ ಹಣ ನೀಡಿದ ತಪ್ಪಿಗೆ ಅನೇಕ ಇತರೆ ಭಾಷೆಗಳ ವಾಹಿನಿಗಳನ್ನು ಬಳುವಳಿಯಾಗಿ ನೀಡಿದ್ದಾರೆ. ನಮ್ಮ ದುಡ್ಡು ಸದುಪಯೋಗ ಆಗಬೇಕೆಂದರೆ ಅವುಗಳನ್ನು ನೋಡಿ ಕರ್ಮ ಕಳೆದುಕೊಳ್ಳಬೇಕು ಅನ್ನುವುದು ಏರ್‌ಟೆಲ್ ಗ್ರಾಹಕ ಸೇವಾ ಶತ್ರುಗಳ ಅಂಬೋಣ. ಮತ್ತೊಂದು ಗಮನಾರ್ಹ ಅಂಶವೆಂದರೆ ಇವರು ಅನೇಕ ಪ್ಯಾಕೇಜ್‌ಗಳನ್ನು ಮಾಡಿದ್ದಾರೆ. ಆದರೆ ಅವುಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಪ್ಯಾಕೇಜ್ ಇಲ್ಲ. ಕನ್ನಡವೊಂದೇ ಅಲ್ಲದೇ ದಕ್ಷಿಣ ಭಾರತದ ಯಾವ ಭಾಷೆಗೂ ಪ್ರತ್ಯೇಕ ಪ್ಯಾಕೇಜ್ ಇಲ್ಲ. "ಸೌತ್ ಇಂಡಿಯಾ ಪ್ಯಾಕೇಜ್" ಅಂತ ಒಂದಿದೆ. ಅದನ್ನೇ ಹಾಕಿಸಿಕೊಳ್ಳಬೇಕು. ಅದರಲ್ಲೂ ದಕ್ಷಿಣ ಭಾರತದ ಎಲ್ಲಾ ವಾಹಿನಿಗಳೂ ಬರುವುದಿಲ್ಲ ಅನ್ನೋದು ಅವರ ಕೊಡೆಯಷ್ಟೇ ದಿಟ. ಕನ್ನಡಿಗರಿಂದ ಸುಲಿಗೆ ಮಾಡಿ ಕನ್ನಡದ ಎಲ್ಲಾ ವಾಹಿನಿಗಳನ್ನೂ ತೋರಿಸದೇ ನಮ್ಮ ದುಡ್ಡಿನಿಂದ ಬೇರೆ ಭಾಷೆಯ ವಾಹಿನಿಗಳನ್ನು ನಮ್ಮ ಮೇಲೆ ಹೇರಿಕೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ "ಪ್ಯಾಕೇಜ್‌ ಇರೋದೇ ಹೀಗೆ!" ಎಂಬ ಉತ್ತರ ಬರುತ್ತದೆ. ಅಂದರೆ ಅವರು ಇರೋದೇ ಹೀಗೆ! ಹಾಗಾದ್ರೆ ಕನ್ನಡಿಗರು ಸುಮ್ಮನಿರೋದಾದ್ರೂ ಹೇಗೆ ?

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ 2009
ಪರೀಕ್ಷೆ ನಡೆದ ದಿನಾಂಕ : ..................

01. 1970 ರ ದಶಕದಲ್ಲಿ ದಲಿತರನ್ನು ಒಗ್ಗೂಡಿಸಿದ ಚಳುವಳಿ.
ಎ. ರೈತ ಚಳುವಳಿ
ಬಿ. ಬಂಡಾಯ ಚಳುವಳಿ
ಸಿ. ಮಹಿಳಾ ಚಳುವಳಿ
ಡಿ. ಬೂಸಾ ಚಳುವಳಿ
ಉತ್ತರ: ಬಿ. ಬಂಡಾಯ ಚಳುವಳಿ
02. 'ಬೆಳ್ಳಿ' ಈ ಕಾದಂಬರಿಯಲ್ಲಿ ಒಂದು ಮುಖ್ಯ ಪಾತ್ರವಾಗಿದೆ
ಎ. ಕೊಳೆ
ಬಿ. ಚೋಮನದುಡಿ
ಸಿ. ಕುಡಿಯರ ಕೂಸು
ಡಿ. ಮಾಗಿ
ಉತ್ತರ: ಬಿ. ಚೋಮನದುಡಿ
03. ಬಸವಣ್ಣನವರ ಜಾತಿ ಮೂಲವನ್ನು ಕೆದಕಲು ಹೊರಟು ನಿಷೇಧಕ್ಕೆ ಒಳಗಾದ ಇತ್ತೀಚಿನ ಕೃತಿ.
ಎ. ಮಹಾಚೈತ್ರ
ಬಿ. ಮಾರ್ಗ
ಸಿ. ಸಂಕ್ರಾಂತಿ
ಡಿ. ಆನುದೇವಾ ಹೊರಗಣವನು
ಉತ್ತರ: ಡಿ. ಆನುದೇವಾ ಹೊರಗಣವನು
04. 'ಕ್ಯಾದಿಗಿ ಬನದಾಗ ಕತೆಯಾಗಿ ನಿಂತವರು' - ಇದು ಇವರ ಕೃತಿ
ಎ. ಗೀತಾ ನಾಗಭೂಷಣ್
ಬಿ. ದು. ಸರಸ್ವತಿ
ಸಿ. ಬಿ.ಟಿ.ಜಾಹ್ನವಿ
ಡಿ. ವೈದೇಹಿ
ಉತ್ತರ: ಸಿ. ಬಿ.ಟಿ.ಜಾಹ್ನವಿ
05. 'ಅಭಿನವ ಕಾಳಿದಾಸ' ಎಂಬ ಬಿರುದಿಗೆ ಪಾತ್ರರಾಗಿರುವವರು
ಎ. ಬಸವಪ್ಪ ಶಾಸ್ತ್ರಿ
ಬಿ. ಎಂ.ಗೋವಿಂದ ಪೈ
ಸಿ. ಬಿ.ಎಂ.ಶ್ರೀ
ಡಿ. ಆರ್. ನರಸಿಂಹಾಚಾರ್
ಉತ್ತರ: ಎ. ಬಸವಪ್ಪ ಶಾಸ್ತ್ರಿ
06. ಚಂದ್ರಶೇಖರ ಪಾಟೀಲರ ಸಂಪಾದಕತ್ವದ ಸಾಹಿತ್ಯಿಕ ಪತ್ರಿಕೆಯ ಹೆಸರು
ಎ. ಹೊಸತು
ಬಿ. ಕನ್ನಡ ಟೈಮ್ಸ್
ಸಿ. ಸಂವಾದ
ಡಿ. ಸಂಕ್ರಮಣ
ಉತ್ತರ: ಡಿ. ಸಂಕ್ರಮಣ
07. 'ಅಲೆಗಳಲ್ಲಿ ಅಂತರಂಗ' ಇದು ವೈದೇಹಿಯವರ ಸಮಗ್ರ
ಎ. ಪ್ರಬಂಧಗಳ ಸಂಕಲನ
ಬಿ. ಮಕ್ಕಳ ನಾಟಕಗಳ ಸಂಕಲನ
ಸಿ. ಕವಿತೆಗಳ ಸಂಕಲನ
ಡಿ. ಕತೆಗಳ ಸಂಕಲನ
ಉತ್ತರ: ಡಿ. ಕತೆಗಳ ಸಂಕಲನ
08. ಮೊದಲ ವಿಶ್ವ ಕನ್ನಡ ಸಮ್ಮೇಳನ ಜರುಗಿದ ಸ್ಥಳ
ಎ. ಮೈಸೂರು
ಬಿ. ಬೆಳಗಾವಿ
ಸಿ. ಧಾರವಾಡ
ಡಿ. ಬೆಂಗಳೂರು
ಉತ್ತರ: ಡಿ. ಬೆಂಗಳೂರು
09. 'ಸಿರಿಸಂಪಿಗೆ' ನಾಟಕವನ್ನು ಬರೆದವರು
ಎ. ಚಂದ್ರಶೇಖರ ಪಾಟೀಲ
ಬಿ. ಪಿ. ಲಂಕೇಶ್
ಸಿ. ಶಾಂತಿನಾಥ ದೇಸಾಯಿ
ಡಿ. ಚಂದ್ರ ಶೇಖರ ಕಂಬಾರ
ಉತ್ತರ: ಡಿ. ಚಂದ್ರ ಶೇಖರ ಕಂಬಾರ

10. 'ಸಂಜೆಗಣ್ಣಿನ ಹಿನ್ನೋಟ' ಎಂಬುದು ಇವರ ಕೃತಿ
ಎ. ಅನಕೃ
ಬಿ. ಎ.ಎನ್. ಮೂರ್ತಿರಾವ್
ಸಿ. ಪೂರ್ಣ ಚಂದ್ರ ತೇಜಸ್ವೀ
ಡಿ. ಶಿವರಾಮ ಕಾರಂತ
ಉತ್ತರ: ಬಿ. ಎ.ಎನ್. ಮೂರ್ತಿರಾವ್
11. 'ಮಲ್ಲಿಗೆಯ ಮಾಲೆ' ಇದು ಇವರ ಸಮಗ್ರ ಕವಿತೆಗಳ ಸಂಕಲನವಾಗಿದೆ.
ಎ. ಪು.ತಿ.ನ
ಬಿ. ಕೆ.ಎಸ್.ನರಸಿಂಹಸ್ವಾಮಿ
ಸಿ. ಜಿ.ಎಸ್.ಶಿವರುದ್ರಪ್ಪ
ಡಿ. ಕುವೆಂಪು
ಉತ್ತರ: ಬಿ. ಕೆ.ಎಸ್.ನರಸಿಂಹಸ್ವಾಮಿ
12. 'ಧನಿಯರ ಸತ್ಯನಾರಾಯಣ' ಎಂಬ ಪ್ರಸಿದ್ಧ ಕೃತಿಯನ್ನು ಬರೆದವರು
ಎ. ಕಟಪಾಡಿ ಶ್ರೀನಿವಾಸ ಶೆಣೈ
ಬಿ. ಕುಡ್ಪಿ ವಾಸುದೇವ ಶೆಣೈ
ಸಿ. ಕೊರಡ್ಕಲ್ ಶ್ರೀನಿವಾಸ ರಾವ್
ಡಿ. ಶಿವರಾಮ ಕಾರಂತ
ಉತ್ತರ: ಬಿ. ಕುಡ್ಪಿ ವಾಸುದೇವ ಶೆಣೈ
13. ಕಲಾವಿದ ಮೈಕೆಲ್ ಎಂಜಲೋನ ಜೀವನವನ್ನು ಕುರಿತು 'ರೂಪದರ್ಶಿ' ಕಾದಂಬರಿಯನ್ನು ಬರೆದವರು
ಎ. ಕೆ.ವಿ.ಐಯ್ಯರ್
ಬಿ. ಮಿರ್ಜಿ ಅಣ್ಣಾರಾಯ
ಸಿ. ಎಸ್.ವಿ.ಪರಮೇಶ್ವರಭಟ್ಟ
ಡಿ. ವಿ.ಕೃ.ಗೋಕಾಕ್
ಉತ್ತರ: ಎ. ಕೆ.ವಿ.ಐಯ್ಯರ್
14. ಇವರು ಲಲಿತ ಪ್ರಬಂಧಗಳಿಗಾಗಿ ಪ್ರಸಿದ್ಧರು
ಎ. ಬೆಸಗರಹಳ್ಳಿ ರಾಮಣ್ಣ
ಬಿ. ವಿಜಯಾ ದಬ್ಬೆ
ಸಿ. ಹಾ.ಮಾ.ನಾಯಕ
ಡಿ. ಎ.ಎನ್.ಮೂರ್ತಿರಾವ್
ಉತ್ತರ: ಸಿ. ಹಾ.ಮಾ.ನಾಯಕ್
15. 'ಪುರಾಣ ಭಾರತ ಕೋಶ' ಈ ಕೃತಿಯನ್ನು ಬರೆದವರು
ಎ. ಬೆನಗಲ್ ರಾಮರಾವ್
ಬಿ. ಸ.ಸ.ಮಾಳವಾಡ
ಸಿ. ಜಿ.ವೆಂಕಟಸುಬ್ಬಯ್ಯ
ಡಿ. ಯಜ್ಞನಾರಾಯಣ ಉಡುಪ
ಉತ್ತರ: ಡಿ. ಯಜ್ಞನಾರಾಯಣ ಉಡುಪ
16. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಲೇಖಕಿ
ಎ. ಗೀತಾ ನಾಗಭೂಷಣ್
ಬಿ. ಅನುಪಮಾ ನಿರಂಜನ
ಸಿ. ವೈದೇಹಿ
ಡಿ. ಸಾರಾ ಅಬೂಬಕರ್
ಉತ್ತರ: ಎ. ಗೀತಾ ನಾಗಭೂಷಣ್
17. 'ಇಗೋ ಕನ್ನಡ' ಹೆಸರಿನ ಅಂಕಣ ಬರೆಯುತ್ತಿದ್ದವರು
ಎ. ಅಮೃತ ಸೋಮೇಶ್ವರ
ಬಿ. ಕೆ.ವಿ.ನಾರಾಯಣ
ಸಿ. ಜಿ. ವೆಂಕಟಸುಬ್ಬಯ್ಯ
ಡಿ. ಪಾ.ವೆಂ.ಆಚಾರ್ಯ
ಉತ್ತರ: ಸಿ. ಜಿ. ವೆಂಕಟಸುಬ್ಬಯ್ಯ
18. 'ತಟ್ಟು ಚಪ್ಪಾಳೆ ಪುಟ್ಟ ಮಗು' ಇದರ ಸಂಪಾದಕರು
ಎ. ಸಿಸು ಸಂಗಮೇಶ
ಬಿ. ಬೋಳುವಾರು ಮಹಮದ್ ಕುಂಞ
ಸಿ. ವೈದೇಹಿ
ಡಿ. ಪಂಜೆ ಮಂಗೇಶರಾಯರು
ಉತ್ತರ: ಬಿ. ಬೋಳುವಾರು ಮಹಮದ್ ಕುಂಞ
19. ಇವರು ಓರ್ವ ಪ್ರಸಿದ್ಧ ಜಾನಪದ ತಜ್ಞರು
ಎ. ಡಿ.ಎಲ್.ನರಸಿಂಹಾಚಾರ್
ಬಿ. ಎಚ್. ತಿಪ್ಪೇರುದ್ರಸ್ವಾಮಿ
ಸಿ. ಜಿ.ಶಂ.ಪರಮಶಿವಯ್ಯ
ಡಿ. ಕರೀಂಖಾನ್
ಉತ್ತರ: ಡಿ. ಕರೀಂಖಾನ್
20. 'ಹರಿಜನ್ವಾರ' ಇದೊಂದು
ಎ. ನಾಟಕ
ಬಿ. ಕತೆ
ಸಿ. ಪ್ರಬಂಧ
ಡಿ. ಕಾದಂಬರಿ
ಉತ್ತರ: ಎ. ನಾಟಕ
21. 'ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರಸನಿಷ್ಪತ್ತಿ:' ಎಂಬುದು ಈತನ ಸೂತ್ರ
ಎ. ಭರತ
ಬಿ. ಆನಂದವರ್ಧನ
ಸಿ. ಭಾಮಹ
ಡಿ. ದಂಡಿ
ಉತ್ತರ: ಎ. ಭರತ
22. ಔಚಿತ್ಯ ವಿಚಾರವನ್ನು ಪ್ರತಿಪಾದಿಸಿದ ಲಾಕ್ಷಣಿಕ
ಎ. ವಿಶ್ವನಾಥ
ಬಿ. ಅಭಿನವಗುಪ್ತ
ಸಿ. ಮಮ್ಮಟ
ಡಿ. ಕ್ಷಮೇಂದ್ರ
ಉತ್ತರ: ಡಿ. ಕ್ಷಮೇಂದ್ರ
23. ಇದು ಆನಂದವರ್ಧನನ ಕೃತಿ
ಎ. ಕಾವ್ಯಾಲಂಕಾರ
ಬಿ. ಧ್ವನ್ಯಾಲೋಕ
ಸಿ. ದಶರೂಪಕ
ಡಿ. ಕಾವ್ಯಪ್ರಕಾಶ
ಉತ್ತರ: ಬಿ. ಧ್ವನ್ಯಾಲೋಕ
24. ಸಂಚಾರಿ ಭಾವಗಳು ಒಟ್ಟು
ಎ. ಮೂವತ್ತು
ಬಿ. ಮೂವತ್ತ ಮೂರು
ಸಿ. ಮೂವತ್ತೈದು
ಡಿ. ಎಂಟು
ಉತ್ತರ: ಬಿ. ಮೂವತ್ತ ಮೂರು
25. ಕಾವ್ಯ ಮೀಮಾಂಸೆಯನ್ನು ವ್ಯವಸ್ಥಿತವಾಗಿ ವಿವೇಚಿಸಿದ ಮೊತ್ತಮೊದಲ ಕೃತಿ
ಎ. ಕಾವ್ಯಾದರ್ಶ
ಬಿ. ವಕ್ರೋಕ್ತಿ ಜೀವಿತ
ಸಿ. ಕಾವ್ಯಪ್ರಕಾಶ
ಡಿ. ಕಾವ್ಯಾಲಂಕಾರ
ಉತ್ತರ: ಡಿ. ಕಾವ್ಯಾಲಂಕಾರ
26. 'ಊರಿಗೆ ಊರೇ ಕಣ್ಣಿರು ಸುರಿಸಿತು' ಎಂಬಲ್ಲಿ ಬಳಕೆಯಾಗಿರುವ ಅರ್ಥ
ಎ. ಲಕ್ಷ್ಯಾರ್ಥ
ಬಿ. ವ್ಯಂಗ್ಯಾರ್ಥ
ಸಿ. ಯಾವುದೂ ಅಲ್ಲ
ಡಿ. ವಾಚ್ಯಾರ್ಥ
ಉತ್ತರ: ಎ. ಲಕ್ಷ್ಯಾರ್ಥ
27. ಎರಡನೆಯ ನಾಗವರ್ಮನ ಕೃತಿ
ಎ. ಶೃಂಗಾರ ರತ್ನಾಕರ
ಬಿ. ರಸರತ್ನಾಕರ
ಸಿ. ಕಾವ್ಯಾದರ್ಶ
ಡಿ. ಕಾವ್ಯಾವಲೋಕನ
ಉತ್ತರ:
28. ಭಟ್ಟನಾಯಕನು ಪ್ರತಿಪಾದಿಸಿದ ವಿಚಾರ
ಎ. ಧ್ವನಿ
ಬಿ. ಸಾಧಾರಣೀಕರಣ
ಸಿ. ಔಚಿತ್ಯ
ಡಿ. ರಸತತ್ವ
ಉತ್ತರ:
29. 'ಭಾರತೀಯ ಕಾವ್ಯ ಮೀಮಾಂಸೆ' ಇದನ್ನು ಬರೆದವರು
ಎ. ಎಂ.ಆರ್.ಶ್ರೀ
ಬಿ. ತೀ.ನಂ.ಶ್ರೀ
ಸಿ. ವಿ.ಎಂ.ಇನಾಂದಾರ್
ಡಿ. ಬಿ.ಎಂ.ಶ್ರೀ
ಉತ್ತರ: ಬಿ. ತೀ.ನಂ.ಶ್ರೀ.
30. 'ಖಂಡಪ್ರಾಸಮನತಿಶಯಮಿದೆಂದು ಯತಿಯಂ ಮಿಕ್ಕರ್' ಎಂದವರು
ಎ. ನಾಗವರ್ಮ
ಬಿ. ಜಯಕೀರ್ತಿ
ಸಿ. ಸೋಮೇಶ್ವರ
ಡಿ. ಶ್ರೀವಿಜಯ
ಉತ್ತರ:
31. ಪದ್ಯದಲ್ಲಿ ಆಯಾ ಪಾದದ ಮೊದಲನೇ ಅಕ್ಷರ ಅಥವಾ ಸವರ್ಣವು ಯತಿಯ ನಂತರ ಆವೃತ್ತಿಗೊಂಡರೆ ಅದು
ಎ. ಅನುಪ್ರಾಸ
ಬಿ. ವಡಿ
ಸಿ. ಅಂತ್ಯಪ್ರಾಸ
ಡಿ. ಆದಿಪ್ರಾಸ
ಉತ್ತರ:
32. ಪ್ರತೀ ಪಾದದಲ್ಲಿ ಭರನಭಭರ ಗಣಗಳು ಮತ್ತು ತಲಾ ಒಂದೊಂದು ಲಘು, ಗುರು ಬಂದರೆ ಆ ವೃತ್ತವು...
ಎ. ಚಂಪಕಮಾಲ
ಬಿ. ಸ್ರಗ್ದರೆ
ಸಿ. ಮತ್ತೇಭವಿಕ್ರೀಡಿತ
ಡಿ. ಉತ್ಪಲಮಾಲೆ
ಉತ್ತರ:
33. ಸಂಚಿಹೊನ್ನಮ್ಮನ 'ಹದಿಬದೆಯ ಧರ್ಮ' ಕೃತಿಯು ಈ ಛಂದೋ ರೂಪದಲ್ಲಿದೆ
ಎ. ಏಳೆ
ಬಿ. ಅಕ್ಕರ
ಸಿ. ಸಾಂಗತ್ಯ
ಡಿ. ತ್ರಿಪದಿ
ಉತ್ತರ:
34. 'ಕನ್ನಡ ಗಾಯತ್ರಿ' ಎಂದು ಈ ಛಂದೋರೂಪಕ್ಕೆ ಹೇಳುತ್ತಾರೆ...
ಎ. ಸಾಂಗತ್ಯ
ಬಿ. ತ್ರಿಪದಿ
ಸಿ. ಅಕ್ಕರ
ಡಿ. ಏಳೆ
ಉತ್ತರ:
35. ಅಂಶ ಛಂದಸ್ಸಿನಲ್ಲಿ ಹೆಚ್ಚು ಬಳಕೆಯಲ್ಲಿರುವ ಗಣ
ಎ. ರುದ್ರಗಣ
ಬಿ. ವಿಷ್ಣುಗಣ
ಸಿ. ಎಲ್ಲವೂ
ಡಿ. ಬ್ರಹ್ಮಗಣ
ಉತ್ತರ:
36. ಇವುಗಳಲ್ಲಿ ಸಾಂಗತ್ಯದಲ್ಲಿ ರಚಿತವಾದ ಕಾವ್ಯ
ಎ. ಭರತೇಶ ವೈಭವ
ಬಿ. ಗಿರಿಜಾ ಕಲ್ಯಾಣ
ಸಿ. ಅನಂತನಾಥ ಪುರಾಣ
ಡಿ. ಶಾಂತಿ ಪುರಾಣ
ಉತ್ತರ: ಎ. ಭರತೇಶ ವೈಭವ
37. 'ಜೈಮಿನಿ ಭಾರತ'ವು ಈ ಷಟ್ಪದಿಯಲ್ಲಿ ರಚಿತವಾಗಿದೆ.
ಎ. ಭಾಮಿನಿ
ಬಿ. ವಾರ್ಧಕ
ಸಿ. ಪರಿವರ್ಧಿನಿ
ಡಿ. ಭೋಗ
ಉತ್ತರ:
38. 'ಕಲ್ಲೋಳ್ ತೋರ್ಪ' ಈ ಪದದ ಸರಿಯಾದ ಪ್ರಾಸ ವಿನ್ಯಾಸ
ಎ. U U - U
ಬಿ. - U - U
ಸಿ. - - - U
ಡಿ. - - - -
ಉತ್ತರ: ಸಿ. - - - U
39. 'ಗಿರಿಜಾನಾಥ' ಎಂಬ ಪದದಲ್ಲಿ ಇರುವ ಅಂಶಗಳ ಸಂಖ್ಯೆ
ಎ. ಮೂರು
ಬಿ. ಐದು
ಸಿ. ಆರು
ಡಿ. ನಾಲ್ಕು
ಉತ್ತರ:
40. ಅಂಶ ಷಟ್ಪದಿಯ ಮೊದಲ ಅರ್ಧದಲ್ಲಿ ಬರುವ ಗಣಗಳ ವಿನ್ಯಾಸ
ಎ. ಒಂದು ಬ್ರಹ್ಮಗಣ, ಆರು ವಿಷ್ಣು ಗಣ
ಬಿ. ಆರು ವಿಷ್ಣುಗಣ, ಒಂದು ರುದ್ರಗಣ
ಸಿ. ಒಂದು ಬ್ರಹ್ಮಗಣ, ಐದು ವಿಷ್ಣುಗಣ, ಒಂದು ರುದ್ರಗಣ
ಡಿ. ಏಳು ವಿಷ್ಣುಗಣಗಳು
ಉತ್ತರ:
41. 'ಸುನೀತ' ದಲ್ಲಿ ಇರುವ ಸಾಲುಗಳ ಸಂಖ್ಯೆ
ಎ. ಹದಿನಾಲ್ಕು
ಬಿ. ಹದಿನೆಂಟು
ಸಿ. ಹನ್ನೆರಡು
ಡಿ. ಹದಿನಾರು
ಉತ್ತರ: ಎ. ಹದಿನಾಲ್ಕು
42. ಇದು ವರ್ಗಗಣ ಘಟಿತ ಪದ್ಯಜಾತಿ
ಎ. ಮಲ್ಲಿಕಾಮಾಲೆ
ಬಿ. ರಗಳೆ
ಸಿ. ಏಳೆ
ಡಿ. ತ್ರಿಪದಿ
ಉತ್ತರ:
43. 'ಕಂದಗಳ್ ಅಮೃತಲತಿಕಾ ಕಂದಗಳ್' ಎಂದವನು
ಎ. ಜನ್ನ
ಬಿ. ರಾಘವಾಂಕ
ಸಿ. ಲಕ್ಷ್ಮೀಶ
ಡಿ. ಹರಿಹರ
ಉತ್ತರ:
44. ಋ, ಖೂ ಇವು
ಎ. ಸಂಧ್ಯಾಕ್ಷರಗಳು
ಬಿ. ಯೋಗವಾಹಕಗಳು
ಸಿ. ವ್ಯಂಜನಗಳು
ಡಿ. ಸ್ವರಗಳು
ಉತ್ತರ:
45. 'ಗದ್ದೆ' ಶಬ್ದದ ಹಳೆಗನ್ನಡ ರೂಪ
ಎ. ಕಱ್ದೆ
ಬಿ. ಗಱ್ದೆ
ಸಿ. ಗಳ್ದೆ
ಡಿ. ಗರ್ದೆ
ಉತ್ತರ:
46. 'ಬೆಟ್ಟದಾವರೆ' ಎಂಬಲ್ಲಿ ಇರುವ ಸಂಧಿ
ಎ. ಆಗಮ
ಬಿ. ಆದೇಶ
ಸಿ. ಸವರ್ಣಧೀರ್ಘ
ಡಿ. ಲೋಪ
ಉತ್ತರ: ಬಿ. ಆದೇಶ
47. ಕುಳ್ಳ, ಕುಂಟ ಇವು
ಎ. ಅಂಕಿತ ನಾಮ
ಬಿ. ಭಾವನಾಮ
ಸಿ. ಅನ್ವರ್ಥನಾಮ
ಡಿ. ರೂಢನಾಮ
ಉತ್ತರ: ಸಿ. ಅನ್ವರ್ಥನಾಮ
48. ಕನ್ನಡದಲ್ಲಿ ಈ ವಿಭಕ್ತಿ ಇಲ್ಲವೆಂದು ಹೇಳುತ್ತಾರೆ
ಎ. ದ್ವಿತೀಯಾ
ಬಿ. ಚತುರ್ಥಿ
ಸಿ. ಸಪ್ತಮೀ
ಡಿ. ಪ್ರಥಮಾ
ಉತ್ತರ:
49. ಮಧ್ಯಮ ಪುರುಷ ಸರ್ವನಾಮಕ್ಕೆ ಇದೊಂದು ಉದಾಹರಣೆ
ಎ. ನೀನು
ಬಿ. ಅವರು
ಸಿ. ತಾವು
ಡಿ. ನಾನು
ಉತ್ತರ:

50. ಇದು ಸಂಧ್ಯಕ್ಷರವಾಗಿದೆ
ಎ. ಆಂ
ಬಿ. ಐ
ಸಿ. ಓ
ಡಿ. ಋ
ಉತ್ತರ:
51.'ಡ' ಕಾರ ಪುಟ್ಟುವ ತಾಣಮಂ ಬೆಟ್ಟಿತ್ತಾಗಿ ಉಚ್ಚರಿಸಿದರೆ ಹುಟ್ಟುವ ವರ್ಣ ಎಂದು ಕೇಶಿರಾಜ ಸೂಚಿಸಿದ್ದು
ಎ. ಳ
ಬಿ. ಱಿ
ಸಿ. ಲ
ಡಿ. ಱ
ಉತ್ತರ:
52. 'ಕನ್ನಡ ಮಧ್ಯಮ ವ್ಯಾಕರಣ' ಇದನ್ನು ಬರೆದವರು ಯಾರು ?
ಎ. ಬಿ.ಎಂ.ಶ್ರೀ
ಬಿ. ಟಿ.ಬರೋ
ಸಿ. ಭ. ಕೃಷ್ಣಮೂರ್ತಿ
ಡಿ. ತೀ.ನಂ.ಶ್ರೀ
ಉತ್ತರ:

53. ತೆಲುಗಿನಲ್ಲಿ ಲಿಂಗವಿವಕ್ಷೆಯ ಕ್ರಮ ಹೀಗಿದೆ...
ಎ. ಒಂಭತ್ತು ವಿಧ
ಬಿ. ಎರಡು ವಿಧ
ಸಿ. ಲಿಂಗವಿವಕ್ಷೆ ಇಲ್ಲ
ಡಿ. ಮೂರು ವಿಧ
ಉತ್ತರ:
54. ಧೀರ್ಘ ಕಾಲದಿಂದಲೂ ಭಾರತದಿಂದ ಹೊರಗೆ ವ್ಯವಹಾರದಲ್ಲಿರುವ ದ್ರಾವಿಡ ಭಾಷೆ
ಎ. ಮಲ್ತೋ
ಬಿ. ಬ್ರಾಹೂಈ
ಸಿ. ಕೋಲಾಮಿ
ಡಿ. ಕುರುಖ್
ಉತ್ತರ:
55. ಕೇಶಿರಾಜನು ಹೇಳುವ ಶುದ್ಧಗೆಗಳ ಸಂಖ್ಯೆ
ಎ. 37
ಬಿ. 35
ಸಿ. 47
ಡಿ. 57
ಉತ್ತರ:
56. ಪ್ರೇರಣಾರ್ಥಕ ಕ್ರಿಯಾ ಪದಕ್ಕೆ ಒಂದು ನಿದರ್ಶನ
ಎ. ಓಡಳು
ಬಿ. ಓಡಿಸು
ಸಿ. ಓಡುವುದು
ಡಿ. ಓಡು
ಉತ್ತರ:
57. 'ನಲ್ಲಳ್' ಇದು ಒಂದು
ಎ. ಕ್ರಿಯಾಪದ
ಬಿ. ಗುಣವಾಚಕ
ಸಿ. ವಿಭಕ್ತಿ ಪ್ರತ್ಯಯ
ಡಿ. ನಾಮಪದ
ಉತ್ತರ:
58. 'ತಂಗಾಳಿ' ಇಲ್ಲಿ ಇರುವ ಸಮಾಸ
ಎ. ದ್ವಿಗು
ಬಿ. ಅಂಶಿ
ಸಿ. ಅರಿ
ಡಿ. ಕರ್ಮಧಾರೆಯ
ಉತ್ತರ: ಡಿ. ಕರ್ಮಧಾರೆಯ
59. ಪರುಷ ಮತ್ತು ಸರಳ ವರ್ಣಗಳ ವಿನಿಮಯ ಸೂತ್ರವನ್ನು ಮೊತ್ತಮೊದಲು ಗುರುತಿಸಿ ಚರ್ಚಿಸಿದವರು
ಎ. ಎಂ.ಬಿ. ಎಮಿನೋ
ಬಿ. ಭ.ಕೃಷ್ಣಮೂರ್ತಿ
ಸಿ. ರಾಬರ್ಟ್ ಎಂ. ಕಾಲ್ಡ್ವೆಲ್
ಡಿ. ಟಿ. ಬರೋ
ಉತ್ತರ:
60. 'ಮಮಿಂಕೆಯದದೊಳ್' ಈ ಪ್ರತ್ಯಯಗಳನ್ನು ಸೂಚಿಸುತ್ತದೆ
ಎ. ವಿಭಕ್ತಿ ಪ್ರತ್ಯಯಗಳು
ಬಿ. ಕಾಲಸೂಚಕ ಪ್ರತ್ಯಯಗಳು
ಸಿ. ತದ್ಧಿತ ಪ್ರತ್ಯಯಗಳು
ಡಿ. ಅಖ್ಯಾತ ಪ್ರತ್ಯಯಗಳು
ಉತ್ತರ:
61. 'ಆದರೆ', 'ಅಥವಾ' ಇವು
ಎ. ಅನುಸರ್ಗ ಅವ್ಯಯ
ಬಿ. ಸಂಬಂಧ ಸೂಚಕ ಅವ್ಯಯ
ಸಿ. ಭಾವಸೂಚಕ ಅವ್ಯಯ
ಡಿ. ಸಾಮಾನ್ಯ ಅವ್ಯಯ
ಉತ್ತರ:
62. 'ಕರಡಿಯ ಕುಣಿತವನ್ನು ನೋಡಿ ಮಕ್ಕಳೆಲ್ಲರೂ ನಕ್ಕರು' ಈ ವಾಕ್ಯದಲ್ಲಿ ಕೃದಂತ ಭಾವನಾಮ
ಎ. ಕುಣಿತ
ಬಿ. ನೋಡಿ
ಸಿ. ಮಕ್ಕಳೆಲ್ಲರೂ
ಡಿ. ಕರಡಿ
ಉತ್ತರ:
63. ದೇಗುಲಮಾನ್, ಮಿಕ್ಕುದಾನ್ ಎಂಬ ಭಾಷಾರೂಪಗಳು ಪ್ರತಿನಿಧಿಸುವ ಕಾಲ
ಎ. ಹಳಗನ್ನಡ
ಬಿ. ನಡುಗನ್ನಡ
ಸಿ. ಹೊಸಗನ್ನಡ
ಡಿ. ಪೂರ್ವದ ಹಳಗನ್ನಡ
ಉತ್ತರ:
64. ಕಪ್ಪೆ ಆರಭಟ್ಟನ ಬಾದಾಮಿ ಶಾಸನದಲ್ಲಿ ಬಳಕೆಯಾಗಿರುವ ಛಂದೋರೂಪ
ಎ. ಅಕ್ಕರ
ಬಿ. ತ್ರಿಪದಿ
ಸಿ. ಕಂದ
ಡಿ. ರಗಳೆ
ಉತ್ತರ:

65. ಬೆಳತೂರಿನ ದೇಕಬ್ಬೆಯ ಶಾಸನವು ಈ ಪ್ರಾಕಾರಕ್ಕೆ ಸೇರುತ್ತದೆ
ಎ. ಪ್ರಶಸ್ತಿ ಶಾಸನ
ಬಿ. ಮಾಸ್ತಿಕಲ್ಲು
ಸಿ. ವೀರಗಲ್ಲು
ಡಿ. ದಾನಶಾಸನ
ಉತ್ತರ:
66. ಸಾಕುಪ್ರಾಣಿಯ ನೆನಪಿಗಾಗಿ ನೆಟ್ಟ ಏಕೈಕ ವೀರಗಲ್ಲು
ಎ. ಬೇಲೂರು ಶಾಸನ
ಬಿ. ತಮ್ಮಟಕಲ್ಲು ಶಾಸನ
ಸಿ. ಲಕ್ಕುಂಡಿ ಶಾಸನ
ಡಿ. ಆತಕೂರು ಶಾಸನ
ಉತ್ತರ:
67. ಇದು ಚಾಲುಕ್ಯರ ರಾಜಧಾನಿಯಾಗಿತ್ತು
ಎ. ವಾತಾಪಿ
ಬಿ. ಮಾನ್ಯಖೇಟ
ಸಿ. ದೋರಸಮುದ್ರ
ಡಿ. ಬನವಾಸಿ
ಉತ್ತರ: ಎ. ವಾತಾಪಿ
68. ಅತ್ತಿಮಬ್ಬೆಯ ಲಕ್ಕುಂಡಿ ಶಾಸನವು ಈ ಜಿಲ್ಲೆಯದು
ಎ. ಬೆಳಗಾವಿ
ಬಿ. ಬಾಗಲಕೋಟೆ
ಸಿ. ಗದಗ
ಡಿ. ಧಾರವಾಡ
ಉತ್ತರ:
69. ವಸಾಹತು ವಿರೋಧಿ ಲಾವಣಿಗಳನ್ನು ಸಂಗ್ರಹಿಸಿದ ಬ್ರಿಟೀಷ್ ಅಧಿಕಾರಿ
ಎ. ಜೆ.ಎಫ್.ಪ್ಲೀಟ್
ಬಿ. ಕರ್ನಲ್ ಮೆಕೆಂಜೆ
ಸಿ. ಕನ್ನಿಂಗ್ ಹ್ಯಾಂ
ಡಿ. ಬಿ.ಎಲ್.ರೈಸ್
ಉತ್ತರ:
70. ಹೊಯ್ಸಳರ ವೀರ ಬಲ್ಲಾಳನಿಂದ ಚಕ್ರವರ್ತಿ ಬಿರುದು ಪಡೆದ ಕವಿ
ಎ. ರನ್ನ
ಬಿ. ಪೊನ್ನ
ಸಿ. ಜನ್ನ
ಡಿ. ಪಂಪ
ಉತ್ತರ:
71. ರಾಮನಗರದ ಸಮೀಪ ಇರುವ 'ಜಾನಪದ ಲೋಕ'ವನ್ನು ಸ್ಥಾಪಿಸಿದವರು
ಎ. ಹಾ.ಮಾ.ನಾಯಕ
ಬಿ. ಎಚ್.ಎಲ್.ನಾಗೇಗೌಡ
ಸಿ. ಹಿ.ಶೀ.ರಾಮಚಂದ್ರ ಗೌಡ
ಡಿ. ಜೀ.ಶಂ.ಪರಮಶಿವಯ್ಯ
ಉತ್ತರ: ಬಿ. ಎಚ್.ಎಲ್.ನಾಗೇಗೌಡ
72. ಇವರು ದಕ್ಷಿಣ ಕನ್ನಡ ಮುಸ್ಲಿಂ ಬದುಕನ್ನು ಸಮರ್ಥವಾಗಿ ಕಟ್ಟಿಕೊಟ್ಟವರು
ಎ. ಬಿ.ಎ.ಸನದಿ
ಬಿ. ಫಕೀರ್ ಅಹಮದ್ ಕಟ್ಟಾಡಿ
ಸಿ. ರಂಜಾನ್ ದರ್ಗಾ
ಡಿ. ನಿಸಾರ್ ಅಹಮದ್
ಉತ್ತರ:
73. ಇದು ಶಾಂತಿನಾಥ ದೇಸಾಯಿ ಅವರ ಕೃತಿ
ಎ. ಓಂ ಣಮೋ
ಬಿ. ಉರಿಯ ನಾಲಿಗೆ
ಸಿ. ಸಾಹಿತ್ಯ ಕಥನ
ಡಿ. ಸೆರಗಿನ ಕೆಂಡ
ಉತ್ತರ: ಎ. ಓಂ ಣಮೋ
74. 'ಹೊಸತು' ಮಾಸಿಕದ ಸಂಪಾದಕರು
ಎ. ನಟರಾಜ ಹುಳಿಯಾರ್
ಬಿ. ಮಹಾಬಲ ಮೂರ್ತಿ ಕೊಡ್ಲೆಕೆರೆ
ಸಿ. ಇಂದೂಧರ ಹೊನ್ನಾಪುರ
ಡಿ. ಜಿ. ರಾಮಕೃಷ್ಣ
ಉತ್ತರ:
75. 'ಕರ್ನಾಟಕದ ವೀರಗಲ್ಲುಗಳು' ಈ ಕೃತಿಯನ್ನು ಬರೆದವರು
ಎ. ಎಂ.ಎಂ.ಕಲಬುರ್ಗಿ
ಬಿ. ಆರ್.ಶೇಷಶಾಸ್ತ್ರಿ
ಸಿ. ಚಿನ್ನಕ್ಕ ಪಾವಟೆ
ಡಿ. ಎಂ.ಚಿದಾನಂದ ಮೂರ್ತಿ
ಉತ್ತರ:
76. 'ಮೌನಿ' ಇದು ಇವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ
ಎ. ಹಾ.ಮಾ.ನಾಯಕ
ಬಿ. ಚೆನ್ನವೀರ ಕಣವಿ
ಸಿ. ಯು.ಆರ್.ಅನಂತಮೂರ್ತಿ
ಡಿ. ಜಿ.ಎಸ್.ಶಿವರುದ್ರಪ್ಪ
ಉತ್ತರ:
77. 'ಹಸಿರು ಹೊನ್ನು' ಎಂಬ ಸಸ್ಯ ವಿಜ್ಞಾನಕ್ಕೆ ಸಂಬಂದಿಸಿದ ಈ ಕೃತಿಯ ಕತೃ
ಎ. ಭೂಸನೂರ ಮಠ
ಬಿ. ಎಸ್.ವಿ.ರಂಗಣ್ಣ
ಸಿ. ಬಿ.ಜಿ.ಎಲ್.ಸ್ವಾಮಿ
ಡಿ. ಎ.ಎನ್. ಮೂರ್ತಿರಾವ್
ಉತ್ತರ: ಸಿ. ಬಿ.ಜಿ.ಎಲ್.ಸ್ವಾಮಿ
78. 'ಜಯ' ಎಂಬ ಕಾದಂಬರಿಯನ್ನು ಬರೆದವರು
ಎ. ನಳಿನಾ ಮೂರ್ತಿ
ಬಿ. ಎಂ.ಎಸ್.ವೇದಾ
ಸಿ. ತಿರುಮಲಾಂಬಾ
ಡಿ. ಎಚ್.ವಿ.ಸಾವಿತ್ರಮ್ಮ
ಉತ್ತರ:
79. ಕನ್ನಡದ ಓದುಗರಿಗೆ ಮಹಿಳಾ ವಿಜ್ಞಾನಿಗಳ ಸಾಧನೆಗಳನ್ನು ನಿರಂತರ ಪರಿಚಯಿಸುತ್ತಾ ಬಂದವರು ಇವರು
ಎ. ವಿಜಯಾ ದಬ್ಬೆ
ಬಿ. ಕೆ.ಸರೋಜ
ಸಿ. ನೇಮಿಚಂದ್ರ
ಡಿ. ಬಿ.ಎಸ್.ಸುಮಿತ್ರಾಬಾಯಿ
ಉತ್ತರ:
80. 'ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ' ಎಂದು ಅಭಿಮಾನದಿಂದ ಹೇಳಿದ ಕವಿ
ಎ. ನಾಗವರ್ಮ
ಬಿ. ನಾಗಚಂದ್ರ
ಸಿ. ರನ್ನ
ಡಿ. ಪಂಪ
ಉತ್ತರ: ಡಿ. ಪಂಪ
81. 'ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್' ಎಂಬುದಾಗಿ ಕನ್ನಡನಾಡಿನ ಸೀಮೆಯನ್ನು ಸೂಚಿಸಿದ ಕೃತಿ
ಎ. ವಡ್ಡಾರಾಧನೆ
ಬಿ. ಕವಿರಾಜ ಮಾರ್ಗ
ಸಿ. ಛಂದೋಂಬುಧಿ
ಡಿ. ಆದಿಪುರಾಣ
ಉತ್ತರ: ಬಿ. ಕವಿರಾಜ ಮಾರ್ಗ
82. 'ಕನ್ನಡ ಕವಿತೆಯೋಳ್ ಅಸಗಂಗಂ ನೂರ್ಮಡಿ' ನನ್ನ ಕಾವ್ಯ ಎಂದು ಹೇಳಿದವರು
ಎ. ಪೊನ್ನ
ಬಿ. ರನ್ನ
ಸಿ. ಕುವೆಂಪು
ಡಿ. ಪಂಪ
ಉತ್ತರ:
83. 'ರೂಪಕ ಚಕ್ರವರ್ತಿ' ಎಂಬ ಬಿರುದಿಗೆ ಪಾತ್ರನಾದ ಕನ್ನಡದ ಕವಿ
ಎ. ಕುಮಾರ ವಾಲ್ಮಿಕಿ
ಬಿ. ಕುಮಾರ ವ್ಯಾಸ
ಸಿ. ಭೀಮಕವಿ
ಡಿ. ಲಕ್ಷ್ಮೀಶ
ಉತ್ತರ: ಬಿ. ಕುಮಾರ ವ್ಯಾಸ
84. ಇದು ಬ್ರಹ್ಮಶಿವನು ರಚಿಸಿದ ಕೃತಿ
ಎ. ಮದನ ತಿಲಕ
ಬಿ. ಧರ್ಮಾಮೃತ
ಸಿ. ಸುಕುಮಾರ ಚರಿತೆ
ಡಿ. ಸಮಯ ಪರೀಕ್ಷೆ
ಉತ್ತರ:
85. 'ಬಸವಣ್ಣ ಪ್ರಿಯ ಚೆನ್ನ ಸಂಗಯ್ಯ' ಎಂಬುದು ಈಕೆಯ ಅಂಕಿತ ನಾಮ
ಎ. ಅಕ್ಕಮ್ಮ
ಬಿ. ಮುಕ್ತಾಯಕ್ಕ
ಸಿ. ಗಂಗಾಂಬಿಕೆ
ಡಿ. ನಾಗಲಾಂಬಿಕೆ
ಉತ್ತರ:
86. ಇದರಲ್ಲಿ ಯಾವುದು ರಾಘವಾಂಕನ ಕೃತಿ ಅಲ್ಲ
ಎ. ವೀರೇಶ್ವರ ಚರಿತೆ
ಬಿ. ಸಿದ್ಧರಾಮ ಪುರಾಣ
ಸಿ. ಚಂದ್ರಪ್ರಭ ಪುರಾಣ
ಡಿ. ಹರಿಹರ ಮಹತ್ವ
ಉತ್ತರ:
87. ಯೋಗ ಭೋಗ ಸಮನ್ವಯ ತತ್ವವನ್ನು ಕಥಾನಾಯಕನಲ್ಲಿ ಮೇಳೈಸಿ ಕಾವ್ಯ ರಚಿಸಿದ ಜೈನ ಕವಿ
ಎ. ಪೊನ್ನ
ಬಿ. ಜನ್ನ
ಸಿ. ರತ್ನಾಕರವರ್ಣಿ
ಡಿ. ಪಂಪ
ಉತ್ತರ:
88. 'ಪೆಣ್ಣೆ ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು' ಎಂದು ಜನರ ಮನೋಧೋರಣೆಯನ್ನು ಪ್ರಶ್ನಿಸಿವರು
ಎ. ಅಕ್ಕಮಹಾದೇವಿ
ಬಿ. ಸಂಚಿಹೊನ್ನಮ್ಮ
ಸಿ. ಹೆಳವನಕಟ್ಟೆ ಗಿರಿಯಮ್ಮ
ಡಿ. ಕಂತಿ
ಉತ್ತರ: ಬಿ. ಸಂಚಿಹೊನ್ನಮ್ಮ
89. 'ಕರ್ನಾಟಕ ಸಂಗೀತ ಪಿತಾಮಹ' ಎಂಬ ಕೀರ್ತಿಗೆ ಪಾತ್ರರಾದವರು
ಎ. ಕನಕದಾಸರು
ಬಿ. ಜಗನ್ನಾಥ ದಾಸರು
ಸಿ. ವಿಜಯದಾಸರು
ಡಿ. ಪುರಂದರದಾಸರು
ಉತ್ತರ: ಡಿ. ಪುರಂದರದಾಸರು
90. ನಾಗವರ್ಮನ 'ಕರ್ನಾಟಕ ಕಾದಂಬರಿ' ಇದು ಈ ಪ್ರಕಾರದಲ್ಲಿದೆ
ಎ. ಚಂಪೂಕಾವ್ಯ
ಬಿ. ನಾಟಕ
ಸಿ. ಗದ್ಯ
ಡಿ. ಕಾದಂಬರಿ
ಉತ್ತರ:
91. 'ಚಂಡ ಶಾಸನ ಪ್ರಸಂಗ' ವು ಈ ಕಾವ್ಯದಲ್ಲಿದೆ
ಎ. ಪಾರ್ಶ್ವನಾಥ ಪುರಾಣ
ಬಿ. ಶಾಂತಿನಾಥ ಪುರಾಣ
ಸಿ. ಅನಂತನಾಥ ಪುರಾಣ
ಡಿ. ಅಜಿತನಾಥ ಪುರಾಣ
ಉತ್ತರ:
92. ವರ್ಗಸಂಗರ್ಷವನ್ನು ಸಾಂಕೇತಿಕವಾಗಿ ಚರ್ಚಿಸಿದ ಕೃತಿ
ಎ. ರಾಮಧಾನ್ಯ ಚರಿತೆ
ಬಿ. ರಾಮಧ್ಯಾನ ಚರಿತೆ
ಸಿ. ಭುವನೈಕ ರಾಮಾಭ್ಯುದಯ
ಡಿ. ರಾಮನಾಥ ಚರಿತೆ
ಉತ್ತರ:
93. 'ನಾಗರ ಹಾವೇ ಹಾವೊಳು ಹೂವೆ' ಪದ್ಯವನ್ನು ರಚಿಸಿದವರು ಇವರು
ಎ. ಪಂಜೆ ಮಂಗೇಶರಾಯರು
ಬಿ. ಉಳ್ಳಾಲ ಮಂಗೇಶರಾಯರು
ಸಿ. ಟಿ.ಎಸ್.ವೆಂಕಣ್ಣಯ್ಯ
ಡಿ. ಶಾಂತಕವಿ
ಉತ್ತರ: ಎ. ಪಂಜೆ ಮಂಗೇಶರಾಯರು
94. 'ಮಿತ್ರಾವಿಂದ ಗೋವಿಂದ' - ಇದೊಂದು
ಎ. ಪ್ರಬಂಧ
ಬಿ. ಕಾದಂಬರಿ
ಸಿ. ನಾಟಕ
ಡಿ. ಕಾವ್ಯ
ಉತ್ತರ:
95. 'ನೆನಪಿನ ದೋಣಿಯಲಿ' ಇದು ಇವರ ಆತ್ಮಚರಿತ್ರೆ
ಎ. ದ.ರಾ.ಬೇಂದ್ರೆ
ಬಿ. ಶಿವರಾಮ ಕಾರಂತ
ಸಿ. ಮಾಸ್ತಿ ವೆಂಕಟೇಶ ಅಯ್ಯಂಗಾರ್
ಡಿ. ಕುವೆಂಪು
ಉತ್ತರ: ಡಿ. ಕುವೆಂಪು
96. ದ.ರಾ.ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕೃತಿ
ಎ. ಅರಳು ಮರಳು
ಬಿ. ಉಯ್ಯಾಲೆ
ಸಿ. ನಾಕುತಂತಿ
ಡಿ. ಸಖೀಗೀತ
ಉತ್ತರ: ಸಿ. ನಾಕುತಂತಿ
97. 'ಬೀchi' ಇವರ ನಿಜನಾಮ
ಎ. ರಾಯಸಂ ಭಿಮಸೇನ ರಾವ್
ಬಿ. ಅಜ್ಜಂಪುರ ಸೀತಾರಾಮ
ಸಿ. ಆನಂದ ಕಂದ
ಡಿ. ಚೆನ್ನಮಲ್ಲಪ್ಪ ಗಲಗಲಿ
ಉತ್ತರ: ಎ. ರಾಯಸಂ ಭೀಮಸೇನ ರಾವ್
98. 'ಫಣಿಯಮ್ಮ' ಕಾದಂಬರಿಯನ್ನು ಬರೆದವರು
ಎ. ಕೆ.ಸರೋಜಾರಾವ್
ಬಿ. ಕೊಡಗಿನ ಗೌರಮ್ಮ
ಸಿ. ಎಂ.ಕೆ. ಇಂದಿರಾ
ಡಿ. ತ್ರಿವೇಣಿ
ಉತ್ತರ: ಸಿ. ಎಂ.ಕೆ. ಇಂದಿರಾ
99. 'ಮಕ್ಕಳ ಸಾಹಿತ್ಯದ ಪಿತಾಮಹ' ಎನಿಸಿಕೊಂಡವರು
ಎ. ಆನಂದ
ಬಿ. ಪಂಜೆ ಮಂಗೇಶರಾಯರು
ಸಿ. ಹಟ್ಟಿಯಂಗಡಿ ನಾರಾಯಣ ರಾಯರು
ಡಿ. ಮಾಸ್ತಿ ವೆಂಕಟೇಶ ಅಯ್ಯಂಗಾರ್
ಉತ್ತರ:
100. ಚಿತ್ರದುರ್ಗದ ಕುರಿತು ಐತಿಹಾಸಿಕ ಕಾದಂಬರಿಯನ್ನು ರಚಿಸಿದವರು
ಎ. ಕೆ.ವಿ.ಅಯ್ಯರ್
ಬಿ. ಡಿ.ವಿ.ಜಿ
ಸಿ. ಕಡೆಂಗೋಡ್ಲು ಶಂಕರಭಟ್ಟ
ಡಿ. ತ.ರಾ.ಸು
ಉತ್ತರ: ಡಿ. ತ.ರಾ.ಸು
http://issuu.com/ritershivaram/docs/computerkalikekaipidi?mode=embed&layout=http%3A%2F%2Fskin.issuu.com%2Fv%2Flight%2Flayout.xml&showFlipBtn=true

ಆರ್ಕುಟ್, ಫೆಸ್‌ಬುಕ್ ಇತರೆ ಸಾಮಾಜಿಕ ಅಂತರ್ಜಾಲಗಳ ಬಗ್ಗೆ ಎಚ್ಚರವಿರಲಿ .....

ಇತ್ತೀಚಿನ ದಿನಗಳಲ್ಲಿ ಆರ್ಕುಟ್, ಫೆಸ್-ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಲೇ ಇದೆ, ದಿನದಿಂದ ದಿನಕ್ಕೆ ವಿವಿಧ ದೇಶದ ಜನರು ಇಂಥ ಜಾಲತಾಣಗಳಿಗೆ ಸದಸ್ಯರಾಗುತ್ತಿದ್ದಾರೆ. ನೀವೂ ಇಂಥ ಜಾಲತಾಣಗಳ ಸದಸ್ಯರಾಗಿದ್ದರೆ ಅಥವಾ ಸದಸ್ಯರಾಗಲು ಹೊರಟಿದ್ದರೆ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳೆಂದರೆ-

೧] ನಿಮ್ಮ ಅತೀ ಸೂಕ್ಷ್ಮ ವಿಷಯಗಳನ್ನು ಅಲ್ಲಿ ನಮೂದಿಸಬೇಡಿ ಏಕೆಂದರೆ ಕೆಲವರು ಅಂಥ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡು ನಿಮಗೆ ತೊಂದರೆ ಕೊಡುವ ಅವಕಾಶಗಳಿರುತ್ತವೆ.
೨] ನಿಮ್ಮ ಸ್ಥಿರ ದೂರವಾಣಿ ಅಥವಾ ಸಂಚಾರಿ ದೂರವಾಣಿ (ಮೊಬೈಲ್) ಸಂಖ್ಯೆಗಳನ್ನು ನಮೂದಿಸಬೇಡಿ, ಇದನ್ನು ಸ್ಪಾಮರ್ ಗಳು ಬಳಸಿಕೊಂಡು ನಿಮಗೆ ಪಠ್ಯ ಸಂದೇಶ ಅಥವಾ ಕರೆ ಮಾಡಿ ನಿಮಗೆ ತೊಂದರೆಯನ್ನು ಕೊಡಬಹುದು.
೩] ನಿಮಗೆ "ಸ್ನೇಹ ವಿನಂತಿ" (ಫ್ರೆಂಡ್ ರಿಕ್ವೆಸ್ಟ್) ಕಳುಹಿಸಿದ ಎಲ್ಲ ಸದಸ್ಯರನ್ನು ಸ್ನೇಹಿತರನ್ನಾಗಿ ಸ್ವೀಕರಿಸಬೇಡಿ ಏಕೆಂದರೆ ಇನ್ನೊಬ್ಬರ ಹೆಸರಿನಲ್ಲಿ ಖಾತೆ ತೆಗೆದು ನಿಮ್ಮ ಸ್ನೇಹಿತರಾಗಿ ನಿಮ್ಮ ವೈಯಕ್ತಿಕ ಮಾಹಿತಿ ಪಡೆದು ನಿಮಗೆ ಮೋಸ ಮಾಡಬಹುದು ಆದ್ದರಿಂದ ಮೊದಲು ಅವರು ಯಾರೆಂದು ಪರಿಶೀಲಿಸಿದ ನಂತರವೇ ಅವರ ಸ್ನೇಹ ವಿನಂತಿಯನ್ನು ಸ್ವೀಕರಿಸಿ.
೪] ನಿಮ್ಮ ಸಾಮಾಜಿಕ ಜಾಲತಾಣ ಇನ್-ಬಾಕ್ಸಗೆ ಯಾವುದಾದರು ಗೊತ್ತಿರದ ಮಿಂಚಂಚೆ (ಇ-ಮೇಲ್) ಬಂದಲ್ಲಿ ಮೊದಲು ಅದನ್ನು ಒಳ್ಳೆಯ ಎಂಟಿ-ವೈರಸದಿಂದ ಪರಿಶೀಲಿಸಿ, ಯಾವುದೇ ವೈರಸ್ ಇಲ್ಲವೆಂದು ಖಚಿತ ಪಡಿಸಿಕೊಂಡ ನಂತರವೇ ಅದನ್ನು ತೆಗೆಯಿರಿ.
೫] ನೀವು ಸೈಬರ್ ಕೆಫೆಗಳಲ್ಲಿ ಸಾಮಾಜಿಕ ಜಾಲತಾಣವನ್ನು ನೋಡುತ್ತಿದ್ದರೆ ನಿಮ್ಮ ಕಾರ್ಯ ಮುಗಿದ ನಂತರ "ಸೈನ-ಔಟ್" ಮಾಡಲು ಮರೆಯದಿರಿ ಮತ್ತು "ಟೂಲ್ಸ್" ಮೆನುವಿಗೆ ಹೋಗಿ "ಡಿಲಿಟ್ ಬ್ರೌಸಿಂಗ್ ಹಿಸ್ಟರಿ" ಆಯ್ಕೆಯನ್ನು ಅದುಮಿ ಬ್ರೌಸಿಂಗ ಇತಿಹಾಸವನ್ನು ಅಳಿಸಿ ಹಾಕಿ. ಇದು ನಿಮ್ಮ ಗುಪ್ತತೆಯನ್ನು (ಪ್ರೈವಸಿ) ಕಾಪಾಡಿಕೊಳ್ಳುವ ಅತ್ಯಂತ ಸುಲಭ ವಿಧಾನವಾಗಿದೆ

ಕಂಪ್ಯು ಇನ್ ಕನ್ನಡ ಜಾಲತಾಣ


ಕಂಪ್ಯು ಇನ್ ಕನ್ನಡ ಗಣಕ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಿರಿ!

ಫೆಬ್ರ 20, 2012

knowledge for upcoming 2012 Exams

your knowledge for upcoming 2012 Exams.

1. In year 2011 Indian Govt. remove the ban for Export of what?
Ans. Onion.


2. What do you mean by PAC?
Ans. Public Account Committee.


3. How many members are there in PAC?
Ans. 22 members.

4. What do you mean by CVC?
Ans. Chief Vigilance Commissioner.

5. Who is the President of CVC?
Ans. Mr. Pardeep.

6. What do you mean by LLP?
Ans.  Limited Liability Partnership.

8. Central govt. closed which scheme related to Post Office a few day ago?
Ans.  KVP (Kisan Vikas Patra).

9. Now what is Maturation time period for NSC?
Ans. 5 years.

10. What is the limit of PPF deduction of the employee in one year?
Ans. One lakh.

ಜನ 6, 2012

ಕಣ್ಣಲ್ಲಿ ನೀರಹನಿ ತರಿಸಿದ ಗಾಯನ.





ಈ ವೀಡಿಯೊದಲ್ಲಿ ಹಾಡುವ ಬಾಲ ಯುವಕ ಅನಾಥ..ಬಾಲ್ಯದಲ್ಲಿ ಆಶ್ರಮದಲ್ಲಿ ತೊಂದರೆ ತಾಳಲಾರದೆ ಬಿಟ್ಟು ಓಡಿ ಹೋದವನು ನಂತರ ಕಷ್ಟ ಜೀವನ ನಡೆಸಿದ.ಬಾತ್ ರೂಂ,ಮೆಟ್ಟಲಿನಡಿ ಮತ್ತಿತರ ಜಾಗಗಳಲ್ಲಿ ಮಲಗಿ ಜೀವನ ಸವೆಸಿದ.ಅವನು ಇದೆಲ್ಲ ಹೇಳುವುದನ್ನು ವೀಡಿಯೊದಲ್ಲಿ ಇಂಗ್ಲಿಷ್ ನಲ್ಲಿ ಅನುವಾದಿಸಿ ತೋರಿಸಲಾಗಿದೆ.
ಅವನು ಹಾಡುತ್ತಾ ಹೋದಂತೆ ಸಭಿಕರು ಮತ್ತು ಜಡ್ಜ್ ಗಳ ಕಣ್ಣು ತೇವವಾಗಿ ಭಾಷ್ಪ ಹರಿಯುವ ಭಾವಪೂರ್ಣ ಸನಿವೇಶ ನಿಮ್ಮ ಕಣ್ಣು ಮಂಜಾಗಿಸಿದರೆ ಆಶ್ಚರ್ಯವೇನಿಲ್ಲ

ಈ ವಿಡಿಯೋ ನೋಡಿ ನಾವು ಕಲಿಯಬೇಕಾದದ್ದು ಬಹಳಷ್ಟಿದೆ !!!!

ಇಲ್ಲೊಂದು ವಿಡಿಯೋ ಇದೆ ಒಮ್ಮೆ ನೋಡಿ , ಒಬ್ಬರಿಗೊಬ್ಬರು ಸಹಾಯಹಸ್ತ ಚಾಚಿದರೆ , ಎಂತಹ ಸಮಾಜ ಕಟ್ಟಬಹುದು ಆಲ್ವಾ !!! ಕಣ್ತೆರೆಸುವ ಇಂತಹ ವಿದಿಯೋಗಳಿಗೆ ಪ್ರೋತ್ಸಾಹಿಸೋಣ ಆಲ್ವಾ,

ಸ್ಪರ್ಧಾರ್ಥಿ e-ಪತ್ರಿಕೆ : ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಕನ್ನಡದ ಮೊದಲ e-ಪತ್ರಿಕೆ

ಮುಕ್ತ & ಸ್ವಾರ್ಥ-ಪತ್ರಿಕೆಯ ಧ್ಯೇಯ

ಸ್ಪರ್ಧಾರ್ಥಿ e-ಪತ್ರಿಕೆ : ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಕನ್ನಡದ ಮೊದಲ e-ಪತ್ರಿಕೆ



ಮುಕ್ತ

ಸ್ಪರ್ಧಾರ್ಥಿ ಪತ್ರಿಕೆಯನ್ನ ರೇವಪ್ಪ ಎಂಬ ಕನ್ನಡದ ಹುಡುಗ ಶುರು ಮಾಡಿದ್ದರೂ ಕೂಡ, ಪತ್ರಿಕೆಗೆ ಪ್ರೋತ್ಸಾಹ ನೀಡುವ ಮತ್ತು ತಮ್ಮ ಪಾಲಿನ ಜ್ಞಾನವನ್ನ ಹಂಚಿಕೊಳ್ಳುವ ಸಹೃದಯಿ ಕನ್ನಡಿಗರು ಪತ್ರಿಕೆಯನ್ನ ದಿನವೂ ಬೆಳೆಸುತ್ತಿದ್ದಾರೆ. ಇಲ್ಲಿ ಜ್ಞಾನಹಂಚುವ ಪ್ರಾಮಾಣಿಕ ಕಳಕಳಿಯುಳ್ಳ : ಕನ್ನಡ ಬಲ್ಲ ಪ್ರತಿಯೊಬ್ಬ ವ್ಯಕ್ತಿಯೂ ಭಾಗವಹಿಸಬಹುದು. ಈ ಪತ್ರಿಕೆ ಯಾರೊಬ್ಬರ ಒಡೆತನಕ್ಕೆ ಸೇರಿಲ್ಲ. ಬದಲಿಗೆ ಇದು ಕನ್ನಡವನ್ನ ಪ್ರೀತಿಸುವ, ಕನ್ನಡಕ್ಕೆ ಕೃತಜ್ಞತೆ ತೋರಬಯಸುವ ಪ್ರತಿ ಕನ್ನಡಿಗನ ಸ್ವಂತ ಪತ್ರಿಕೆ.

ಸ್ವಾರ್ಥ

ಸ್ಪರ್ಧಾರ್ಥಿ ಪತ್ರಿಕೆಯಲ್ಲಿ ದಿನವೂ ಹೊಸ ಹೊಸ ಮಾಹಿತಿ ಪ್ರಕಟಗೊಳ್ಳುತ್ತವಲ್ಲಾ .. ಅವುಗಳನ್ನ ಯಾರು ಬರೀತಾರೆ ? ಅವರು ಪತ್ರಿಕೆಗೆ ಅಂತನೇ ನೇಮಕಗೊಂಡಿರುವವರಾ ? ಅಥವಾ ಪತ್ರಿಕೆಯನ್ನ ಬಹುವಾಗಿ ನೆಚ್ಚಿಕೊಂಡು ಅದರ ಶ್ರೇಯೋಭಿವೃದ್ಧಿಗೆ ಸದಾ ಮಿಡಿಯುತ್ತಿರುವ ವ್ಯಕ್ತಿಯ ಪರಿಶ್ರಮವಾ ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ : ಸ್ವಾರ್ಥ !!

ಹೌದು. ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು ಅನ್ನುವ ಹಾಗೆ ಸ್ವಾರ್ಥಮಯ ಜಗತ್ತನ್ನ ಸ್ವಾರ್ಥವನ್ನ ಬಳಸಿಕೊಂಡೇ ನಿಸ್ವಾರ್ಥಿಯಾಗಿಸುವ ಪ್ರಯತ್ನವಿದು.

ಪ್ರತಿ ಸ್ಪರ್ಧಾರ್ಥಿ ತಾನು ಬಯಸುವ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವ ನಿಟ್ಟಿನಲ್ಲಿ ಅಧ್ಯಯನ ಮಾಡುತ್ತಾ, ಟಿಪ್ಪಣಿಗಳನ್ನ ಮಾಡಿಟ್ಟುಕೊಳ್ಳುತ್ತಾ ತಯಾರಿ - ತಾಲೀಮಿನಲ್ಲಿ ತೊಡಗಿರುತ್ತಾನೆ. ಹೀಗೆ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ಸ್ಪರ್ಧಾರ್ಥಿ ತಾನು ಓದಿಕೊಂಡಿದ್ದನ್ನ ಮನನ ಮಾಡಿಕೊಂಡು ವಿಷಯವನ್ನ ಗಟ್ಟಿಗೊಳಿಸಿಕೊಳ್ಳುವ ಪ್ರಕ್ರಿಯೆಯ ಹಂತದಲ್ಲಿ ಪತ್ರಿಕೆ ಅವರಿಗೆ ಸಹಾಯಹಸ್ತವಾಗುವುದರ ಜೊತೆಗೆ ತನ್ಮೂಲಕ ಅವರೂ ಇತರರಿಗೆ ಸಹಾಯ ಮಾಡುವ ದಾರಿ ತೋರಿಸಿದೆ. ವಿಷಯವೊಂದರ ಮನನಕ್ಕೆ ಜನಪ್ರಿಯ ರೂಢಿಯಾಗಿರುವ 'ಬರೆದು ತೆಗೆಯುವ' ಹವ್ಯಾಸದ ಭಾಗವಾಗಿ ನಿಮ್ಮ ಮೇಜಿನ ಮೇಲಿರುವ ಹಾಳೆಯ ಬದಲಿಗೆ ನಿಮ್ಮ mail IDಯ e-ಹಾಳೆಯ ಮೇಲೆ ಬರೆದು ತೆಗೆಯಿರಿ. ಹಾಗೆ ನೀವು ಬರೆದು ತೆಗೆಯೋದು ನಿಮ್ಮ ಸ್ವಾರ್ಥಕ್ಕಾಗಿ. ನಿಮ್ಮ ಮನನಕ್ಕಾಗಿ. ಆದರೆ ನೆನಪಿರಲಿ : ನಿಮಗೆ ಇಲ್ಲಿಯವರೆಗೆ ತಿಳಿದಿರದ ಹೊಸ ವಿಷಯವೊಂದನ್ನ ಅಭ್ಯಸಿಸಿ ಅರಿತು, ಹತ್ತಾರು ವಾಕ್ಯದಲ್ಲಿ ಟಿಪ್ಪಣಿ ಮಾಡಿ ಕಳುಹಿಸಬೇಕು. ಯಾಕಂದ್ರೆ ಯಾರಿಗೋ ಸಹಾಯ ಮಾಡುವ ನಿಟ್ಟಿನಲ್ಲಿ ನಿಮ್ಮ ಸಮಯವೇಕೆ ವ್ಯರ್ಥ ಮಾಡಿಕೊಳ್ಳುತ್ತೀರಿ ?

ಬರೆದಾದ ನಂತರ ಸ್ಪರ್ಧಾರ್ಥಿ(spardharthi@gmail.com)ಗೆ email ಕಳಿಸಿದರೆ ಮುಗಿಯಿತು. ಸ್ವಾರ್ಥವೂ ಈಡೇರಿತು - ನಿಸ್ವಾರ್ಥದ ಕೈಂಕರ್ಯವೂ ಪೂರೈಸಿತು !!






: ಸ್ಪರ್ಧಾರ್ಥಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೇಷನರಿ ಅಧಿಕಾರಿ ಹುದ್ದೆ ಪರೀಕ್ಷೆ - ಕಂಪ್ಯೂಟರ್ ಜ್ಞಾನ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೇಷನರಿ ಅಧಿಕಾರಿ ಹುದ್ದೆ ಪರೀಕ್ಷೆ - ಕಂಪ್ಯೂಟರ್ ಜ್ಞಾನ



ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೇಷನರಿ ಅಧಿಕಾರಿ ಹುದ್ದೆ ಪರೀಕ್ಷೆ - ಕಂಪ್ಯೂಟರ್ ಜ್ಞಾನ - 16/01/ 2011

{ ಅತ್ಯಮೂಲ್ಯ ಉತ್ತರ ಪತ್ರಿಕೆ : 06 }

( ಪಿ.ಡಿ.ಓ. ಪರೀಕ್ಷೆ ಕಂಪ್ಯೂಟರ್ ಜ್ಞಾನ ಕ್ಕೆ ಅನುಕೂಲ )


You can keep your personal files/folders in — My Documents
The primary purpose of software is to turn data into — Information
A directory within a directory is called — Sub Directory
A compiler translates a program written in a high-level language into — Machine language
When you turn on the computer, the boot routine will perform this test — Disk drive test
A ……is a unique name that you give to a file of information — filename extension
Hardware includes — all devices involved in processing information including the central processing unit, memory and storage
A ……… contains specific rules and words that express the logical steps of an algorithm — programming language
All the deleted files go to — Recycle Bin
The simultaneous processing of two or more programs by multiple processors is — Multiprocessing
The secret code that restricts entry to some programs — Password
Computers use the ……… number system to store data and perform calculations — binary
The main function of the ALU is to — Perform arithmetic and logical operations
……is the process of carrying out commands — Executing
Softcopy is the intangible output, so then what is hardcopy ? — The printed output
A(n) ……… is a program that makes the computer easier to use — utility
A complete electronic circuit with transistors and other electronic components on a small silicon chip is called a(n) — Integrated circuit
Computer systems are comprised of — Hardware, software, procedures, networks and people
An error in a computer program — Bug
What is output ? — What the processor gives to the user
The person who writes and tests computer programs is called a — programmer
A set of instructions telling the computer what to do is called — program
What menu is selected to print ? — File
What is backup ? — Protecting data by copying it from the original source to a different destination
The term bit is short for — Binary digit


( ... ಮುಂದುವರಿಯುವುದು )



: ಉತ್ತರಚೋರ

ಕೆ.ಎ.ಎಸ್. ಪರೀಕ್ಷೆ : 2010 ಸಾಮಾನ್ಯ ಅಧ್ಯಯನ ಪರೀಕ್ಷೆ ನಡೆದ ದಿನಾಂಕ : 06 ನೇ ಜೂನ್ 2010 ಪ್ರಶ್ನೆ ಪತ್ರಿಕೆ ಸರಣಿ : B

ಕೆ.ಎ.ಎಸ್. ಪರೀಕ್ಷೆ : 2010
01. ರೀನಾ ಕೌಶಲ್ ಧರ್ಮಶಕ್ತು ಅವರು ಈ ಕೆಳಕಂಡ ಸ್ಥಳಕ್ಕೆ ಸ್ಕಿ-ಟ್ರಿಕ್ (Ski-trek) ಮಾಡಿದ ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ.
ಎ. ದಕ್ಷಿಣ ಧ್ರುವ
ಬಿ. ಎವರೆಸ್ಟ್
ಸಿ. ಕಿಲಿಮಂಜಾರೋ
ಡಿ. ವೆಸೋವಿಯಸ್


02. ಉತ್ತರಕನ್ನಡ ಜಿಲ್ಲೆಯ ಪರಿಸರ ಶಾಸ್ತ್ರೀಯ ದೃಷ್ಟಿಯಿಂದ ಸೂಕ್ಷ್ಮವೆನಿಸಿದ ವಲಯದಿಂದ ಒಂದು ಶಾಖೋತ್ಪನ್ನ ವಿದ್ಯುತ್ ಪರಿಯೋಜನೆಯನ್ನು ತಮಿಳುನಾಡಿನ ಒಂದು ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಉತ್ತರ ಕನ್ನಡದ ಈ ಪ್ರದೇಶ ಯಾವುದು ?
ಎ. ಕಾರವಾರ
ಬಿ. ಅಂಕೋಲ
ಸಿ. ಶಿರಸಿ
ಡಿ. ಹೊನ್ನಾವರ


03. ವಿಶ್ವ ಆಹಾರ ಬಹುಮಾನವನ್ನು 2009ರ ಸಾಲಿಗಾಗಿ ಡಾ.ಗೆಬಿಸಾ ಎಜಿಟಾ ಅವರಿಗೆ ನೀಡಲಾಯಿತು. ಈ ಬಹುಮಾನವನ್ನು ಸ್ಥಾಪಿಸಿದವರು ಯಾರು ?
ಎ. ಡಾ. ಫಿಲಿಪ್ ನೆಲ್ಸನ್
ಬಿ. ಡಾ. ಎಂ.ಎಸ್. ಸ್ವಾಮಿನಾಥನ್
ಸಿ. ಡಾ. ಮಹಮ್ಮದ್ ಯೂನುಸ್
ಡಿ. ಡಾ. ನಾರ್ಮನ್ ಬೋರ್ಲಾಗ್


04. ಇತ್ತೀಚೆಗೆ ನಡೆದ 2009 ICC ಚಾಂಪಿಯನ್ಸ್ ಕ್ರಿಕೇಟ್ ಟ್ರೋಫಿಯ ಅಗ್ರಗಣ್ಯರಲ್ಲೊಬ್ಬರು ಫ್ಲಾಯ್ಡ್ ರೀಫರ್ ಅವರು ಯಾವ ತಂಡಕ್ಕಾಗಿ ಆಡಿದರು ?
ಎ. ವೆಸ್ಟ್ ಇಂಡೀಸ್
ಬಿ. ಇಂಗ್ಲೇಂಡ್
ಸಿ. ದಕ್ಷಿಣ ಆಫ್ರಿಕ
ಡಿ. ನ್ಯೂಜಿಲೆಂಡ್


05. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C-4) ನ್ನು 2009ರ ಸೆಪ್ಟೆಂಬರ್ ನಲ್ಲಿ ಆನೇಕ ಉಪಗ್ರಹಗಳೊಂದಿಗೆ ಉಡಾಯಿಸಲಾಯಿತು. ಇದುವರೆಗೆ ಈ ಹಿಂದಿನ ಎಷ್ಟು PSLV ಯೋಜನೆಗಳು ವಿಫಲವಾಗಿವೆ ?
ಎ. ಸೊನ್ನೆ
ಬಿ. ಒಂದು ಸಲ
ಸಿ. ಎರಡು ಸಲ
ಡಿ. ಮೂರು ಸಲ


06. ಇತ್ತೀಚೆಗೆ 2009ರಲ್ಲಿ ಒಬ್ಬ ಭಾರತೀಯರು ವಿಶ್ವ ಚಾಂಪಿಯನ್ ಶಿಪ್ ಗಳಿಸಿದರು ಅವರ ಹೆಸರೇನು ?
ಎ. ಪಂಕಜ್ ಅದ್ವಾನಿ, ಬಿಲಿಯರ್ಡ್ಸ್ ಗಾಗಿ
ಬಿ. ದೀಪಿಕಾ ಪಲ್ಲಿಕಾಲ್, ಸ್ಕ್ವಾಶ್ ಗಾಗಿ
ಸಿ. ವಿಶ್ವನಾಥನ್ ಆನಂದ್, ಚೆಸ್ ಗಾಗಿ
ಡಿ. ಗೀತ್ ಸೇಥಿ, ಸ್ನೋಕರ್ ಗಾಗಿ


07. ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಡೂರ್ ಗೋಪಾಲ ಕೃಷ್ಣನ್ ಅವರು ಅತ್ಯುತ್ತಮ ನಿರ್ದೇಶಕ ಬಹುಮಾನ ಗಳಿಸಿದರು. ಇದಕ್ಕೆ ಮೊದಲು ಅವರು ಎಷ್ಟು ಸಲ ಬಹುಮಾನ ಪಡೆದಿದ್ದಾರೆ ?
ಎ. ಒಂದು ಸಲ
ಬಿ. ಎರಡು ಸಲ
ಸಿ. ಮೂರು ಸಲ
ಡಿ. ನಾಲ್ಕು ಸಲ


08. ಭಾರತದ ಆರನೇ ವೇತನ ಆಯೋಗದ ಶಿಫಾರಸ್ಸುಗಳಿಂದ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಉದ್ಯೋಗಿಗಳು ತುಂಬಾ ಹರ್ಷಿತರಾಗಿದ್ದಾರೆ. ಈ ಕೆಳಗಿನ ಯಾರು ಈ ಆಯೋಗದ ಸದಸ್ಯರಾಗಲಿಲ್ಲ ?
ಎ. ಡಾ. ರತ್ನವೇಲ್ ಪಾಂಡಿಯನ್
ಬಿ. ನ್ಯಾಯಮೂರ್ತಿ ಬಿ.ಎನ್. ಕೃಷ್ಣ
ಸಿ. ಪ್ರೊ. ರವೀಂದ್ರ ಧೋಲಾಕಿಯಾ
ಡಿ. ಶ್ರೀ ಜೆ.ಎಸ್. ಮಾಥುರ್


09. ವಿಶ್ಚ ಸಂಸ್ಥೆಯ ಯುನೆಸ್ಕೋ (UNESCO) ಅಂಗಸಂಸ್ಥೆಯು ಇತ್ತೀಚೆಗೆ ಶ್ರೀಮತಿ ಇರಿನಾ ಬೊಕೊವಾ ಅವರನ್ನು ತನ್ನ ಮಹಾ ನಿರ್ದೇಶಕರನ್ನಾಗಿ ಆಯ್ಕೆಮಾಡಿಕೊಂಡಿದೆ. ಈ ಹುದ್ದೆಯಲ್ಲಿ ಇವರಿಗಿಂತ ಮೊದಲಿದ್ದವರು ಯಾರು ?
ಎ. ಕೊಯಿಚಿರೊ ಮತ್ಸೂರ
ಬಿ. ಫರೂಕ್ ಹೋಸ್ನೆ
ಸಿ. ಫಡೆರಿಕೊ ಮೇಯರ್
ಡಿ. ಅಮೊಡು ಮಹ್ತರ್ ಎಂಬೊ


10. ಲಿಯಾಂಡರ್ ಪೇಸ್ ಅವರು ಇತ್ತೀಚೆಗೆ ಯು.ಎಸ್.ಓಪನ್ ಡಬಲ್ಸ್ ಚಾಂಪಿಯನ್ ಶಿಪ್ ಗಳಿಸಿದರು. ಅವರ ಜೊತೆ ಆಟಗಾರರಾಗಿದ್ದವರು ಯಾರು ?
ಎ. ಲೈಸೆಲ್ ಹೂಬರ್
ಬಿ. ಕಾರಾ ಬ್ಲ್ಯಾಕ್
ಸಿ. ಲುಕಾಸ್ ಡ್ಲೌಹಿ
ಡಿ. ಮಾರ್ಕ್ ನೋವೆಲ್ಸ್


11. G-20 ಗುಂಪಿನ ದೇಶಗಳ ನಾಯಕರು ಅಂತರಾಷ್ಟ್ರೀಯ ಮಹತ್ವದ ವಿಷಯಗಳನ್ನು ಚರ್ಚಿಸುವುದಕ್ಕಾಗಿ 2009ರ ಸೆಪ್ಟೆಂಬರ್ ತಿಂಗಳಲ್ಲಿ ಸಭೆ ಸೇರಿದ್ದರು. ಈ ಗುಂಪಿನಲ್ಲಿ ಕೆಳಕಂಡ ಯಾವ ದೇಶವು ಪ್ರತಿನಿಧಿಸಿರಲಿಲ್ಲ ?
ಎ. ಸೌದಿ ಅರೇಬಿಯಾ
ಬಿ. ಸ್ವಿಟ್ಜರ್ ಲ್ಯಾಂಡ್
ಸಿ. ಇಂಡೋನೇಶಿಯಾ
ಡಿ. ಮೆಕ್ಸಿಕೋ
ಉತ್ತರ:

12. ಈ ಕೆಳಗಿನ ಯಾವ ಕೀರ್ತಿವೆತ್ತ ವ್ಯಕ್ತಿಯು ತಾನು 2010ರ ಕಾಮನ್ ವೆಲ್ತ್ ಕ್ರೀಡೆಗಳ ಪ್ರಾರಂಭೋತ್ಸವದಲ್ಲಿ ಪ್ರದರ್ಶನ ನೀಡುವುದಾಗಿ ಘೋಷಿಸಿದರು ?
ಎ. ಅಮೀರ್ ಖಾನ್
ಬಿ. ಶಾರುಕ್ ಖಾನ್
ಸಿ. ಸೈಫ್ ಅಲಿ ಖಾನ್
ಡಿ. ಇಮ್ರಾನ್ ಖಾನ್
ಉತ್ತರ:

13. ಹಸಿರು ಮನೆ ಅನಿಲ ಉತ್ಸರ್ಜನೆಯ ದೃಷ್ಠಿಯಿಂದ ಪಟ್ಟಿಯ ಅಗ್ರಸ್ಥಾನದಲ್ಲಿರುವ ನಗರ ಯಾವುದು ?
ಎ. ಜಮ್ ಶೆಡ್ ಪುರ್
ಬಿ. ಗುರ್ ಗಾಂವ್
ಸಿ. ದೆಹಲಿ
ಡಿ. ಪಾಟ್ನಾ
ಉತ್ತರ:

14. ಕಡಿಮೆ ವೆಚ್ಚದ ವಿಮಾನಯಾನ 'ಏರ್ ಏಷಿಯಾ' ದ ನೆಲೆ ಯಾವುದು ?
ಎ. ಸಿಂಗಪುರ
ಬಿ. ಮಲೇಶಿಯಾ
ಸಿ. ಥಾಯ್ ಲ್ಯಾಂಡ್
ಡಿ. ಬ್ಯಾಂಗ್ ಕಾಕ್
ಉತ್ತರ:

15. ಯೂರೋಪಿನ ಮಾಲಿಕ್ಯುಲಾರ್ ಬಯಾಲಜಿ ಸಂಸ್ಥೆಯಿಂದ ಯುವ ಸಂಶೋಧಕರೆಂದು ಆಯ್ಕೆಯಾಗಿರುವ ಭಾರತೀಯ ವ್ಯಕ್ತಿಯ ಹೆಸರು
ಎ. ಜೆ. ಸ್ಮಿತ್
ಬಿ. ಜೋಸೆಫ್ ಡಿಗೋರಿ
ಸಿ. ಎಂ. ಮದನ್ ಬಾಬು
ಡಿ. ತಪಸಿ ಮುಖರ್ಜಿ
ಉತ್ತರ:

16. ಧಾರ್ಮಿಕ ಮೂರ್ತಿಗಳಿಗೆ (Icons) ಸಂಬಂಧಿಸಿದಂತೆ ಆಕ್ಷೇಪಾರ್ಹ ಉಲ್ಲೇಖಗಳಿರುವ ಇತಿಹಾಸದ ಪಠ್ಯ ಪುಸ್ತಕವನ್ನು ರಚಿಸಿದ್ದಕ್ಕಾಗಿ FIR ವಿಧಿಸಲ್ಪಟ್ಟವರು ಯಾರು ?
ಎ. ರೊಮಿಲಾ ಥಾಫರ್
ಬಿ. ಕೆ.ಎಂ.ಶ್ರೀಮಾಲಿ
ಸಿ. ಸತೀಶ್ ಚಂದ್ರ
ಡಿ. ಇರ್ಫಾನ್ ಹಬೀಬ್
ಉತ್ತರ:

17. ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಹಿಮಾಲಯದಲ್ಲಿರುವ ಹಿಮನದಿಗಳಿಗೆ ಅಪಾಯ ಉಂಟಾಗಿದೆ ಎಂಬುದನ್ನು ತೋರಿಸುವುದಕ್ಕಾಗಿ ಮೌಂಟ್ ಎವರೆಸ್ಟ್ ಮೇಲೆ ತನ್ನ ಸಂಪುಟ ಸಭೆಯನ್ನು ನಡೆಸಿದ ರಾಷ್ಟ್ರ ಯಾವುದು ?
ಎ. ಭೂತಾನ್
ಬಿ. ಬಾಂಗ್ಲಾದೇಶ
ಸಿ. ಭಾರತ
ಡಿ. ನೇಪಾಳ್
ಉತ್ತರ:

18. ಸರ್ಚ್ ಎಂಜಿನ್ ಗೂಗಲ್ ಅನ್ನು ರೂಪಿಸಿದವರು, ಆರಂಭಿಸಿದರುವ ಲ್ಯಾರಿ ಪೇಜ್ ಮತ್ತು ಸೆರ್ಜಿ ಬ್ರಿನ್. ಗೂಗಲ್ ಅನ್ನು ಆರಂಭಿಸಿದಾಗ ಅವರು ಏನಾಗಿದ್ದರು ?
ಎ. ಸಾಫ್ಟ್ ವೇರ್ ಫ್ರೊಫೆಶನಲ್ ಗಳು
ಬಿ. Ph.D ವಿದ್ಯಾರ್ಥಿಗಳು
ಸಿ. ಕಂಪ್ಯೂಟರ್ ಪ್ರೊಫೆಸರ್ ಗಳು
ಡಿ. ಹಣಕಾಸು ಮಾರುಕಟ್ಟೆಯ ಪ್ರೊಫೆಶನಲ್ ಗಳು
ಉತ್ತರ:

19. ಅಂತರಿಕ್ಷದ ಆಳದಲ್ಲಿ ಆಕಾಶವು ಹೇಗೆ ಕಾಣಿಸುತ್ತದೆ ?
ಎ. ಕತ್ತಲು
ಬಿ. ನೀಲಿ
ಸಿ. ತಿಳಿ ಹಳದಿ
ಡಿ. ಕೆಂಪು
ಉತ್ತರ:

20. ಈ ಕೆಳಗಿನ ನಾಲ್ವರು ವಿಜ್ಞಾನಿಗಳಲ್ಲಿ ಪ್ರತಿಯೊಬ್ಬರೂ ಎರಡೆರಡು ಸಲ ನೊಬೆಲ್ ಬಹುಮಾನಗಳಿಸಿದ್ದಾರೆ. ಇವರಲ್ಲಿ ಯಾರಿಗೆ ವಿಜ್ಞಾನೇತರ ತರಗತಿಗಾಗಿ ನೊಬಲ್ ಬಹುಮಾನ ನೀಡಲಾಗಿದೆ ?
ಎ. ಜಾನ್ ಬರ್ದಿನ್
ಬಿ. ಮೇರಿ ಕ್ಯೂರಿ
ಸಿ. ಲೈನಸ್ ಪಾಲಿಂಗ್
ಡಿ. ಪ್ರೆಡ್ ರಿಕ್ ಸ್ಯಾಂಗರ್
ಉತ್ತರ:

21. ಭೂಮಿಯ ಗಟ್ಟಿ ಕವಚವು (ಎಲ್ಲಕ್ಕಿಂತ ಹೊರಗಿನ ಘನ ಕವಚ) ಆಕ್ಸೈಡುಗಳ ರೂಪದಲ್ಲಿ ಸಮೃದ್ಧವಾದ ಆಮ್ಲಜನಕವನ್ನು ಹೊಂದಿದೆ. ಇವುಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ ಆಕ್ಸೈಡು ಯಾವುದು ?
ಎ. ಸಿಲಿಕಾನ್ ಆಕ್ಸೈಡ್ (ಸಿಲಿಕಾ)
ಬಿ. ಅಲ್ಯುಮಿನಿಯಮ್ ಆಕ್ಸೈಡ್ (ಅಲ್ಯೂಮಿನಾ)
ಸಿ. ಕ್ಯಾಲ್ಶಿಯಂ ಆಕ್ಸೈಡ್ (ಸುಣ್ಣ)
ಡಿ. ಮೆಜ್ನೀಶಿಯಂ ಆಕ್ಸೈಡ್ (ಮೆಜ್ನೀಶಿಯಾ)
ಉತ್ತರ:

22. "ಪ್ರತಿ ಘಟಕ ವೆಚ್ಚಕ್ಕೆ ಕಂಪ್ಯೂಟಿಂಗ್ ನಿರ್ವಹಣೆಯು ಪ್ರತಿ ಇಪ್ಪತ್ನಾಲ್ಕು ತಿಂಗಳುಗಳಿಗೆ ಇಮ್ಮಡಿಯಾಗುತ್ತದೆ" - ಈ ಹೇಳಿಕೆಯು ಯಾವ ನಿಯಮಕ್ಕೆ ಸಂಬಂಧಿಸಿದೆ ?
ಎ. ಮೂಯರ್ ನಿಯಮ
ಬಿ. ಮೂರ್ ನಿಯಮ
ಸಿ. ಮರ್ಫಿಯಾ ನಿಯಮ
ಡಿ. ಶಾನನ್ ನಿಯಮ
ಉತ್ತರ:

23. ಸಿಲಿಂಡ್ರಿಕಲ್ ಮಸೂರಗಳನ್ನು ಕೆಳಕಂಡ ದೋಷದ ಸರಿಪಡಿಕೆಗಾಗಿ ಬಳಸಲಾಗುತ್ತದೆ
ಎ. ಸಮೀಪ ದೃಷ್ಟಿ
ಬಿ. ಅತಿ ದೂರ ದೃಷ್ಟಿಯ ರೋಗ
ಸಿ. ಅಸಮ ದೃಷ್ಟಿ
ಡಿ. ಅತಿ ಸುಪ್ತಿ (ಕೋಮ)
ಉತ್ತರ:

24. ಈ ಕೆಳಗೆ ಕೊಟ್ಟಿರುವ ಪಟ್ಟಿಯಿಂದ ಅಶೋಕನ ರಾಜಶಾಸನಗಳನ್ನು ಯಾವ ಲಿಪಿಯಲ್ಲಿ ಬರೆಯಲಾಗಿದೆ ಎಂಬುದನ್ನು ಗುರುತಿಸಿ;
I. ಬ್ರಾಹ್ಮಿ
II. ಖರೋಷ್ಠಿ
III. ಗ್ರೀಕ್
IV. ಅರಾಮೇಯಿಕ್
ಎ. I ಮತ್ತು II
ಬಿ. I, II ಮತ್ತು III
ಸಿ. I, II ಮತ್ತು IV
ಡಿ. I, II, III ಮತ್ತು IV
ಉತ್ತರ:

25. 'ಯವನ ಪ್ರಿಯ" (ಯವನರಿಗೆ ಪ್ರಿಯವಾದುದು) ಎಂಬ ಪದವನ್ನು ಸಂಸ್ಕೃತದಲ್ಲಿ ಈ ಕೆಳಕಂಡ ವಿಷಯವನ್ನು ವರ್ಣಿಸುವುದಕ್ಕಾಗಿ ಬಳಸಲಾಗಿದೆ.
ಎ. ದ್ರಾಕ್ಷಾರಸ
ಬಿ. ಮೆಣಸು
ಸಿ. ಶ್ರೀಗಂಧ
ಡಿ. ಚಿನ್ನ
ಉತ್ತರ:

26. ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಈ ಕೆಳಕಂಡ ರಾಜವಂಶಗಳನ್ನು ಕಾಲಾನುಕ್ರಮದಲ್ಲಿ ತಿಳಿಸಿ;
I. ಸಾತವಾಹನರು
II. ಬಾದಾಮಿಯ ಚಾಲುಕ್ಯರು
III. ರಾಷ್ಟ್ರಕೂಟರು
IV. ಕಲ್ಯಾಣದ ಚಾಲುಕ್ಯರು
ಇವುಗಳ ಸರಿಯಾದ ಕ್ರಮ
ಎ. I, II, III, IV
ಬಿ. I, IV, III, II
ಸಿ. II, I III, IV
ಡಿ. I, III, II, IV
ಉತ್ತರ:

27. ತಮಿಳುನಾಡಿನಲ್ಲಿ ಹೊಯ್ಸಳ ಶಕ್ತಿಯ ಕೇಂದ್ರ ಸ್ಥಾನ ಯಾವುದಾಗಿತ್ತು ?
ಎ. ಶಿವನ ಸಮುದ್ರಂ
ಬಿ. ಗಂಗೈಕೊಂಡ ಚೋಳಪುರಂ
ಸಿ. ಕಣ್ಣೂರ್-ಕುಪ್ಪಂ
ಡಿ. ಶ್ರೀರಂಗಪಟ್ಟಣಂ
ಉತ್ತರ:

28. ಚೋಳರ ಶಾಸನಗಳನ್ನು ಈ ಕೆಳಗಿನ ವಿದ್ವಾಂಸರು ಕಂಪ್ಯೂಟರ್ ಸಹಾಯದ ವಿಶ್ಲೇಷಣೆಗೆ ಒಳಪಡಿಸಿದ್ದಾರೆ
ಎ. ಎಸ್. ಶೆಟ್ಟರ್
ಬಿ. ಐ. ಮಹಾದೇವನ್
ಸಿ. ವೈ. ಸುಬ್ಬರಾಯಲು
ಡಿ. ಬಿ.ಆರ್.ಗೋಪಾಲ್
ಉತ್ತರ:

29. ಋಗ್ವೇದದಲ್ಲಿರುವ ಪುರುಷ ಸೂಕ್ತ್ಯಂ ನಲ್ಲಿ ಏನಿದೆ ?
ಎ. ಪುರುಷ ಪ್ರಾಧಾನ್ಯತೆಯ ಒಂದು ಪ್ರಣಾಳಿಕೆ
ಬಿ. ಗಂಡು ಮಗುವಿನ ಜನನಕ್ಕಾಗಿ ಒಂದು ಪ್ರಾರ್ಥನೆ
ಸಿ. ಪುರುಷತ್ವ ಸಂಕ್ರಮಣಕ್ಕೆ ಸಂಬಂಧಿಸಿದ ಮತ ಸಂಸ್ಕಾರಗಳ ವಿವರಗಳು
ಡಿ. ನಾಲ್ಕು ವರ್ಣಗಳ ಮೊತ್ತಮೊದಲ ಉಲ್ಲೇಖ
ಉತ್ತರ:

30. ಪ್ರತಿಪಾದನೆ () ನ್ನು ಕಾರಣ () ವಿವರಿಸಬೇಕಾಗಿದೆ. ಇವುಗಳ ಬಗೆಗಿನ ಯಾವ ವಿವರಣೆ ಸರಿಯಾಗಿದೆ ಎಂಬುದನ್ನು ತಿಳಿಸಿರಿ
ಪ್ರತಿ ಪಾದನೆ (A): ವಿಜಯನಗರವನ್ನು ಆಳಿದ ಸಂಗಮ ರಾಜವಂಶವು ಒಂದು ಪ್ರಮುಖವಾದ ರಾಜವಂಶ
ಕಾರಣ(R): ಇವರು ಸಂಗಮ ಸಾಹಿತ್ಯದ ಪೋಷಕರಾಗಿದ್ದರು.
ಎ. A ಮತ್ತು R ಎರಡೂ ಸರಿ, ಮತ್ತು A ಯ ಕಾರಣದಿಂದ R ಇದೆ
ಬಿ. A ಮತ್ತು R ಎರಡೂ ಸರಿ, ಆದರೆ A ಯ ಕಾರಣದಿಂದ R ಇಲ್ಲ
ಸಿ. A ಸರಿ ಇದೆ, R ತಪ್ಪು
ಡಿ. A ಮತ್ತು R ಎರಡೂ ತಪ್ಪು
ಉತ್ತರ:

31. ಉತ್ತರ ಭಾರತದ ಮೇಲೆ ಘೋರಿ ಸಾಧಿಸಿದ ವಿಜಯವು ಅತ್ಯಂತ ಸುಲಭವಾದ ವಿಜಯವಾಗಿತ್ತು. ಎಂದು ಹೇಳಿದ ಇತಿಹಾಸ ತಜ್ಞರು
ಎ. ಸ್ಟಾನ್ಲಿ ಲೇನ್- ಪೂಲ್
ಬಿ. ವುಲ್ ಸೆಲ್ ಹೇಗ್
ಸಿ. ಮುಹಮ್ಮದ್ ಹಬೀಬ್
ಡಿ. ಇರ್ಫಾನ್ ಹಬೀಬ್
ಉತ್ತರ:

32. ಈ ಕೆಳಗಿನ ಯಾವ ಸ್ಥಳವು ನವಶಿಲಾಯುಗ ಮತ್ತು ಮಧ್ಯ ಶಿಲಾಯುಗದ ವರ್ಣಚಿತ್ರಗಳಿಗೆ ಸಂಬಂಧಿಸಿದೆ ?
ಎ. ಮಸ್ಕಿ
ಬಿ. ಬ್ರಹ್ಮಗಿರಿ
ಸಿ. ಭೀಮ್ ಬೇಟ್ಕ
ಡಿ. ಟಿ. ನರಸೀಪುರ
ಉತ್ತರ:

33. ಈ ಕೆಳಗೆ ಕೊಟ್ಟಿರುವ ಕ್ರಿ.ಪೂ. 6ನೇ ಶತಮಾನದ ಮಹಾಜನಪದಗಳು ಮತ್ತು ಅವುಗಳ ರಾಜಧಾನಿಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ?
ಎ. ಕಾಶಿ - ವಾರಣಾಸಿ
ಬಿ. ಮಗಧ - ರಾಜಗೃಹ
ಸಿ. ಅಂಗ - ಚಂಪ
ಡಿ. ಅವಂತಿ - ವೈಶಾಲಿ
ಉತ್ತರ:

34. ಪ್ರಾಚೀನ ಭಾರತದ ಯಾವ ಅರಸನು ಗ್ರೀಕರಿಗೆ ಅಮಿತ್ರೋ ಖೇಟ್ಸ್ ಎಂಬ ಹೆಸರಿನಿಂದ ಪರಿಚಿತನಾಗಿದ್ದ ?
ಎ. ಅಶೋಕ
ಬಿ. ಬಿಂದುಸಾರ
ಸಿ. ಅಜಾತಶತ್ರು
ಡಿ. ಚಂದ್ರಗುಪ್ತ ಮೌರ್ಯ
ಉತ್ತರ:

35. ಸುಲ್ತಾನರ ಅಧಿಪತ್ಯದ ಕಾಲದಲ್ಲಿದ್ದ ಗುಲಾಮಿಪದ್ದತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ವಿವರಣೆ ತಪ್ಪಾಗಿದೆ ಎಂಬುದನ್ನು ಆಯ್ಕೆ ಮಾಡಿ
ಎ. ಫಿರೋಜ್ ತುಘಲಕ್ ನಿಗೆ 1,18,000 ಗುಲಾಮರಿದ್ದರು ಎಂದು ಹೇಳಲಾಗುತ್ತಿದೆ.
ಬಿ. ಬರಾನಿಯು ದೆಹಲಿಯಲ್ಲಿದ್ದ ಬಹುದೊಡ್ಡ ಗುಲಾಮಿ ಮಾರುಕಟ್ಟೆಯ ಬಗ್ಗೆ ವರ್ಣಿಸುತ್ತಾನೆ.
ಸಿ. ದಿವಾನ್-ಇ-ಬಂದಗಾನ್ ಎನ್ನುವುದು ಗುಲಾಮಗಿರಿಗಾಗಿಯೇ ಇದ್ದ ಒಂದು ಪ್ರತ್ಯೇಕ ಇಲಾಖೆಯಾಗಿತ್ತು.
ಡಿ. ಅಲ್ಲಾವುದ್ದೀನ್ ಖಿಲ್ಜಿಯು ಗುಲಾಮಿಪದ್ದತಿಯನ್ನು ರದ್ದುಮಾಡಿದ.
ಉತ್ತರ:

36. ತಾಳಗುಂದ ಶಾಸನದಲ್ಲಿ ಯಾರನ್ನು 'ಕದಂಬ ವಂಶದ ಭೂಷಣ' ಎಂದು ಕರೆಯಲಾಗಿದೆ ?
ಎ. ಮೌರ್ಯ ಶರ್ಮ
ಬಿ. ಕಾಕುಸ್ಥವರ್ಮ
ಸಿ. ಶಾಂತಿ ವರ್ಮ
ಡಿ. ಮೃಗೇಶ ವರ್ಮ
ಉತ್ತರ:

37. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹಕ್ಕೆ ಸಂಬಂಧಿಸಿದಂತೆ ಯಾವ ವಿವರಣೆ ತಪ್ಪಾಗಿದೆ. ಆಯ್ಕೆ ಮಾಡಿ
ಎ. ಈ ವಿಗ್ರಹವು ಕಮಲದ ಮೇಲೆ ನಿಂತಿದೆ.
ಬಿ. ಇದನ್ನು ಕ್ರಿ.ಶ.982-83ರಲ್ಲಿ ಸ್ಥಾಪಿಸಲಾಯಿತು.
ಸಿ. ಇದನ್ನು ಜಿನದೇವನು ಸ್ಥಾಪಿಸಿದನು
ಡಿ. ಈ ಏಕಶಿಲಾ ವಿಗ್ರಹದ ಅನಂತರದ ಮತ್ತು ಚಿಕ್ಕದಾದ ಅನುಕರಣಗಳು ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳಗಳಲ್ಲಿವೆ
ಉತ್ತರ:

38. 'ಗದ್ಯಕರ್ಣಾಮೃತ' ಎನ್ನುವುದು ಈ ಕೆಳಕಂಡ ಅಧ್ಯಯನಕ್ಕೆ ಬಹುಮುಖ್ಯವಾದ ಆಕರ ಸಾಮಾಗ್ರಿಯಾಗಿದೆ.
ಎ. ತರುವಾಯದ ವರ್ಷಗಳಲ್ಲಿ ಹೋಯ್ಸಳ-ಪಾಂಡ್ಯ ಸಂಬಂಧಗಳು
ಬಿ. ಆರಂಭಕಾಲದಲ್ಲಿ ಚೋಳ-ಪಲ್ಲವ ಸಂಬಂಧಗಳು
ಸಿ. ಚಾಲುಕ್ಯ-ರಾಷ್ಟ್ರಕೂಟ ಸಂಬಂಧಗಳು
ಡಿ. ಮೇಲಿನ ಯಾವುದೂ ಅಲ್ಲ
ಉತ್ತರ:

39. ಸುಲ್ತಾನ ರಜಿಯಾ ಯಾವ ರಾಜವಂಶಕ್ಕೆ ಸೇರಿದವಳು ?
ಎ. ತುಘಲಕ್
ಬಿ. ಗುಲಾಮಿ (ಸ್ಲೇವ್)
ಸಿ. ಖಿಲ್ಜಿ
ಡಿ. ಲೋದಿ
ಉತ್ತರ:

40. ಜಹಾಂಗೀರನ ಆಸ್ಥಾನಕ್ಕೆ ಭೇಟಿನೀಡಿದ ಬ್ರಿಟೀಷ್ ಮನೆತನದ ರಾಯಭಾರಿಯ ಹೆಸರು.
ಎ. ಥಾಮಸ್ ಮನ್ರೋ
ಬಿ. ಬೆಂಜಮಿನ್ ರೈಸ್
ಸಿ. ಥಾಮಸ್ ರೋ
ಡಿ. ಈ ಮೇಲಿನ ಯಾರೂ ಅಲ್ಲ
ಉತ್ತರ:

41. ಪಟ್ಟಿ-I ರಲ್ಲಿ ಕೃತಿಕಾರರ ಹೆಸರುಗಳಿವೆ ಮತ್ತು ಪಟ್ಟಿ-II ರಲ್ಲಿ ಕೃತಿಯ ಶೀರ್ಷಿಕೆಗಳಿವೆ ಇವುಗಳಲ್ಲಿ ಸರಿಯಾದ ಹೊಂದಾಣಿಕೆಗಳನ್ನು ಗುರುತಿಸಿ

ಪಟ್ಟಿ-I ಪಟ್ಟಿ II
A. ದಾದಾಬಾಯ್ ನವರೂಜಿ 1. ಹಿಂದ್ ಸ್ವರಾಜ್
B. ಬಾಲ್ ಗಂಗಾಧರ ತಿಲಕ್ 2. ಗಾಂಧಿ ಅಂಡ್ ಅನಾರ್ಕಿ
C. ಸರ್. ಸಿ. ಶಂಕರನ್ ನಾಯರ್ 3. ಗೀತಾ ರಹಸ್ಯ
D. ಎಂ.ಕೆ.ಗಾಂಧಿ 4. ಪವರ್ಟಿ ಅಂಡ್ ಅನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ

ಸಂಕೇತಗಳು
A B C D
ಎ. 3 1 4 2
ಬಿ. 4 3 2 1
ಸಿ. 1 2 3 4
ಡಿ. 4 3 1 2
ಉತ್ತರ:

42. ಈ ಕೆಳಗಿನ ಯಾವ ಎ.ಐ.ಸಿ.ಸಿ. ಅಧಿವೇಶನದಲ್ಲಿ ಜವಹರಲಾಲ್ ನೆಹರೂ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿಗೆ ಮೋತಿಲಾಲ್ ನೆಹರೂ ಅವರ ತರುವಾಯದ ಅಧ್ಯಕ್ಷರಾಗಿ ಆಯ್ಕೆಯಾದರು ?
ಎ. ಲಾಹೋರ್
ಬಿ. ಅಮೃತಸರ್
ಸಿ. ಪಾಟಿಯಾಲಾ
ಡಿ. ತ್ರಿಪುರಾ
ಉತ್ತರ:

43. ಈ ಕೆಳಗಿನವುಗಳನ್ನು ಕಾಲಾನುಕ್ರಮದಲ್ಲಿ ತಿಳಿಸಿ
I. ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ
II. ಮಲಬಾರ್ ಪ್ರತಿಭಟನೆ
III. ಕೊಮಗಟಮಾರು ಘಟನೆ
IV. ಆರ್.ಐ.ಎನ್ ದಂಗೆ
ಸರಿಯಾದ ಅನುಕ್ರಮಣಿಕೆ
ಎ. III, I, II, IV
ಬಿ. IV, III, II, I
ಸಿ. I, III, II, IV
ಡಿ. IV, II, III, I
ಉತ್ತರ:

44. ಭಾರತದ ಏಕೀಕರಣದ ಕಾರ್ಯದಲ್ಲಿ ಸರ್ದಾರ್ ಪಟೇಲರಿಗೆ ಅತ್ಯಂತ ನಿಕಟವರ್ತಿಯಾಗಿದ್ದವರು
ಎ. ವಿ.ಪಿ.ಮೆನನ್
ಬಿ. ಕೆ.ಪಿ.ಎಸ್.ಮೆನನ್
ಸಿ. ಸರ್.ಸಿ.ಶಂಕರನ್ ನಾಯರ್
ಡಿ. ಎಂ.ಓ.ಮಥಾಯ್
ಉತ್ತರ:

45. ಜವಹರಲಾಲ್ ನೆಹರೂ ಅವರು ನ್ಯಾಯವಾದಿಯ ಕೋಟನ್ನು ಕೊನೆಯಬಾರಿಗೆ ಧರಿಸಿದ್ದು ಯಾವ ಸಂದರ್ಭದಲ್ಲಿ ?
ಎ. ಮಹಾತ್ಮ ಗಾಂಧಿಯವರ ವಿಚಾರಣೆ
ಬಿ. ಆರ್.ಐ.ಎನ್. ದಂಗೆಕೋರರ ವಿಚಾರಣೆ
ಸಿ. ಐ.ಎನ್.ಎ ಬಂದಿಗಳ ವಿಚಾರಣೆ
ಡಿ. ಭಗತ್ ಸಿಂಗ್ ಪ್ರಕರಣದ ಪ್ರೀವಿ ಕೌನ್ಸಿಲ್ ಹಿಯರಿಂಗ್
ಉತ್ತರ:

46. ದೇಶೀಯ ಭಾಷೆಗಳ ಪತ್ರಿಕಾ ಕಾಯ್ದೆಯನ್ನು 1878ರಲ್ಲಿ ಜಾರಿಗೊಳಿಸಿದವರು
ಎ. ಲಾರ್ಡ್ ರಿಪ್ಪನ್
ಬಿ. ಲಾರ್ಡ್ ಲಿಟ್ಟನ್
ಸಿ. ಲಾರ್ಡ್ ಕರ್ಜನ್
ಡಿ. ಮೇಲಿನ ಯಾರೂ ಅಲ್ಲ
ಉತ್ತರ:

47. ಈ ಕೆಳಗಿನ ಯಾವ ಸೌಮ್ಯವಾದಿಯನ್ನು high priest of drain theory ಎಂದು ಪರಿಗಣಿಸಲಾಗಿದೆ ?
ಎ. ದಿನ್ ಶಾ ವಚ್ಚಾ
ಬಿ. ಆರ್.ಪಿ. ದತ್
ಸಿ. ಗೋಪಾಲ ಕೃಷ್ಣ ಗೋಖಲೆ
ಡಿ. ದಾದಾಬಾಯಿ ನವರೂಜಿ
ಉತ್ತರ:

48. ಭಾರತದಲ್ಲಿ ಹೋಂರೂಲ್ ಚಳುವಳಿ ಇಳಿಮುಖವಾಗುವುದಕ್ಕೆ ಈ ಕೆಳಗಿನ ಯಾವುದು ಕಾರಣವಾಯಿತು ?
ಎ. ಮಾಂಟೆಗ್ಯು ಚೆಲ್ಮ್ಸ್ ಫರ್ಡ್ ಸುಧಾರಣೆಗಳ ಯೋಜನೆಯನ್ನು ಪ್ರಕಟಿಸಿದ್ದು
ಬಿ. ಅನಿಬೆಸೆಂಟ್ ಅವರ ಬಂಧನ
ಸಿ. ಲೀಗ್ ನ ಸದಸ್ಯರಾಗಿ ಸೌಮ್ಯವಾದಿಗಳನ್ನು ನೊಂದಾಯಿಸಿಕೊಂಡಿದ್ದು
ಡಿ. ಲೋಕಮಾನ್ಯ ತಿಲಕರಿಂದ ಹೋಮ್ ರೂಲ್ ಚಳುವಳಿಯ ಸ್ಥಾಪನೆ
ಉತ್ತರ:

49. ಗಾಂಧಿಯವರಿಗೆ ಕೈಸರ್ -ಇ-ಹಿಂದ್ ಪ್ರಶಸ್ತಿಯ ಗೌರವವನ್ನು ಬ್ರಿಟೀಷರು ನೀಡಿದ್ದೇಕೆ ?
ಎ. ಅವರು ದಕ್ಷಿಣಾಫ್ರಿಕಾದಲ್ಲಿ ಸತ್ಯಾಗ್ರಹವನ್ನು ನಡೆಸಿದ್ದಕ್ಕೆ
ಬಿ. ಬ್ರಿಟೀಷರ ಕೋರಿಕೆಯ ಮೇರೆಗೆ ಅವರು ದಕ್ಷಿಣಾಫ್ರಿಕಾವನ್ನು ಬಿಟ್ಟು ಬಂದಿದ್ದಕ್ಕೆ
ಸಿ. ಮೊದಲ ಮಹಾಯುದ್ಧದಲ್ಲಿ ಗಾಂಧಿಯರು ಬ್ರಿಟೀಷರಿಗೆ ಸಹಾಯ ಮಾಡಿದ್ದಕ್ಕೆ
ಡಿ. ಅಸಹಕಾರ ಚಳುವಳಿಯನ್ನು ನಿಲ್ಲಿಸಿದ್ದಕ್ಕೆ
ಉತ್ತರ:

50. ಪ್ರಸಿದ್ಧವಾದ ದಂಡಿಯಾತ್ರೆಗೆ ಸಬರಮತಿ ಆಶ್ರಮದಿಂದ ಎಷ್ಟು ಮಂದಿಯನ್ನು ಗಾಂಧಿಯವರು ಸೇರಿಸಿಕೊಂಡರು ?
ಎ. 72
ಬಿ. 200
ಸಿ. 78
ಡಿ. 220
ಉತ್ತರ:

51. ಡೋಲ್ ಡಮ್ಸ್ ಎಂದರೇನು ?
ಎ. ವಾಣಿಜ್ಯ ಮಾರುತಗಳ ವಲಯ
ಬಿ. ಅತ್ಯಧಿಕ ಆರ್ದ್ರತೆಯ ವಲಯ
ಸಿ. ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ವಲಯ
ಡಿ. ದ್ರುವೀಯ ಕಡಿಮೆ ಒತ್ತಡದ ಪ್ರದೇಶ
ಉತ್ತರ:

52. ನಂದಾದೇವಿ ಶಿಖರ ಯಾವ ರಾಜ್ಯದಲ್ಲಿದೆ ?
ಎ. ಜಮ್ಮೂ ಮತ್ತು ಕಾಶ್ಮೀರ
ಬಿ. ಹಿಮಾಚಲ ಪ್ರದೇಶ
ಸಿ. ಉತ್ತರಾಂಚಲ
ಡಿ. ಪಂಜಾಬ್
ಉತ್ತರ:

53. 'ಲಡಾಂಗ್' ಎನ್ನುವುದು
ಎ. ಇಂಡೋನೇಷಿಯಾದಲ್ಲಿ ಕಂಡು ಬರುವ ಒಂದು ಬುಡಕಟ್ಟು
ಬಿ. ಮಲೇಶಿಯಾದಲ್ಲಿ ಕಂಡುಬರುವ ಒಂದು ಬುಡಕಟ್ಟು
ಸಿ. ಮಲೇಶಿಯಾದ ಕದಲು ಬೇಸಾಯ
ಡಿ. ಇಂಡೋನೇಷಿಯಾದ ಕದಲು ಬೇಸಾಯ
ಉತ್ತರ:

54. 'ಮಾವುನಾ ಲೋಯಾ' ಎನ್ನುವುದು
ಎ. ಜೀವಂತ ಜ್ವಾಲಮುಖಿಗೆ ಉದಾಹರಣೆ
ಬಿ. ಸುಪ್ತ ಜ್ವಾಲಾಮುಖಿಗೆ ಉದಾಹರಣೆ
ಸಿ. ಅವಸಾನ ಜ್ವಾಲಾಮುಖಿಗೆ ಉದಾಹರಣೆ
ಡಿ. ಒಂದು ಜ್ವಾಲಾಮುಖಿಯ ಪ್ರದೇಶದಲ್ಲಿರುವ ಪೀರಭೂಮಿಗೆ ಉದಾಹರಣೆ
ಉತ್ತರ:

55. ಗಾಬ್ರೋ ಎನ್ನುವುದು
ಎ. ಅಗ್ನಿಶಿಲೆಗಳಿಗೆ ಉದಾಹರಣೆ
ಬಿ. ಜಲಜ ಶಿಲೆಗಳಿಗೆ ಉದಾಹರಣೆ
ಸಿ. ರೂಪಾಂತರಿ ಶಿಲೆಗಳಿಗೆ ಉದಾಹರಣೆ
ಡಿ. ಇದ್ಯಾವುದೂ ಅಲ್ಲ
ಉತ್ತರ:

56. ಈ ಕೆಳಗಿನ ಯಾವುದು ಶೀತ ಪ್ರವಾಹ
ಎ. ಗಲ್ಫ್ ಸ್ಟ್ರೀಮ್
ಬಿ. ಅಗಲ್ಹಾಸ್ ಪ್ರವಾಹಗಳು
ಸಿ. ಓಕೋಟ್ ಸ್ಕ್ ಪ್ರವಾಹಗಳು
ಡಿ. ಕುರುಶಿಯೋ ಪ್ರವಾಹಗಳು
ಉತ್ತರ:

57. ಅವಸಾನಗೊಂಡಿರುವ ಅಥವಾ ಸುಪ್ತಾವಸ್ಥೆಯಲ್ಲಿರುವ ಅತಿದೊಡ್ಡ ಜ್ವಾಲಾಮುಖೀಯ ಪರ್ವತ ಯಾವುದು ?
ಎ. ಕಿಲಿಮಂಜಾರೋ
ಬಿ. ಕೊಟೊಪಾಕ್ಸಿ
ಸಿ. ಫ್ಯುಜಿಯಾಮಾ
ಡಿ. ಅಕೊಂಕಾಗುವಾ
ಉತ್ತರ:

58. ಭೂಮಿಯ ಮೇಲ್ಮೈಗೆ ಹತ್ತಿರವಾಗಿರುವ ವಾತಾವರಣದ ವಲಯದಿಂದಾರಂಭಿಸಿ ಅತ್ಯಂತ ದೂರವಾಗಿರುವ ವಲಯದವರೆಗೆ ವಾತಾವರಣದ ವಲಯಗಳ ಕ್ರಮವಾದ ವ್ಯವಸ್ಥೆಯನ್ನು ಪ್ರತಿನಿಧಿಸುವ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
I. ಸ್ಟ್ರಾಟೋಸ್ಪಿಯರ್
II. ಟ್ರೋಟೋಸ್ಪಿಯರ್
III. ಅಯಾನೋಸ್ಪಿಯರ್
IV. ಮಿಸೋಸ್ಪಿಯರ್
ಎ. I, II, III, IV
ಬಿ. II, I, III, IV
ಸಿ. III, I IV, II
ಡಿ. II, I, IV, III
ಉತ್ತರ:

59. ಆಕಾಶದಲ್ಲಿ ಮೋಡವಿಲ್ಲದಾಗ ಇರುವುದಕ್ಕಿಂತ ಮೋಡವಿರುವಂತಹ ರಾತ್ರಿಗಳು ಹೆಚ್ಚು ತಾಪಯುಕ್ತವಾಗಿರುತ್ತವೆ ಏಕೆಂದರೆ...
ಎ. ಹಸಿರು ಮನೆ ಪರಿಣಾಮ
ಬಿ. ಭೂಪ್ರದೇಶದ ವಿಕಿರಣ
ಸಿ. ಇನ್ಸೋಲೇಶನ್ (ಆತಪನ)
ಡಿ. ಅಲ್ಟ್ರಾವೈಲೆಟ್ ಕಿರಣಗಳು
ಉತ್ತರ:

60. ಈ ಕೆಳಗಿನ ಯಾವ ದೇಶಗಳು ಕಡಲುಗಳ್ಳತನದ ಗಲಭೆಯಲ್ಲಿ ಸೇರಿಕೊಂಡಿವೆ ಎಂಬ ಆರೋಪಕ್ಕೊಳಗಾಗಿವೆ ?
ಎ. ನೈಜೀರಿಯಾ
ಬಿ. ಇಥಿಯೋಪಿಯಾ
ಸಿ. ಸೋಮಾಲಿಯಾ
ಡಿ. ಸೂಡಾನ್
ಉತ್ತರ:

61. ಈ ಕೆಳಗಿನ ಯಾವ ರಾಜ್ಯವು ಭೂವೇಷ್ಟಿತವಾಗಿದೆ ?
ಎ. ಕೇರಳ
ಬಿ. ತಮಿಳುನಾಡು
ಸಿ. ಕರ್ನಾಟಕ
ಡಿ. ರಾಜಸ್ಥಾನ
ಉತ್ತರ:

62. ಅಂತರರಾಜ್ಯ ನದಿನೀರಿನ ವಿವಾದದಲ್ಲಿ ಸೇರಿಕೊಂಡಿರುವ ನದೀತೀರದ ಯಜಮಾನ ರಾಜ್ಯಗಳು ಯಾವುವು ?
ಎ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ
ಬಿ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ
ಸಿ. ಆಂಧ್ರಪ್ರದೇಶ ಮತ್ತು ಕರ್ನಾಟಕ
ಡಿ. ಮಧ್ಯಪ್ರದೇಶ ಮತ್ತು ಜಾರ್ಖಂಡ್
ಉತ್ತರ:

63. ಈ ಕೆಳಗಿನ ವಿವರಣೆಗಳನ್ನು ಗಮನಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ
I. ಎಲ್ಲಾ ಜಲಜ ಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
II. ಕೆಲವು ಜಲಜ ಶಿಲೆಗಳು ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
III. ಯಾವ ಜಲಜ ಶಿಲೆಗಳೂ ಯಾವ ಕಾಲದಲ್ಲೂ ಸಮುದ್ರದ ತಳದಲ್ಲಿರಲಿಲ್ಲ
IV. ಎಲ್ಲಾ ಅಗ್ನಿಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
ಸಂಕೇತಗಳು
ಎ. I ಮಾತ್ರ ಸರಿ ಇದೆ
ಬಿ. II ಮಾತ್ರ ಸರಿ ಇದೆ
ಸಿ. III ಮತ್ತು IV ಸರಿ ಇವೆ
ಡಿ. III ಮಾತ್ರ ಸರಿ ಇದೆ
ಉತ್ತರ:

64. ಉತ್ತರ ಗೋಳಾರ್ಧದಲ್ಲಿ ಗಾಳಿಯ ದಿಕ್ಕು ಬಲಕ್ಕೆ ವಿಕ್ಷೇಪಣಗೊಳ್ಳುತ್ತದೆ. ಕಾರಣವೇನು ?
ಎ. ಭೂಮಿಯ ಪರಿಭ್ರಮಣ
ಬಿ. ಭೂಮಿಯ ಅಕ್ಷದ ಬಾಗುವಿಕೆ
ಸಿ. ಸೂರ್ಯನ ಸುತ್ತ ಭೂಮಿಯ ಪರಿಕ್ರಮಣ
ಡಿ. ಚಂದ್ರನ ಗುರುತ್ವಾಕರ್ಷಣ ಬಲ
ಉತ್ತರ:

65. ಅಧಿಕ ಉಬ್ಬರ ವಿಳಿತವು
ಎ. ಪ್ರತಿ 24 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಬಿ. ಪ್ರತಿ 12 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಸಿ. ಪ್ರತಿ 6 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಡಿ. ಪ್ರತಿ 8 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಉತ್ತರ:

66. ಭಾರತದ ಸಂವಿಧಾನ ನಿರ್ಮಾಪಕರು ಸಂಸದೀಯ ಪ್ರಜಾಪ್ರಭುತ್ವ ಮತ್ತು ದ್ವಿಸದನಗಳ ವ್ಯವಸ್ಥೆಯ ಪರಿಕಲ್ಪನೆಗಳನ್ನು ಯಾವ ವಿದೇಶದ ಸಂವಿಧಾನದಿಂದ ಎರವಲು ಪಡೆದಿದ್ದಾರೆ ?
ಎ. ಅಮೇರಿಕಾದ ಸಂವಿಧಾನ
ಬಿ. ಬ್ರಿಟೀಷ್ ಸಂವಿಧಾನ
ಸಿ. ಐರಿಷ್ ಸಂವಿಧಾನ
ಡಿ. ಫ್ರೆಂಚ್ ಸಂವಿಧಾನ
ಉತ್ತರ:

67. ಕೊಡಗು ಭಾರತದ ಸಿ ಭಾಗದ ರಾಜ್ಯವಾಗಿದ್ದಾಗ, 1952-1956ರ ವರೆಗೆ ಕೊಡಗು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು..
ಎ. ಕೆ. ಮಲ್ಲಪ್ಪ
ಬಿ. ಬಿ.ಎಸ್.ಕುಶಾಲಪ್ಪ
ಸಿ. ಸಿ.ಎಂ.ಪೂಣಚ್ಚ
ಡಿ. ದಯಾ ಸಿಂಗ್ ಬೇಡಿ
ಉತ್ತರ:

68. ರಾಷ್ಟ್ರಪತಿ ಆಡಳಿತವನ್ನು ಮೊತ್ತಮೊದಲಬಾರಿಗೆ ಮೈಸೂರು ರಾಜ್ಯದಲ್ಲಿ ವಿಧಿಸಿದ ವರ್ಷ ಯಾವುದು ?
ಎ. 1969
ಬಿ. 1970
ಸಿ. 1971
ಡಿ. 1973
ಉತ್ತರ:

69. ಈ ಕೆಳಗಿನ ಯಾವ ರಾಜ್ಯಗಳ ಗುಂಪಿನಲ್ಲಿ ಎರಡು ಸದನಗಳುಳ್ಳ ಅಂದರೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳುಳ್ಳ ದ್ವಿಸದನ ಶಾಸನ ಸಭೆ ಇದೆ ?
ಎ. ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ ಮತ್ತು ಮಹಾರಾಷ್ಟ್ರ
ಬಿ. ಮಹಾರಾಷ್ಟ್ರ, ಕರ್ನಾಟಕ, ಜಮ್ಮುಕಾಶ್ಮೀರ, ಬಿಹಾರ್, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶ
ಸಿ. ಅರುಣಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಮತ್ತು ಕೇರಳ
ಡಿ. ಅಸ್ಸಾಂ, ಹರಿಯಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ
ಉತ್ತರ:

70. ರಾಜ್ಯಸಭೆಯ 2/3ನೇ ಬಹುಮತದ ಬೆಂಬಲ ಪಡೆದ ನಿರ್ಣಯವನ್ನು 312ನೇ ಅನುಚ್ಛೇದದ ಅನ್ವಯ ಜಾರಿಗೊಳಿಸುವ ವಿಷಯ...
ಎ. ಕೇಂದ್ರ ಸಚಿವಾಲಯ ಸೇವೆಯನ್ನು ಸೃಷ್ಟಸಬಹುದು
ಬಿ. ಕೇಂದ್ರೀಯ ಸೇವೆಗಳನ್ನು ಸೃಷ್ಟಿಸಬಹುದು
ಸಿ. ಅಖಿಲ ಭಾರತ ಸೇವೆಯನ್ನು ಸೃಷ್ಟಿಸಬಹುದು ಮತ್ತು ಈಗಿರುವ ಅಖಿಲ ಭಾರತ ಸೇವೆಯನ್ನು ರದ್ದುಪಡಿಸಲೂ ಬಹುದು
ಡಿ. ಒಂದು ರಾಜ್ಯದ ಕೋರಿಕೆಯ ಮೇರೆಗೆ ರಾಜ್ಯ ಸೇವೆಯನ್ನು ಸೃಷ್ಟಿಸಬಹುದು
ಉತ್ತರ:

71. ಸಮ್ಮಿಶ್ರ ಸರ್ಕಾರಗಳು ಮತ್ತು ಅವುಗಳು ರಚನೆಯಾದ ವರ್ಷಗಳನ್ನು ಸರಿಹೊಂದಿಸಿರಿ

A. ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ 1. 1999
B. ನ್ಯಾಶನಲ್ ಫ್ರಂಟ್ 2. 1996
C. ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ 3. 2004
D. ಯುನೈಟೆಡ್ ಫ್ರಂಟ್ 4. 1983

A B C D
ಎ. 1 3 4 2
ಬಿ. 3 4 1 2
ಸಿ. 4 3 1 2
ಡಿ. 4 3 2 1
ಉತ್ತರ:

72. ಸಂವಿಧಾನದ ಭಾಗ 3ರಲ್ಲಿರುವ ಮೂಲಭೂತಹಕ್ಕುಗಳನ್ನು ತಿದ್ದುಪಡಿಮಾಡುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಯಾವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತು
ಎ. ಗೋಲಕ್ ನಾಥ್ vs ಪಂಜಾಬ್ ರಾಜ್ಯ 1967
ಬಿ. ಕೇಶವಾನಂದ ಭಾರತಿ vs ಕೇರಳ ರಾಜ್ಯ 1973
ಸಿ. ಇಂದಿರಾಗಾಂಧಿ vs ರಾಜ್ ನಾರಾಯಣ್ 1975
ಡಿ. ಮಿನರ್ವಾ ಮಿಲ್ಸ್ vs ಭಾರತ ಸರ್ಕಾರ 1980
ಉತ್ತರ:

73. ತೊಂಬತ್ತೆರಡನೇ ಸಂವಿಧಾನದ ತಿದ್ದುಪಡಿ 2003 ರ ಮೂಲಕ ಸಂವಿಧಾನದ ಎಂಟನೇ ಅನುಸೂಚಿಗೆ ಈ ಕೆಳಗಿನ ಯಾವ ಭಾಷೆಗಳನ್ನು ಸೇರ್ಪಡೆ ಮಾಡಲಾಯಿತು ?
ಎ. ಸಂಥಲಿ, ಬೋಡೋ, ಕೊಂಕಣಿ ಮತ್ತು ಉರ್ದು
ಬಿ. ಬೋಡೋ, ಮಣಿಪುರಿ, ಭೋಜ್ಪುರಿ ಮತ್ತು ಸಂಥಲಿ
ಸಿ. ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂಥಲಿ
ಡಿ. ಕೊಂಕಣಿ, ತುಳು, ಕೊಡವ ಮತ್ತು ಭೋಜಪುರಿ
ಉತ್ತರ:

74. ಸಂಸತ್ತಿನ ಎರಡೂ ಸದನಗಳಿಂದ ಜಾರಿಯಾದ ಮಸೂದೆಯೊಂಕ್ಕೆ ಭಾರತದ ರಾಷ್ಟ್ರಪತಿಯವರು ಸಂವಿಧಾನದ ಯಾವ ಅನುಚ್ಛೇದದ ಅನ್ವಯ ತಮ್ಮ ಸಮ್ಮತಿಯನ್ನು ತಡೆಹಿಡಿಯಬಹುದು.
ಎ. ಅನುಚ್ಛೇದ 100
ಬಿ. ಅನುಚ್ಛೇದ 111
ಸಿ. ಅನುಚ್ಛೇದ 200
ಡಿ. ಅನುಚ್ಛೇದ 222
ಉತ್ತರ:

75. ಭಾರತದ ಉಪರಾಷ್ಟ್ರಪರಿಯವರನ್ನು ಈ ಕೆಳಕಂಡ ಮೂಲಕ ಅವರ ಸ್ಥಾನದಿಂದ ತೆಗೆದುಹಾಕಬಹುದು
ಎ. ಸಚಿವಮಂಡಳಿಯ ಸಲಹೆಯ ಮೇರೆಗೆ ರಾಷ್ಟ್ರಪತಿಯವರು
ಬಿ. ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತು ಅದಕ್ಕೆ ಲೋಕಸಭೆಯು ಸಮ್ಮತಿ ನೀಡಿದ ಒಂದು ರಾಜ್ಯಸಭೆಯ ನಿರ್ಣಯದ ಮೂಲಕ
ಸಿ. ರಾಷ್ಟ್ರಪತಿಯವರ ಸಮ್ಮತಿಯೊಂದಿಗೆ ಲೋಕಸಭೆ
ಡಿ. ರಾಷ್ಟ್ರಪತಿಯವರ ಸಹಮತಿಯೊಂದಿಗೆ ರಾಜ್ಯಸಭೆ
ಉತ್ತರ:

76. ಕೇಂದ್ರ ಹಾಗೂ ರಾಜ್ಯಗಳ ಸಚಿವ ಮಂಡಳಿಯ ಸಂಖ್ಯೆಯು ಅನುಕ್ರಮವಾಗಿ ಲೋಕಸಭೆ ಹಾಗೂ ಸಂಬಂಧಪಟ್ಟ ವಿಧಾನಸಭೆಗಳ ಒಟ್ಟು ಸ್ಥಾನಗಳ ಸಂಖ್ಯೆಯ ಶೇಕಡಾ 15ರಷ್ಟಿರಬೇಕು ಎಂದು ಕೆಳಗಿನ ಯಾವ ಸಂವಿಧಾನಿಕ ತಿದ್ದುಪಡಿಯು ನಿಗದಿ ಮಾಡಿದೆ ?
ಎ. 89ನೇ ತಿದ್ದುಪಡಿ - 2003
ಬಿ. 90ನೇ ತಿದ್ದುಪಡಿ - 2003
ಸಿ. 99ನೇ ತಿದ್ದುಪಡಿ - 2003
ಡಿ. 93ನೇ ತಿದ್ದುಪಡಿ - 2005
ಉತ್ತರ:

77. ಸಂವಿಧಾನದ 120ನೇ ಅನುಚ್ಛೇದದ ಅನ್ವಯ ಸಂಸತ್ತಿನ ಅಧಿಕೃತ ಕಲಾಪವನ್ನು ಕೆಳಕಂಡ ಭಾಷೆಯಲ್ಲಿ ಮಾತ್ರ ನಡೆಸಬೇಕು
ಎ. ಹಿಂದಿ ಮಾತ್ರ
ಬಿ. ಇಂಗ್ಲೀಷ್ ಮಾತ್ರ
ಸಿ. ಹಿಂದಿ ಅಥವಾ ಇಂಗ್ಲೀಷ್
ಡಿ. ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಪಟ್ಟಿಮಾಡಿರುವ ಯಾವುದೇ ಭಾಷೆ
ಉತ್ತರ:

78. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ಯಾವ ಪ್ರಧಾನಮಂತ್ರಿಯವರ ಅಧಿಕಾರಾವಧಿಯಲ್ಲಿ ಮೊದಲಬಾರಿಗೆ ಕರಡು ರೂಪಕ್ಕೆ ತಂದು ಸಂಸತ್ತಿನಲ್ಲಿ ಮಂಡಿಸಲಾಯಿತು ?
ಎ. ರಾಜೀವ್ ಗಾಂಧಿ
ಬಿ. ಪಿ.ವಿ.ನರಸಿಂಹರಾವ್
ಸಿ. ಎಚ್.ಡಿ.ದೇವೇಗೌಡ
ಡಿ. ಅಟಲ್ ಬಿಹಾರಿ ವಾಜಪೇಯಿ
ಉತ್ತರ:

79. ಹೈದ್ರಾಬಾದ್ ಕರ್ನಾಟಕ ಪ್ರದೇಶದ ತ್ವರಿತ ಅಭಿವೃದ್ಧಿಗಾಗಿ ಭಾರತೀಯ ಸಂವಿಧಾನದ ಯಾವ ಅನುಚ್ಛೇದದ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಟಗಳ ಸಮನ್ವಯ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ ?
ಎ. ಅನುಚ್ಛೇದ 240
ಬಿ. ಅನುಚ್ಛೇದ 244
ಸಿ. ಅನುಚ್ಛೇದ 370
ಡಿ. ಅನುಚ್ಛೇದ 371
ಉತ್ತರ:

80. ಈ ಕೆಳಗಿನ ಯಾವುದು WTO ಒಪ್ಪಂದಗಳೊಂದಿಗೆ ಸಂಬಂಧಿಸಿಲ್ಲ ?
ಎ. GATT
ಬಿ. TRIPS
ಸಿ. GATS
ಡಿ. WIPO
ಉತ್ತರ:

81. ಕರ್ನಾಟಕದ ರಾಜ್ಯ ಆದಾಯವನ್ನು ಅಧಿಕೃತವಾಗಿ ಅಂದಾಜು ಮಾಡುವವರು
ಎ. ಕೇಂದ್ರ ಸಾಂಖ್ಯಿಕ ಸಂಸ್ಥೆ
ಬಿ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ
ಸಿ. ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆ
ಡಿ. ರಾಷ್ಟ್ರೀಯ ಸಾಂಖ್ಯಿಕ ಆಯೋಗ
ಉತ್ತರ:

82. ಶಾಸನಬದ್ಧ ಲಿಕ್ವಿಡಿಟಿ ಅನುಪಾತವನ್ನು ನಿಗದಿಸುವವರು
ಎ. ಭಾರತ ಸರ್ಕಾರ
ಬಿ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ
ಸಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಡಿ. ಯೋಜನಾ ಆಯೋಗ
ಉತ್ತರ:

83. ಕೇಂದ್ರ ಸರ್ಕಾರದ ಆದಾಯದ ಕೊರತೆ ಎಂದರೆ
ಎ. ಒಟ್ಟು ಆದಾಯದ ಮೇಲೆ ಒಟ್ಟು ಖರ್ಚುಗಳ ಹೆಚ್ಚುವರಿ
ಬಿ. ಒಟ್ಟು ಖರ್ಚುಗಳ ಮೇಲೆ ಆದಾಯ ಸ್ವೀಕೃತಿಗಳ ಹೆಚ್ಚುವರಿ
ಸಿ. ಆದಾಯ ಸ್ವೀಕೃತಿಗಳ ಮೇಲೆ ಆದಾಯ ಕರ್ಚುಗಳ ಹೆಚ್ಚುವರಿ
ಡಿ. ನಿವ್ವಳ ಎರವಲುಗಳಿಗೆ ಸಮಾನ
ಉತ್ತರ:

84. ಮಾರುಕಟ್ಟೆ ಬೆಲೆಗಳಲ್ಲಿ ಒಟ್ಟು ದೇಶೀಯ ಉತ್ಪನ್ನವು ಈ ಕೆಳಗಿನದನ್ನು ಒಳಗೊಳ್ಳುವುದಿಲ್ಲ.
ಎ. ಪರೋಕ್ಷ ತೆರಿಗೆಗಳು
ಬಿ. ಸಬ್ಸಿಡಿಗಳು
ಸಿ. ಸವಕಳಿ
ಡಿ. ವಿದೇಶದಿಂದ ನಿವ್ವಳ ಫ್ಯಾಕ್ಟರ್ ಆದಾಯ
ಉತ್ತರ:

85. ಪಡೆದುಕೊಳ್ಳುವ ಬೆಲೆಗಳು ಎಂದರೆ ಭಾರತ ಸರ್ಕಾರವು ಈ ಕೆಳಕಂಡ ಉದ್ದೇಶಕ್ಕಾಗಿ ಯಾವ ಬೆಲೆಗಳಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುತ್ತದೋ ಅದು
ಎ. ಪಿ.ಡಿ.ಎಸ್. ಅನ್ನು ಕಾಯ್ದುಕೊಳ್ಳಲು
ಬಿ. ಕಾಪು ದಾಸ್ತಾನುಗಳನ್ನು ನಿರ್ಮಿಸಲು
ಸಿ. ಪಿ.ಡಿ.ಎಸ್. ಅನ್ನು ಕಾಯ್ದುಕೊಳ್ಳಲು ಮತ್ತು ಕಾಪುದಾಸ್ತಾನುಗಳನ್ನು ನಿರ್ಮಿಸಲು
ಡಿ. ರಫ್ತು ಪ್ರವರ್ಧನೆ
ಉತ್ತರ:

86. 2010-11 ರ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ ದಿನಾಂಕ
ಎ. 28 ಫೆಬ್ರವರಿ 2010
ಬಿ. 27 ಫೆಬ್ರವರಿ 2010
ಸಿ. 01 ಮಾರ್ಚ್ 2010
ಡಿ. 28 ಫೆಬ್ರವರಿ 2009
ಉತ್ತರ:

87. ಭಾರತದ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರತಿ ವರ್ಷಕ್ಕೆ ನಿರ್ಧಾರಿತವಾಗಿರುವ ಬೆಳವಣಿಗೆಯ ದರ
ಎ. ಶೇಕಡಾ 10
ಬಿ. ಶೇಕಡಾ 8
ಸಿ. ಶೇಕಡಾ 11
ಡಿ. ಶೇಕಡಾ 9
ಉತ್ತರ:

88. ಭಾರತದ ಪ್ರಧಾನಮಂತ್ರಿಯವರು ಈ ಕೆಳಕಂಡ ಯಾವ ಸ್ಥಾನಗಳನ್ನು ಹೊಂದಿರುತ್ತಾರೆ ?
ಎ. ಯೋಜನಾ ಆಯೋಗದ ಅಧ್ಯಕ್ಷರು
ಬಿ. ಭಾರತದ ಏರ್ ಪೋರ್ಟ್ ಪ್ರಾಧಿಕಾರದ ಅಧ್ಯಕ್ಷರು
ಸಿ. ಹಣಕಾಸು ಆಯೋಗದ ಅಧ್ಯಕ್ಷರು
ಡಿ. ರಾಜ್ಯ ಯೋಜನಾ ಮಂಡಳಿಗಳ ಅಧ್ಯಕ್ಷರು
ಉತ್ತರ:

89. ವಿಶ್ವ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸುವವರು
ಎ. ವಿಶ್ವ ಆರ್ಥಿಕ ಪೋರಂ
ಬಿ. ಅಂತರಾಷ್ಟ್ರೀಯ ಹಣಕಾಸು ನಿಧಿ
ಸಿ. ವಿಶ್ವಬ್ಯಾಂಕ್
ಡಿ. ವಿಶ್ವ ವ್ಯಾಪಾರ ಸಂಸ್ಥೆ
ಉತ್ತರ:

90. ಭಾರತದ ಸಂದಾಯಗಳ ಶಿಲ್ಕನ್ನು ಸಿದ್ಧಪಡಿಸುವವರು
ಎ. ಕೇಂದ್ರ ವಾಣಿಜ್ಯ ಸಚಿವ ಖಾತೆ
ಬಿ. ಕೇಂದ್ರ ಹಣಕಾಸು ಸಚಿವ ಖಾತೆ
ಸಿ. ಯೋಜನಾ ಆಯೋಗ
ಡಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಉತ್ತರ:

91. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ನಿಯೋಗ ಮಂಡಳಿ (NRHM) ಯನ್ನು ಆರಂಭಿಸಿದ ವರ್ಷ ?
ಎ. 2005
ಬಿ. 2000
ಸಿ. 2004
ಡಿ. 2006
ಉತ್ತರ:

92. ಈ ಕೆಳಗಿನ ಯಾವುದು ಭಾರತ ಸರ್ಕಾರದ ನೇರ ತೆರಿಗೆಯಾಗಿದೆ ?
ಎ. ಸೀಮಾ ಸುಂಕ
ಬಿ. ಅಬ್ಕಾರಿ
ಸಿ. ಸೇವಾ ತೆರಿಗೆ
ಡಿ. ಕಾರ್ಪೋರೇಷನ್ ತೆರಿಗೆ
ಉತ್ತರ:

93. ಬ್ರಾಡ್ ಮನಿ ಯಾವುದನ್ನು ಸೂಚಿಸುತ್ತದೆ ?
ಎ. M1
ಬಿ. M2
ಸಿ. M3
ಡಿ. M4
ಉತ್ತರ:

94. ದಿ ಜವಹರಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನ್ಯೂಯಲ್ ಮಿಶನ್ ಅನ್ನು ಆರಂಭಿಸಿದ ವರ್ಷ
ಎ. 2004-05
ಬಿ. 2005-06
ಸಿ. 2006-07
ಡಿ. 2003-04
ಉತ್ತರ:

95. 2001ರ ಜನಗಣತಿಯ ಪ್ರಕಾರ ಕರ್ನಾಟಕದ ಲಿಂಗ ಅನುಪಾತ ಕೆಳಕಂಡಂತಿತ್ತು
ಎ. 960
ಬಿ. 963
ಸಿ. 965
ಡಿ. 957
ಉತ್ತರ:

96. ಸಗಟು ಮಾರಾಟಬೆಲೆ ಸೂಚಿಯ ಆಧಾರ ವರ್ಷವನ್ನು ಕೆಳಕಂಡ ವರ್ಷಕ್ಕೆ ಬದಲಾಯಿಸಲಾಗಿದೆ
ಎ. 2003-04
ಬಿ. 2000-01
ಸಿ. 2004-05
ಡಿ. 2007-08
ಉತ್ತರ:

97. ಈ ಕೆಳಗಿನ ಯಾವ ವರ್ಷವು 11ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವರ್ಷವಾಗಿದೆ
ಎ. 2011-12
ಬಿ. 2012-13
ಸಿ. 2007-08
ಡಿ. 2010-11
ಉತ್ತರ:

98. ಭಾರತದ ಭದ್ರತೆಗಳ ವಿನಿಮಯ ಮಂಡಳಿಯನ್ನು (SEBI) ಸ್ಥಾಪಿಸಿದ ವರ್ಷ
ಎ. 1988
ಬಿ. 1987
ಸಿ. 1990
ಡಿ. 1995
ಉತ್ತರ:

99. ಸರ್ಕಾರದ ಅಥವಾ ಸರ್ಕಾರದ ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಹಣಕಾಸಿನ ಬೆಂಬಲ ಒದಗಿಸುವವರು...
ಎ. ಸಾಮಾಜಿಕ ನ್ಯಾಯದ ಸಚಿವ ಖಾತೆ
ಬಿ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಖಾತೆ
ಸಿ. ಹಣಕಾಸು ಸಚಿವ ಖಾತೆ
ಡಿ. ಶಿಕ್ಷಣ ಸಚಿವ ಖಾತೆ
ಉತ್ತರ:

100. ಹಳದಿ ಬೆಳಕನ್ನು ಉತ್ಸರ್ಜಿಸುವ ನಕ್ಷತ್ರವೊಂದು ಭೂಮಿಯತ್ತ ವೇಗೋತ್ಕರ್ಷಿತವಾಗಿ ಬರುವಾಗ ಭೂಮಿಯ ಮೇಲಿನಿಂದ ನೋಡಿದರೆ ಅದರ ಬಣ್ಣವು
ಎ. ಕ್ರಮೇಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಬಿ. ಕ್ರಮೇಣವಾಗಿ ನೀಲಲೋಹಿತ (ನೇರಳೆ) ಬಣ್ಣಕ್ಕೆ ತಿರುಗುತ್ತದೆ
ಸಿ. ಯಾವುದೇ ಬದಲಾವಣೆಯಾಗುವುದಿಲ್ಲ.
ಡಿ. ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ತಿರುಗುತ್ತದೆ
ಉತ್ತರ:

101. ಒಬ್ಬ ವ್ಯಕ್ತಿಯು ಪ್ರತಿ ನಿಮಿಷಕ್ಕೆ 15 ಸಲ ಉಸಿರು ತೆಗೆದುಕೊಳ್ಳುತ್ತಾನೆ. ಪ್ರತಿಯೊಂದು ಬಾರಿ ಅವನು ಉಸಿರು ತೆಗೆದುಕೊಂಡಾಗ ಅದರಲ್ಲಿರುವ ಗಾಳಿಯ ಗಾತ್ರ 450ml ಮತ್ತು ಇದು 20% ಗಾತ್ರದಷ್ಟು ಆಮ್ಲಜನಕವನ್ನು ಹೊಂದಿರುತ್ತದೆ ಮತ್ತು ಹೊರಗೆ ಹಾಕಿದ ಗಾಳಿಯಲ್ಲಿ 16% ಗಾತ್ರದಷ್ಟು ಆಮ್ಲಜನಕ ಇರುತ್ತದೆ. ಆದ್ಧರಿಂದ ಒಬ್ಬ ವ್ಯಕ್ತಿಯು ಒಂದು ದಿನಕ್ಕೆ ಒಳಗೆ ತೆಗೆದುಕೊಂಡ ಆಮ್ಲಜನಕದ ಪ್ರಮಾಣ ಸುಮಾರು
ಎ. 389 ಲೀಟರ್ ಗಳು
ಬಿ. 476 ಲೀಟರ್ ಗಳು
ಸಿ. 500 ಲೀಟರ್ ಗಳು
ಡಿ. 300 ಲೀಟರ್ ಗಳು
ಉತ್ತರ:

102. 0'C ಯಲ್ಲಿರುವ ನೀರನ್ನು 20'C ಗೆ ಕಾಯಿಸಲಾಗಿದೆ ಅದರ ಗಾತ್ರವು
ಎ. ಸತತವಾಗಿ ಹೆಚ್ಚಾಗುತ್ತದೆ
ಬಿ. ಸತತವಾಗಿ ಕಡಿಮೆಯಾಗುತ್ತದೆ
ಸಿ. ಮೊದಲು ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ
ಡಿ. ಧಾರಕದ ಗಾತ್ರವನ್ನು ಅವಲಂಬಿಸಿ ಅದು ಹೆಚ್ಚಾಗಲೂಬಹುದು ಕಡಿಮೆಯಾಗಲೂ ಬಹುದು
ಉತ್ತರ:

103. ಒಂದು ಸಮತಲವಾದ ಕನ್ನಡಿಯು ನಿಮ್ಮನ್ನು 10cm/sec ರಲ್ಲಿ ಸಮೀಪಿಸುತ್ತಿದೆ. ಇದರಲ್ಲಿ ನಿಮ್ಮ ಬಿಂಬವನ್ನು ಕಾಣಬಹುದು. ಯಾವ ವೇಗದಲ್ಲಿ ನಿಮ್ಮ ಬಿಂಬವು ನಿಮ್ಮನ್ನು ಸಮೀಪಿಸುತ್ತದೆ.
ಎ. 10cm/sec
ಬಿ. 5cm/sec
ಸಿ. 20cm/sec
ಡಿ. 15cm/sec
ಉತ್ತರ:

104. ಒಬ್ಬ ವ್ಯಕ್ತಿಯು ಒಂದು ಘರ್ಷಣಾರಹಿತ ಸಮತಲ ಮೇಲ್ಮೈ ಮಧ್ಯದಲ್ಲಿ ಕುಳಿತಿದ್ದಾನೆ. ಇದರಿಂದ ಹೊರಬರಬೇಕಾದರೆ
ಎ. ಮೇಲ್ಮೈಯನ್ನು ಗಟ್ಟಿಯಾಗಿ ಒತ್ತಬೇಕು
ಬಿ. ಮೇಲ್ಮೈಮೇಲೆ ತೆವಳಬೇಕು
ಸಿ. ಹೊರ ನೆಗೆಯಬೇಕು
ಡಿ. ಆತ ಯಾವದಿಕ್ಕಿನೆಡೆ ಹೋಗಬೇಕಾಗಿದೆಯೋ ಅದರ ವಿರುದ್ಧ ದಿಕ್ಕಿಗೆ ತನ್ನ ಚೀಲವನ್ನು ಎಸೆಯಬೇಕು
ಉತ್ತರ:

105. ರೂ. 8800 ಗಳ ಸಾಲವನ್ನು ಮೊದಲ ತಿಂಗಳಿನಲ್ಲಿ ರೂ.250, ಎರಡನೇ ತಿಂಗಳಿನಲ್ಲಿ ರೂ. 270, ಮೂರನೇ ತಿಂಗಳಿನಲ್ಲಿ ರೂ.290 ರೀತಿಯಾಗಿ ತೀರಿಸುತ್ತಾ ಬಂದರೆ ಸಂಪೂರ್ಣವಾಗಿ ತೀರಿಸಲು ಎಷ್ಟು ಕಾಲ ಬೇಕಾಗುತ್ತದೆ ?
ಎ. 20 ತಿಂಗಳು
ಬಿ. 24 ತಿಂಗಳು
ಸಿ. 18 ತಿಂಗಳು
ಡಿ. 36 ತಿಂಗಳು
ಉತ್ತರ:

106. ಯಾವ ಇಬ್ಬರು ಹುಡುಗಿಯರೂ ಒಟ್ಟಿಗೆ ಇರದಂತೆ 5 ಹುಡುಗರು ಮತ್ತು 4 ಹುಡುಗಿಯರು ಒಂದು ಮೇಜಿನ ಸುತ್ತ ಎಷ್ಟು ವಿಧಗಳಲ್ಲಿ ಕುಳಿತುಕೊಳ್ಳಬಹುದು ?
ಎ. 2880
ಬಿ. 288
ಸಿ. 1440
ಡಿ. 144
ಉತ್ತರ:

107. ಇಬ್ಬರು ವ್ಯಕ್ತಿಗಳು A ಮತ್ತು B ಅವರ ಈಗಿರುವ ವಯಸ್ಸಿನ ಅನುಪಾತ 5:1 ಆಗಿದೆ. ನಾಲ್ಕು ವರ್ಷಗಳ ನಂತರ ಅವರ ವಯಸ್ಸಿನ ಅನುಪಾತವು 3:1 ಆಗುತ್ತದೆ. ಹಾಗಾದರೆ ಅವರಿಬ್ಬರ ವಯಸ್ಸಿನ ನಡುವೆ ಇರುವ ವ್ಯತ್ಯಾಸ
ಎ. 16 ವರ್ಷಗಳು
ಬಿ. 12 ವರ್ಷಗಳು
ಸಿ. 20 ವರ್ಷಗಳು
ಡಿ. 18 ವರ್ಷಗಳು
ಉತ್ತರ:

108. ಫ್ಯೂಸ್ ತಂತಿಯನ್ನು ಯಾವುದರಿಂದ ಮಾಡಿರುತ್ತಾರೆ ?
ಎ. ತಾಮ್ರ
ಬಿ. ಟಂಗ್ ಸ್ಟನ್
ಸಿ. ಸೀಸ ಮತ್ತು ತವರ ಮಿಶ್ರಲೋಹ
ಡಿ. ನೈಕ್ರೋಮ್
ಉತ್ತರ:

109. ಎನ್ಜೈಮ್ ಗಳು (ಕಿಣ್ವಗಳು) ಎಂದರೆ...
ಎ. ಆಹಾರದ ಶಕ್ತಿಘಟಕ
ಬಿ. ತೈಲ ಮತ್ತು ಕೊಬ್ಬುಗಳಲ್ಲಿ ಇರುತ್ತವೆ
ಸಿ. ಜೀವಶಾಸ್ತ್ರೀಯ ವೇಗವರ್ಧಕಗಳು
ಡಿ. ಜ್ವರವನ್ನು ನಿಯಂತ್ರಿಸುವ ಔಷಧಗಳು
ಉತ್ತರ:

110. ಸೋಪ್ ತಯಾರಿಕೆಯಲ್ಲಿ ಪ್ರಮುಖವಾಗಿ ಉಪಯೋಗಿಸಲ್ಪಡುವ ಕಚ್ಚಾ ವಸ್ತು
ಎ. ಸೋಪಿನ ಕಲ್ಲು
ಬಿ. ಎಣ್ಣೆ
ಸಿ. ಲಿಂಬೆರಸ
ಡಿ. ಸುಗಂಧದ್ರವ
ಉತ್ತರ:

111. ಕೈಗಾರಿಕಾ ಉದ್ದೇಶಗಳ ಆಲ್ಕೋಹಾಲ್ ಗೆ ಕೆಳಕಂಡದ್ದನ್ನು 5% ನಷ್ಟು ಸೇರಿಸುವ ಮೂಲಕ ಮಾನವ ಸೇವನೆಗೆ ಅನರ್ಹವಾಗುವಂತೆ ಮಾಡಲಾಗುತ್ತದೆ.
ಎ. ಹೈಡ್ರೋಕ್ಲೋರಿಕ್ ಆಮ್ಲ
ಬಿ. ಸೋಡಿಯಂ ಕ್ಲೋರೈಡ್
ಸಿ. ಮಿಥೈಲ್ ಆಲ್ಕೋಹಾಲ್
ಡಿ. ಇಥೆನಾಲ್
ಉತ್ತರ:

112. ಆಹಾರದ ಪಿಷ್ಟ ಪದಾರ್ಥದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು ?
ಎ. ಪ್ರೋಟೀನ್
ಬಿ. ಜೀವಸತ್ವ
ಸಿ. ಗ್ಲಿಸರೈಡ್ ಗಳು
ಡಿ. ಕಾರ್ಬೋಹೈಡ್ರೇಟ್ ಗಳು
ಉತ್ತರ:

113. ಚಾರಿತ್ರಿಕವಾಗಿ, ಅತ್ಯಂತ ಪರಿಶುದ್ಧ ಗುಣಹೊಂದಿರುವ ವಾಣಿಜ್ಯ ಕಬ್ಬಿಣದ ರೂಪ
ಎ. ನಾಡು ಕಬ್ಬಿಣ
ಬಿ. ಎರಕ ಹೋಯ್ದ ಕಬ್ಬಿಣ
ಸಿ. ಉಕ್ಕು
ಡಿ. ಬೀಡು ಕಬ್ಬಿಣ
ಉತ್ತರ:

114. ಜೀವಕೋಶದ ಶಕ್ತಿ ಗೃಹ ಯಾವುದು ?
ಎ. ಮೈಟೋಕಾಂಡ್ರಿಯಾ
ಬಿ. ಲೈಸೋಸೋಮ್
ಸಿ. ರೈಬೋಸೋಮ್
ಡಿ. ಗಾಲ್ಗಿ ಸಂಕೀರ್ಣ
ಉತ್ತರ:

115. HIVಯು ಈ ಕೆಳಕಂಡ ಮೂಲಕ ದೇಹದ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಎ. ಕೆಂಪುರಕ್ತಕಣಗಳನ್ನು ನಾಶಮಾಡುವ ಮೂಲಕ
ಬಿ. ಪ್ರತಿಕಾಯ (antibodies) ಗಳನ್ನು ನಾಶಮಾಡುವ ಮೂಲಕ
ಸಿ. T-ಲಿಂಪೋಸೈಟ್ ಗಳ ಮೇಲೆ ದಾಳಿ ಮಾಡುವ ಮೂಲಕ
ಡಿ. B-ಲಿಂಪೋಸೈಟ್ ಗಳ ಮೇಲೆ ದಾಳಿ ಮಾಡುವ ಮೂಲಕ
ಉತ್ತರ:

116. ಬಿಳಿಗಿರಿ ರಂಗಸ್ವಾಮಿ ರಾಷ್ಟ್ರೀಯ ಉದ್ಯಾನದಲ್ಲಿ ರಕ್ಷಿಸಲಾಗಿರುವ ಪ್ರಾಣಿ ಪ್ರಭೇದ ಯಾವುದು ?
ಎ. ಹುಲಿ
ಬಿ. ವಿವಿಧ ಪ್ರಭೇದದ ಹಕ್ಕಿಗಳು
ಸಿ. ಆನೆ
ಡಿ. ಸಿಂಹ
ಉತ್ತರ:

117. ಸಸ್ತನಿಗಳಲ್ಲಿ ಬೆವರಿನ ಉತ್ಪಾದನೆ/ಬೆವರು ಗ್ರಂಥಿಗಳ ಮೂಲ ಉದ್ದೇಶ
ಎ. ಹೆಚ್ಚುವರಿ ನೀರನ್ನು ತೆಗೆದು ಹಾಕುವುದು
ಬಿ. ದೇಹದ ಉಷ್ಣಾಂಶದ ನಿಯಂತ್ರಣ
ಸಿ. ಹೆಚ್ಚುವರಿ ಉಪ್ಪನ್ನು ತೆಗೆದು ಹಾಕುವುದು
ಡಿ. ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು
ಉತ್ತರ:

118. Red data book ಯಾವುದಕ್ಕೆ ಸಂಬಂಧಿಸಿದೆ ?
ಎ. ಸ್ಥಳೀಯ ರೋಗದ ಸಸ್ಯಗಳು ಮತ್ತು ಪ್ರಾಣಿಗಳು
ಬಿ. ನಶಿಸಿ ಹೋದ ಸಸ್ಯಗಳು ಮತ್ತು ಪ್ರಾಣಿಗಳು
ಸಿ. ಪ್ರಕಾಶಾವಧಿ ಸ್ಪಂದನ ಸಾಮರ್ಥ್ಯ ತೋರಿಸುವ ಸಸ್ಯಗಳು ಮತ್ತು ಪ್ರಾಣಿಗಳು
ಡಿ. ಅಳಿವಿನ ಅಂಚಿನಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು
ಉತ್ತರ:

119. ಒಂದು ವೃಕ್ಷದ ಹಳೆಯ ಕಾಂಡವನ್ನು ಅಡ್ಡಡ್ಡವಾಗಿ ಕತ್ತರಿಸಿದಾಗ ದ್ವಿತೀಯ ದಾರುವಿನ ಹೊರ ವಲಯವು ತಿಳಿಯಾದ ಬಣ್ಣದಲ್ಲಿರುವುದು ಕಂಡು ಬರುತ್ತದೆ. ದಾರುವಿನ ಈ ವಲಯವನ್ನು ಏನೆಂದು ಕರೆಯುತ್ತಾರೆ ?
ಎ. ಕಾಂಡದ ಮಧ್ಯಭಾಗ
ಬಿ. ಕಾಂಡದ ಹೊರಭಾಗ
ಸಿ. ವಸಂತ ಕಾಲ ಕಾಂಡ
ಡಿ. ಶರತ್ ಕಾಲ ಕಾಂಡ
ಉತ್ತರ:

120. ನ್ಯೂಕ್ಲಿಯರ್ ಶಕ್ತಿಯನ್ನು ಬಳಸಿಕೊಳ್ಳುವುದರಿಂದ ಎಷ್ಟೋ ವೇಳೆ
ಎ. ವಾಯುಮಾಲಿನ್ಯ ಉಂಟಾಗುತ್ತದೆ
ಬಿ. ಜಲಮಾಲಿನ್ಯ ಉಂಟಾಗುತ್ತದೆ
ಸಿ. ರೇಡಿಯೋ ಆಕ್ಟೀವ್ ರೇಡಿಯೇಷನ್ ಮಾಲಿನ್ಯ ಉಂಟಾಗುತ್ತದೆ
ಡಿ. UV ರೇಡಿಯೇಷನ್ ಮಾಲಿನ್ಯ ಉಂಟಾಗುತ್ತದೆ
ಉತ್ತರ:

121. ಜಪಾನಿನಲ್ಲಿ ಇಟಾಯಿ-ಇಟಾಯಿ ರೋಗವು ಈ ಕೆಳಕಂಡ ಅಂಶದಿಂದ ಕಲುಷಿತಗೊಂಡ ಅಕ್ಕಿಯನ್ನು ಸೇವಿಸಿದ್ದರಿಂದ ಉಂಟಾಯಿತು.
ಎ. ಪಾದರಸ
ಬಿ. ಕ್ಯಾಡ್ಮಿಯಂ
ಸಿ. ಕಬ್ಬಿಣ
ಡಿ. ಕ್ಯಾಲ್ಸಿಯಂ
ಉತ್ತರ:

122. ಯಾವ ಹಂತದಲ್ಲಿ ನೈಟ್ರೇಟ್ ಗಳು ಹಾಗೂ ಫಾಸ್ಪೇಟ್ ಗಳನ್ನು ನಿವಾರಿಸಲಾಗುತ್ತದೆ ?
ಎ. ಪ್ರಾಥಮಿಕ ಸಂಸ್ಕರಣೆ
ಬಿ. ದ್ವಿತೀಯ ಸಂಸ್ಕರಣೆ
ಸಿ. ತೃತೀಯ ಸಂಸ್ಕರಣೆ
ಡಿ. ಪೂರ್ವಭಾವಿ ಸಂಸ್ಕರಣೆ
ಉತ್ತರ:

123. 26, 52, 91, 117, 141, 195, 234 ಈ ಸರಣಿಯಲ್ಲಿ ತಪ್ಪು ಸಂಖ್ಯೆ ಯಾವುದು ?
ಎ. 91
ಬಿ. 195
ಸಿ. 117
ಡಿ. 141
ಉತ್ತರ:

124. ಒಂದು ತ್ರಿಕೋನವು 14cms ಆಧಾರವನ್ನು ಹೊಂದಿದೆ ಮತ್ತು 7cms ತ್ರಿಜ್ಯದ ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ. ಪೈ=22/7 ಆಗಿದ್ದರೆ ಈ ತ್ರಿಕೋನದ ಎತ್ತರ ಎಷ್ಟು ?
ಎ. 11cm
ಬಿ. 22cm
ಸಿ. 33cm
ಡಿ. 22/7cm
ಉತ್ತರ:

125. ಒಂದು ಹಣದ ಮೊತ್ತಕ್ಕೆ ಪ್ರತಿವರ್ಷಕ್ಕೆ 10% ಸರಳ ಬಡ್ಡಿಯಂತೆ 4 ವರ್ಷಗಳಿಗೆ ಅದು ರೂ. 4000 ಗಳಾಗಿದ್ದರೆ, ಇದೇ ಮೊತ್ತಕ್ಕೆ ಇಷ್ಟೇ ದರದ ಚಕ್ರಬಡ್ಡಿಯನ್ನು ಸೇರಿಸಿದ ನಂತರ ಇದರ ಮೊಬಲಗು ಎಷ್ಟು ?
ಎ. ರೂ. 14641
ಬಿ. ರೂ. 18641
ಸಿ. ರೂ. 17641
ಡಿ. ರೂ. 15000
ಉತ್ತರ:

126. ಈ ಕೆಳಗಿನ ನಾಲ್ಕು ಚೌಕಗಳ ಘಟಕಗಳಲ್ಲಿ ಒಂದು ನಿಯಮಾನುಸಾರವಾಗಿ ಅಂಕಿಗಳನ್ನು ತುಂಬಲಾಗಿದೆ (?) ಚಿಹ್ನೆ ಇರುವ ಚೌಕದಲ್ಲಿ ಯಾವ ಸಂಖ್ಯೆಯನ್ನು ತುಂಬಬೇಕು ?
1 6 4 8 7 11 10 15
4 5 6 7 8 10 10 ?
ಎ. 13
ಬಿ. 14
ಸಿ. 16
ಡಿ. 17
ಉತ್ತರ:

127.ಒಬ್ಬ ರೈತನ ಬಳಿ 1334 ಹಸುಗಳು ಮತ್ತು 754 ಮೇಕೆಗಳು ಇವೆ. ಹಸು ಮತ್ತು ಮೇಕೆಗಳನ್ನು ಪ್ರತ್ಯೇಕವಾಗಿಟ್ಟು ಪ್ರತಿಯೊಂದು ಗುಂಪಿನಲ್ಲೂ ಅಷ್ಟೇ ಸಂಖ್ಯೆಯ ಪ್ರಾಣಿಗಳಿರುವಂತೆ ಆತ ಅವುಗಳನ್ನು ಗುಂಪುಗಳಾಗಿ ಮಾಡುತ್ತಾನೆ. ಈ ಗುಂಪುಗಳು ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿದ್ದರೆ ಒಟ್ಟು ಗುಂಪುಗಳ ಸಂಖ್ಯೆ ಎಷ್ಟು ?
ಎ. 26
ಬಿ. 29
ಸಿ. 36
ಡಿ. 58
ಉತ್ತರ:

128. ಒಂದು ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯಾರ್ಥಿಯೂ ಭೌತಶಾಸ್ತ್ರ ಅಥವಾ ಗಣಿತಶಾಸ್ತ್ರ ಎರಡನ್ನೂ ತೆಗೆದುಕೊಂಡಿದ್ದರು ಭೌತಶಾಸ್ತ್ರವನ್ನು ತೆಗೆದುಕೊಂಡಿದ್ದವರು 65.28% ಇದ್ದರು, ಗಣಿತಶಾಸ್ತ್ರವನ್ನು ತೆಗೆದುಕೊಂಡವರು 59.2% ಇದ್ದರು ಒಟ್ಟು ಅಭ್ಯಾರ್ಥಿಗಳ ಸಂಖ್ಯೆ 2000. ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಎರಡನ್ನೂ ತೆಗೆದುಕೊಂಡ ಅಭ್ಯಾರ್ಥಿಗಳ ಸಂಖ್ಯೆ ಎಷ್ಟು ?
ಎ. 750
ಬಿ. 500
ಸಿ. 250
ಡಿ. 125
ಉತ್ತರ:

129. ಒಂದು ಭೂಮಿಯ ತುಂಡು 150 ಮೀಟರ್ x 42 ಮೀಟರ್ ಇದೆ. ಇದರ ಅಗಲದ ಎರಡೂ ಕಡೆಗಳಲ್ಲಿ ಒಂದು ಅರೆವೃತ್ತಾಕಾರದ ಭೂ ಭಾಗವನ್ನು ಸೇರಿಸಲಾಗಿದೆ. ಪ್ರತಿಗಂಟೆಗೆ 4.32 ಕಿಮೀ ವೇಗದಲ್ಲಿ ಒಬ್ಬ ವ್ಯಕ್ತಿಯು ನಡೆದರೆ ಈ ಪ್ರದೇಶದ ಸುತ್ತಲೂ ನಡೆಯಲು ಆತನಿಗೆ ಎಷ್ಟು ಕಾಲ ಬೇಕಾಗುತ್ತದೆ ?
ಎ. 4 ನಿಮಿಷ
ಬಿ. 6 ನಿಮಿಷ
ಸಿ. 8 ನಿಮಿಷ
ಡಿ. 8 ನಿಮಿಷ 10 ಸೆಕೆಂಡ್
ಉತ್ತರ:

130. AB ಎನ್ನುವುದು ಒಂದು ಸಮತಲದಲ್ಲಿರುವ ರೇಖೆಯಾಗಿದೆ. P ಎಂಬ ಬಿಂದುವು ಈ ರೇಖೆಯ ಮೇಲೆ A ಮತ್ತು B ಗಳಿಂದ ಅದರ ಅಂತರವು ಯಾವಾಗಲೂ ಸಮವಾಗಿರುವಂತೆ ಚಲಿಸಿದರೆ, P ಬಿಂದುವಿನ ಪಥವು ಯಾವಾಗಲೂ
ಎ. AB ಗೆ ಸಮಾನಾಂತರವಾಗಿರುವ ರೇಖೆ
ಬಿ. AB ಯ ಲಂಭಾತ್ಮಕ ಸಮಭಾಜಕವಾಗಿರುವಂತಹ ರೇಖೆ
ಸಿ. A ಮತ್ತು B ಯ ಮೂಲಕ ಹಾದು ಹೋಗಿವಂಥ ವೃತ್ತ
ಡಿ. A ಮತ್ತು B ಮೂಲಕ ಹಾದು ಹೋಗುವಂತ ಎರಡು ವಕ್ರಗಳು
ಉತ್ತರ:

131. A ಎಂಬ ತೊಟ್ಟಿಯಲ್ಲಿ 1/2 ರಷ್ಟು ನೀರಿದೆ. A ತೋಟ್ಟಿಯ ಎರಡರಷ್ಟು ಸಾಮರ್ಥ್ಯವಿರುವ B ತೊಟ್ಟಿಯಲ್ಲಿ 1/5 ರಷ್ಟು ನೀರಿದೆ. A ತೊಟ್ಟಿಯಲ್ಲಿರುವ ನೀರನ್ನೆಲ್ಲಾ B ತೊಟ್ಟಿಗೆ ತುಂಬಿಸಿದರೆ, B ತೊಟ್ಟಿಯ ಸಾಮರ್ಥ್ಯದ ಎಷ್ಟು ಭಾಗದಲ್ಲಿ ನೀರು ತುಂಬಿರುತ್ತದೆ ?
ಎ. 9/20
ಬಿ. 3/10
ಸಿ. 7/10
ಡಿ. 7/20
ಉತ್ತರ:

132. ಒಂದು ಡಬ್ಬಿಯಲ್ಲಿ 1 ರೂ. ನಾಣ್ಯಗಳು, 50 ಪೈಸೆ ನಾಣ್ಯಗಳು ಹಾಗೂ 25 ಪೈಸೆ ನಾಣ್ಯಗಳು 7:6:4 ಪ್ರಮಾಣದಲ್ಲಿವೆ. ಒಟ್ಟು ಮೊಬಲಗು 341 ರೂ. ಆದರೆ ಈ ಡಬ್ಬಿಯಲ್ಲಿರುವ ಒಟ್ಟು ನಾಣ್ಯಗಳ ಸಂಖ್ಯೆ ಎಷ್ಟು ?
ಎ. 417
ಬಿ. 437
ಸಿ. 517
ಡಿ. 527
ಉತ್ತರ:

133. ಒಬ್ಬ ವ್ಯಕ್ತಿಯು 6 ಲಕ್ಷ ರೂ.ಗಳಿಗೆ ಜಾಗವನ್ನು ಖರೀದಿಸಿದ. ವೆಚ್ಚದ 30% ರಷ್ಟನ್ನು ಆತ ಜಾಗದ ಅಭಿವೃದ್ಧಿಗಾಗಿ ಖರ್ಚು ಮಾಡಿ ಅದನ್ನು 25 ಪ್ಲಾಟ್ ಗಳಾಗಿ ವಿಭಜಿಸಿದ. ಆತ ತಾನು ಮಾಡಿದ ಒಟ್ಟು ಹೂಡಿಕೆಗೆ 25% ಲಾಭ ಬರಬೇಕೆಂದು ಬಯಸಿದರೆ ಪ್ರತಿಯೊಂದು ಪ್ಲಾಟ್ ಗೂ ಆತ ಎಷ್ಟು ಬೆಲೆ ಇಡಬಹುದು ?
ಎ. 35,000 ರೂ.
ಬಿ. 39,000 ರೂ.
ಸಿ. 43,000 ರೂ.
ಡಿ. 45,000 ರೂ.
ಉತ್ತರ:

134. ಭಾರತ ಸರ್ಕಾರವು ಐದು ದೇಶಗಳ ಪ್ರಜೆಗಳಿಗಾಗಿ ಇತ್ತೀಚೆಗೆ 'visa on arrival' ಎಂಬುದನ್ನು ಅನುಗ್ರಹಿಸಿದೆ. ಈ ಪಟ್ಟಿಯಲ್ಲಿರುವ ಏಷ್ಯಾದ ಎರಡು ದೇಶಗಳು ಯಾವುವು ?
ಎ. ಶ್ರೀಲಂಕಾ ಮತ್ತು ಸಿಂಗಪುರ
ಬಿ. ಪಾಕಿಸ್ತಾನ ಮತ್ತು ಜಪಾನ್
ಸಿ. ಥಾಯ್ ಲ್ಯಾಂಡ್ ಮತ್ತು ಪಾಕಿಸ್ತಾನ
ಡಿ. ಜಪಾನ್ ಮತ್ತು ಸಿಂಗಪುರ
ಉತ್ತರ:

135. ದಂತಕತೆಯಾಗಿರುವ ಹಾಡುಗಾರ ಮತ್ತು ರಚನಕಾರ ಸಿ.ಅಶ್ವತ್ಥ್ ಅವರ ನಿಧನವು ಯಾವುದರೊಂದಿಗೆ ತಾಳೆಯಾಯಿತು ?
ಎ. ಅವರ ಜನ್ಮದಿನ
ಬಿ. ಬೇಂದ್ರೆಯವರ ಜನ್ಮದಿನ
ಸಿ. ವಿಷ್ಣುವರ್ಧನ್ ರವರ ಸಾವಿನ ದಿನ
ಡಿ. ಕ್ರಿಸ್ ಮಸ್ ದಿನ
ಉತ್ತರ:

136. ಜನವರಿ 2011ಕ್ಕೆ ಅನುಸೂಚಿತವಾಗಿರುವ ಗ್ರಾಂಡ್ ಸ್ಲ್ಯಾಮ್ ಟೆನ್ನಿಸ್ ಪಂದ್ಯ ಯಾವುದು ?
ಎ. ವಿಂಬಲ್ಡನ್
ಬಿ. ಯು.ಎಸ್.ಓಪನ್
ಸಿ. ಫ್ರೆಂಚ್ ಓಪನ್
ಡಿ. ಆಸ್ಟ್ರೇಲಿಯನ್ ಓಪನ್
ಉತ್ತರ:

137. ಈ ಕೆಳಗಿನವುಗಳಲ್ಲಿ ಯಾವುದು ಸರಿ ಹೊಂದಿಕೆಯಾಗಿವೆ ?
ವಿಶೇಷ ಸಂದರ್ಭ ಸ್ಥಳ
I. ಆಟೋ ಎಕ್ಸ್ ಪೋ 2010 : ನವದೆಹಲಿ
II. 97ನೇ ಭಾರತೀಯ ವಿಜ್ಞಾನ ಸಮಾವೇಶ : ತಿರುವನಂತಪುರಂ
III.ಬಯೋ ಏಷಿಯಾ 2010 : ಬೆಂಗಳೂರು

ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ಆಯ್ಕೆ ಮಾಡಿ
ಎ. I ಮತ್ತು II ಮಾತ್ರ
ಬಿ. II ಮತ್ತು III ಮಾತ್ರ
ಸಿ. I ಮತ್ತು III ಮಾತ್ರ
ಡಿ. I, II ಮತ್ತು III
ಉತ್ತರ:

138. ಕೋಪನ್ ಹೇಗನ್ನಿನ ಜಾಗತಿಕ ಶೃಂಗ ಸಭೆಯು ಈ ಕೆಳಕಂಡ ಭಾರೀ ಪ್ರಮಾಣದ ಬಿಕ್ಕಟ್ಟಿನ ಸುತ್ತ ಕೇಂದ್ರೀಕೃತವಾಗಿತ್ತು
ಎ. ಭಯೋತ್ಪಾದನೆ
ಬಿ. ಏಡ್ಸ್
ಸಿ. H1N1
ಡಿ. ಹವಾಮಾನ ಬದಲಾವಣೆ
ಉತ್ತರ:

139. ಕರ್ನಾಟಕದ ಈ ಕೆಳಗಿನ ಸ್ಥಳದಲ್ಲಿ ಒಂದು ಏರೋಸ್ಪೇಸ್ SEZ ನ್ನು ಪ್ರಾರಂಭಿಸಲಾಗಿದೆ..
ಎ. ಬೆಳಗಾಂ
ಬಿ. ಹುಬ್ಬಳ್ಳಿ
ಸಿ. ಬೀದರ್
ಡಿ. ಮಂಗಳೂರು
ಉತ್ತರ:

140. ಹಿಂದಿಯ "3 ಈಡಿಯಟ್ಸ್" ಎಂಬ ಸಿನೆಮಾದ ಮೂಲವನ್ನು ಕುರಿತಂತೆ ಹುಟ್ಟಿಕೊಂಡಿರುವ ವಿವಾದವು ಯಾವುದಕ್ಕೆ ಸಂಬಂಧಿಸಿದೆ ?
ಎ. ಅರವಿಂದ ಅಡಿಗ ಅವರ "The White Tiger"
ಬಿ. ಚೇತನ್ ಭಗತ್ ಅವರ "Five Point Someone"
ಸಿ. ಸೌಮ್ಯ ಭಟ್ಟಾಚಾರ್ಯ ಅವರ "If I Could Tell You"
ಡಿ. ಅರಿಂದಮ್ ಚೌದರಿ ಅವರ "The Great Indian Dream"
ಉತ್ತರ:

141. 'ಅಮನ್ ಕಿ ಆಶಾ' ಎಂಬುದು ಈ ಕೆಳಕಂಡ ಪತ್ರಿಕೆಯವರು ಆರಂಭಿಸಿದ ಭಾರತ-ಪಾಕ್ ಶಾಂತಿ ಪರಿಯೋಜನೆ
ಎ. ದಿ ಹಿಂದೂ
ಬಿ. ಡೆಕ್ಕನ್ ಕ್ರಾನಿಕಲ್
ಸಿ. ದಿ ಟೈಮ್ಸ್ ಆಫ್ ಇಂಡಿಯಾ
ಡಿ. ದಿ ಸ್ಟೇಟ್ಸ್ ಮನ್
ಉತ್ತರ:

142. ಕರ್ನಾಟಕದ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ
ಎ. ರಾಹುಲ್ ದ್ರಾವಿಡ್
ಬಿ. ಅನಿಲ್ ಕುಂಬ್ಳೆ
ಸಿ. ಜಿ.ಆರ್.ವಿಶ್ವನಾಥ್
ಡಿ. ಎಸ್.ಎಂ.ಹೆಚ್. ಕಿರ್ಮಾನಿ
ಉತ್ತರ:

143. ಅತ್ಯಧಿಕ ವೇಗದ ತಡೆರಹಿತ ಸಾಪ್ತಾಹಿಕ ರೈಲು 'ಡುರಂತೋ ಎಕ್ಸ್ ಪ್ರೆಸ್' ಯಶವಂತಪುರ ಹಾಗೂ______ ನಡುವೆ ಸಂಚರಿಸುತ್ತದೆ.
ಎ. ಹೌರಾ
ಬಿ. ಜೈಪುರ
ಸಿ. ಲಕ್ನೋ
ಡಿ. ಚೆನ್ನೈ
ಉತ್ತರ:

144. ಡಿಸೆಂಬರ್ 18, 2009 ರಂದು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದ ಟಿ.ಎಸ್.ಸತ್ಯನ್ ಅವರು ಏನಾಗಿದ್ದರು ?
ಎ. ಗೀತರಚನೆಕಾರ
ಬಿ. ಸಂಗೀತ ನಿರ್ದೇಶಕ
ಸಿ. ಸಿನಿಮಾ ನಿರ್ದೇಶಕ
ಡಿ. ಛಾಯಾಚಿತ್ರಗ್ರಾಹಕ
ಉತ್ತರ:

145. 'Connecting People' ಎನ್ನುವುದು ಕೆಳಕಂಡಿದ್ದರ ಜಾಹಿರಾತಿನ ಘೋಷಣೆ
ಎ. ಏರ್ ಟೆಲ್
ಬಿ. ನೋಕಿಯಾ
ಸಿ. ರಿಲಯನ್ಸ್
ಡಿ. ಬಿ.ಎಸ್.ಎನ್.ಎಲ್.
ಉತ್ತರ:

146. 2010ರ ಜನವರಿ 4 ರಂದು ಉದ್ಘಾಟನೆಯಾದ ಜಗತ್ತಿನ ಅತಿ ಎತ್ತರದ ಕಟ್ಟಡ ಯಾವುದು ?
ಎ. ಬುರ್ಜ್ ಖಲೀಫಾ
ಬಿ. ಬುರ್ಜ್ ಅಲ್ ಅರಬ್
ಸಿ. ಬಿನ್ ದುಬಾಯ್
ಡಿ. ಅಲ್ ಖಲೀಫಾ
ಉತ್ತರ:

147. ವೆಂಕಟರಾಮನ್ ರಾಮಕೃಷ್ಣನ್ ಅವರು ತಮ್ಮ ನೋಬೆಲ್ ಬಹುಮಾನವನ್ನು ಇಸ್ರೇಲ್ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಇತರ ಇಬ್ಬರು ವಿಜ್ಞಾನಿಗಳೊಂದಿಗೆ ಹಂಚಿಕೊಂಡರು. ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ?
ಎ. ವೈಧ್ಯಕೀಯ
ಬಿ. ರಸಾಯನ ಶಾಸ್ತ್ರ
ಸಿ. ಶಾಂತಿ
ಡಿ. ಭೌತಶಾಸ್ತ್ರ
ಉತ್ತರ:

148. ಪಟ್ಟಿ I (CEO'S) ಮತ್ತು ಪಟ್ಟಿ II (ಕಂಪನಿಗಳು) ಸರಿಹೊಂದಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ

ಪಟ್ಟಿ-I ಪಟ್ಟಿ-II
A. ದೀಪಕ್ ಪರೇಖ್ 1. ಕಿಂಗ್ ಫಿಷರ್
B. ಕ್ರಿಸ್ ಗೋಪಾಲಕೃಷ್ಣ 2. ICICI ಬ್ಯಾಂಕ್
C. ವಿಜಯ್ ಮಲ್ಯ 3. HDFC
D. ಚಂದಾ ಕೊಚ್ಚಾರ್ 4. ಇನ್ ಫೋಸಿಸ್

ಸಂಕೇತಗಳು
A B C D
ಎ. 1 2 3 4
ಬಿ. 3 2 4 1
ಸಿ. 3 4 1 2
ಡಿ. 4 3 2 1
ಉತ್ತರ:

149. ಪ್ರೊ. ಉಪಿಂದರ್ ಸಿಂಗ್ ಅವರು ಈ ಕೆಳಕಂಡ ಕ್ಷೇತ್ರದ ಇನ್ ಫೋಸಿಸ್ ವಿಜ್ಞಾನ ಸಂಸ್ಥಾಪನಾ ಬಹುಮಾನ 2009 ಪಡೆದುಕೊಂಡರು
ಎ. ಇತಿಹಾಸ
ಬಿ. ಮಾಹಿತಿ ವಿಜ್ಞಾನ
ಸಿ. ಸಾಫ್ಟ್ ವೇರ್ ಅಭಿವೃದ್ಧಿ
ಡಿ. ನೆಟ್ ವರ್ಕ್ ಕಮ್ಯುನಿಕೇಶನ್
ಉತ್ತರ:

150. ಎ.ಆರ್.ರೆಹಮಾನ್ ಅವರಲ್ಲದೇ ಇನ್ನೂ ಇಬ್ಬರು ಭಾರತೀಯ ಸಂಗೀತಗಾರರು ಗ್ರಾಮಿ ಬಹುಮಾನ 2010ಕ್ಕೆ ನಾಮನಿರ್ದೇಶಿತರಾಗಿದ್ದರು. ಅವರನ್ನು ಗುರುತಿಸಿ.
ಎ. ಜಸ್ ರಾಜ್ ಮತ್ತು ಜಕೀರ್ ಹುಸೇನ್
ಬಿ. ಜಸ್ ರಾಜ್ ಮತ್ತು ಯು. ಶ್ರೀನಿವಾಸ್
ಸಿ. ಜಾಕೀರ್ ಹುಸೇನ್ ಮತ್ತು ಅಮ್ಜದ್ ಅಲಿ ಖಾನ್
ಡಿ. ಅಮ್ಜದ್ ಅಲಿ ಖಾನ್ ಮತ್ತು ಎಲ್. ಸುಬ್ರಹ್ಮಣ್ಯಂ
ಉತ್ತರ: