ಜೂನ್ 9, 2011

ಸ್ವಾಮಿ ವಿವೇಕನಂದ ಚಿಕಾಗೋ ಭಾ಼ಷಣ


ಕ್ಯಾಲೆಂಡರ್ ಕಮಾಲು

ಕ್ಯಾಲೆಂಡರ್ ಕಮಾಲು

ನಾವೆಲ್ಲ ಕ್ಯಾಲೆಂಡರ್ (ದಿನಸೂಚಿ) ನೋಡಿದ್ದೇವೆ, ಬಳಸಿದ್ದೇವೆ. ಇಂದು ಕ್ಯಾಲೆಂಡರ್ ಇಲ್ಲದ ಮನೆಯೇ ಇಲ್ಲವೆನ್ನಬಹುದು. ಅದರಲ್ಲಿನ ದೇವರ ಚಿತ್ರಕ್ಕಾಗಿಯೋ ನಿಸರ್ಗದ ಪ್ರತಿಕೃತಿಗಾಗಿಯೋ ಅದು ಜನರನ್ನು ಆಕರ್ಷಿಸುತ್ತದೆ. ಆದರೆ ಅದರಲ್ಲಿನ ದಿನಸೂಚಿ ಸಂಖ್ಯೆಗಳನ್ನು ಗಮನಿಸಿದ್ದೀರಾ? ಕೆಲವು ಮೋಜಿನ ಅಂಶಗಳು ಅಲ್ಲಿ ಅಡಗಿವೆ. ನೋಡೋಣ ಬನ್ನಿ
1) ಇಲ್ಲಿ ಒಂದು ತಿಂಗಳಿನ ದಿನಸೂಚಿ ಇದೆ. ಯಾವುದೇ ಕ್ಯಾಲೆಂಡರಿನ, ಯಾವುದೇ ತಿಂಗಳನ್ನು (ಹಳೆಯದಾದರೂ ಪರವಾಗಿಲ್ಲ) ನೀವು ಆಯ್ಕೆ ಮಾಡಬಹುದು.

ಮೇಲಿನ ಚಿತ್ರದಲ್ಲಿ ಹಲವು 7 ಸಂಖ್ಯೆಗಳ ಕಂಭಸಾಲು, 5 ಸಂಖ್ಯೆಗಳ ಅಡ್ಡಸಾಲು ಇವೆ. ಈ ಸಾಲುಗಳ ಸಂಖ್ಯೆಗಳ ಮೊತ್ತವನ್ನು ದಿಢೀರ್ ಹೇಳಬಲ್ಲಿರಾ?
ಉಪಾಯ ಹೀಗಿದೆ. ಸಾಲಿನ ಮಧ್ಯದ ಸಂಖ್ಯೆಯನ್ನು ಆ ಸಾಲಿನಲ್ಲಿ ಎಷ್ಟು ಸಂಖ್ಯೆಗಳಿವೆಯೋ ಅದರಿಂದ ಗುಣಿಸಿ. ಲಬ್ಧವೇ ಮೊತ್ತ.
ಉದಾ: ಮೊದಲ ಅಡ್ಡಸಾಲು 1, 8, 15, 22, 29 ಇವುಗಳ ಮೊತ್ತ 15×5=75
ಎರಡನೇ ಕಂಭಸಾಲು 8, 9, 10, 11, 12, 13, 14; ಇವುಗಳ ಮೊತ್ತ 11×7=77.
ಇಷ್ಟೇ ಅಲ್ಲ. ಇದನ್ನು ಓರೆ ಸಾಲುಗಳಿಗೂ ಇದನ್ನು  ಅನ್ವ ಯಿಸಬಹುದು. ಚಿತ್ರದಲ್ಲಿ ಗುರ್ತಿಸಿರುವ 5, 11, 17, 23, 29 ಇವುಗಳ ಮೊತ್ತ 17×5=85
2) ಅಡ್ಡಸಾಲು, ಕಂಭಸಾಲು, ಓರೆ ಸಾಲುಗಳಲ್ಲಿ ಅನುಕ್ರಮವಾಗಿ ಬರುವ ಯಾವುದೇ 3, 5, 7 ಸಂಖ್ಯೆಗಳನ್ನು ಆಯ್ಕೆ ಮಾಡಿ, ಅವುಗಳ ಮೊತ್ತ ಪಡೆಯಲು ಸಂಖ್ಯೆಗಳ ಮಧ್ಯದ ಸಂಖ್ಯೆಯನ್ನು, ಎಷ್ಟು ಸಂಖ್ಯೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆಯೋ ಅದರಿಂದ ಗುಣಿಸಬೇಕು.

ಈ ಉಪಾಯ ಆಯ್ಕೆ ಮಾಡಿಕೊಂಡ ಸಂಖ್ಯೆಗಳು ಬೆಸಸಂಖ್ಯೆಗಳಷ್ಟಾಗಿದ್ದರೆ ಮಾತ್ರ ಸರಿಹೊಂದುತ್ತದೆ. ಹಾಗಾದರೆ ಆಯ್ಕೆ ಮಾಡಿಕೊಂಡ ಸಂಖ್ಯೆಗಳು ಸಮ ಸಂಖ್ಯೆಯಷ್ಟಾಗಿದ್ದರೆ (2, 4, 6)? ಅದಕ್ಕೂ ಉಪಾಯವಿದೆ.
ಉದಾ: ಮೇಲಿನ ಕ್ಯಾಲೆಂಡರ್ ಚಿತ್ರದಲ್ಲಿ ಗುರ್ತಿಸಿರುವ 4 ಸಂಖ್ಯೆಗಳನ್ನು ನೋಡಿ. 1, 8, 15, 22 ಸಂಖ್ಯೆಗಳು ಇವುಗಳ ಮೊತ್ತ ಪಡೆಯಲು ಮೊದಲ ಮತ್ತು ಕೊನೆಯ ಸಂಖ್ಯೆಗಳನ್ನು ಕೂಡಿಸಿ.  ಮೊತ್ತವನ್ನು 2 ರಿಂದ ಗುಣಿಸಿ. ಬರುವ ಉತ್ತರ 1+22 = 23; 23×2=46. ಹೀಗೆಯೇ 4, 12, 20, 28 ಗಳ ಮೊತ್ತ: 4+28 = 32; 32×2 = 64. ಕೊನೆಯ ಕಂಭಸಾಲಿನಲ್ಲಿ ಗುರ್ತಿಸಿರುವುದು 25, 26, 27, 28, 29, 30. ಇವುಗಳ ಮೊತ್ತ: 25+30=55; 55×3=165. ಮೊದಲ ಮತ್ತು ಕೊನೆಯ ಸಂಖ್ಯೆಗಳ ಮೊತ್ತವನ್ನು ಒಟ್ಟು ಸಂಖ್ಯೆಗಳ ಅರ್ಧದಷ್ಟರಿಂದ ಗುಣಿಸಬೇಕು.
ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇದನ್ನು ಒಂದು ಆಟವಾಗಿ ಹೇಳಿಕೊಟ್ಟರೆ, ಮಕ್ಕಳ ಗಣಿತ ಸಾಮರ್ಥ್ಯ ಉತ್ತಮವಾಗಬಹುದಲ್ಲವೆ?
ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ, ಈ ಸಾಲುಗಳೆಲ್ಲವೂ ಅಂಕಗಣಿತ ಶ್ರೇಢಿಯಲ್ಲಿರುವುದನ್ನು ತಿಳಿಸಿ, ಸೂತ್ರ ಬಳಸಿ ಮೊತ್ತ ಪಡೆದು, ದಿಢೀರ್ ಉತ್ತರವನ್ನು ಪ್ರಮಾಣಿಸಲು ತಿಳಿಸಿದರೆ ಲಾಭದಾಯಕ.
3) ಯಾವುದೇ ತಿಂಗಳಿನ ದಿನಸೂಚಿ ತೆಗೆದುಕೊಳ್ಳಿ. ಅದರಲ್ಲಿನ 3×3 ಮನೆಗಳಷ್ಟು ಅಗಲದ ಕಿಂಡಿಯನ್ನು ರಟ್ಟಿನಲ್ಲಿ ಕತ್ತರಿಸಿ. ಕಿಂಡಿಯನ್ನು ದಿನಸೂಚಿಯ ಮೇಲೆ 9 ಮನೆಗಳು ಕಾಣುವಂತೆ ಇರಿಸಿ. ಈ ಒಂಭತ್ತು ಸಂಖ್ಯೆಗಳ ಮೊತ್ತ ಎಷ್ಟೆಂದು ದಿಢೀರ್ ಹೇಳಬಲ್ಲಿರಾ? ಚಿತ್ರದಲ್ಲಿ ಇಂತಹ ಚೌಕವನ್ನು, 3×3 ರಿಂದ ಗುರ್ತಿಸಿದೆ. ಉತ್ತರ ಹೀಗಿದೆ. 3×3 ಚೌಕದ ಮಧ್ಯದ ಸಂಖ್ಯೆಯನ್ನು 9 ರಿಂದ ಗುಣಿಸಿ. ಬರುವ ಗುಣಲಬ್ಧವೇ ಉತ್ತರ.

ಇಲ್ಲಿ 16 ಮಧ್ಯದ ಸಂಖ್ಯೆ, 9 ಸಂಖ್ಯೆಗಳ ಮೊತ್ತ; 9×16=144 ಪ್ರಮಾಣಿಸಿ ನೋಡಿ.
ರಟ್ಟಿನ ಕಿಂಡಿಯು ಬೇರೆ ಬೇರೆ 3×3 ಚೌಕಗಳನ್ನು ಆವರಿಸುವಂತೆ ಮಾಡಿ ಉತ್ತರ ಕಂಡುಕೊಳ್ಳಿ.
ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಿಗೆ ಇದು ಮೋಜಿನ ಆಟವಾಗಬಹುದು.
4) ಮೊದಲಿನ ರೀತಿಯಲ್ಲಿಯೇ ರಟ್ಟಿನಲ್ಲಿ 4×4 ಅಳತೆಯ ಮನೆಗಳು ಹೊಂದುವಂತೆ ಕಿಂಡಿ ಕತ್ತರಿಸಿ. 4×4 ಕಿಂಡಿಯಲ್ಲಿ ಕಾಣಬರುವ 16 ಸಂಖ್ಯೆಗಳ ಮೊತ್ತವೆಷ್ಟು? ತಕ್ಷಣ ಹೇಳುವುದು ಹೇಗೆ?

4×4 ಚೌಕದ ಸಂಖ್ಯೆಗಳಲ್ಲಿ ಎದುರು ಬದುರು ಮೂಲೆಯ ಎರಡು ಸಂಖ್ಯೆಗಳನ್ನು ತೆಗೆದುಕೊಳ್ಳಿ. ಇಲ್ಲಿ 4,28 ಅಥವಾ 7,25; ಅವುಗಳ ಮೊತ್ತ ಬರೆಯಿರಿ. ಇಲ್ಲಿ ಅದು 32. ಇದನ್ನು 8 ರಿಂದ ಗುಣಿಸಿ. ಉತ್ತರವೇ ಆ 4×4 ಹದಿನಾರು ಸಂಖ್ಯೆಗಳ ಒಟ್ಟು ಮೊತ್ತ. 32×8=256.  ಪ್ರಮಾಣಿಸಿ ನೋಡಿ.
ಇದೂ ಸಹ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಿಗೆ ಬೋಧಪ್ರದ ಮತ್ತು ರಂಜನೀಯ ಆಗಬಹುದು.
ಪುಸ್ತಕ:
ಲೇಖಕರು:
ಪ್ರಕಾಶಕರು:

ಸೈಂಟೂನ್

ಸುಕುಮಾರ ಸ್ವಾಮಿಯ ಕಥೆ : ಸಂಹಿತೆ ೨. ಅರಣ್ಯಕ


ಬ್ರಾಹ್ಮಣ ಅರಣ ಸೂತ್ರಂ ಮೊದಲಾಗೊಡೆಯವನೋದಿ ಋಗ್ಯಜುಸ್ಸಾಮಾಥರ್ವಣ ವೇದಂಗಳಂ ಸ್ವರವರ್ಣಭೇದದಿಂದಂ ಮಂತ್ರಸಹಿತ ಪಾಳಿ ಪದಕ್ರಮ ಜಟೆ ಭೇದದಿಂದಂ ಶತಸೂತ್ರಂ ಮೊದಲಾಗೆಲ್ಲಮಂ ಯಥಾಕ್ರಮದಿಂದುಚ್ಚರಿಸಿ ಪದಿನೆಂಟು ಪುರಾಣಂಗಳುಂ ಪದಿನೆಂಟು ಧರ್ಮಸಂಹತಿಗಳುಂ ಮೀಮಾಂಸಾ ನ್ಯಾಯಸೂತ್ರಮಿವೆಲ್ಲಮನೋದಿ ಕ್ರಿಯಾಕಾರಕ ಸಂಬಂಧದಿಂದೆಲ್ಲಮಂ ವಕ್ಖಾನಿಸಿ ತೋಱದೊಡರಸಂ ಮೊದಲಾಗಿ ನೆರೆದ ನೆರವಿಯುಂ ಪಂಡಿತರ್ಕ್ಕಳೆಲ್ಲಂ ವಿಸ್ಮಯಂಬಟ್ಟು ಪೊಗೞ್ದು ಮತ್ತಮರಸನಿಂತೆಂದನೀ ಕೂಸಿನಿತು ಶಾಸ್ತ್ರಂಗಳನೆಂತು ಕಲ್ತಳೆಂತು ಭಟಾರಾ ಇದನಱಯೆ ಬೆಸಸಿಮೆನೆ ಸೂರ್ಯಮಿತ್ರ ಭಟ್ಟಾರರಿಂತೆಂದರ್ ಈಯಿರ್ದ್ದ ರಿಸಿಯರ ಸಹೋದರಂ ವಾಯುಭೂತಿಯೆಂಬೊ – ನಾನಾಮೋದಿಸಿದೆಮೆಮ್ಮೊಳಪ್ಪ ಮಾನಕಷಾಯಂ ಕಾರಣಮಾಗಿ ಸತ್ತು ಬೆಳ್ಗತ್ತೆಯುಂ ಪೇಪಂದಿಯುಂ ನಾಯುಂ ಪೊಲೆಯರ ಕೂಸುಮಾಗಿ ರಿಸಿಯರ ಪ್ರಬೋಧನೆಯಿಂದಂ ಬ್ರತಂಗಳಂ ಕೈಕೊಂಡೀಗಳ್ ನಾಗಶ್ರೀಯಾದಳೆಂದು ಮುನ್ನಿನ ಭವದ ಸಂಬಂಧಮೆಲ್ಲಮಂ ಸವಿಸ್ತರಂ ಪೇೞ್ದು ಮತ್ತಮಿಂತೆಂದರ್ ಮಿಥ್ಯಾತ್ವ ಸಂಯಮ ಕಷಾಯ ಯೋಗಂ ಕಾರಣಮಾಗಿ ಜೀವಂಗಳ್ ಸಂಸಾರಸಮುದ್ರದೊಳ್ ತೊೞಲ್ಗುಮೆಂದು ಸವಿಸ್ತರಂ ಧರ್ಮಮಂ ಪೇೞೆ ಕೇಳ್ದು ಚಂದ್ರವಾಹನನೆಂಬರಸಂಗೆ ವೈರಾಗ್ಯಂ ಪುಟ್ಟಿ ಮಗಂಗರಸುಗೊಟ್ಟು ಪಲಂಬರರಸು ಮಕ್ಕಳ್ವೆರಸುಭಟ್ಟಾರರ ಪಕ್ಕದೆ ತಪಂಬಟ್ಟಂ ಕೆಲರ್ ಶ್ರಾವಕವ್ರತಂಗಳಂ ಕೆಲಂಬರ್ ಸಮ್ಯಕ್ಷಮಂ ಕೈಕೊಂಡರಾಗಳಾ
ಸೂತ್ರ ಮುಂತಾಗಿರುವವನ್ನೂ ಹೇಳಿದಳು, ಋಗ್ವೇದ ಯಜುರ್ವೇದ ಸಾಮವೇದ ಅಥರ್ವವೇದಗಳನ್ನೂ ಸ್ವರಗಳ ಮತ್ತು ವರ್ಣಗಳ ಭೇದದಿಂದ ಮಂತ್ರ ಸಮೇತವಾಗಿ ಪಾಳಿ – ಪದಕ್ರಮ – ಜಟೆ ಮುಂತಾದ ವೇದಪಠನದ ರೀತಿಯಲ್ಲಿ ಶತಸೂತ್ರ ಮುಂತಾಗಿ ಎಲ್ಲವನ್ನೂ ಸರಿಯಾದ ಕ್ರಮದಿಂದ ಉಚ್ಚಾರಣೆ ಮಾಡಿದಳು. ಹದಿನೆಂಟು ಪುರಾಣಗಳು, ಹದಿನೆಂಟು ಧರ್ಮಶಾಸ್ತ್ರಸಂಗ್ರಹಗಳು, ಮೀಮಾಂಸೆ, ನ್ಯಾಯಸೂತ್ರ ಇವೆಲ್ಲವನ್ನೂ ಹೇಳಿ, ಕ್ರಿಯಾಪದ ಕಾರಕಪದಗಳ ಸಂಬಂಧ ಸರಿಯಾಗಿರುವಂತೆ ಎಲ್ಲವನ್ನೂ ವ್ಯಾಖ್ಯಾನಮಾಡಿ ತೋರಿಸಿದಳು. ಆಗ ರಾಜನೂ, ನೆರೆದ ಜನರೂ, ವಿದ್ವಾಂಸರೂ ಎಲ್ಲರೂ ಆಶ್ಚರ್ಯಪಟ್ಟು ಹೊಗಳಿದರು. ಆ ಮೇಲೆ ರಾಜನು ಹೀಗೆಂದನು. “ಈ ಕನ್ಯೆ ಇಷ್ಟೊಂದು ಶಾಸ್ತ್ರಗಳನ್ನು ಹೇಗೆ ಕಲಿತುಕೊಂಡಳು? ಋಷಿಗಳೇ, ಇದನ್ನು ನನಗೆ ತಿಳಿಯುವಂತೆ ಅಪ್ಪಣೆಮಾಡಿ* ಎನ್ನಲು, ಸೂರ್ಯಮಿತ್ರ ಋಷಿಗಳು ಹೀಗೆಂದರು “ಇದೇ ಇಲ್ಲಿರುವ ಅಗ್ನಿಭೂತಿ ಋಷಿಗಳ ಸಹೋದರ ವಾಯುಭೂತಿಯೆಂಬವನಿಗೆ ನಾವಿ ವಿದ್ಯೆ ಕಲಿಸಿದ್ದೆವು. ನಮ್ಮ ಮೇಲೆ ಅವನು ತಾಳಿದ ಗರ್ವ ಕೋಪಗಳ ಕಾರಣದಿಂದ ಸತ್ತು ಬಿಳಿಕತ್ತೆ, ಹೇಲುಹಂದಿ, ನಾಯಿ, ಹೊಲೆಯರ ಕನ್ಯೆಯಾಗಿ ಹುಟ್ಟಿಬಂದು, ಋಷಿಗಳ ಉಪದೇಶದಿಂದ ವ್ರತಗಳನ್ನು ಸ್ವೀಕರಿಸಿ, ಈಗ ನಾಗಶ್ರೀಯಾದಳು* ಹೀಗೆ ಹಿಂದಿನ ಜನ್ಮದ ಸಂಬಂಧವೆಲ್ಲವನ್ನೂ ವಿಸ್ತಾರವಾಗಿ ತಿಳಿಸಿ ಮತ್ತೆ ಹೀಗೆಂದನು “ಜೀವಗಳು ಮಿಥ್ಯಾತ್ವ, ಸಂಯಮವಿಲ್ಲದಿರುವುದು, ಗರ್ವಕೋಪಾದಿಗಳ ಕಾರಣದಿಂದ ಸಂಸಾರವೆಂಬ ಸಮುದ್ರದಲ್ಲಿ ಸುತ್ತಾಡುವವು. * ಹೀಗೆಂದು ವಿಸ್ತಾರವಾಗಿ ಧರ್ಮದ ರಹಸ್ಯವನ್ನು ಹೇಳಲು ಕೇಳಿದ ಚಂದ್ರವಾಹನ ರಾಜನಿಗೆ ವೈರಾಗ್ಯವುಂಟಾಯಿತು. ಅವನು ತನ್ನ ಮಗನಿಗೆ ಅರಸುತನವನ್ನು ಕೊಟ್ಟು ಹಲವು ಮಂದಿ ರಾಜಕುಮಾರರೊಂದಿಗೆ ಋಷಿಗಳ ಸಮೀಪದಲ್ಲಿದ್ದು ತಪವನ್ನೆಸಗಿದನು. ಕೆಲವರು ಶ್ರಾವಕವ್ರತಗಳನ್ನೂ ಕೆಲವರು ಸಮ್ಯಗ್ದರ್ಶನ ಸಮ್ಯಗ್ಜ್ಞಾನ ಸಮ್ಯಕ್ಚಾರಿತ್ರಗಳನ್ನು
ಸೋಮಶರ್ಮಭಟ್ಟಂ ರಿಸಿಯರೊಳಾದ ಮಾನಗರ್ವದ ದೋಷದಿಂದೆಯ್ದಿದ ದುಃಖಂಗಳಂ ಕೇಳ್ದಱದಾ ಭಟ್ಟಾರರ ಪಕ್ಕದೆ ತಪಂಬಟ್ಟಂ ನಾಗಶ್ರೀಯುಂ ನಾಗಶ್ರೀಯ ತಾಯ್ ತ್ರಿವೇದಿಯುಂ ಬ್ರಹ್ಮಿಲೆಯೆಂಬ ಕಂತಿಯರ ಪಕ್ಕದೆ ತಪಂಬಟ್ಟರ್ ಮತ್ತೆ ಸೂರ್ಯಮಿತ್ರ ಭಟ್ಟಾರರಗ್ನಿಭೂತಿ ಭಟ್ಟಾರರುಮಿರ್ವರುಂ ಪಲಕಾಲಂ ತಪಂಗೆಯ್ದು ಅಗ್ರಮಂದಿರವೆಂಬ ಪರ್ವತದೊಳ್ ಮೋಕ್ಷವನೆಯ್ದಿದರ್ ಮತ್ತಂ ಸೋಮಶರ್ಮರಿಸಿಯರುಮುಗ್ರೋಗ್ರ ತಪಶ್ಚರಣಂಗೆಯ್ದು ಸನ್ಯಸನವಿಯಿಂದಂ ಮುಡಿಪಿ ಅಚ್ಚುತಕಲ್ಪದೊಳಿರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊಂ ಸಾಮಾನಿಕದೇವನಾಗಿ ಪುಟ್ಟಿದೊಂ ಮತ್ತೆ ನಾಗಶ್ರೀಯುಂ ಭುಕ್ತ ಪ್ರತ್ಯಾಖ್ಯಾನವಿಯಂ ರತ್ನತ್ರಯಮಂ ಸಾಸಿ ಅಚ್ಯುತಕಲ್ಪದೊಳ್ ದೇವನಾಗಿ ಪುಟ್ಟಿದೊಳ್ ಮತ್ತಾ ಸ್ವರ್ಗದೊಳ್ ತ್ರಿವೇದಿಯಂ ನಾಗಶ್ರೀ ಎನಗೆ ಜನ್ಮಾಂತಕರದೊಳಪ್ಪೊಡಂ ಮಗನಕ್ಕೆಂದು ನಿದಾನಂಗೆಯ್ದು ಮುಡಿಪಿ ದೇವನಾದೊಳಿಂತಾ ಯಿರ್ವರುಂ ಇರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊರಾಗಿ ದೇವರಾಗಿ ಪುಟ್ಟಿದರ್ ಮತ್ತಂ ಸೋಮಶರ್ಮನಪ್ಪ ದೇವಂ ಪಲಕಾಲಂ ದೇವಲೋಕದ ಭೋಗಮನನುಭವಿಸಿ ಬಂದಿಲ್ಲ ಈ ಜಂಬೂದ್ವೀಪದ ದಕ್ಷಿಣ ಭರತದೊಳವಂತಿಯೆಂಬುದು ನಾಡುಜ್ಜೇಶನಿಯೆಂಬುದು ಪೊೞಲಲ್ಲಿ ಇಂದ್ರದತ್ತನೆಂಬೊಂ ಪರದನಾತನ ಭಾರ್ಯೆ ಗುಣಮತಿಯೆಂಬೊಳಾಯಿವರ್ಗ್ಗಂ ಸೂರದತ್ತನೆಂಬೊಂ ಮಗನಾಗಿ ಪುಟ್ಟಿದೊಂ ಮತ್ತಮಾ ಪೊೞಲೊಳ್ ಮೂವತ್ತೆರಡು ಕೋಟಿ ಕಸವರಮನೊಡೆಯೊಂ ಸುಭದ್ರನೆಂಬೊಂ ಸೆಟ್ಟಿಯಾತನ
ಪಡೆದುಕೊಂಡರು. ಆ ಸಂದರ್ಭದಲ್ಲಿ ಸೋಮಶರ್ಮಭಟ್ಟನು ಋಷಿಗಳ ಮೇಲೆ ಉಂಟಾದ ಗರ್ವಕ್ರೋಧಗಳ ತಪ್ಪಿನಿಂದ ಉಂಟಾಗತಕ್ಕ ದುಃಖಗಳನ್ನು ಕೇಳಿ ತಿಳಿದು ಆ ಋಷಿಗಳ ಪಕ್ಕದಲ್ಲಿ ತಪ್ಪಸ್ಸನ್ನು ಮಾಡಿದನು. ನಾಗಶ್ರೀಯೂ ಅವಳ ತಾಯಿಯಾದ ತ್ರಿವೇದಿಯೂ ಬ್ರಹ್ಮಿಲೆ ಎಂಬ ಜೈನ ಸಂನ್ಯಾಸಿನಿಯ ಬಳಿಯಲ್ಲಿ ತಪಸ್ಸನ್ನು ಮಾಡಿದರು. ಸೂರ್ಯಮಿತ್ರ ಋಷಿಗಳು ಅಗ್ನಿಭೂತಿ ಋಷಿಗಳು ಇವರಿಬ್ಬರೂ ಹಲವು ವರ್ಷಗಳ ಕಾಲ ತಪಸ್ಸನ್ನು ಮಾಡಿ ಅಗ್ರಮಂದಿರವೆಂಬ ಬೆಟ್ಟದಲ್ಲಿ ಮೋಕ್ಷಕ್ಕೆ ಹೋದರು. ಆ ಮೇಲೆ ಸೋಮಶರ್ಮ ಋಷಿಯು ಅತ್ಯಂತ ಘೋರವಾದ ತಪಸ್ಸನ್ನು ಆಚರಿಸಿ ಸನ್ಯಸನ ವಿಯಿಂದ ಸತ್ತು ಅಚ್ಯುತ ಎಂಬ ಹೆಸರಿನ ಸ್ವರ್ಗದಲ್ಲಿ ಇಪ್ಪತ್ತೆರಡು ಸಾಗರಕ್ಕೆ ಸಮಾನವಾದ ಆಯುಷ್ಯವನ್ನು ಉಳ್ಳ ಸಾಮಾನಿಕದೇವನಾಗಿ ಹುಟ್ಟಿದನು. ಮತ್ತೆ ನಾಗಶ್ರೀಯು ಕ್ರಮದಿಂದ ಆಹಾರ ಪಾನೀಯಗಳನ್ನು ತ್ಯಾಗಮಾಡುವ ‘ಭುಕ್ತ ಪ್ರತ್ಯಾಖ್ಯಾನ’ ಎಂಬ ವ್ರತನಿಯಮದಿಂದ ಸಮ್ಯಗ್ದರ್ಶನ ಚಾರಿತ್ರಗಳೆಂಬ ರತ್ನತ್ರಯವನ್ನು ಪಡೆದು, ಅಚ್ಚುತಕಲ್ಪದಲ್ಲಿ ದೇವತೆಯಾಗಿ ಹುಟ್ಟಿದಳು. ಮತ್ತು ಆ ಸ್ವರ್ಗದಲ್ಲಿ ತ್ರಿವೇದಿಯು ನನಗೆ ಬೇರೆ ಜನ್ಮದಲ್ಲಿಯಾದರೂ ನಾಗಶ್ರೀಯು ಮಗನಾಗಿ ಜನಿಸಲಿ ಎಂದು ಸಂಕಲ್ಪಿಸಿ ಸತ್ತು ದೇವಳಾದಳು. ಹೀಗೆ ಆ ಇಬ್ಬರೂ ಇಪ್ಪತ್ತೆರಡು ಸಾಗರಕ್ಕೆ ಸಮಾನವಾಗುವ ಆಯುಷ್ಯವುಳ್ಳವರಾಗಿ ದೇವರುಗಳಾಗಿ ಜನಿಸಿದರು. ಅನಂತರ ಸೋಮಶರ್ಮನಾಗಿದ್ದ ದೆವನು ಹಲವು ಕಾಲದವರೆಗೆ ದೇವಲೋಕದ ಸುಖವನ್ನು ಅನುಭವಿಸಿದ ನಂತರ ಭೂಲೋಕದಲ್ಲಿ ಜನಿಸಿದನು. ಈ ಜಂಬೂದ್ವೀಪದ ದಕ್ಷಿಣ ಭರತಭೂಮಿಯಲ್ಲಿ ಅವಂತಿಯೆಂಬ ನಾಡಿದೆ. ಅಲ್ಲಿ ಉಜ್ಜೇನಿಯೆಂಬ ಪಟ್ಟಣದಲ್ಲಿ ಇಂದ್ರದತ್ತನೆಂಬ ವರ್ತಕನಿದ್ದನು. ಅವನ ಹೆಂಡತಿ ಗುಣಮತಿ ಎಂಬುವಳು ಆ ಇಬ್ಬರಿಗೂ ಸೂರದತ್ತನೆಂಬ ಮಗನಾಗಿ (ಸೋಮಶರ್ಮನಾಗಿದ್ದ ದೇವನು) ಹುಟ್ಟಿದನು. ಅದಲ್ಲದೆ ಆ ಪಟ್ಟಣದಲ್ಲಿ ಮೂವತ್ತೆರಡು ಕೋಟಿ ಹೊನ್ನನ್ನುಳ್ಳ ಸುಭದ್ರನೆಂಬ
ಭಾರ್ಯೆ ಸರ್ವಯಶಿಯೆಂಬೊಳಾಯಿರ್ವರ್ಗ್ಗಂ ತ್ರಿವೇದಿಯಪ್ಪ ದೇವಂ ಬಂದು ಯಶೋಭದ್ರೆಯೆಂಬೊಳ್ ಮಗಳಾಗಿ ಪುಟ್ಟಿದೊಳಾ ತ್ರಿವೇದಿ ತಪಶ್ಚರಣದ ಫಲದಿಂದಂ ದೇವತ್ವಮನೆಯ್ದಿಯುಂ ನಿದಾನಂ ಕಾರಣಮಾಗಿ ಮಿಥ್ಯಾತ್ವಕ್ಕೆ ಸಂದು ಸ್ತ್ರೀತ್ವಮನೆಯ್ದಿದಳಾ ಯಶೋಭದ್ರೆಯಂ ಸೂರದತ್ತಂಗೆ ಕೊಟ್ಟೊರಾಯಿರ್ವರ್ಗ್ಗಂ ನಾಗಶ್ರೀಯಪ್ಪ ದೇವಂ ಬಂದು ಸುಕುಮಾರಸ್ವಾಮಿಯೆಂಬೊಂ ಮಗನಾಗಿ ಪುಟ್ಟಿದನಾತನ ಪುಟ್ಟಿದಂದೆ ವೈರಾಗ್ಯಂ ಕಾರಣಮಾಗಿ ಸೂರದತ್ತಸೆಟ್ಟಿ ಸುಕುಮಾರಸ್ವಾಮಿಗೆ ಸೆಟ್ಟಿವಟ್ಟಂಗಟ್ಟಿ ತಪಂಬಟ್ಟಂ ಸುಕುಮಾರಸ್ವಾಮಿಯುಂ ಯೌವನನಾಗಿ ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದಂ ಕೂಡಿದೊನಾತಂಗೆ ಮೂವತ್ತೆರಡು ಬಳ್ಳಿಮಾಡಂಗಳತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವ ವಿಲಾಸ ವಿಭ್ರಮಂಗಳನೊಡೆಯ ದೇವಗಣಿಕೆಯರನೆ ಪೋಲ್ವ ಮೂವತ್ತಿರ್ವರ್ ದಿವ್ಯಸ್ತ್ರೀಯರ್ಕಳ್ ಮೂವತ್ತೆರಡು ನಾಟಕಂಗಳ್ ಮೂವತ್ತರಡು ಕೋಟಿ ಕಸವರಮುಂ ಪಂಚರತ್ನಂಗಳೆಂಬಿನಿತಱೊಳಂ ಕೂಡಿ ಭೋಗೋಪಭೋಗ ಸುಖಂಗಳನನುಭವಿಸುತ್ತುಮಿರೆ ಮತ್ತೊಂದು ದಿವಸಮೊರ್ವ ನೈಮಿತ್ತಿಕನಿಂತೆಂದಾದೇಶಂಗೆಯ್ದನೀ ಸುಕುಮಾರಸ್ವಾಮಿ ಆವುದೊಂದು ಕಾಲದೊಳ್ ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮೆಂದೊಡಾ ಮಾತಂ ತಾಯ್ ಕೇಳ್ದು ತನ್ನ ಮನೆಯಂ ರಿಸಿಯರಂ ಪುಗಲೀಯದಂತು ಬಾಗಿಲ ಕಾಪಿನ ಕಲ್ಪಿಸಿದೊಳಂತು ಕಾಲಂ ಸಲೆ ದಿವಸಂ ರತ್ನದ್ವೀಪದಿಂದೊರ್ವ
ಸೆಟ್ಟಯಿದ್ದನು. ಅವನ ಹೆಂಡತಿ ಸರ್ವಯಶಿಯೆಂಬವಳು. ಆ ಇಬ್ಬರಿಗೆ ತ್ರಿವೇದಿಯಾಗಿದ್ದ ದೇವನ ಜೀವದಿಂದ ಯಶೋಭದ್ರೆಯೆಂಬ ಮಗಳು ಜನಿಸಿದಳು. ಆ ತ್ರಿವೇದಿ ತನ್ನ ತಪಸ್ಸನ ಆಚರಣೆಯ ಫಲದಿಂದ ದೇವತ್ವವನ್ನು ಪಡೆದರೂ ತನ್ನ ಸಂಕಲ್ಪದ ಕಾರಣದಿಂದ ಮಿಥ್ಯಾತ್ವಕ್ಕೆ ಒಳಗಾಗಿ ಹೆಣ್ಣುತನವನ್ನು ಹೊಂದಿದ್ದಳು. ಆ ಯಶೋಭದ್ರೆಯನ್ನು ಸೂರದತ್ತನಿಗೆ ಕೊಟ್ಟರು. ಆ ಇಬ್ಬರಿಗೂ ನಾಗಶ್ರೀಯಾಗಿದ್ದ ದೇವನು ಬಂದು ಸುಕುಮಾರಸ್ವಾಮಿಯೆಂಬ ಮಗನಾಗಿ ಹುಟ್ಟಿದನು. ಅವನು ಹುಟ್ಟಿದ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು ವಹಿಸಿಕೊಟ್ಟು ತಪಸ್ಸಿಗೆ ತೆರಳಿದನು. ಸುಕುಮಾರಸ್ವಾಮಿಯೆಂಬ ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು. ಅವನಿಗೆ ಮುವತ್ತೆರಡು ಲತಾಗೃಹಗಳೂ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿ ದೇವತಾಸ್ತ್ರೀಯನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರಿಯರೂ ಇದ್ದರು, ಮೂವತ್ತೆರಡು ಬಗೆಯ ನಾಟ್ಯಗಳು, ಮೂವತ್ತೆರಡು ಕೋಟಿ ಹೊನ್ನು, ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳಿಂದ ಕೂಡಿ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು. ಮತ್ತೊಂದು ದಿನ ಒಬ್ಬ ಜೋಯಿಸನು ಈ ರೀತಿಯಾಗಿ ಭವಿಷ್ಯವನ್ನು ಹೇಳಿದನು. ‘ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು’ ಹೀಗೆಂದ ಮಾತನ್ನು ತಾಯಿ ಯಶೋಭದ್ರೆ ಕೇಳಿ ತನ್ನ ಮನೆಗೆ ಋಷಿಗಳನ್ನು ಪ್ರವೇಶಿಸಲು ಬಿಡದ ಹಾಗೆ ಬಾಗಿಲು ಕಾಯುವವರಿಗೆ ಅಜ್ಞೆ ಮಾಡಿದಳು. ಹಾಗೆಯೇ ಕಾಲ ಕಳೆಯಿತು. ಮತ್ತೊಂದು ದಿವಸ ರತ್ನದ್ವೀಪದಿಂದ ಒಬ್ಬ
ಪರದಂ ಸರ್ವರತ್ನಕಂಬಳಂಗಳಂ ಲಕ್ಷದೀನಾರಂಗಳ್ ಬೆಲೆಯಪ್ಪುವನುಜ್ಜೇನಿಗೆ ಮಾಱಲ್ ಕೊಂಡುಬಂದೊನಾ ಪೊೞಲನಾಳ್ವೊಂ ವೃಷಭಾಂಕನೆಂಬೊನರಸಂಗಂ ಜ್ಯೋತಿರ್ಮಾಲೆಯೆಂಬ ಮಹಾದೇವಿಗಮಿಂತಿರ್ವರ್ಗ್ಗಂ ತೋಱದೊಡೆ ಅವಱ ಬೆಲೆಯಂ ಬೆಸಗೊಂಡೊಡೆ ಲಕ್ಷ ದೀನಾಗಂಗಳ್ ಬೆಲೆಯೆಂದು ಪೇೞ್ದೊಡೆ ಕೊಳಲಾಱದರಸಂ ಪೋಗಲ್ವೇನಂತು ಪೊೞಲೊಳಗೆಲ್ಲಂ ತೋಱ ಯಾರುಂ ಕೊಳಲಾಱದಿರ್ದ್ದೊಡೆ ರತ್ನಕಂಬಳಂಗಳಂ ಕೊಂಡು ಪೋಗಿ ಯಶೋಭದ್ರೆಗೆ ತೋಱದೊಡೆ ಲಕ್ಷದೀನಾರಂಗಳಂ ಕೊಟ್ಟು ರತ್ನಕಂಬಳಂಗಳಂ ಕೊಂಡೊರೊಂದರಱೊಳಂ ನಾಲ್ಕು ಖಂಡಮಾಗೆ ಮೂವತ್ತೆರಡು ಖಂಡಂಗಳಂ ಮಾಡಿ ಮೂವತ್ತಿರ್ವರ್ ಸೊಸೆವಿರ್ಕಳ್ಗೆ ಪಚ್ಚುಗೊಟ್ಟೊಡವರುಂ ತಂತಮ್ಮ ಕೆರ್ಪುಗಳೊಳ್ ತಗುಳ್ಚಿದರೆಂಬ ಮಾತನರಸಂ ಕೇಳ್ದು ಚೋದ್ಯಂಬಟ್ಟವರ ವಿಭೂತಿಯಂ ನೋೞ್ಪೆನೆಂದು ಮನೆಗೆವರ್ಪುದಂ ಯಶೋಭದ್ರೆ ಕೇಳ್ದರಸರ್ ಬರ್ಪ ಬಟ್ಟೆಯೊಳೆಲ್ಲಂ ಪಂಚರತ್ನಂಗಳಂ ರಂಗವಲ್ಲಿಯನಿಕ್ಕಿ ನೇತ್ರವಟ್ಟು ದುಕೂಲ ಚೀನಾದಿ ದಿವ್ಯವಸ್ತ್ರಂಗಳಂ ಪಾಸಿ ಮಣಿಭದ್ರಮಪ್ಪ ಹೇಮ ಮುಕ್ತಾಹಾರಂಗಳಿಂ ತೋರಣಂಗಟ್ಟಿಸಿಯರಸರ ಬರವಂ ಪಾರುತ್ತಿರೆ ನೃಪತಿಯುಂ ಬಂದು ಸುರೇಂದ್ರಭವನೋಪಮಮಪ್ಪ ಪ್ರಾಸಾದಮಂ ಪೊಕ್ಕು ವಿಸ್ಮಯಚಿತ್ತನಾಗಿ ಸುರಲೋಕಂಬೊಕ್ಕ ಪುಣ್ಯವಂತಂಬೊಲಾಗಳ್ ಮಹಾವಿಭೂತಿಯಿಂ ಶಯ್ಯಾತಳದೊಳಿರ್ದು ಸುಕುಮಾರನೆಲ್ಲಿದನೆಂದು
ವರ್ತಕನು ಲಕ್ಷದೀನಾರ (ಚಿನ್ನದ ನಾಣ್ಯ)ಗಳ ಬೆಲೆ ಬಾಳತಕ್ಕ ಎಲ್ಲಾ ರತ್ನಗಳಿಂದ ಕೂಡಿದ ಕಂಬಳಿಗಳನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದನು. ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜನಿಗೂ ಜ್ಯೋತಿರ್ಮಾಲೆಯೆಂಬ ಮಹಾರಾಣಿಗೂ ಹೀಗೆ ಇಬ್ಬರಿಗೂ ರತ್ನ ಕಂಬಳಿಗಳನ್ನು ತೋರಿಸಲು, ಅದರ ಬೆಲೆಯೇನೆಂದು ಕೇಳಿದಾಗ ಲಕ್ಷದೀನಾರಗಳೆಂದು ಹೇಳಿದನು. ರಾಜನು ಅವನ್ನು ಕ್ರಯಕ್ಕೆ ಕೊಳ್ಳಲಾರದೆ ಆ ವರ್ತಕನನ್ನು ಹೋಗಲು ಹೇಳಿದನು. ಅಂತೂ ಪಟ್ಟಣದಲ್ಲೆಲ್ಲಾ ತೋರಿಸಿದರೂ ಯಾರೂ ಕೊಂಡುಕೊಳ್ಳಲಾರದೆ ಇದ್ದಾಗ ಆ ರತ್ನಕಂಬಳಿಗಳನ್ನು ಕೊಂಡುಹೋಗಿ ಯಶೋಭದ್ರೆಗೆ ತೋರಿಸಿದಾಗ, ಆಕೆ ಲಕ್ಷದೀನಾರಗಳನ್ನು ಕೊಟ್ಟು ಅವನ್ನು ಕೊಂಡಳು. ಆಮೇಲೆ ಅವುಗಳಲ್ಲಿ ಪ್ರತಿಯೊಂದನ್ನೂ ನಾಲ್ಕು ತುಂಡುಗಳಾಗಿ ಮಾಡಿ ಒಟ್ಟು ಮೂವತ್ತೆರಡು ತುಂಡುಗಳನ್ನು ಮಾಡಿ ತನ್ನ ಮೂವತ್ತೆರಡು ಸೊಸೆಯಂದಿರಿಗೆ ಹಂಚಿಕೊಟ್ಟಳು. ಅವರು ಆ ತುಂಡುಗಳನ್ನು ತಮತಮ್ಮ ಪಾದುಕೆಗಳಿಗೆ ಸಿಕ್ಕಿಸಿದರು. ಈ ಸಂಗತಿಯನ್ನು ರಾಜನು ಕೇಳಿ ಆಶ್ಚರ್ಯಪಟ್ಟು ಅವರ ವೈಭವವನ್ನು ನೋಡುವೆನೆಂದು ಸುಕುಮಾರಸ್ವಾಮಿಯ ಮನೆಗೆ ಬರುತ್ತಿದ್ದನು. ರಾಜರು ಬರುವುದನ್ನು ಯಶೋಭದ್ರೆ ಕೇಳಿ, ರಾಜರು ಬರುವ ದಾರಿಯಲ್ಲೆಲ್ಲ ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ – ಎಂಬ ಐದು ಬಗೆಯ ರತ್ನಗಳಿಂದ ರಂಗೋಲೆ ಹಾಕಿಸಿದಳು. ನೇತ್ರ, ಪಟ್ಟು, ದುಕೂಲ, ಚೀನ – ಎಂಬ ಬಗೆಬಗೆಯ ರೇಷ್ಮೆಯ ದಿವ್ವವಾದ ಬಟ್ಟೆಗಳನ್ನು ಹಾಸಿದಳು.ರತ್ನಗಳಿಂದ ಚೆಲುವಾದ ಚಿನ್ನದ ಮುತ್ತಿನ ಸರಗಳಿಂದತೋರಣ ಕಟ್ಟಿದಳು. ರಾಜನ ಆಗಮನವನ್ನು ಎದುರು ನೋಡುತ್ತಿರಲು ರಾಜನು ಬಂದು, ಇಂದ್ರನ ಅರಮನೆಯನ್ನು ಹೋಲುವ ಉಪ್ಪರಿಗೆ ಮನೆಯನ್ನು ಪ್ರವೇಶಿಸಿದನು. ಆಗ ರಾಜನು ಅಚ್ಚರಿಗೊಂಡವನಾಗಿ ದೇವಲೋಕವನ್ನು ಪ್ರವೇಶಿಸಿದ ಪುಣ್ಯಶಾಲಿಯಂತೆ ಮಹಾ ವೈಭವದಿಂದ ಹಾಸಿಗೆಯ ಮೇಲೆ ಕುಳಿತು, ‘ಸುಕುಮಾರನು ಎಲ್ಲಿದ್ದಾನೆ ? ’ ಎಂದು
ಬೆಸಗೊಂಡೊಡೆ ಸ್ವಾಮಿ ಆತಂ ಕರಂ ಸಾದು ನಿಮ್ಮ ಬರಮನಱಯಂ ಪ್ರಾಸಾದದ ಮೇಗಣ ನೆಲೆಯೊಳಿರ್ದನೆಂದೊಡರಸಂ ಬೞಯನಟ್ಟಿಮೆನೆ ತಾಯ್ ಪೋಗಿ ಮಗನೆ ಅರಸರ್ವಂದರ್ ಬಾ ಪೋಪಮೆನೆ ಅರಸರೆಂಬೊರಾರೆನೆ ತಾಯೆಂದಳ್ ನಮ್ಮನಾಳ್ರ್ವೆರೆಂದೊಡೆ ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು ತಾಯ ವಚನಮಂ ಮಾರ್ಕೊಳಲಾಱದೆ ಬರ್ಪೊನಂ ನರೇಶ್ವರಂ ಕಂಡು ಕಣ್ಣೆತ್ತ ಫಲಮನಿಂದು ಪೆತ್ತೆನೆಂದು ಪ್ರತ್ಯಕ್ಷ ಕಾಮದೇವನನಪ್ಪಿಕೊಳ್ವಂತಪ್ಪಿಕೊಂಡು ದಿವ್ಯ ಶಯ್ಯಾತಳದ ಮೇಗೊಡನಿರಿಸಿದಾಗಳ್ ಸ್ವಜನ ಪರಿಜನಂಗಳ್ ಸಿದ್ಧಾರ್ಥಂಗಳಂ ಮಾಂಗಲ್ಯಮೆಂದಿರ್ವರ್ಗ್ಗಂ ಸೇಸೆಯನಿಕ್ಕಲಾಗಳಾ ಸಿದ್ದಾರ್ಥಂಗಳ್ ಸುಕುಮಾರಸ್ವಾಮಿಯಾಸನಮನೊತ್ತೆ ಕಟಿವಮನಲುಗಿಸುವುದುಮಂ ಸೊಡರಂ ನೋಡಿದಾಗಳ್ ಕಣ್ಣೀರ್ಗಳ್ ಸುರಿವುದುಮಂ ಕಂಡೀಗಳೀತಂಗೆ ಬ್ಯಾದಿಗಳೆಂದು ಬಗೆದಿರ್ಪ್ಪಿನಂ ಮಜ್ಜನಕ್ಕೆೞ್ತನ್ನಿಮೆಂದೊಡತೆಗೆಯ್ವೆಮೆಂದು ಮಜ್ಜನಂಗೊಂಡಮರಸನ್ನಿಭ ಮಣಿಕುಟ್ಟಿಮಮಪ್ಪ ಬಾವಿಯಂ ಪೊಕ್ಕು ಮಿಂದಲ್ಲಿಯನರ್ಘ್ಯಮಪ್ಪ ತನ್ನ ಬೆರಲ ಮಾಣಿಕದುಂಗುರಂ ಬಿೞ್ಪುದನಱಸಲ್ವೇಡಿ ಛಿದ್ರಕದ್ವಾರದ ತೂಂತನುರ್ಚಿ ನೀರಂ ಕಳೆದಾಗಳಿಂದ್ರನ ಭಂಡಾರಂ ತೆಱೆದಂತಪ್ಪ ಲೇಸಪ್ಪ ನಾನಾಮಣಿಯ ವಿಚಿತ್ರ ಭೂಷಣಂಗಳಂ ಪಲವುಮಂ ಕಂಡು ಮಹಾಶ್ಚರ್ಯಭೂತನಾಗಿ ನೋಡುತ್ತಿರ್ಪನ್ನೆಗಮಾರೋಗಿಸಲೆೞ್ತನ್ನಿ
ಕೇಳಿದನು. ಅದಕ್ಕೆ ಉತ್ತರವಾಗಿ “ಸ್ವಾಮಿ, ಅವನು ಬಹಳ ಸಾಧು, ನೀವು ಬಂದುದನ್ನು ಅವನು ತಿಳಿದಿಲ್ಲ. ಉಪ್ಪರಿಗೆಯ ಮೇಲೆ ಇದ್ದಾನೆ* ಎಂದು ಹೇಳಲು ದೂತರೊಡನೆ ಹೇಳಿ ಕಳುಹಿಸಿ ಅವನನ್ನು ಬರಮಾಡಿ ಎಂದನು. ಆಗ ತಾಯಿ ಯಶೋಭದ್ರೆ ಹೋಗಿ “ಮಗನೇ, ರಾಜರು ಬಂದಿದ್ದಾರೆ ಬಾ, ಹೋಗೋಣ* ಎಂದಳು. ಆಗ ಸುಕುಮಾರನು “ರಾಜರೆಂದರೆ ಯಾರು ? * ಎಂದು ಕೇಳಲು, ತಾಯಿಯು “ನಮ್ಮನ್ನು ಆಳುವವರು* ಎಂದಾಗ ಸುಕುಮಾರನು “ನಮ್ಮನ್ನು ಆಳುವವರೂ ಇರುವರೆ ? * ಎನ್ನುತ್ತ ಆಶ್ಚರ್ಯಪಟ್ಟನು. ತಾಯಿಯ ಮಾತನ್ನು ವಿರೋಸಲಾರದೆ ಬಂದನು. ಅವನನ್ನು ರಾಜನು ಕಂಡು “ಕಣ್ಣನ್ನು ಪಡೆದದ್ದು ಇಂದು ಸಫಲವಾಯಿತು* ಎಂದುಕೊಂಡುಪ್ರತ್ಯಕ್ಷವಾಗಿ ಮನ್ಮಥನನ್ನೇ ಅಪ್ಪಿಕೊಳ್ಳುವಂತೆ ಅವನನ್ನು ಅಪ್ಪಿಕೊಂಡು ಶ್ರೇಷ್ಠವಾದ ಆ ಹಾಸಿಗೆಯ ಮೇಲೆ ತನ್ನ ಜೊತೆಯಲ್ಲಿ ಕುಳ್ಳಿರಿಸಿದನು. ಆಗ ಸ್ವಜನರೂ ಸೇವಕರೂ ಬಿಳಿ ಸಾಸವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿಯ ಆಸನದಲ್ಲಿ ಒತ್ತಿದುದರಿಂದ ಸೊಂಟ ಅಲ್ಲಾಡಿಸಿದುದನ್ನೂ ದೀಪ ನೋಡಿದಾಗ ಕಣ್ನೀರು ಸುರಿವುದನ್ನೂ ಕಂಡು ಈತನಿಗೆ ರೋಗಗಳಿವೆಯಂದು ಭಾವಿಸಿಕೊಂಡಿದ್ದನು. ಅಷ್ಟರಲ್ಲಿ ‘ಸ್ನಾನಕ್ಕೆ ಏಳಿ, ಬನ್ನಿ’ ಎನ್ನಲು ‘ಹಾಗೆಯೇ ಮಾಡುವೆವು’ ಎಂದು ಸ್ನಾನ ಮಾಡಲು ಉದ್ಯುಕ್ತನಾಗಿ ದೇವಲೋಕದ್ದಕ್ಕೆ ಸಮಾನವಾದ ರತ್ನಮಯವಾದ ನೆಲಗಟ್ಟುಳ್ಳ ಕೆರೆಗೆ ಹೋಗಿ ಸ್ನಾನ ಮಾಡಿದನು. ಆಗ ತನ್ನ ಬೆರಳಿನಲ್ಲಿದ್ದ ಅಮೂಲ್ಯವಾದ ಉಂಗುರ ಬಿದ್ದು ಹೋಗಲು, ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು. ಆಗ ಅಲ್ಲಿ ದೇವೇಂದ್ರನ ಖಜಾನೆಯನ್ನೇ ತೆರೆದ ರೀತಿಯಲ್ಲಿ ಶ್ರೇಷ್ಟವಾದ ಬಗೆಬಗೆಯ ರತ್ನಗಳ ವಿಚಿತ್ರವಾದ ಹಲವು ಆಭರಣಗಳನ್ನು ಕಂಡು ಬಹಳ ಆಶ್ಚರ್ಯಪಟ್ಟವನಾಗಿ ನೋಡುತ್ತದ್ದನು. ಅಷ್ಷರಲ್ಲಿ ರಾಜನನ್ನು ಸುಕುಮಾರನನ್ನೂ ‘ಊಟಕ್ಕೆ
ಮೆಂದಾಗಳ್ ಪರಿಯಣದ ಮೊದಲೊಳ್ ಸುಕುಮಾರುಂ ಬರೆಸು ನಾನಾಪ್ರಕಾರದಿನಿಯವಪ್ಪುಣಿಸುಗಳನುಣುತ್ತಂ ಸುಕುಮಾರಸ್ವಾಮಿ ಆರ್ಧಾಹಾರಮಂ ನುಂಗುಗುಮರ್ಧಾಹಾರಮನುಗುೞ್ಗು ಮದಂ ನೋಡಿ ಇದುವುಮೊಂದು ಕುತ್ತಂ ಆಹಾರದ ಮೇಗರುಚಿಯೆಂದು ಬಗದುಣಿಸು ಸಮೆದ ಬೞಕ್ಕೆ ಗಂಧ ತಾಂಬೂಲ ಮಾಲ್ಯ ವಸ್ತ್ರಾಭರಣಂಗಳಂ ತಂದು ಕೊಟ್ಟಾಗವಂ ತೊಟ್ಟುಟ್ಟು ಪಸದನಂಗೊಂಡು ಸುಖಸಂಕಥಾವಿನೋದದಿಂದಿರ್ದೊಡೆ ಯಶೋಭದ್ರೆಯನರಸನಿಂತೆಂದು ಬೆಸಗೊಂಡನಬ್ಬಾ ಎಮ್ಮ ತಮ್ಮನ ಕಟಿಪ್ರದೇಶದ ರೋಗಕ್ಕಂ ಕಣ್ಣನೀರ್ ಬರ್ಪುದರ್ಕಂ ಅರುಚಿಗಮೇಕೆ ಮರ್ದಂ ಮಾಡಿಸಿದಿರಿಲ್ಲೆನೆ ದೇವಾ ಆತಂಗಿವು ಕುತ್ತಮಲ್ಲವು ಸೇಸೆಯಿಕ್ಕಿದ ಸರುಸಪಂಗಳೊತ್ತೆ ಸೈರಿಸಲಾಱಂ ಮತ್ತೆ ಅವ ಕಾಲಮುಂ ಮಾಣಿಕದ ಬೆಳಗಿನೊಳಿರ್ಪುದಱಂದು ಸೊಡರ ಬೆಳಗಿಂಗೆ ಸೈರಿಸದೆ ಕಣ್ಣ ನೀರ್ ಬರ್ಕುಂ ಮತ್ತಂ ಕಮಳ ನೀಳೋತ್ಪಳದೊಳ್ ವಾಸಿಸಿದಕ್ಕಿಯೊಳ್ ಕೂೞಂ ನುಂಗುಗುಮುೞದ ಕೂೞನುಗುೞ್ಗುಮದಱಂದೀತಂಗೀಯವಸ್ಥೆಗಳಾದುವೆನೆ ಕೇಳ್ದು ವಿಸ್ಮಯಂಬಟ್ಟು ಈತನ ಕ್ಷಣಮಾತ್ರದ ಭೋಗಕ್ಕಂ ಸುಖಕ್ಕಂ ಎಮ್ಮೆಲ್ಲಾ ಕಾಲಮರಸುತನಂ ಗೆಯ್ವಲ್ಲಿಯೊಳಪ್ಪ ಭೋಗೋಪಭೊಗಂಗಳ್
ಬನ್ನಿರಿ’ ಎಂದು ಕರೆಯಲು ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಉಣ್ಣುತ್ತ ಇರಲು, ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು, ಇನ್ನುಳಿದ ಅ ರ್ಧಾಂಶ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು ನೋಡಿ “ಇದು ಒಂದು ಬಗೆಯ ರೋಗ, ಊಟದ ಮೇಲೆ ರುಚಿಯಿಲ್ಲದುದು* ಎಂದು ಭಾವಿಸಿಕೊಂಡನು. ಊಟವಾದ ನಂತರ ಗಂಧ, ತಾಂಬೂಲ, ಹೂಮಾಲೆ, ಉಡಿಗೆ, ತೊಡಿಗೆಗಳನ್ನು ತಂದು ಕೊಡಲು, ಅವನ್ನು ತೊಟ್ಟು ಉಟ್ಟು ಅಲಂಕಾರ ಮಾಡಿಕೊಂಡು ಸಂತೋಷದ ಮಾತುಗಳ ವಿನೋದದಿಂದ ಇದ್ದರು. ಆಗ ಅರಸನು ಯಶೋಭದ್ರೆಯನ್ನು ಕುರಿತು ಹೀಗೆ ಪ್ರಶ್ನಿಸಿದನು: “ಅಮ್ಮಾ ನನ್ನ ತಮ್ಮನಾದ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ ? * ಎಂದು ಕೇಳಿದಾಗ ಆಕೆ “ಒಡೆಯರೆ, ಅವನಿಗೆ ಇವು ರೋಗಗಳಲ್ಲ. ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು. ಅಲ್ಲದೆ ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಅವನು ಇರುವುದರಿಂದ ದೀಪದ ಬೆಳಕಿಗೆ ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತದೆ. ಅದೂ ಅಲ್ಲದೆ ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನು ನುಂಗುತ್ತಿದ್ದನು. ಉಳಿದ ಅನ್ನವನ್ನು ಉಗುಳುತ್ತಿದ್ದನು. ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ* ಎಂದು ಹೇಳಿದಳು. ಅರಸನು ಇದನ್ನು ಕೇಳಿ ಆಶ್ಚರ್ಯಪಟ್ಟನು. “ಈತನು ಒಂದು ಕ್ಷಣದ ಭೋಗಕ್ಕೂ ಸುಖಕ್ಕೂ ನನ್ನ ಎಲ್ಲಾ ಕಾಲವೂ ಅರಸುತನ ನಡೆಸಿದಾಗ ಉಂಟಾದ ಭೋಗ – ಉಪಭೋಗಗಳು ಸಮಾನವಾಗವು. ಆದುದರಿಂದ ಲೋಕದಲ್ಲಿ
ದೊರೆಯಲ್ಲವದಱಂದೀ ಲೋಕದೊಳೀತನೆ ಪರಮಾರ್ಥಂ ಸುಖಿಯೆಂದೊಸೆದರಸನವಂತಿ ಸುಕುಮಾರನೆಂದು ಪೆಸರನಿಟ್ಟಂ ಯಶೋಭದ್ರೆಯುಮರಸಮನನನೇಕ ವಸ್ತುವಾಹನಂಗಳಿಂದಂ ಪೂಜಿಸಿ ಕೞಪಿದೊಳಿಂತು ಸುಕುಮಾರಸ್ವಾಮಿಗೆ ಸುಖದಿಂದಂ ಕಾಲಂ ಸಲೆ ಮತ್ತೊಂದು ದಿವಸಂ ಯಶೋಭದ್ರೆಯ ಭ್ರಾತರರಪ್ಪ ದಯಾಭದ್ರರೆಂಬ ರಿಸಿಯರ್ ಮುನ್ನಮವರ ಪಕ್ಕದೆ ಸೂರದತ್ತಂ ಧರ್ಮಂ ಕೇಳ್ದು ವೈರಾಗ್ಯಮಾಗಿ ಪುತ್ರಮುಖಂಗಂಡು ತಪಂಬಟ್ಟೊನಾತನ ಮಗನುಂ ರಿಸಿಯರಂ ಕಂಡಾಗಳೆ ತಪಂಬಡುಗುಮೆಂಬುದಂ ಮುನ್ನೆ ನೈಮಿತ್ತಿಕರಾದೇಶಂಗೆಯ್ದಿರ್ದರ್ ಮತ್ತಂ ದಯಾಭದ್ರರೆಂಬ ರಿಸಿಯರ್ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪ ದಿವ್ಯಜ್ಞಾನಿಗಳ್ ಸುಕುಮಾರಸ್ವಾಮಿಗೆ ನಾಲ್ಕುತಿಂಗಳುಮೈದುದಿವಸಮಾಯುಷ್ಯಪ್ರಮಾಣ ಮನಱದುಪಕಾರಾರ್ಥಮುಜ್ಜೇನಿಗೆ ವಂದು ಸುಕುಮಾರಸ್ವಾಮಿಯ ಮಾಡದ ಪೆಱಗಣ ನಂದನ ವನದೊಳಗಣ ಜಿನಾಲಯದೊಳಾಷಾಢ ಮಾಸದ ಚತುರ್ದಶಿಯ ದಿವಸದಂದು ಪಱವೊೞ್ತು ಬಂದು ಜೋಗುಗೊಂಡಿರ್ದರನ್ನೆಗಂ ವನಪಾಲಕರ್ ಪೋಗಿ ಯಶೋಭದ್ರೆಗೆ ರಿಸಿಯರ ಬರವಂ ಪೇೞ್ದೊಡಾಕೆಯುಂ ಬಂದು ದೇವರುಮಂ ರಿಸಿಯರುಮಂ ಬಂದಿಸಿ ಭಟ್ಟಾರಾ ನೀಮಿಲ್ಲಿಗೇಕೆ ಬಂದಿರಿಲ್ಲಿಂದಂ ಪೊಱವೊೞಲೊಳ್ ಪೆಱವುೞ ಬಸದಿಯಿಲ್ಲಾ ಎಂದೊಡೆ ಭಟ್ಟಾರರೆಂದರಬ್ಬಾ ನಿಡುವಯಣಂ ಬಂದು ಸೇದಗೆಟ್ಟೆಂತಾನುಮಿಲ್ಲಿಗೆಯಾಸತ್ತು ಜೋಗಿನ ಪೊೞ್ತಱೊಳೆಯ್ದಿ ಬಂದು
ನಿಜವಾಗಿಯೂ ಈತನೇ ಸುಖಿ* ಎಂದು ಪ್ರೀತಿಗೊಂಡವನಾಗಿ ಅರಸನು ಅವನಿಗೆ ‘ಅವಂತಿ ಸುಕುಮಾರ’ ಎಂದು ಹೆಸರನ್ನಿಟ್ಟನು. ಯಶೋಭದ್ರೆ ರಾಜನನ್ನು ಹಲವಾರು ವಿಧದ ವಸ್ತುಗಳಿಂದಲೂ ವಾಹನಗಳಿಂದಲೂ ಸತ್ಕರಿಸಿ ಕಳುಹಿಸಿದಳು. ಹೀಗೆ ಸುಕುಮಾರಸ್ವಾಮಿಗೆ ಕಾಲವು ಸುಖಮಯವಾಗಿ ಸಾಗುತ್ತಿತ್ತು. ಅನಂತರ ಒಂದು ದಿವಸ ಯಶೋಭದ್ರೆಯ ಸಹೋದರರಾದ ದಯಾಭದ್ರರೆಂಬ ಋಷಿಗಳು ಉಜ್ಜಯಿನಿಗೆ ಬಂದರು. ಹಿಂದೆ ಅವರ ಬಳಿಯಲ್ಲಿದ್ದು ಸೂರದತ್ತನು (ಸುಕುಮಾರನ ತಂದೆ) ಧರ್ಮಶ್ರವಣ ಮಾಡಿ, ವೈರಾಗ್ಯ ತಾಳಿ, ಮಗನು ಹುಟ್ಟಿದೊಡನೆ ತಪಸ್ಸಿಗೆ ತೆರಳಿದ್ದನು. ಆತನ ಮಗನಾದ ಸುಕುಮಾರನೂ ಋಷಿಗಳನ್ನು ಕಂಡ ಕೂಡಲೇ ತಪಸ್ಸಿಗೆ ತೆರಳುವನೆಂಬುದನ್ನು ಹಿಂದೆಯೇ, ಜ್ಯೋತಿಷ್ಯ ತಿಳಿದವರು ತಿಳಿಸಿದರು. ಆಮೇಲೆ ದಯಾಭದ್ರರೆಂಬ ಋಷಿಗಳು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತ, ದಿವ್ಯಜ್ಞಾನಿಗಳಾದ ಅವರು ಸುಕುಮಾರಸ್ವಾಮಿಗೆ ನಾಲ್ಕು ತಿಂಗಳು ಐದು ದಿವಸ ಮಾತ್ರ ಆಯುಷ್ಯವಿರುವುದನ್ನು ತಿಳಿದು ಉಪಕಾರ ಮಾಡುವುದಕ್ಕಾಗಿಯೇ ಉಜ್ಜಯಿನಿಗೆ ಬಂದರು. ಹಾಗೆ ಬಂದು ಸುಕುಮಾರಸ್ವಾಮಿಯ ಮನೆಯ ಹಿಂದಣ ಉದ್ಯಾನದೊಳಗಿರುವ ಜಿನಾಲಯದಲ್ಲಿ ಅಷಾಢಮಾಸದ ಚತುದರ್ಶಿಯ ದಿವಸ ಸಂಜೆ (ಹರೆ ಬಾರಿಸುವ ಹೊತ್ತು) ಬಂದು ಯೋಗಸ್ಥರಾಗಿದ್ದರು. ಅಷ್ಟರಲ್ಲಿ ಉದ್ಯಾನಪಾಲಕರು ಹೋಗಿ, ಋಷಿಗಳು ಬಂದ ಸಂಗತಿಯನ್ನು ಯಶೋಭದ್ರೆಗೆ ತಿಳಿಸಿದರು. ಆಕೆ ಬಂದು ಜಿನೇಂದ್ರರನ್ನೂ ಋಷಿಗಳನ್ನೂ ವಂದಿಸಿ ಋಷಿಗಳೊಡನೆ – “ಸ್ವಾಮೀ, ನೀವು ಈ ಸ್ಥಳಕ್ಕೆ ಯಾಕೆ ಬಂದಿರಿ? ಇಲ್ಲಿಗಿಂತ ಈ ಪಟ್ಟಣದ ಹೊರಗೆ ಬೇರೆ ಕಡೆ ಜಿನದೇವಾಲಯವಿರಲಿಲ್ಲವೆ? * ಎಂದು ಕೇಳಿದಳು. ಆಗ ಋಷಿಗಳು “ಅವ್ವಾ, ನಾವು ಬಹಳ ದೂರದಿಂದ ಪ್ರಯಾಣ

ಲೇಖಕರು:
ಪ್ರಕಾಶಕರು:

ಆಟಗಳಲ್ಲಿ ಗಣಿತ


ಏನು ಆಟಗಳಲ್ಲಿ ಗಣಿತವೇ?ನಮಗೆ ಗಣಿತದಲ್ಲಿ ಆಟಗಳು ಮಾತ್ರ ಗೊತ್ತು ಎಂದು ಮಾತ್ರ ಹೇಳಬೇಡಿರಿ. ನಮಗೆ ತಿಳಿದ ಹಾಗೆ ಎಲ್ಲ ಆಟಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳು ಮುಖ್ಯಪಾತ್ರ ವಹಿಸುತ್ತವೆ. ಈ ಲೇಖನದಲ್ಲಿ ಒಂದು ಪುರಾತನ ಆಟದಲ್ಲಿ ಗಣಿತದ ಪಾತ್ರದ ಬಗ್ಗೆ ವಿವರಗಳು ಇವೆ. ಇದು ಪುರಾತನ ಆಟವಾಗಿದ್ದು ಆಟಗಾರನ ಕೌಶಲ್ಯಗಳನ್ನು ಅವಲಂಬಿಸಿರುತ್ತದೆ. ಕಾರಣ ಮೊದಲಿನಿಂದಲೂ ಬಹಳ ಜನಪ್ರಿಯ ಆಟವಾಗಿದೆ. ಆ ಆಟವೇ ‘ಬ್ರಹ್ಮಾ ಟವರ್’ ಅಥವಾ ‘ಟಾವರ್ ಆಫ್ ಹೊಗೈ’.ಇದರ ಉಪಕರಣ ಸರಳವಾಗಿದ್ದು ಎಲ್ಲರೂ ತಯಾರಿಸಿ ಉಪಯೋಗಿಸಬಹುದು.
ಬ್ರಹ್ಮಾ ಟವರ್ ಉಪಕರಣದಲ್ಲಿ x yಒಂದು ಸಮತಲವಿದ್ದು ಸಮ ಅಂತರದಲ್ಲಿ 3ಗೂಟಗಳು ಇವೆ (1, 2 ಮತ್ತು 3). ಬೇರೆ ಬೇರೆ ತ್ರಿಜ್ಯಗಳುಳ್ಳ ಬಿಲ್ಲೆಗಳು ಇರುತ್ತವೆ. (A, B, C, …) ಈ ಉಪಕರಣ ಸರಳವೆನಿಸಬಹುದು. ಆದರೆ ಆಟ ಮಾತ್ರ ಬಹಳ ಕೌಶಲವನ್ನು ಬೇಡುತ್ತದೆ.  ಈ ಆಟವನ್ನು ಅನೇಕರು ಕೂಡಿ ಆಟವಾಡಬಹುದು. ಯಾರು 1ನೇಗೂಟದಲ್ಲಿಯ ಎಲ್ಲ ಬಿಲ್ಲೆಗಳನ್ನು ಅತಿ ಕಡಿಮೆ ಚಲನೆಗಳಲ್ಲಿ 3ನೇ ಗೂಟಕ್ಕೆ ವರ್ಗಾಯಿಸುತ್ತಾರೋ ಅವರೇ ಆಟವನ್ನು ಗೆಲ್ಲುತ್ತಾರೆ. ಈ ಆಟವಾಡುವಾಗ ಕೆಳಗಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
  • ಒಂದು ಚಲನೆಯಲ್ಲಿ ಒಂದೇ ಒಂದು ಬಿಲ್ಲೆಯನ್ನು ಗೂಟದಿಂದ ಗೂಟಕ್ಕೆ ವರ್ಗಾಯಿಸಬಹುದು.
  • ವರ್ಗಾಯಿಸುವ ಸಮಯದಲ್ಲಿ ಹೆಚ್ಚು ತ್ರಿಜ್ಯವುಳ್ಳ ಬಿಲ್ಲೆಯ ಮೇಲೆ ಕಡಿಮೆ ತ್ರಿಜ್ಯವುಳ್ಳ ಬೆಲೆಯನ್ನು ಇಡಬೇಕು. ಅಂದರೆ, ಕಡಿಮೆ ತ್ರಿಜ್ಯದ ಬಿಲ್ಲೆಯ ಮೇಲೆ ಹೆಚ್ಚು ತ್ರಿಜ್ಯವುಳ್ಳ ಬಿಲ್ಲೆಯನ್ನು ಇಡಬಾರದು.
ಈ ನಿಯಮಗಳನ್ನು ಪಾಲಿಸಿ ಯಾರು ಕಡಿಮೆ ಚಲನೆಗಳಲ್ಲಿ ಎಲ್ಲ ಬಿಲ್ಲೆಗಳನ್ನೂ 1ನೇ ಗೂಟದಿಂದ 3ನೇ ಗೂಟಕ್ಕೆ ವರ್ಗಾಯಿಸುತ್ತಾರೋ ಅವರೇ ಆಟವನ್ನು ಗೆಲ್ಲುತ್ತಾರೆ. ಈ ಆಟದಲ್ಲಿ ಸಮಸ್ಯೆಗಳು ಇವೆ. ಮೊದಲನೆಯದು ಎಷ್ಟು ಚಲನೆಗಳಲ್ಲಿ ವರ್ಗಾಯಿಸಲು ಸಾಧ್ಯ ಹಾಗೂ ಎರಡನೆಯ ಸಮಸ್ಯೆಯೆಂದರೆ, ಯಾವರೀತಿಯಲ್ಲಿ ಚಲನೆಗಳು ಇರುತ್ತವೆ ಎಂಬುದು. ಈ ಎರಡು ಸಮಸ್ಯೆಗಳನ್ನೂ ನಾವು ಗಣಿತದ ಪರಿಕಲ್ಪನೆಗಳನ್ನು ಉಪಯೋಗಿಸಿ ಬಗೆಹರಿಸಿಕೊಳ್ಳಬಹುದು.
ಮೊದಲನೆಯದಾಗಿ, ಚಲನೆಗಳ ಸಂಖ್ಯೆಯನ್ನು ಕಂಡುಹಿಡಿಯಲು (2n-1)ಸೂತ್ರವನ್ನು ಉಪಯೋಗಿಸಬಹುದು. ಇಲ್ಲಿ ‘n’ ಬಿಲ್ಲೆಗಳ ಸಂಖ್ಯೆಯನ್ನು ಸೂಚಿಸುತ್ತದೆ. ಉದಾಹರಣೆಗಾಗಿ ಬಿಲ್ಲೆಯ ಸಂಖ್ಯೆ 3ಇದ್ದರೆ, ಚಲನೆಗಳ ಸಂಖ್ಯೆ = (23-1) = 8-7 = 7 ಆಗುತ್ತದೆ. ಅದರಂತೆ, ಬಿಲ್ಲೆಗಳ ಸಂಖ್ಯೆ 5ಆಗಿದ್ದರೆ.  ಚಲನೆಗಳ ಸಂಖ್ಯೆ = 25-1, 32 – 1 = 31ಆಗುತ್ತದೆ. ಎರಡನೆಯದಾಗಿ ಚಲನೆಯ ಕ್ರಮಗಳನ್ನು ಕಂಡುಕೊಳ್ಳಲು ನಾವು ದ್ವಿಮಾನ ಸಂಖ್ಯೆಗಳ ಕಲ್ಪನೆಗಳನ್ನು ಉಪಯೋಗಿಸಬೇಕು. ಅಂದರೆ ಎಷ್ಟು ಚಲನೆಗಳು ಇರುತ್ತವೆಯೋ ಆ ಸಂಖ್ಯೆಗಳನ್ನು ದ್ವಿಮಾನ ಸಂಖ್ಯೆಯಾಗಿ ಪರಿವರ್ತಿಸಿ ಕೆಳಗಿನಂತೆ ಪಟ್ಟಿರೂಪದಲ್ಲಿ ಹಚ್ಚಬೇಕು. ಉದಾಹರಣೆಗಾಗಿ 3ಬಿಲ್ಲೆಗಳು ಇದ್ದಾಗ ಚಲನೆಗಳ ಸಂಖ್ಯೆ 7ಆಗುತ್ತದೆ.
ಚಲಿಸುವ ಬಿಲ್ಲೆಯನ್ನು ಆಯ್ಕೆ ಮಾಡುವಾಗ ಪರಿವರ್ತನೆಗೊಂಡು ದ್ವಿಮಾನ ಸಂಖ್ಯೆಯ ಬಲದಿಂದ ಎಡಕ್ಕೆ ಮೊದಲು ಯಾವ ಬಿಲ್ಲೆ 1ನ್ನು ಹೊಂದಿರುವನೋ ಆ ಬಿಲ್ಲೆಯನ್ನು ಚಲಿಸುವ ಆಯ್ಕೆ ಮಾಡಬೇಕು. ನಂತರ ಯಾವ ಗೂಟದಿಂದ ಯಾವ ಗೂಟಕ್ಕೆ ಎಂಬುದನ್ನು ಕಂಡುಕೊಳ್ಳಬಹುದು. ಈಗ ನಿಮಗೆ ಅರ್ಥವಾಗಿರಬಹುದು ಆಟವು ಎಷ್ಟು ಸರಳವಾಗಿದೆ ಹಾಗೂ ಕೂತೂಹಲವನ್ನುಂಟು ಮಾಡುತ್ತದೆ ಎಂದು.

ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. 1ನೇ ಗೂಟದಲ್ಲಿಯ ಬಿಲ್ಲೆಗಳ ಸಂಖ್ಯೆ 4 (A, B, C, D)ಇದ್ದರೆ, ಈ ಆಟವನ್ನು ಆಡುವ ಕ್ರಮವನ್ನು ನೋಡೋಣ. ಮೊದಲನೆಯದಾಗಿ ಈ ಆಟದಲ್ಲಿ (24-1) = 16-1 = 15ಚಲನೆಗಳು ಇರುತ್ತವೆ. ಎರಡನೆಯದಾಗಿ ಚಲನೆಗಳ ಕ್ರಮವನ್ನು ಕಂಡುಕೊಳ್ಳಬಹುದು.
ಈಗ ಆಟದ ಬಗ್ಗೆ ಆಸಕ್ತಿ ಹೆಚ್ಚಾಗಿರಬಹುದು. ಅದಕ್ಕಿಂತ ಮುಖ್ಯವಾದದ್ದು ‘ಟವರ್ ಆಫ್ ಹೊಗೈ’ದ ಇತಿಹಾಸ. ಬಹಳ ರಂಜನೀಯವಾದದ್ದು. ವಾರಣಾಸಿಯ ಒಂದು ಪ್ರಸಿದ್ಧ ಗುಡಿಯ ಗುಮ್ಮಟದಲ್ಲಿ ಒಂದು ಹಿತ್ತಾಳೆಯ ಪಟ್ಟಿ ಇದೆ. ಅದರಲ್ಲಿ ವಜ್ರದ 3ಗೂಟಗಳನ್ನು ಸಮ ಅಂತರದಲ್ಲಿ ಸ್ಥಿರಗೊಳಿಸಲಾಗಿದೆ. ಒಂದೊಂದು ಗೂಟವು 1ಮೊಳದಷ್ಟು ಎತ್ತರವಾಗಿದ್ದು ಕಡಲೆ ಕಾಳಿನಷ್ಟು ದಪ್ಪವಾಗಿವೆ. ಜೀವಿಗಳ ಉಗಮಕ್ಕಿಂತ ಮೊದಲೇ ಬ್ರಹ್ಮನು ಬೇರೆ ಬೇರೆ ತ್ರಿಜ್ಯಗಳುಳ್ಳ 64ಬಂಗಾರದ ಬಿಲ್ಲೆಗಳನ್ನು ತ್ರಿಜ್ಯಗಳ ಇಳಿಕೆ ಕ್ರಮದಲ್ಲಿ ಜೋಡಿಸಿದ್ದಾನೆ ಎಂಬ ಪ್ರತೀತಿ ಇದೆ.

ಆದ್ದರಿಂದ ಇದಕ್ಕೆ ‘ಬ್ರಹ್ಮಾ ಟವರ್’ಎಂದು ಕರೆಯುತ್ತಾರೆ.  ಇಷ್ಟಕ್ಕೇ ಮುಗಿಯಲಿಲ್ಲ ಇದರ ರಂಜನೀಯ ಸುದ್ದಿ. 1ೊಸೆಕೆಂಡಿಗೆ 1ಬಿಲ್ಲೆಯಂತೆ 1ನೇ ಗೂಟದಿಂದ 3ನೇ ಗೂಟಕ್ಕೆ ಎಲ್ಲ 64ಬಿಲ್ಲೆಗಳನ್ನು ವರ್ಗಾವಣೆ ಮಾಡಿ ಮುಗಿಸುವ ಸಮಯದಲ್ಲಿ ಜಗತ್ತು ನಾಶವಾಗುತ್ತದೆ ಎಂಬ ಕಥೆ ಬೇರೆ ಸೇರಿಕೊಂಡಿದೆ. ಅದೇ ಸಮಯದಲ್ಲಿ ಗುಡಿಯು ನೆಲಸಮವಾಗುತ್ತದೆಯಂತೆ. ಈಗ 64ಬಿಲ್ಲೆಗಳು ಇರುವುದರಿಂದ ಉಂಟಾಗುವ ಚಲನೆಗಳ ಸಂಖ್ಯೆ 264 - 1 = 18,446,744,073,709,551,615.ಕರಾರಿನಂತೆ 1ಸೆಕೆಂಡಿಗೆ 1 ರಂತೆ ನಿರಂತರವಾಗಿ ಬಿಲ್ಲೆಗಳನ್ನು ವರ್ಗಾವಣೆ ಮಾಡಲು ಹಲವು ಸಾವಿರ ಮಿಲಿಯನ್ ವರ್ಷಗಳು ಬೇಕಾಗುತ್ತವೆ.
ನೋಡಿ ಗಣಿತದ ಉಪಕಾರದ ಸ್ಮರಣೆಯನ್ನು ಮಾಡಬೇಕು. ಇಲ್ಲದಿದ್ದರೆ ಈ ಆಟವನ್ನು ಸುಲಭವಾಗಿ ಆಟವಾಡಲು ಸಾಧ್ಯವಾಗುತ್ತಿರಲಿಲ್ಲ. ಏನು ಒಂದು ಆಟವಾಡಲು ಇಷ್ಟು ವರ್ಷಗಳೇ ಎಂದು ಪ್ರಶ್ನೆಯನ್ನು ಮಾತ್ರ ಕೇಳಬೇಡಿರಿ. ಈ ಆಟ ಮನರಂಜನೆಗಾಗಿ.
ಪುಸ್ತಕ:
ಲೇಖಕರು:
ಪ್ರಕಾಶಕರು:

ಮರವೇರುವ ಮೀನುಗಳು


‘ಮೀನು’ ಎಂದಾಕ್ಷಣ ನೆನಪಿಗೆ ಬರುವುದು ನದಿ, ಸರೋವರ, ಕೊಳ ಅಥವಾ ಸಮುದ್ರಗಳು. ಏಕೆಂದರೆ ನೀರು ಅವುಗಳ ವಾಸಸ್ಥಾನ. ನೀರನ್ನು ಬಿಟ್ಟು ಅರ್ಧ ನಿಮಿಷವೂ ಅವು ಬದುಕಿರಲಾರವು. ಆದರೆ ನೀರನ್ನು ಬಿಟ್ಟು ನೆಲದ ಮೇಲೆ ನಡೆದು, ಆದರಲ್ಲೂ ಮರವೇರಿ ಹಾಯಾಗಿ ಕುಳಿತುಕೊಳ್ಳುವ ಮೀನುಗಳಿವೆ ಎಂದರೆ? ನಂಬುವುದು ತುಸು ಕಷ್ಟವೇ ಆದರೂ ಇದು ನಿಸರ್ಗ ಸತ್ಯ.
ಸಾಮಾನ್ಯವಾಗಿ ಪೆರಿಯೊಪ್‌ಥಲ್ಮಸ್ (Periophthalmus) ಪ್ರಭೇದಕ್ಕೆ ಸೇರಿದ ಈ ಮೀನುಗಳನ್ನು ಮಡ್ ಸ್ಕಿಪರ್ (Mud skipper) ಎಂದು ಕರೆಯಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ‘Mud’ ಎಂದರೆ ರಾಡಿ ಹಾಗೂ ‘Skip’ ಎಂದರೆ ಜಿಗಿಯುತ್ತ ಸಾಗು ಎಂದರ್ಥ. ಹೆಸರಿಗೆ ತಕ್ಕಂತೆ ಈ ಮೀನು ಸಮುದ್ರ ಹಾಗೂ ನದಿಗಳು ಸೇರುವ ಅಳಿವೆ ಪ್ರದೇಶದಲ್ಲಿ, ಉಬ್ಬರ ಇಳಿತವಿರುವ ವಲಯಗಳಲ್ಲಿ ಮೆದು ಮಣ್ಣಿನಲ್ಲಿ ಕುಂಟುತ್ತ, ತೆವಳುತ್ತ ಸಾಗುವುದಲ್ಲದೇ, ಸಮೀಪದಲ್ಲಿರುವ ಗಿಡವನ್ನೇರಿ, ಕುಳಿತುಕೊಳ್ಳುತ್ತವೆ. ಕೆಲವೊಮ್ಮೆ ಶತ್ರುಗಳಿಂದ ತಪ್ಪಿಸಿಕೊಳ್ಳಲು ಜಿಗಿಯುವ ಸಾಮರ್ಥ್ಯವೂ ಇವುಗಳಿಗಿದೆ.
ಇವು ನೀರು ಮತ್ತು ನೆಲ ಎರಡರಲ್ಲೂ ಬದುಕಬಲ್ಲವಾದರೂ, ಕಪ್ಪೆಗಳಂತೆ ಉಭಯವಾಸಿಗಳಲ್ಲ. ಬದಲಿಗೆ ಮೀನುಗಳ ಗುಂಪಿಗೆ ಸೇರಿದವುಗಳು. ನೀರಿನಲ್ಲಿ ಉಳಿದ ಮೀನುಗಳಂತೆ ಬದುಕುವ ಇವು ನೆಲದ ಮೇಲೆ ತಮ್ಮ ಈಜುರೆಕ್ಕೆಗಳನ್ನೇ ಕಾಲುಗಳಾಗಿ ಬಳಸಿಕೊಳ್ಳುತ್ತವೆ. ನೀರಿನಿಂದ ಹೊರಗಿರುವಾಗ ಇವುಗಳ ಚರ್ಮದ ಕೆಳಗಿರುವ ರಕ್ತನಾಳಗಳಲ್ಲಿ ನೇರವಾಗಿ ವಾತಾವರಣದ ಆಕ್ಸಿಜನ್ ಪ್ರವೇಶಿಸುತ್ತದೆೆ ಹಾಗೂ ಕಾರ್ಬನ್ ಡೈಆಕ್ಸೈಡ್ ಹೊರದೂಡಲ್ಪಡುತ್ತವೆ.

ಈ ಮೀನುಗಳಿಗೆ ಚೂಪಾದ ಹಲ್ಲುಗಳಿವೆ. ಹುಳುಹುಪ್ಪಟೆಗಳನ್ನು ತಿಂದು ಬದುಕುತ್ತವೆ. ಇವುಗಳಲ್ಲಿ ಕೆಲವು ನೀರಿನಲ್ಲಿಯ ಶೈವಲಗಳನ್ನು (algae), ಕೊಳೆತ ಎಲೆಗಳನ್ನು ಸಹ ತಿನ್ನುತ್ತವೆ.
ತೇವಯುಕ್ತ ಮೆದು ಮಣ್ಣಿನಲ್ಲಿ ಬಿಲಗಳನ್ನು ನಿರ್ಮಿಸಿ ಅವುಗಳಲ್ಲಿ ಮೊಟ್ಟೆಯನ್ನಿಡುವ ಈ ಮೀನುಗಳು ವಾಯುಮಾಧ್ಯಮದ ಮೂಲಕ ಶಬ್ದವನ್ನು ಗ್ರಹಿಸಬಲ್ಲವು. ಇವುಗಳ ಇನ್ನೊಂದು ವಿಶೇಷತೆಯೆಂದರೆ ಸುತ್ತಲೂ ದೃಷ್ಟಿ ಹಾಯಿಸಲು ಅನುಕೂಲವಾಗುವಂತೆ ಇವುಗಳ ತಲೆಯ ಮೇಲಿರುವ ಕಣ್ಣುಗಳು. ವಿಚಿತ್ರವೆಂದರೆ ತನ್ನ ಕಣ್ಣುಗಳನ್ನು ಮಿಟುಕಿಸಬಲ್ಲ ಏಕೈಕ ಮೀನು, ಈ ಪೆರಿಯೋಪ್‌ಥಲ್ಮಸ್!
ಪುಸ್ತಕ:
ಲೇಖಕರು:
ಪ್ರಕಾಶಕರು:

ಹಾವಿನ ಹಾಡು


- ಪಂಜೆ ಮಂಗೇಶ ರಾವ್

ನಾಗರ ಹಾವೆ! ಹಾವೊಳು ಹೂವೆ!
ಬಾಗಿಲ ಬಿಲದಲಿ ನಿನ್ನಯ ಠಾವೆ?
ಕೈಗಳ ಮುಗಿವೆ, ಹಾಲನ್ನೀವೆ
ಬಾ ಬಾ ಬಾ ಬಾ ಬಾ ಬಾ ಬಾ ಬಾ
ಹಳದಿಯ ಹೆಡೆಯನು ಬಿಚ್ಚೋ ಬೇಗಾ!
ಹೊಳಹಿನ ಹೊಂದಲೆ ತೂಗೋ, ನಾಗಾ!
ಕೊಳಲನ್ನೂದುವೆ ಲಾಲಿಸು ರಾಗಾ!
ನೀ ನೀ ನೀ ನೀ ನೀ ನೀ ನೀ ನೀ
ಎಲೆ ನಾಗಣ್ಣ, ಹೇಳೆಲೊ ನಿನ್ನಾ
ತಲೆಯಲಿ ರನ್ನವಿಹ ನಿಜವನ್ನಾ!
ಬಲುಬಡವಗೆ ಕೊಪ್ಪರಿಗೆಯ ಚಿನ್ನಾ
ತಾ ತಾ ತಾ ತಾ ತಾ ತಾ ತಾ ತಾ
ಬರಿಮೈ ತಣ್ಣಗೆ, ಮನದಲಿ ಬಿಸಿಹಗೆ,
ಎರಡೆಳೆ ನಾಲಗೆ ಇದ್ದರು ಸುಮ್ಮಗೆ.
ಎರಗುವೆ ನಿನಗೆ, ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ ಪೋ ಪೋ ಪೋ

ಇದೇನಾ ಪ್ರೇಮ...

ಬಳಿ ಬಂದಾಗ ಬೇಡ ಅನ್ನುತ್ತದೆ.
ದೂರವಾದಾಗ ಸನಿಹ ಇರಲ್ಲೆನ್ನುತ್ತದೆ
ಇದೇನಾ ಪ್ರೇಮ...
 
ಸುಮ್ಮನಿದ್ರೆ ಅವಳದೇ ಚಿಂತೆ.
ಮಾತನಾಡಿದ್ರು ಅವಳದೆ ನೆನಪು
ಇದೇನಾ ಪ್ರೇಮ...
 
ಮದುವೆಯಾಗಿ ಎರಡು ವರ್ಷಗಳೆ
ಕಳೆದಿವೆ. ಇನ್ನು ಹೋಗಿಲ್ಲ ಸೆಳೆತ.
ದಿನೇ..ದಿನೇ ಪ್ರೀತಿ ಹೆಚ್ಚುತಿದೆ.
ಇದೇನಾ ಪಕ್ವ ಪ್ರೇಮ...
 
ಮರೆಯಲಾಗದು. ಸಿಟ್ಟು ಹೋಗದು.
ಒಲವು ಕಡಿಮೆಯಾಗದು. ಇದೇನಾ
ನಿಜ ಪ್ರೀತಿ...ಇದೇನಾ ನೈಜ ನಲುಮೆ..?
 
- ರೇವನ್
 
 
 
ಯಾರದೋ ನಗುವಿಗೆ 
    ಮನಸ್ಸು ಅರಳಲಿಲ್ಲ...
ಯಾರದೋ ಅಳುವಿಗೆ
     ಮನಸ್ಸು ಕರಗಲಿಲ್ಲ....
ಯಾರದೋ ಸ್ನೇಹಕ್ಕೆ 
    ಮನಸ್ಸು ಸೋಲಲಿಲ್ಲ...
        ಗೆಳತಿ.....
ನಿನ್ನ  ತುಂಟಾಟದ  ಮನಸ್ಸಿಗೆ 
     ಮಾತ್ರ  ಸೋತಿದೆ....  
( ನನ್ನ ಸ್ನೇಹಿತೆ --ಅರಾಧನಳಿಗೆ)
 

ಅಂತರಜಾಲಾಡಿ

ಅಂತರಜಾಲಾಡಿ
ಆರೋಗ್ಯವೇ ಭಾಗ್ಯ. ಇದರಲ್ಲಿ ಅನುಮಾನವಿಲ್ಲ. ಅಂತರಜಾಲದಲ್ಲಿ ಆರೋಗ್ಯದ ಬಗ್ಗೆ ಹುಡುಕಾಡಿದರೆ ಬೇಕಾದಷ್ಟು ತಾಣಗಳು ಸಿಗುತ್ತವೆ. ಉದಾಹರಣೆಗೆ www.healthweb.org. ಇದು ಆರೋಗ್ಯದ ಬಗೆಗಿನ ಒಂದು ಪೋರ್ಟಲ್. ಲೇಖನಗಳು ಮತ್ತು ಇತರ ತಾಣಗಳಿಗೆ ಸೂಚಿಗಳು ಇಲ್ಲಿವೆ. ಇದೇ ರೀತಿಯ ಮತ್ತೊಂದು ತಾಣ: www.webmd.com.
ಡೌನ್‌ಲೋಡ್
ಸಂಪೂರ್ಣ ಉಚಿತ ಪದಸಂಸ್ಕಾರಕ (word-processor) ಬೇಕೆ? www.abisource.com ತಾಣಕ್ಕೆ ಭೇಟಿ ನೀಡಿ AbiWord ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ. ಇದರ ಸುಧಾರಣೆಗೆ ನೀವೂ ಕೈಜೋಡಿಸಬಹುದು. ಯಾವ ರೀತಿಯಲ್ಲಿ ಎಂಬುದನ್ನು ತಾಣದಲ್ಲಿ ವಿವರಿಸಲಾಗಿದೆ.
ಶಾರ್ಟ್‌ಕಟ್
ವಿಂಡೋಸ್ ಎಕ್ಸ್‌ಪಿ ಮತ್ತು ಆಫೀಸ್ ಎಕ್ಸ್‌ಪಿಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿರುವುದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿರಬಹುದು. ಇವುಗಳಲ್ಲಿರುವ ವರ್ಡ್ ಮತ್ತು ಎಕ್ಸೆಲ್‌ಗಳಲ್ಲಿ ಕನ್ನಡದ ಅಂಕೆಗಳನ್ನು ಉಪಯೋಗಿಸಬೇಕೆ? ಉದಾಹರಣೆಗೆ ೧ ಎಂಬ ಅಂಕೆ ಬೇಕಿದ್ದಲ್ಲಿ Ctrl, Alt ಮತ್ತು ೧ ಕೀಲಿಗಳನ್ನು ಒಟ್ಟಿಗೆ ಒತ್ತಿ.
e – ಸುದ್ದಿ
ಚಿತ್ರವೊಂದನ್ನು ಡಿಜಿಟಲ್ ಮಾದರಿಯಲ್ಲಿ ಒಂದು ಅಣುವಿನಲ್ಲಿ ಶೇಖರಿಸಿಡುವುದರಲ್ಲಿ ಅಮೇರಿಕಾದ ಓಕ್ಲಹಾಮ ವಿಶ್ವವಿದ್ಯಾಲಯದ ವಿeನಿಗಳು ಯಶಸ್ವಿಯಾಗಿದ್ದಾರೆ. ದ್ರವಸ್ಫಟಿಕದ ಅಣುವಿನ ೧೯ ಜಲಜನಕದ ಪರಮಾಣುಗಳು ಚಿತ್ರವೊಂದರ ೧೦೨೪ ಬಿಟ್ ಮಾಹಿತಿಯನ್ನು ಶೇಖರಿಸಿಡಬಲ್ಲುದು ಎಂದು ಪತ್ತೆಹಚ್ಚಿದ್ದಾರೆ. ಚಿತ್ರವೊಂದನ್ನು ಹಲವಾರು ಅಡ್ಡ ಮತ್ತು ನೀಟ ಕೊಯ್ತಗಳನ್ನಾಗಿಸಿದಾಗ ಸಿಗುವ ಪ್ರತಿಯೊಂದು ಚುಕ್ಕಿಯನ್ನು ಪಿಕ್ಸೆಲ್ ಎಂಬ ಹೆಸರಿನಿಂದ ಕರೆಯುತ್ತಾರೆ. ೩೨ x ೩೨ ಪಿಕ್ಸೆಲ್ ಗಾತ್ರದ ಚಿತ್ರವನ್ನು ಒಂದು ಅಣುವಿನಲ್ಲಿ ಶೇಖರಿಸಬಹುದು. ಈ ಹೊಸ ತಂತ್ರeನಕ್ಕೆ “ಮೊಲೆಕ್ಯೂಲರ್ ಫೋಟೋಗ್ರಾಫಿ” ಎಂದು ಹೆಸರಿಡಲಾಗಿದೆ. ಭವಿಷ್ಯದಲ್ಲಿ ಗುಪ್ತಚರರು ಬಳಸುವ ಕ್ಯಾಮರಾಗಳು ಅತಿ ಚಿಕ್ಕವಾಗಿ ಅಂಗಿಯ ಗುಂಡಿಯೊಳಗಡೆ ಕುಳಿತಿರುವ ಸಾಧ್ಯತೆಗಳಿವೆ.
e-ಪದ
ಸಿ.ಪಿ.ಯು. (C.P.U.=Cental Processing Unit): ಕೇಂದ್ರ ಸಂಸ್ಕಾರಕ. ಇದು ಗಣಕದ ಮಿದುಳು ಇದ್ದಂತೆ. ಎಲ್ಲಾ ಸಂಸ್ಕರಣೆಗಳೂ ನಡೆಯುವ ಗಣಕದ ಮುಖ್ಯಭಾಗ. ಆದೇಶಗಳನ್ನು ಅರ್ಥೈಸುವ, ಸೂಚನೆಗಳನ್ನು ಕಾರ್ಯರೂಪಕ್ಕೆ ತರಲು ಅವಶ್ಯಕವಾಗಿರುವ ವಿದ್ಯುನ್ಮಂಡಲಗಳನ್ನು ಹೊಂದಿರುವ ಘಟಕ. ಉದಾ.: ಇಂಟೆಲ್ ಪೆಂಟಿಯಮ್-IV, ಎಎಂಡಿ ಆತ್ಲಾನ್.
ಕಂಪ್ಯೂತರ್ಲೆ
ಗಣಕವಾಡುಗಳು: ಕನ್ನಡದ ಖ್ಯಾತ ಕವಿಗಳ ಹಾಡುಗಳನ್ನು ತಿರುಚಿದಾಗ-
“ಕೀಲಿಮಣೆಯ ಕುಟ್ಟಿಯೇ ಕಲಿತೆನೆಂಬೊಂದಗ್ಗಳಿಕೆ” (ಕುಮಾರವ್ಯಾಸ).
“ವಿದ್ಯುದೋಲೆ ಬಂದಿದೆ ನಮ್ಮ ಪದುಮನಾಭನದು” (ಶ್ರೀ ಪುರಂದರದಾಸರು).
“ಹೊಸತು ಗಣಕದಲಿ ನಿನ್ನ ಹಳೆಯ ನುಡಿಯ ಕುಟ್ಟು” (ಮಂಜೇಶ್ವರ ಗೋವಿಂದ ಪೈ).
“ಕುಟ್ಟುವೆವು ನಾವು ಹೊಸ ಕೀಲಿಮಣೆಯೊಂದನು” (ಗೋಪಾಲಕೃಷ್ಣ ಅಡಿಗ).
“ವೈರಸ್ಸೋ, ವರ್ಮೋ, ಬಗ್ಗೋ ತಡೆಯೇನು ಎಲ್ಲವೂ ಬರಲೆಂದು ಸ್ವಾಗತಿಸಿದೆ” (ಕಯ್ಯಾರ ಕಿಂಞಣ್ಣ ರೈ).
“ಬ್ರೌಸರಿನ ಗುಂಡಿಯೊತ್ತಿ ಒಳಗೆ ಬಾ ವೀಕ್ಷಕನೆ ಶಿಲೆಯಲ್ಲವೀ ಜಾಲವು ಮಾಹಿತಿಯ ಭಂಡಾರವು” (ಕುವೆಂಪು).
“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಆನ್‌ಲೈನ್ ಆಗಿರು” (ಕುವೆಂಪು).
- ಡಾ. ಯು. ಬಿ. ಪವನಜ

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೫


ಒಂದು ಸೊನ್ನೆ – ೯ (೧೦-೧೦-೨೦೦೩)

ನುಡಿದಂತೆ ನಡೆಯದವರು

ಒಂದು ಒಳ್ಳೆಯ ಉದ್ದೇಶ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಉತ್ತಮ ಕೆಲಸ ಮಾಡಲು ಆರಂಭಿಸಿ ಅದನ್ನು ಎಲ್ಲರೂ ಹೊಗಳಲು ಪ್ರಾರಂಭಿಸಿ ಈ ಹೊಗಳಿಕೆಯ ಮತ್ತು ತಲೆಗೇರಿ, ತಾನೆ ಸರ್ವಸ್ವ, ತಾನು ಮಾಡಿದ್ದೆಲ್ಲ ಸರಿ ಎಂಬ ಭಾವನೆಯಿಂದ, ಆರಂಭದ ಉದ್ದೇಶವನ್ನು ಮರೆತು ಇನ್ನೇನೋ ಮಾಡುವವವರನ್ನು ನಾವು ಸಮಾಜದಲ್ಲಿ ಆಗಾಗ ಅಲ್ಲಲ್ಲಿ ಕಾಣುತ್ತೇವೆ. ಈ ಸಾಲಿಗೆ ಹೊಸತಾಗಿ ಸೇರ್ಪಡೆಯಾಗಿರುವುದು ಕನ್ನಡ ಗಣಕ ಪರಿಷತ್ತು (ಕಗಪ).
೧೯೯೬ನೆ ಇಸವಿಯ ಡಿಸೆಂಬರ್ ತಿಂಗಳಲ್ಲಿ ಕಗಪದ ಬೀಜ ಬಿತ್ತಲಾಯಿತು. ಕನ್ನಡ ತಂತ್ರಾಂಶಗಳಲ್ಲಿ ಇಲ್ಲದಿದ್ದ ಏಕರೂಪತೆ ಕಗಪದ ಉಗಮಕ್ಕೆ ನಾಂದಿ. ಹಲವಾರು ತಂತ್ರಾಂಶಗಳು ಆಗ ಪ್ರಚಲಿತವಿದ್ದವು. ಒಂದು ತಂತ್ರಾಂಶದಲ್ಲಿ ತಯಾರಿಸಿದ ಫೈಲನ್ನು ಇನ್ನೊಂದು ತಂತ್ರಾಂಶ ಬಳಸಿ ತೆರೆಯುವುದು ಆಗುತ್ತಿರಲಿಲ್ಲ. ಇದಕ್ಕೆ ಕಾರಣ ಒಬ್ಬೊಬ್ಬರೂ ಒಂದೊಂದು ಸಂಕೇತ ರೂಪಿಸಿಕೊಂಡಿದ್ದು. ಒಂದು ಏಕರೂಪತೆ ಇರದಿದ್ದುದು ಗಣಕಗಳಲ್ಲಿ ಕನ್ನಡದ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿತ್ತು. ಈ ತೊಂದರೆಯನ್ನು ಮನಗಂಡ ಕೆಲವು ಕನ್ನಡ ಭಾಷಾಭಿಮಾನಿಗಳು ಮತ್ತು ಗಣಕ ತಜ್ಞರು ಒಂದಾಗಿ ಏಕರೂಪತೆ ಬಗ್ಗೆ ಕೆಲಸ ಮಾಡತೊಡಗಿದರು.
ಸರಕಾರವೂ ಈ ಸಮಸ್ಯೆಗಳಿಗೆ ಸ್ಪಂದಿಸಿ ಏಕರೂಪತೆ ಅರ್ಥಾತ್ ಶಿಷ್ಟತೆ ಬಗ್ಗೆ ಶಿಫಾರಸು ಮಾಡಲು ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯಲ್ಲಿ ಕಗಪದ ಕೆಲವು ಸದಸ್ಯರು ವೈಯಕ್ತಿಕ ನೆಲೆಯಲ್ಲಿ ಇದ್ದರಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಸೇರಿದಂತೆ ಒಟ್ಟು ಸುಮಾರು ಎಂಟು ಜನರಿದ್ದರು. ಕನ್ನಡ ಮತ್ತು ಸಂಸ್ಕೃತಿ ವಿಭಾಗದ ಕಾರ್ಯದರ್ಶಿಯವರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯು ತಯಾರಿಸಿದ ಏಕರೂಪ ಕೀಲಿಮಣೆ ವಿನ್ಯಾಸ ಮತ್ತು ಏಕಭಾಷೆಯ ಫಾಂಟ್ (ಅಕ್ಷರಶೈಲಿ) ಗಳನ್ನು ಮಾನಕ ಎಂದು ಸರಕಾರವು ಆಜ್ಞೆ ಹೊರಡಿಸಿತು. ಎಲ್ಲ ಪತ್ರಿಕೆಗಳೂ ಈ ಸಾಧನೆಯನ್ನು ಕಗಪದ ಸಾಧನೆ ಎಂದೇ ಬರೆಯುತ್ತಿದ್ದಾರೆ.
ಈ ಸಮಿತಿಯ ವರದಿಯನ್ನು ತಂತ್ರಾಂಶ ತಯಾರಕರು ಅಳವಡಿಸಿದ್ದಾರೆಯೇ ಎಂದು ಪರೀಕ್ಷಿಸಲು ಕಗಪವು ಒಂದು ಪರೀಕ್ಷಕ ತಂತ್ರಾಂಶವನ್ನು ತಯಾರಿಸಿತು. ಸರಕಾರವು ಈ ತಂತ್ರಾಂಶದ ಉಪಯೋಗವನ್ನು ಗಮನಿಸಿ ಇದನ್ನು ಒಂದು ಪೂರ್ಣಪ್ರಮಾಣದ ತಂತ್ರಾಂಶವನ್ನಾಗಿ ಪರಿವರ್ತಿಸಿಕೊಡಲು ಕಗಪವನ್ನೇ ಕೇಳಿಕೊಂಡಿತು. ಇಂತಹ ಒಂದು ತಂತ್ರಾಂಶವನ್ನು ಉಚಿತವಾಗಿ ಹಂಚಿದರೆ ಈಗ ಪ್ರಚಲಿತವಿರುವ ಎಲ್ಲ ತಂತ್ರಾಂಶ ಕಂಪೆನಿಗಳು ಬಾಗಿಲು ಮುಚ್ಚಬೇಕಾಗಿ ಬರುವುದು. ಆಗ ಉಂಟಾಗುವ ನಿರ್ವಾತವನ್ನು ಕಗಪ ತುಂಬಿಕೊಡಬೇಕಾಗಿ ಬರುವುದು ಎಂದು ಸರಕಾರಕ್ಕೆ ಆಗಲೇ ಮನವರಿಕೆಯಾಗಿತ್ತು. ಭವಿಷ್ಯದ ಈ ತೊಂದರೆಯನ್ನು ನಿವಾರಿಸಲು ಉತ್ತಮ ಗುಣಮಟ್ಟದ, ವೃತ್ತಿನಿರತ ಕಂಪೆನಿಗಳು ಈಗಾಗಲೆ ಮಾರುತ್ತಿರುವ ಉತ್ತಮ ಗುಣಮಟ್ಟದ ಫಾಂಟ್‌ಗಳಿಗೆ ಯಾವುದೆ ರೀತಿಯಲ್ಲಿ ಕಡಿಮೆಯಲ್ಲದ, ಫಾಂಟ್‌ಗಳನ್ನು ತಯಾರಿಸಿ ಕೊಡುವ ಹೊಣೆಯನ್ನೂ ಸರಕಾರವು ಕಗಪಕ್ಕೆ ವಹಿಸಿತು.
ಸರಾಕರದ ಇಚ್ಛೆಯಂತೆ “ನುಡಿ” ಎಂಬ ಪೂರ್ಣಪ್ರಮಾಣದ ತಂತ್ರಾಂಶ ಬಿಡುಗಡೆಯಾಯಿತು. ಆದರೆ ಕಗಪವು ಸರಕಾರ ಹೇಳಿದ ಕೆಲವು ಅಂಶಗಳನ್ನು ಮರೆತೇ ಬಿಟ್ಟಿತ್ತು. ಉತ್ತಮ ಗುಣಮಟ್ಟದ ಫಾಂಟ್‌ಗಳನ್ನು ಕೊಡಲು ಅದಕ್ಕೆ ಸಾಧ್ಯವಾಗಲಿಲ್ಲ. ಕಗಪದಲ್ಲಿ ಹಲವು ವರ್ಷಗಳಿಂದ ಫಾಂಟ್ ತಯಾರಿಸಿ ಅನುಭವವಿರುವ ಪರಿಣತರಿಲ್ಲ. ಸರಕಾರದಿಂದ ಶಹಬಾಸ್ ಗಿಟ್ಟಿಸುವ ಆತುರದಲ್ಲಿ ಕಗಪವು ಒಂದೊಂದು ಫಾಂಟಿಗೂ ಅತಿ ಕಡಿಮೆ ಹಣ ಕೇಳಿತ್ತು. ಕಗಪವು ಏನೇನೂ ಅನುಭವವಿಲ್ಲದ ಕೆಲವು ವಿದ್ಯಾರ್ಥಿಗಳಿಗೆ ಫಾಂಟ್ ಮಾಡಲು ನೇಮಿಸಿತು. ಇದರಿಂದ ಕನ್ನಡ ಭಾಷೆಯಲ್ಲಿ ಅತಿ ಕೆಟ್ಟ ಫಾಂಟ್‌ಗಳು ತುಂಬುವಂತಾಯಿತು. ವೃತ್ತಿನಿರತ ಕಂಪೆನಿಗಳವರು ಈಗಾಗಲೆ ಫಾಂಟ್ ತಯಾರಿಸಿ ಮಾರುವುದನ್ನು ನಿಲ್ಲಿಸಿದ್ದಾರೆ. ಕನ್ನಡಕ್ಕೆ ಉತ್ತಮ ಫಾಂಟ್‌ಗಳ ಕಾಲ ಮುಗಿದು ಹೋಯಿತು.
ಸರಕಾರವು ನೇಮಿಸಿದ ಸಮಿತಿಯು ಏಕಭಾಷೆಯ ಫಾಂಟಿಗೆ ಮಾತ್ರ ಸಂಕೇತಗಳನ್ನು ರೂಪಿಸಿತ್ತು. ದ್ವಿಭಾಷೆಯ ಸಂಕೇತಗಳ ಬಗ್ಗೆ ಮಾತು ಬಂದಾಗ ದ್ವಿಭಾಷೆಯ ಬದಲು ಯುನಿಕೋಡಿನ ಆವೃತ್ತಿ ತರುವುದೇ ಸೂಕ್ತ ಎಂಬ ನಿರ್ಣಯಕ್ಕೂ ಬರಲಾಗಿತ್ತು. ಆದರೆ ಕಗಪ ಮತ್ತು ಸರಕಾರ ಒಟ್ಟು ಸೇರಿ ಹೊರತಂದಿರುವ “ನುಡಿ”ಯ ಮೂರನೇ ಆವೃತ್ತಿಯಲ್ಲಿ ಸರಕಾರದಿಂದ ಆಜ್ಞೆ ಆಗದೆ ಇದ್ದ (ಶಿಷ್ಟತೆಗೆ ಬದ್ಧವಾಗದಿರುವ) ದ್ವಿಭಾಷೆಯ ಫಾಂಟನ್ನು ಅಳವಡಿಸಲಾಗಿದೆ. ಈ ಫಾಂಟ್‌ನಲ್ಲಿ ತಯಾರಿಸಿ ಶೇಖರಿಸಿದ ಮಾಹಿತಿಗಳು ಏನಾಗಬೇಕು? ಕನ್ನಡದಲ್ಲಿ ಹಲವು ತಂತ್ರಾಂಶ ಮತ್ತು ಫಾಂಟ್‌ಗಳಿವೆ. ಇವುಗಳಲ್ಲಿ ತಯಾರಿಸಿ ಶೇಖರಿಸಿದ ಮಾಹಿತಿಗಳಿಗೆ ಮುಂದೆ ಭವಿಷ್ಯವಿಲ್ಲ ಎಂದು ಸಾರಿ ತನ್ನದೇ ಶಿಷ್ಟ ತಂತ್ರಾಂಶ ತಯಾರಿಸಿದ ಕಗಪ ಇದರ ಬಗ್ಗೆ ಏನು ಹೇಳುತ್ತದೆ? ಯಾಕೆ ಯುನಿಕೋಡ್ ಆವೃತ್ತಿಯ “ನುಡಿ” ಬಗ್ಗೆ ಮೌನವಾಗಿದೆ?
ಕಗಪವು ತಯಾರಿಸಿದ “ನುಡಿ” ತಂತ್ರಾಂಶದ ಮೂರನೆ ಆವೃತ್ತಿಯಲ್ಲಿ ಹಲವು ಬಗ್‌ಗಳಿವೆ (ದೋಷ). ಒಂದು ಉದಾಹರಣೆ ನೀಡುವುದಾದರೆ, ನುಡಿಯನ್ನು ಪ್ರಾರಂಭಿಸುವಾಗ ISCIIಯಲ್ಲಿ ಮಾಹಿತಿ ಸಂಗ್ರಹಿಸುವ ಆಯ್ಕೆ ಮಾಡಿ ಒಮ್ಮೆ ಬೆರಳಚ್ಚು ಮಾಡಿದುದನ್ನು ಉಳಿಸಿದ (save ಮಾಡಿ) ನಂತರ ಇನ್ನೊಮ್ಮೆ ಯಾವುದೇ ಕೀಲಿಗಳು ಕೆಲಸ ಮಾಡುವುದಿಲ್ಲ. “ನುಡಿ” ತಂತ್ರಾಂಶದ ತೊಂದರೆಗಳ ಬಗ್ಗೆ ಹಿಮ್ಮಾಹಿತಿ (feedback), ತಾಂತ್ರಿಕ ಸಹಾಯ (technical support), ಆಗಿಂದಾಗ್ಗೆ ಹೊಸ ಆವೃತ್ತಿಗಳ ಬಿಡುಗಡೆಯ ವಿವರ, ಇತ್ಯಾದಿಗಳನ್ನು ನೀಡಲು ಒಂದು ಅಂತರಜಾಲ ತಾಣ ಮತ್ತು ವಿ-ಅಂಚೆಯ ಸೌಕರ್ಯ (mailing list) ಇಲ್ಲ. ಒಬ್ಬ ಏಕ ವ್ಯಕ್ತಿಯಿಂದ ತಯಾರಾದ “ಬರಹ” ತಂತ್ರಾಂಶಕ್ಕೆ ಈ ಎಲ್ಲ ಸೌಕರ್ಯಗಳಿರಬೇಕಾದರೆ ಒಂದು ಪರಿಷತ್ತಿಗೇಕೆ ಇವು ಸಾಧ್ಯವಾಗಿಲ್ಲ?
ಪ್ರಪಂಚಾದ್ಯಂತ ಹಲವು ಜನರು ಮುಕ್ತ ತಂತ್ರಾಂಶಗಳನ್ನು (opensource software) ತಯಾರಿಸಿ ಜನರಿಗೆ ನೀಡುತ್ತಿದ್ದಾರೆ. ಲಿನಕ್ಸ್ ಇದಕ್ಕೆ ಉತ್ತಮ ಉದಾಹರಣೆ. ಮುಕ್ತ ತಂತ್ರಾಂಶ ಎಂದರೆ ತಂತ್ರಾಂಶ ತಯಾರಿಸಲು ಬಳಸಿದ ಮೂಲ ಆಕರ ಕ್ರಮವಿಧಿ (source code) ಎಲ್ಲರಿಗೆ ಲಭ್ಯ. ಆಕರ ಕ್ರಮವಿಧಿಯನ್ನು ಬಳಸಿ ನೀವು ತಂತ್ರಾಂಶವನ್ನು ಸುಧಾರಿಸಬಹುದು, ಹಾಗೆ ಸುಧಾರಿಸಿದುದನ್ನು ಜನತೆಗೆ ಹಂಚಬಹುದು. ನುಡಿ ಈ ಮಾದರಿಯಲ್ಲಿಲ್ಲ. ಲಿನಕ್ಸ್ ಪರಿಣತ ಉತ್ಸಾಹಿ ಕನ್ನಡ ಪ್ರೇಮಿಗಳು ಎರಡು ವರ್ಷಗಳಿಂದ ನುಡಿ ತಂತ್ರಾಂಶದ ಆಕರ ಕ್ರಮವಿಧಿಯನ್ನು ಕೇಳುತ್ತಿದ್ದಾರೆ. ಗಣಕ ಪರಿಷತ್ ಇನ್ನೂ ಆಕರ ಕ್ರಮವಿಧಿಯನ್ನು ಮುಕ್ತವಾಗಿಸಿಲ್ಲ. ನುಡಿ ತಂತ್ರಾಂಶ ಸರಕಾರದಿಂದ ಅನುದಾನ ಪಡೆದು ತಯಾರಾದುದು. ಅಂದರೆ ಅದರ ಆಕರ ಕ್ರಮವಿಧಿ ಮೇಲೆ ಜನತೆಗೆ ಹಕ್ಕು ಇದೆ. ಹೀಗಿದ್ದೂ ಕಗಪದವರು ಅದನ್ನು ಮುಕ್ತವಾಗಿಸಿಲ್ಲ.
ಸರಕಾರವೇ ಕನ್ನಡದ ಫಾಂಟ್ ಮತ್ತು ಕೀಲಿಮಣೆ ತಂತ್ರಾಂಶ ಮಾಡಿ ಉಚಿತವಾಗಿ ಹಂಚಿದರೆ ನಾವೇನು ಮಾಡಬೇಕು ಎಂದು ಕನ್ನಡ ತಂತ್ರಾಂಶ ತಯಾರಕರು ಸರಕಾರವನ್ನು ಪ್ರಶ್ನಿಸಲು ತೊಡಗಿದರು. ಅದಕ್ಕೆ ಸರಕಾರ ಮತ್ತು ಕಗಪದವರು “ನೀವು ಇನ್ನು ಮುಂದೆ ನುಡಿಯನ್ನು ಬಳಸಿ ಆನ್ವಯಿಕ ತಂತ್ರಾಂಶ (ಅಪ್ಲಿಕೇಶನ್ ಸಾಫ್ಟ್‌ವೇರ್) ತಯಾರಿಸಿರಿ” ಎಂದುತ್ತರಿಸಿದರು. ಆನ್ವಯಿಕ ತಂತ್ರಾಂಶ ಎಂದರೆ ಅಂತರಜಾಲ ತಾಣಗಳ ನಿರ್ಮಾಣ, ವೇತನ ಪಟ್ಟಿ ತಯಾರಿಕೆ, ಗ್ರಂಥಾಲಯ, ಸಾರಿಗೆ, ಸಿ.ಡಿ.ಗಳ ತಯಾರಿಕೆ, ಇತ್ಯಾದಿ. ಆದರೆ ತಂತ್ರಾಂಶ ತಯಾರಕರಿಗೆ ಬೇಗನೆ ಭ್ರಮನಿರಸನ ಕಾದಿತ್ತು. ಸರಕಾರವು ತನ್ನ ಕನ್ನಡದ ಎಲ್ಲ ತಂತ್ರಾಂಶ ಅಗತ್ಯಗಳಿಗೆ ಕಗಪವನ್ನೇ ಅವಲಂಬಿಸತೊಡಗಿತು. ಕಗಪವೂ ತನ್ನ ಮೂಲ ಉದ್ದೇಶವನ್ನು ಹಿನ್ನೆಲೆಗೆ ಸರಿಸಿ ಪಂಪಭಾರತದ ಸಿ.ಡಿ., ವೇತನ ತಂತ್ರಾಂಶ, ಕಚೇರಿ ತಂತ್ರಾಂಶ, ಇತ್ಯಾದಿಗಳ ತಯಾರಿಕೆಗೆ ತೊಡಗಿತು.
ಭಾರತೀಯ ಭಾಷೆಗಳ ತಂತ್ರಾಂಶಳಿಗೆ ದೊಡ್ಡ ಗಿರಾಕಿ ಸರಕಾರ ಮತ್ತು ಅರೆ-ಸರಕಾರಿ ಸಂಸ್ಥೆಗಳು. ಉಳಿದಂತೆ ಜನಸಾಮಾನ್ಯರಿಗೆ ಕನ್ನಡದ ಆನ್ವಯಿಕ ತಂತ್ರಾಂಶಗಳು ಬೇಡ. ಸರಕಾರ ಮತ್ತು ಸರೆ-ಸರಕಾರಿ ಸಂಸ್ಥೆಗಳು ತಮ್ಮೆಲ್ಲ ಆವಶ್ಯಕತೆಗಳಿಗೆ ಒಂದೇ ಸಂಸ್ಥೆಯನ್ನು ನಂಬಿದರೆ ಕನ್ನಡದಲ್ಲಿ ತಂತ್ರಾಂಶ ಉದ್ಯಮ ಬೆಳೆಯಲಾರದು. ೫ ಕೋಟಿ ಕನ್ನಡಿಗರಿಗೆ ಬೇಕಾದ ಎಲ್ಲ ತಂತ್ರಾಂಶ ತಯಾರಿಸಿ ಕೊಡುವುದು ಮತ್ತು ಅದಕ್ಕೆ ತಯಾರಿಕೆಯ ನಂತರದ ಅಗತ್ಯ ಸಹಾಯ ಒದಗಿಸುವುದು ಕಗಪಕ್ಕೆ ಮೀರಿದ ಸಂಗತಿ. ಕಗಪವು ಆನ್ವಯಿಕ ತಂತ್ರಾಂಶ ತಯಾರಿಸುವುದು ತನ್ನ ಹೊಣೆಯಲ್ಲ ಎಂದು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಶಿಷ್ಟತೆಗಳ ಬಗ್ಗೆ ಶ್ವೇತಪತ್ರಗಳ ತಯಾರಿ, ಶಿಷ್ಟತೆಗೆ ಸಂಬಂಧಿಸಿದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡದ ಪ್ರಾತಿನಿಧ್ಯ, ಗಣಕಗಳಲ್ಲಿ ಕನ್ನಡದ ಅಳವಡಿಕೆಗೆ ಬೇಕಾದ ಮೂಲಭೂತ ಸವಲತ್ತುಗಳ ತಯಾರಿ (ಉದಾ: ಯುನಿಕೋಡ್ ನುಡಿ), ಇತ್ಯಾದಿಗಳನ್ನು ಮಾತ್ರ ತನ್ನ ಹೊಣೆಯಾಗಿಸಿಕೊಳ್ಳಬೇಕಿತ್ತು. ಆದರೆ ಕಗಪ ಇದನ್ನೆಲ್ಲ ಗಾಳಿಗೆ ತೂರಿದೆ. ಸರಕಾರವೇ ಕಗಪಕಕ್ಕೆ ವಹಿಸಿದ ೧೪ ಕಾರ್ಯಯೋಜನೆಗಳಲ್ಲಿ ಇತರ ಕನ್ನಡ ತಂತ್ರಾಂಶಗಳಿಂದ ನುಡಿಗೆ ಪರಿವರ್ತಕ ತಂತ್ರಾಂಶ, ಕನ್ನಡ ಲೋಗೋ, ಲಿನಕ್ಸ್‌ನಲ್ಲಿ ಕನ್ನಡ, ಸ್ಟಾರ್ ಆಫೀಸಿನ ಕನ್ನಡ ಆವೃತ್ತಿ, ಇತ್ಯಾದಿ ಯಾವುವೂ ಬಿಡುಗಡೆಯಾಗಿಲ್ಲ.
- ಡಾ. ಯು. ಬಿ. ಪವನಜ
( ೧೦-೧೦-೨೦೦೩ ದಿನಾಂಕದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಲೇಖನ “ಒಂದು ಸೊನ್ನೆ” ಅಂಕಣದದಲ್ಲಿ ಪ್ರಕಟವಾಗಬೇಕಿತ್ತು. ಆದರೆ ಸಂಪಾದಕರು ಇದನ್ನು ಪ್ರಕಟಿಸಲು ಅನರ್ಹ ಎಂದು ತೀರ್ಮಾನಿಸಿದ ಕಾರಣ ಇದು ಪ್ರಕಟವಾಗಲಿಲ್ಲ.)
ನೋಡಿ:
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೨
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೩
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೪
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೫

ತರಲೆ ಪ್ರಶ್ನೋತ್ತರ – ೦೨


ಪ್ರ: ಬ್ಯಾಂಕಿನ ಕ್ಯಾಷಿಯರ್ ನಗುವುದಿಲ್ಲವೇಕೆ?
ಉ: ಕೌಂಟರಿನ ಮೇಲೆ ಬೋರ್ಡ್ ಹಾಕಿದ್ದಾರೆ `ನಗದು’ ಎಂದು.
ಪ್ರ: ತಿನ್ನಬಹುದಾದ ನಾಯಿ ಯಾವುದು?
ಉ: ಬಿಸಿನಾಯಿ (hotdog)
ಪ್ರ: `ಹಳೆಯದೆಲ್ಲಾ ಚಿನ್ನ’ ಗಾದೆಯನ್ನು ಯಾವಾಗ ಆದರ್ಶವಾಗಿಟ್ಟುಕೊಳ್ಳಬಾರದು?
ಉ: ಮದುವೆಯಾಗುವಾಗ.
ಪ್ರ: ಸ್ವಚ್ಛ ಮೂಗಿನ ಒಳಗೇನು ಕಾಣಸಿಗುತ್ತದೆ?
ಉ: ಬೆರಳಚ್ಚು.
ಪ್ರ: ಹೊಸತನ್ನು ಹಳತಾಗಿಸಲು ನೀವು ಹೊಸತಾಗಿ ಕೊಂಡು ತರುವ ವಸ್ತು ಯಾವುದು?
ಉ: ತಂಗಳು ಪೆಟ್ಟಿಗೆ (ರೆಫ್ರಿಜರೇಟರ್).
ಪ್ರ: ಹೆಂಡತಿ ಬೈಗುಳ ಕಿವಿಗೆ ಬೀಳದಂತಾಗಲು ಸಹಾಯ ಮಾಡುವ ವಸ್ತು ಯಾವುದು?
ಉ: ಹೆಡ್‌ಫೋನ್.
ಪ್ರ: ಹಿಂದಿಯವರೊಡನೆ ಹಿಂದಿಯಲ್ಲಿ, ತಮಿಳರೊಡನೆ ತಮಿಳಿನಲ್ಲಿ, ಮಲೆಯಾಳಿಗಳೊಡನೆ ಮಲೆಯಾಳಂನಲ್ಲಿ, ತೆಲುಗರೊಡನೆ ತೆಲುಗಿನಲ್ಲಿ, ಕನ್ನಡಿಗರೊಡನೆ ಇಂಗ್ಲೀಷಿನಲ್ಲಿ ಮಾತನಾಡುವವ ಯಾರು?
ಉ: ಬೆಂಗಳೂರು ಕನ್ನಡಿಗ.
ಪ್ರ: ರಾಮನು ಸೀತೆಯನ್ನು ಗಟ್ಟಿಯಾಗಿ ಅಪ್ಪಿ ಹಿಡಿದನು -ಇದುಯಾವ ಕಾಲ?
ಉ: ಚಳಿಗಾಲ.
ಪ್ರ: ಮದುವೆಯಲ್ಲಿ ಮಂಗಲಸೂತ್ರ ಕಟ್ಟುವಾಗ `ಸುಲಗ್ನಾ ಸಾವಧಾನ’ ಎಂದು ಮಂತ್ರ ಹೇಳಲು ಕಾರಣವೇನು?
ಉ: ಮುಂದೆ ಅಪಾಯವಿದೆ, ಸಾವಧಾನವಾಗಿ ಮುಂದುವರಿಯಿರಿ ಎಂದು ಎಚ್ಚರಿಸಲು.
ಪ್ರ: ಮಂಗಲಸೂತ್ರಕ್ಕೆ `ತಾಳಿ’ ಎಂದು ಏಕೆ ಕರೆಯುತ್ತಾರೆ?
ಉ: ನೀವು ಜಿವಮಾನವಿಡೀ `ತಾಳಿ’ ಎಂದು ಹೆಂಗಸರಿಗೆ ತಿಳಿಹೇಳಲು (ಮಾ| ಹಿರಣ್ಣಯ್ಯ ಕೃಪೆ).
ಪ್ರ: ಎಲ್ಲಕ್ಕಿಂತ ಸುಲಭವಾದ ದಾನ ಯಾವುದು?
ಉ: ವಾಗ್ದಾನ.
ಪ್ರ: ಎಲ್ಲಕ್ಕಿಂತ ಶ್ರೇಷ್ಠ ದಾನ ಯಾವುದು?
ಉ: ಮೈದಾನ (ಬೀಚಿ ಕೃಪೆ).
ಪ್ರ: ಪ್ರಪಂಚದಲ್ಲಿ ಎಲ್ಲಕ್ಕಿಂತ ಶ್ರೇಷ್ಠವಾದ ಸಮಯ ಉಳಿತಾಯಕ ಯಾವುದು?
ಉ: ಪ್ರಥಮನೋಟದಲ್ಲೇ ಪ್ರೇಮ.
ಪ್ರ: `ಮದುವೆಗಳು ಸ್ವರ್ಗದಲ್ಲಿ ಮಾಡಲ್ಪಟ್ಟಿವೆ’ ಎಂದು ಯಾಕೆ ಹೇಳುತ್ತಾರೆ?
ಉ: ಅನಂತರ ಅವರು ನರಕದಲ್ಲಿ ಜೀವಿಸುತ್ತಾರೆ -ಅದಕ್ಕೆ.

ಒಂದು ಆರ್ಡಿನರಿ ಲವ್‌ಸ್ಟೋರಿ


- ಬೇಳೂರು ಸುದರ್ಶನ

ಸೀಟಿಲ್ವಾ ಎಂದು ಆವಳು ನನ್ನ ಕೇಳುವ ಹೊತ್ತಿಗಾಗಲೇ ನಾನು ಆ ಬಸ್ಸಿನ ಡ್ರೈವರ್ ಬಾಗಿಲಿನ ಮೂಲಕ ಒಳಗೆ ಬಂದು ಇಂಜಿನ್ ಬಳಿ ಇದ್ದ ಖಾಲಿ ಸೀಟಿನಲ್ಲಿ ಬ್ಯಾಗು ಬಿಸಾಕಿದ್ದೆ. ಬಳ್ಳಾರಿಯ ಆ ತಣ್ಣನೆ ರಾತ್ರಿಯಲ್ಲಿ ಜನ ಪುತುಪುತು ಬಸ್ಸಿನೊಳಗೆ ಹೊರಗೆ ಅಡ್ಡಾಡುತ್ತ ಗಾಳಿಯನ್ನು ಬಿಸಿ ಮಾಡುತ್ತಿದ್ದರು. ಇಲ್ಲಿ ಅವಳು ತನ್ನೊಳಗೇ ಏನೋ ಯೋಚಿಸುತ್ತ ವಿಮನಸ್ಕಳಾಗಿ ನಿಂತಿದ್ದಳು. ನಾನು ಅವಳ ಕೈ ಹಿಡಿದು ಒಳಗೆ ಎಳೆದುಕೊಂಡೆ. ಇಡೀ ದಿನ ಅತ್ತು ಅತ್ತು ಅವಳ ಕಣ್ಣುಗಳು ಊದಿಕೊಂಡಿದ್ದರೂ ಎಷ್ಟೆಲ್ಲ ಛಂದ ಇದ್ದಾಳಲ್ಲ ಎಂದೆನ್ನಿಸಿ ನನಗೆ ಅವಳನ್ನು ಅಲ್ಲೇ ಭುಜಕ್ಕೆ ಒರಗಿಸಿಕೊಳ್ಳಬೇಕು ಎನಿಸಿತು. ಆದರೆ ಕೊಳಕು ಕಾಡ್ರಾ ಧರಿಸಿ ಅಂಡಲೆಯುವ ನಾನು ಯಾರು, ಡಿಗ್ರಿ ಮುಗಿಸಿ ಇಲ್ಲಿ ಅವನನ್ನು ಪ್ರೀತಿಸುತ್ತ ಇರೋ ಅವಳೆಲ್ಲಿ …..
ಬೆಳಗಿನಿಂದ ಲಾಡ್ಜಿನಲ್ಲಿ ನಡೆದ ಎಲ್ಲ ಮಾತುಕತೆಯಲ್ಲೂ ಅವಳ ಅಳುವೇ ಮುಖ್ಯವಾಗಿ ಕೇಳಿಸುತ್ತಿತ್ತು ಎಂದು ನನ್ನ ಮಿತ್ರನೆಂಬೋ ಮನುಷ್ಯ ಹೇಳಿದ್ದ. ಇಲ್ಲಿ ಅವಳ ಕಣ್ಣುಗಳನ್ನು ನೋಡಿದ ಮೇಲೆ ಅವನ ಮಾತುಗಳನ್ನು ನಾನು ನಿಜವೆಂದೇ ತಿಳಿಬೇಕಿದೆ. ಮದುವೆಯಾಗಲು ಆತ ಒಪ್ಪಲಿಲ್ಲ ಎಂದು ಅವಳು ಮಾತೇ ಆಡದೆ ಸುಮ್ಮನೆ ಅಳುತ್ತ ಕೂತಿದ್ದಳಂತೆ. ಇಲ್ಲಿ ನೋಡಿದರೆ ನನ್ನ ಜತೆ ಬೆಂಗಳೂರಿಗೆ ಹೊರಟಿದ್ದಾಳೆ. ಅವಳನ್ನು ನನ್ನ ಜೊತೆ ಕಳಿಸುತ್ತಿರೋ ವ್ಯಕ್ತಿಗಳಿಗೆ ನನ್ನ ವಿಷಮನಸ್ಸು ಗೊತ್ತಿಲ್ಲ.
ಅವಳೀಗ ಅಲ್ಲಿಯೇ ಶಾಲು ಹಾಸಿ ಮಲಗಿದ್ದಾಳೆ. ಮೂರು ಸೀಟು ಹಾಗೂ ಇಂಜಿನ್ನಿನ ನಡುವೆ ನಾವು ಆರೇಳು ಗಂಟೆಗಳನ್ನು ಕಳೆಯಬೇಕು. ಅವಳು ಎಲ್ಲೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಳ್ಳಬೇಕು. ಇಂಥ ಸನ್ನಿವೇಶದಲ್ಲಿ ಅವಳನ್ನು ನಾನು ಮುಟ್ಟಬಹುದೆ ಎಂದು ಯಾರನ್ನೂ ಕೇಳಲಾಗಲಿಲ್ಲ. ಹೊರಗೆ ಕಂಡಕ್ಟರ್ ಸೀಟಿ ಊದಿದ್ದಾನೆ. ಮತ್ತೆ ಜನ ಎಲ್ಲಿಂದಲೋ ಬಂದು ತುಂಬಿಕೊಂಡಿದ್ದಾರೆ. ನಮ್ಮ ಸುತ್ತಲೂ ಗೋಣಿಚೀಲಗಳಿವೆ; ಬಾಕ್ಸುಗಳಿವೆ. ಹೂವುಗಳಿವೆ; ಹಣ್ಣುಗಳ ಬುಟ್ಟಿಗಳಿವೆ.
ನಾವು ಯಾವತ್ತೂ ಹೀಗೆ ಒಟ್ಟಿಗೆ ಕುಳಿತವರೂ ಅಲ್ಲ. ಈಗ ಮಾತ್ರ ಒಟ್ಟಿಗೆ ಮಲಗಿ ಬೆಂಗಳೂರಿಗೆ ಹೋಗುತ್ತಿದ್ದೇವೆ. ನಾವು ಚಳ್ಳಕೆರೆಯಲ್ಲಿ ಚಾ ಕುಡಿಯಲು ಇಳಿಯುವುದಿಲ್ಲ. ಅಥವಾ ಚುಮುಚುಮು ನಸುಕಿನಲ್ಲಿ ತುಮಕೂರಿನಲ್ಲೂ ಇಳಿಯುವುದಿಲ್ಲ. ನಮಗೆ ಸೀದಾ ಬೆಂಗಳೂರಿಗೆ ಹೋಗಬೇಕು. ಅವಳನ್ನು ನಾನು ಹಾಸ್ಟೆಲಿಗೆ ಸೇರಿಸಬೇಕು. ಅವಳನ್ನು ವಾರಕ್ಕೊಮ್ಮೆ ನೋಡಿಕೊಳ್ಳಬೇಕು. ಅವಳು ಡಿಪ್ರೆಸ್ ಆಗಬಾರದು ಎಂದು ಡಾಕ್ಟರ್ ಹೇಳಿದ್ದಾರೆ.
ಸುಟ್ಟುಹೋದ ಅವಳ ಪ್ರೀತಿಯನ್ನು ಮತ್ತೆ ಅರಳಿಸಲು ಯಾರಾದರೂ ಬರಬಹುದು ಎಂದು ಕಾಯಬೇಕು.
ಬಳ್ಳಾರಿಯನ್ನು ದಾಟಿದ ಮೇಲೆ ಬಸ್ಸು ರೈಲಿ ಹಳಿಗುಂಟ ಹೋಗುತ್ತದೆ. ಬದುಕೇ ಹೀಗೆ ಒಂದು ಉದ್ದನೆಯ ಸರಳರೇಖೆ ಎಂದು ನಾವೆಲ್ಲ ಭಾವಿಸುವಂತೆ ಮಾಡುತ್ತದೆ. ಆಮೇಲೆ ಒಂಟಿ ಹೆದ್ದಾರಿಯಲ್ಲಿ ಚಳ್ಳಕೆರೆ, ಹಿರಿಯೂರು. ಆಮೇಲೆ ಜೋಡಿ ಹೆದ್ದಾರಿಯಲ್ಲಿ ಬೆಂಗಳೂರು. ಯಾವುದಿದ್ದರೂ ಇವಳ ಕಥೆ ಹೀಗಾಯಿತಲ್ಲ ಎಂದು ನನಗೆ ತೀರ ಬೇಸರವಾಗಿ ಎದ್ದು ಕೂತೆ. ಎಲ್ಲರೂ ಕಿಟಕಿಯನ್ನು ತೆರೆದು ಗಾಳಿಗೆ ಮುಖವೊಡ್ಡಿ ಮಲಗುವ ಹತಾಶ ಯತ್ನದಲ್ಲಿದ್ದರು. ಇವಳು ಇಲ್ಲಿ ವೇಲ್‌ನ್ನೇ ಹೊದ್ದು ಮಲಗಿದ್ದಾಳೆ. ಒಮ್ಮೊಮ್ಮೆ ಎದ್ದು ಕೂರುತ್ತಾಳೆ. ಬಿಕ್ಕುತ್ತಾಳೆ. ನಾನು ಅವಳ ಭುಜ ತಟ್ಟಿ ಮಲಗಿಸುತ್ತೇನೆ. ಡ್ರೈವರ್‌ಗೆ ನಮ್ಮ ಬಗ್ಗೆ ಅಂತದ್ದೇನೂ ಅನ್ನಿಸಿಲ್ಲ ಎಂದು ನನಗೆ ಸಮಾಧಾನ. ಎದುರು ವಾಹನಗಳ ಬೆಳಕಿನಿಂದ ಮತ್ತೆ ಮತ್ತೆ ನಾವು ಬೆಳಗುತ್ತಿದ್ದೇವೆ. ಹಾರ್ನ್ ಹೊಡೆತಕ್ಕೆ ನಾವು ಮಂಪರಿನಿಂದ ಮೇಲೆದ್ದು ತತ್ತರಿಸುತ್ತೇವೆ. ನಾವು ಬಳ್ಳಾರಿ ಬಿಟ್ಟಿದ್ದೇ ಹನ್ನೊಂದು ದಾಟಿದ ಮೇಲೆ. ಈಗ ನಮಗೆ ನಿದ್ದೆಯೂ ಬರದೆ, ಮಲಗದೇ ಇರಲಾಗದೆ ಚಡಪಡಿಕೆ ಶುರುವಾಗಿದೆ.
ಯಾವಾಗಲೋ ನಾನು ನಿದ್ದೆಗೆ ಜಾರಿದ್ದೆ. ಅವಳು ಛಕ್ಕನೆ ನನ್ನ ಕೈ ಹಿಡಿದು `ಪ್ಲೀಸ್, ನನ್ನ ಕಥೆ ಮುಂದೇನಾಗುತ್ತೆ ಹೇಳು’ ಎಂದಾಗ ನಾನು ಅರೆಕ್ಷಣ ಬೆಚ್ಚಿದೆ.ಅವಳಾಗಲೀ, ನಾನಾಗಲೀ ಹಿಂದೆಂದೂ ಮುಟ್ಟಿಸಿಕೊಳ್ಳದವರು. ಈಗ ಅವಳನ್ನು ಕೈಹಿಡಿದು ಬಸ್ಸಿಗೆ ಹತ್ತಿಸಿದ್ದಷ್ಟೆ; ಇಲ್ಲಿ ಇವಳು ನನಗೆ ಆತುಕೊಂಡು ಮಲಗಿದ್ದಾಳೆ. ಅವಳಿಗೂ, ನನಗೂ ಈ ಸ್ಪರ್ಶ ಹೊಸತು.
`ನೋಡು, ಸುಮ್ನೆ ಸಿದ್ದೆ ಮಾಡು. ಬೆಂಗಳೂರು ಬಂದಮೇಲೆ ಮಾತಾಡೋಣ’ ಎಂದೆ. ಅವಳು ಬಿಡಲಿಲ್ಲ. ನನ್ನ ಕೈ ಹಿಡಿದೆಳೆದಳು. ನನ್ನ ಭುಜ ಹಿಡಿದು ಅಲ್ಲಾಡಿಸಿದಳು. ಮತ್ತೆ ಅವಳ ಕಣ್ಣಿನಲ್ಲಿ ನೀರಿದೆಯೇನೋ, ಕತ್ತಲಿನಲ್ಲಿ ಗೊತ್ತಾಗದೆ ನಾನು ತಡವರಿಸಿದೆ.
ನಾಳೆ ಅವಳೇನಾಗುತ್ತಾಳೆ ಎಂದು ನನಗೆ ಗೊತ್ತಿಲ್ಲ ಎಂದು ಅವಳಿಗೆ ಹೇಳಲೆ? ನಾಳೆ ನಾನೇನಾಗುತ್ತೇನೆ ಎಂದು ನನಗೆ ಗೊತ್ತಿದೆಯೆ?
ನಾನು ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿ ನಿದ್ದೆ ಮಾಡಿದರೂ ಮಾಡಿದೆ; ಹೆಬ್ಬಾಳದಿಂದ ಮೆಜೆಸ್ಟಿಕ್ಕಿಗೆ ನಡೆದುಕೊಂಡು ಬಂದರೂ ಬಂದೆ. ಬನಶಂಕರಿಯಿಂದ ಟಿಕೆಟ್ ಇಲ್ಲದೇ ಕಮಲಾನಗರಕ್ಕೆ ಹೋದರೂ ಹೋದೆ. ವಿಜಯಲಕ್ಷ್ಮಿ ಥಿಯೇಟರಿನಲ್ಲಿ ೪.೮೦ಕ್ಕೆ ಟಿಕೆಟ್ ಖರೀದಿಸಿ ಒಂದು ಅರೆಸೆಕ್ಸಿ ಇಂಗ್ಲಿಶ್ ಸಿನೆಮಾ ನೋಡಿದರೂ ನೋಡಿದೆ. ನಾನು ಮತ್ತೊಂದು ಕಾಡ್ರಾ ಪ್ಯಾಂಟ್ ಖರೀದಿಸಿದರೂ ಖರೀದಿಸಿದೆ. ನಾನು ಗಾಂಧಿ ಬಜಾರಿನ ಟಿವಿ ಸೇಲ್ಸ್‌ಮನ್ ಕೆಲಸ ಬಿಟ್ಟರೂ ಬಿಟ್ಟೆ…. ನಾನು ಏನಾಗುತ್ತೇನೆ, ಬೆಂಗಳೂರಿಗೆ ಹೋದಮೇಲೆ ಕಾಟನ್‌ಪೇಟೆಗೆ ಹೋಗುತ್ತೇನೋ ಅಥವಾ ಮತ್ತಾವುದೋ ಕಾರ್ಖಾನೆಗೆ ಸೇರಿಕೊಳ್ಳುತ್ತೇನೋ ಅನ್ನೋದೇ ಗೊತ್ತಿಲ್ಲದೆ ಇವಳ ಭವಿಷ್ಯವನ್ನು ಹೇಗೆ ಊಹಿಸಲಿ……
ಅವಳ ಆ ಪುಟ್ಟ ಕಣ್ಣುಗಳನ್ನೇ ಮಿಂಚಿಹೋಗುವ ಬೆಳಕಿನಲ್ಲಿ ನೋಡತೊಡಗಿದೆ. ಅವಳ ವೇಲ್ ಸರಿದು ಮುಖ ಬತ್ತಲಾಗಿತ್ತು. ನಮ್ಮನ್ನು ಆದಷ್ಟೂ ಬೇಗೆ ಬೆಂಗಳೂರಿನಲ್ಲಿ ಎಸೆಯಬೇಕೆಂದು ಡ್ರೈವರ್ ನಿರ್ಧರಿಸಿದ ಹಾಗೆ ಬಸ್ಸು ವೇಗ ಪಡೆದಿತ್ತು. ಜಂಪ್‌ಗಳಿಗೆ ನಾವು ಅತ್ತಿತ್ತ ತೊನೆಯುತ್ತಿದ್ದೆವು. ಅವಳು ಮತ್ತೆ ಮತ್ತೆ ನನಗೆ ಡಿಕ್ಕಿಯಾಗುತ್ತಿದ್ದಳು. ಅವಳ ಮುಖವನ್ನು ಅಷ್ಟು ಹತ್ತಿರದಿಂದ ನಾನು ಮತ್ತೆ ನೋಡಲಾರೆ ಅನ್ನಿಸಿತು.
ಅವ ಮದುವೆಯಾಗುವುದಿಲ್ಲ ಎಂದು ಗೊತ್ತಿದ್ದೂ ಆಕೆ ಯಾಕೆ ಇಲ್ಲಿಗೆ ಬಂದಳು, ಯಾಕೆ ಮಾತುಕತೆ ನಡೆಸಿದಳು, ಯಾಕೆ ಮತ್ತೆ ಕುಸಿದುಹೋದಳು ಎಂದು ನನಗೆ ಗೊತ್ತಾಗಲಾರದು. ಈ ರಾತ್ರಿ, ನಾಳೆಯ ಬೆಳಗು ಕಳೆದ ಮೇಲೆ ಅವಳು ಸಿಗಬೇಕೆಂದೇನೂ ಇಲ್ಲವಲ್ಲ….. ಆಕೆಯನ್ನು ಸಂಜೆ ಲಾಡ್ಜಿನಲ್ಲಿ ನೋಡಿದಾಗ ಅವಳು ಇಷ್ಟೆಲ್ಲ ಭಾವಜೀವಿ ಎನ್ನಿಸಿರಲಿಲ್ಲ. ಸುಮ್ಮನೆ ಎಲ್ಲೋ ನೋಡುತ್ತ ಕೂತಿದ್ದಳು. ಎಲ್ಲರೂ ಕಾಫಿ ಕುಡಿಯುತ್ತಿದ್ದರೆ ಈಕೆ ಮಂಡಿಗಳನ್ನು ಕೈಗಳಿಂದ ಸುತ್ತುವರಿದು ವಿರಕ್ತೆಯ ಹಾಗೆ ಕೂತಿದ್ದಳು. ಎಲ್ಲರೂ ಅಲ್ಲಿ ಯಾವುದೋ ಸಿನೆಮಾದ ಯಾವುದೋ ಸನ್ನಿವೇಶದ ಬಗ್ಗೆ ಚರ್ಚಿಸುತ್ತಿದ್ದರೆ ಇವಳು ಮಾತ್ರ ಸೋತುಹೋದ ನಾಯಕಿಯ ಹಾಗೆ ವಿಷಣ್ಣವಾಗಿ ನಗುತ್ತಿದ್ದಳು. ಎಲ್ಲರೂ ಊಟಕ್ಕೆ ಹೋದಾಗಲೇ ನನಗೆ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ಗೊತ್ತಾಗಿದ್ದು.
ನಾನು ಅವಳ ಅಂಗೈಯನ್ನು ಮೆಲ್ಲಗೆ ಒತ್ತಿದೆ. ಅವಳ ತೋಳುಗಳನ್ನು ಗಟ್ಟಿಯಾಗಿ ಹಿಡಿದೆ. ಅವಳ ವೇಲ್ ಸರಿಪಡಿಸಿ ಕಿವಿ ಮುಚ್ಚಿದೆ. ಅವಳ ಕೆನ್ನೆ ತಟ್ಟಿದೆ. ಅವಳು ಯಾಕೋ ಪುಟ್ಟ ಮಗುವಿನ ಹಾಗೆ ಮುರುಟಿಕೊಂಡಿದ್ದಾಳೆ. ಬಹುಶಃ ನಾಳೆ ಏನಾದರೂ ಆಗಬಹುದೆ? ನಾನು ಅವಳಿಂದ ಬಿಡುಗಡೆ ಪಡೆಯಲಾರೆನೆ?
`ನೀನು ಜೊತೆಗೆ ಬರ್‍ತೀಯ ಅಂದಮೇಲೆ ಸ್ವಲ್ಪ ಸಮಾಧಾನ ಆಯ್ತು ಕಣೋ’ ಅವಳಿಗೆ ನಿದ್ದೆ ಬಂದಿಲ್ಲ.
ನಾನು ಅವತ್ತು ಬೆಂಗಳೂರಿಗೆ ವಾಪಸಾಗಬೇಕು ಅನ್ನೋ ನಿಯಮವೇನೂ ಇರಲಿಲ್ಲ. ನನಗೆ ಕೆಲಸವೇ ಇರಲಿಲ್ಲ. ಹಾಗಂತ ನಾನು ಅವಳಿಗೆ ಹೇಳಲಾರೆ. ನಾನೀಗ ಮಹಾನ್ ಸಾಮಾಜಿಕ ಕಾರ್ಯಕರ್ತ. ವಿದ್ಯಾರ್ಥಿ ಚಳವಳಿಯಲ್ಲಿ ನಾನೊಬ್ಬ ಮುಖ್ಯ ವ್ಯಕ್ತಿ. ನ್ಯಾಶನಲ್ ಕಾಲೇಜಿನ ಎತ್ತರದ ಗೋಡೆಗಳ ಮೇಲೆ, ರೈಲ್ವೆ ನಿಲ್ದಾಣದ ಉದ್ದುದ್ದ ಕಟ್ಟೆಯ ಮೇಲೆ, ಜೈಲ್,ರೇಸ್‌ಕೋರ್ಸ್ ರಸ್ತೆಗಳಲ್ಲಿ ನಾನು ಬರೆದ ಗೋಡೆಬರಹಗಳನ್ನು ಈಗಲೂ ಮಸುಕಾಗಿ ಕಾಣಬಹುದು. ಚಳವಳಿಗಳಲ್ಲಿ ಪ್ಲಕಾರ್ಡ್ ಬರೆದಿದ್ದೇನೆ. ವರದಕ್ಷಿಣೆ ಸಾವಿನ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ನನ್ನ ಕವನವನ್ನು ಯಾರೋ ಮಹರಾಯ್ತಿ ಓದಿದ್ದಾಳೆ.
`ನೀನು ಚಾಮರಾಜಪೇಟೇಲೇ ಇರ್‍ತೀಯ?’
`ಹೌದು.’
`ಹಾಗಾದ್ರೆ ಅವಾಗಾವಾಗ ನೀನು ನನ್ನ ಹಾಸ್ಟೆಲಿಗೆ ಬರಬಹುದು.’
ನಾನು ಅವಳ ತೋಳು ಹಿಡಿದೇ ಹೇಳಿದೆ: `ಬರ್‍ತೀನಿ. ಕನಿಷ್ಟ ವಾರಕ್ಕೊಂದ್ಸಲ ಬಂದೇ ಬರ್‍ತೀನಿ.’
ನಾವು ಹಾಗೇ ಮಲಗಿದ್ದೇವೆ. ಬಸ್ಸು ಭರಭರ ಹೋಗ್ತಾ ಇದೆ. ಲಾರಿಗಳು ನಮ್ಮೆದುರು, ಹಿಂದೆ, ಮುಂದೆ ಬಂದು ಹೋಗುತ್ತಿವೆ. ನಾವು ಬಸ್ಸಿನ ರೊಯ್ಯರೊಯ್ಯ ಸದ್ದನ್ನೇ ಕೇಳುತ್ತ ಮಲಗಿದ್ದೇವೆ. ನಾವು ಚಳಿಗಾಗಲೀ, ಶಬ್ದಕ್ಕಾಗಲೀ, ನಮ್ಮನ್ನು ಆಗಾಗ ದಿಟ್ಟಿಸುವ ಡ್ರೈವರನಿಗಾಗಲೀ ಹೆದರಿಲ್ಲ.
ಅವಳನ್ನು ಸೆಳೆದು ನಾನು ಮಾತನಾಡೋದಕ್ಕೆ ಶುರು ಮಾಡ್ದೆ. ಅವಳ ಜತೆ ಮಾತನಾಡದೇ ಹೀಗೆ ಇರೋದು ಸರಿಯಲ್ಲ ಅನ್ನಿಸತೊಡಗಿತ್ತು.
`ನೋಡು, ನೀನು ಅವನ ಬಗ್ಗೇನೇ ಯೋಚಿಸ್ಬೇಡ ಮಾರಾಯ್ತಿ. ಸುಮ್ನೆ ಬೆಂಗಳೂರಿನಲ್ಲಿ ನಿನ್ನ ಕೆಲಸ ಮಾಡ್ಕೋತಾ ಇರು. ನಾವು ಹೀಗೆ ನೋವು ಅನುಭವಿಸ್ತಾನೇ ಎಷ್ಟು ದಿನಾ ಅಂತ ಇರೋಕ್ಕಾಗುತ್ತೆ… ನಾನು ಪ್ರೀತಿಸ್ತಾ ಇರೋ ಹುಡುಗಿ ಇವತ್ತಿಗೂ ನನಗೆ ಕಾಗದ ಬರೆದಿಲ್ಲ. ಅವಳು ನಿಜಕ್ಕೂ ನನ್ನ ಪ್ರೀತಿಸ್ತಿದಾಳೋ ಇಲ್ವೋ ಅನ್ನೋದೇ ನನಗೆ ಗೊತ್ತಿಲ್ಲ. ನಾನೂ ನಿಂಥರಾನೇ ನೊಂದಿದೇನೆ. ನನಗೆ ಒಂದು ಒಳ್ಳೆ ಕೆಲಸ ಅನ್ನೋದಿಲ್ಲ. ಸೋಶಿಯಲ್ ವರ್ಕ್ ಮಾಡೋದು, ಕೆಲಸ ಮಾಡೋದು ಎಲ್ಲವೂ ಬೇಜಾರಾಗಿದೆ. ಒಂದ್ಸಲ ನನಗೆ ಚಾರ್ಮಾಡಿ ಘಾಟಿನಲ್ಲಿ ಒಂಟಿಯಾಗಿ ಅಡ್ಡಾಡುತ್ತ, ಬಸ್ಸುಗಳಿಗೆ ಅಡ್ಡಹಾಕಿ ಭಿಕ್ಷೆ ಕೇಳುತ್ತ ಬದುಕಿರೋಣ ಅನ್ನಿಸಿದೆ. ಹೇಗೂ ಅಲ್ಲಿ ನೀರಿದೆ. ದೇವಸ್ಥಾನ ಇದೆ. ಧರ್ಮಸ್ಥಳ,ಕೊಲ್ಲೂರು, ಶೃಂಗೇರಿ ಹೀಗೆ ಹೋಗ್ತಾ ಇರಬಹುದು.
`ಈಗ ನಿದ್ದೆ ಮಾಡು. ನಾನಿಲ್ವ? ಹೀಗೆ ನಾವಿಬ್ರೂ ಎಷ್ಟು ಸಲ ಪ್ರಯಾಣ ಮಾಡೋದಕ್ಕಾಗುತ್ತೆ? ನಿನ್ನನ್ನ ನಾನು ಎಷ್ಟು ಸಲ ನೋಡಿದ್ರೂ ನನ್ನ ಪುಟ್ಟ ಗೆಳತಿ ಅಂತಲೇ ಅನ್ಸುತ್ತೆ. ನಾನು ತುಂಬಾ ಭಾವನಾಜೀವಿ. ನನ್ನ ಕವನಗಳಲ್ಲಿ ಇರೋದೆಲ್ಲ ಬರೀ ಕನಸುಗಳು; ಅದರಲ್ಲಿ ನಾನೇ ತೇಲಿಹೋಗ್ತಾ ಇರ್‍ತೇನೆ. ಎಷ್ಟೋ ಸಲ ಅನಾಥ ಅಂತ ನನ್ನನ್ನೇ ನಾನು ಕರ್‍ಕೊಂಡಿದೇನೆ. ಬೆಂಗಳೂರಿಗೆ ಹೋದಮೇಲೆ ನನ್ನ ಕವನಗಳನ್ನು ಜೆರಾಕ್ಸ್ ಮಾಡಿಕೊಡ್ತೇನೆ, ಓದು. ನನ್ನ ಕತೆಯೆಲ್ಲ ಅದರಲ್ಲಿವೆ.
`ನೀನು ಇವತ್ತು ಬೆಳಗ್ಗೆ ಎಷ್ಟು ಚಲೋ ನಗ್ತಾ ಇದ್ದೆ… ಸಂಜೆ ನೋಡಿದ್ರೆ ಹಾಗೆ ಉಡುಗಿದೀಯ. ಯಾಕೆ ಮಾರಾಯ್ತಿ…. ಅವ ಬಿಟ್ರೆ ನಿನಗೆ ಬೇರೆ ಯಾರೂ ಸಿಗಲ್ವ? ಸುಮ್ನೆ ಯೋಚನೆ ಮಾಡ್ಬೇಡ. ಮಲಕ್ಕೋ. ನಾಳೆ ಮಾತಾಡಣ.’
ಹೀಗೇ ಏನೇನೋ ಮಾತನಾಡುತ್ತ ಅವಳನ್ನು ಹಾಗೇ ನೋಡುತ್ತಿದ್ದೆ. ಅವಳ ಕಣ್ಣಲ್ಲಿ ಎಂಥದೋ ನಿರಾಸಕ್ತಿ. ಅವಳಿಗೆ ನನ್ನ ಪ್ರೀತಿ-ಪ್ರೇಮದ ಕಥೆ ತಗೊಂಡು ಆಗಬೇಕಾದ್ದೇನೂ ಇಲ್ಲವಲ್ಲ…. ಹಾಗೇ ಅವಳ ನೆತ್ತಿ ತಟ್ಟುತ್ತ ಬಸ್ಸಿನ ಛಾವಣಿಯನ್ನೇ ನೋಡುತ್ತ ಮಲಗಿದೆ.
ಯಾವಾಗಲೋ ತುಮಕೂರು ದಾಟಿ ಬೆಂಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ನಾವು ನಡುಗತೊಡಗಿದೆವು. ಯಶವಂತಪುರ,ನವರಂಗ್ ದಾಟಿ ಮೆಜೆಸ್ಟಿಕ್ಕಿಗೆ ಬರೊ ಹೊತ್ತಿಗೆ ನಾವು ನಮ್ಮ ಲಗೇಜನ್ನು ಎತ್ತಿಕೊಂಡಿದ್ದೆವು.
ಸೀದಾ ಆಟೋ ಹಿಡಿದು ಚಾಮರಾಜಪೇಟೆಗೆ ಹೋದೆವು. ಅವಳನ್ನು ಹಾಸ್ಟೆಲಿಗೆ ಬಿಟ್ಟು ನಾನು ನನ್ನ ಕಾಯಕಕ್ಕೆ ಮರಳಿದೆ.
ಒಂದು ವಾರ ಕಳೆದಿತ್ತು. ಅವಳಿಂದ ಯಾವುದೇ ಫೋನ್ ಕೂಡಾ ಇಲ್ಲ. ನಾನೇನೂ ಹೆಚ್ಚು ಚಿಂತಿಸಲಿಲ್ಲ. ಬಸ್ಸಿನಲ್ಲಿ ಅವಳ ಜೊತೆ ಮಲಗಿದಾಗ ನನ್ನೊಳಗೆ ಎದ್ದ ಭಾವತುಮುಲಗಳು ಕಾಂಕ್ರೀಟಿನ ಗೋಡೆಗಳಲ್ಲಿ ಅಡಗಿಹೊಗಿದ್ದವು. ನಾನು ಅಲ್ಲಿ ಬಸ್‌ನಂಬರುಗಳ ನಡುವೆ, ಕ್ರಾಸುಗಳ ನಡುವೆ, ಮನೆ ಸಂಖ್ಯೆಗಳ ನಡುವೆ ಹೂತುಹೋಗಿದ್ದೆ. ನಾನು ಮತ್ತೆ ಕೆಲಸ ಬಿಟ್ಟೆ. ಈಗ ಶ್ರೀರಾಮಪುರದ ಐದನೇ ಕ್ರಾಸಿನ ವಾರಪತ್ರಿಕೆಯಲ್ಲಿ ರಸೀದಿ ಹರಿಯೋ ಕೆಲಸ.
ನನ್ನ ಆಫೀಸಿಗೆ ಫೋನ್ ಬಂದಾಗಲೇ ಅವಳ ನೆನಪಾಗಿದ್ದು. `ಬನ್ನಿ ಸರ್, ಅವಳು ಯಾಕೋ ತುಂಬಾ ಡಲ್ ಆಗಿದಾಳೆ. ತುಂಬಾ ಅಳ್ತಿದಾಳೆ. ಕೊನೆಗೆ ನಿಮ್ಮ ಫೋನ್ ನಂಬರ್ ಕೊಟ್ಳು. ಕೂಡ್ಲೇ ಬರ್‍ತೀರ ಸರ್?’ ಯಾರೋ ಅವಳ ಗೆಳತಿ ಕೇಳಿದಾಗ ನನಗೆ ಶಾಕ್ ಆಯ್ತು.
ಅಲ್ಲಿ ಹಾಸ್ಟೆಲಿನ ಜಗಲಿ ಕಟ್ಟೆಯ ಮೇಲೆ ಅವಳು ಕುಳಿತಿದ್ದಾಳೆ. ಯಾರನ್ನು ನೋಡುತ್ತಿದ್ದಾಳೆ ಎಂದು ಹೇಳಲು ಗೊತ್ತಾಗುತ್ತಿಲ್ಲ. ಒಮ್ಮೊಮ್ಮೆ ನನ್ನನ್ನು ನೋಡುತ್ತಾಳೆ. ಅವಳ ಗೆಳತಿಯರು ಒಂದು ಬದಿಯಲ್ಲಿ ಗುಸು ಗುಸು ಮಾತನಾಡಿಕೊಳ್ಳುತ್ತ ಕೂತಿದ್ದಾರೆ. ನಾನು ಅವಳ ಫ್ರೆಂಡ್ ಅಂತ್ಲೋ ಏನೋ, ಹತ್ತಿರ ಬಂದಿಲ್ಲ. ಸಂಜೆಯಾಗ್ತಾ ಇದೆ.
ನಾನು ಅವಳ ಅಂಗೈಯನ್ನು ಹಿಡಿದು ಸಮಾಧಾನ ಮಾಡೋದಕ್ಕೆ ಹೊರಟರೆ,ಮತ್ತೆ ಅವಳ ಕಣ್ಣಿನಿಂದ ನೀರು ಧುಮುಕುತ್ತಿದೆ. ಅವಳೇನೂ ನನ್ನ ಲವ್ ಮಾಡ್ತಿಲ್ಲ. ನಾನೂ ನನ್ನದೇ ಭಗ್ನಬದುಕಿನಲ್ಲಿ ಬಿದ್ದಿದ್ದೇನೆ. ಆದರೂ ಯಾಕೆ ಅವಳಿಗೆ ನಾನು ಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ.
`ಅವನು ಬೇರೆ ಮದುವೆಯಾಗಬಹುದಾ?’
ಅವನು ಬೇರೆ ಮದುವೆಯಾದರೆ ನೀನೂ ಬೇರೆ ಮದುವೆಯಾಗು ಎಂದು ಅವಳಿಗೆ ತಿಳಿಹೇಳುವಷ್ಟರಲ್ಲಿ ಎಂಟೂವರೆ ದಾಟಿತ್ತು.
ಮತ್ತೆ ಅವಳ ಫೋನ್ ಬರಲಿಲ್ಲ.
ಈಗ ನಾನು ಕನಿಂಗ್‌ಹ್ಯಾಮ್ ರಸ್ತೆಯಲ್ಲಿದ್ದೇನೆ. ಸ್ಕೂಟರ್ ಬಂದಿದೆ. ಹೆಂಡತಿ ಇದ್ದಾಳೆ. ಮಗ ಬೆಳೆದಿದ್ದಾನೆ. ಬೀದಿಗಳು ಧುತ್ತನೆ ಬೆಳೆದಿವೆ. ನಾನು ಈಟಿ ಯುಗದ ಹೊಸ ಕೆಲಸ ಸೇರಿದ್ದೇನೆ. ಅವಳಿಗೆ ಆಗಾಗ ಸಿಗುತ್ತಿದ್ದೆ. ಈಗಲೂ ಅವಳಿಗೆ ನನ್ನ ಮೊಬೈಲ್ ಸಂಖ್ಯೆ ಗೊತ್ತು.
ಅವಳ ಫೋನ್ ಬಂದಾಗ ನಾನು ಕೆಳಗೆ ಪಿಜ್ಜಾ ಮುಕ್ಕುತ್ತಿದ್ದೆ. `ಅವನ ಮನೆಗೆ ಹೋಗಬೇಕು ಅಂತ ಅನ್ನಿಸಿದೆ ಮಾರಾಯ’ ಎಂದಳು. ಮೊದಲು ಆಟೋದಲ್ಲೇ ಇಲ್ಲಿಗೆ ಬಾ, ಆಮೇಲೆ ಮಾತಾಡೋಣ ಎಂದೆ. ಅವನೂ ಬೆಂಗಳೂರಿನಲ್ಲೇ ಇದ್ದಾನೆ. ದೊಡ್ಡ ಆರ್ಕಿಟೆಕ್ಟ್.
ಅವಳ ಮುಖದಲ್ಲಿ ಏನೋ ದುಗುಡ. ಬಳ್ಳಾರಿಯಿಂದ ಬಸ್ಸಿನಲ್ಲಿ ಬಂದಾಗ ಇದ್ದ ಖಿನ್ನತೆಗೂ, ಇವತ್ತಿನದಕ್ಕೂ ತುಂಬಾ ವ್ಯತ್ಯಾಸವಿದೆ.
ಇಬ್ಬರೂ ಆಟೋದಲ್ಲೇ ಅವನ ಮನೆಗೆ ಹೋದೆವು. ಸುಮ್ಮನೆ ಯಾವುದೋ ಸಿನೆಮಾ ಹಾಕಿಕೊಂಡು ನೋಡ್ತಾ ಇದ್ದವನು ನಮ್ಮನ್ನು ನೋಡಿ ಹುಬ್ಬೇರಿಸಿದ. `ಅರೆ ಎಂಥ ಸರ್‌ಪ್ರೈಸ್’ ಎಂದ. ಕೂತುಕೊಳ್ಳಲು ಹೇಳಿ ಹಾಲು ತರಲು ಹೊರಗೆ ಹೋದ. ನಾವು ನಗು ಹಂಚಿಕೊಂಡೆವು. ಅವನಿನ್ನೂ ಮದುವೆಯಾಗಿಲ್ಲ. ಅವನಿಗೆ ವಯಸ್ಸಿನ ಪರಿವೆ ಇಲ್ಲ.
ಅವನೇ ಮಾಡಿದ ಚಾ ಕುಡಿದೆವು. ಮಾಡರ್ನ್ ಆರ್ಕಿಟೆಕ್ಚರ್ ಮಾರುಕಟ್ಟೆಯ ಬಗ್ಗೆ ಅವನು ಹೇಳಿದ ಡೈಲಾಗ್‌ಗಳಿಗೆ ಇವಳೂ ಒಂದಷ್ಟು ಪ್ರತಿಕ್ರಿಯೆ ನೀಡಿದಳು. ಹಾಗೇ ಅರ್ಧ ತಾಸು ಮಾತನಾಡಿ ಹೊರಬಿದ್ದೆವು.
ಆಟೋದಲ್ಲಿ ಕುಳಿತಾಗ ಅವಳ ಮುಖದಲ್ಲಿ ನಗು ಮಾಸಿರಲಿಲ್ಲ. ಯಾಕೆ ಅವಳು ನಗುತ್ತಿದ್ದಾಳೆ? ಅವನನ್ನು ಸೋಲಿಸಿದೆ ಎಂದೆ? ತಾನು ಮದುವೆಯಾಗಿ ಸುಖವಾಗಿದ್ದೇನೆ; ನೀನು ಮಾತ್ರ ಒಂಟಿಯಾಗಿದ್ದೀಯ ಅಂತಲೆ?
ನನ್ನ ಆಫೀಸಿನ ಎದುರು ಇಳಿದೆ. ಮತ್ತೆ ಅವಳ ಕೈ ಹಿಡಿದು ಹೇಳಿದೆ: ಚೆನ್ನಾಗಿರು ಮಾರಾಯ್ತಿ. ಅವನ ಭೇಟಿ ಆದ್ರೂ ಒಂದೆ; ಆಗದಿದ್ದರೂ ಒಂದೆ. ಈಗಂತೂ ಅವನನ್ನು ನೋಡಿದೀಯ. ಮುಂದೆ ಹಾಗೆ ಕೇಳಬೇಡ.
`ಆಯ್ತು ಕಣೋ. ತುಂಬಾ ಥ್ಯಾಂಕ್ಸ್. ನಾನೊಬ್ಳೇ ಖಂಡಿತ ಅವನ ಮನೆಗೆ ಹೋಗ್ತಿರಲಿಲ್ಲ. ಆದ್ರೆ ಎಷ್ಟೋ ವರ್ಷದಿಂದ ಕೊರೀತಾ ಇತ್ತು. ಅವನನ್ನು ಮಾತಾಡಿಸಬೇಕು ಅಂತ. ಇವತ್ತು ಸಮಾಧಾನ ಆಯ್ತು. ಅವನೇನೂ ನನಗೆ ಸೂಟ್ ಆಗ್ತಾ ಇರಲಿಲ್ಲ ಅಂತ ಕಾಣ್ಸುತ್ತೆ. ಅದಕ್ಕೇ ನಗು ಬಂತು.’
ಇವಳಿಗೆ ತನ್ನದೇ ಆದ ಆರ್ಗೂಮೆಂಟ್ ಬೇಕಿತ್ತು ಅನ್ನಿಸಿತು.
ಪಾರ್ಕಿಂಗ್ ಇಲ್ಲದ ಈ ಬೀದಿಯಲ್ಲಿ ಆಟೋ ನಿಲ್ಲಿಸುವುದೇ ಕಷ್ಟ. ಅವಳನ್ನು ಹಾಗೆ ಬೀದಿಯಲ್ಲಿ ಮಾತನಾಡಿಸಲು ನನಗೆ ಸಾಧ್ಯವಾಗಲಿಲ್ಲ. `ಸರಿ ಬೈ. ಮತ್ತೆ ಯಾವಾಗ್ಲಾದರೂ ಸಿಗು’ ಎಂದೆ.
`ನೀನು ನನ್ನ ಬೆಸ್ಟ್ ಫ್ರೆಂಡ್ ಮಾರಾಯ. ನನಗೆ ಡಿಪ್ರೆಸ್ ಆದಾಗ್ಲೆಲ್ಲ ನಿನಗೆ ಫೋನ್ ಮಾಡ್ತೀನಿ. ಪ್ಲೀಸ್ ಮಾತಾಡು’ ಎಂದಳು. ಇವರ ಮಾತು ನಿಲ್ಲೋದೇ ಇಲ್ಲ ಎಂದು ಗೊತ್ತಾಗಿಬಿಟ್ಟಂತೆ ಆಟೋ ಹೊರಟೇ ಬಿಟ್ಟಿತು.
ಇಲ್ಲಿಗೆ ಈ ಕಥೆ ಮುಗಿಯಿತು ಎಂದು ನಾನೂ ನೀವೂ ಅಂದುಕೊಂಡಿರುವ ಹಾಗೆಯೇ ಹತ್ತು ವರ್ಷಗಳು ಕಳೆದವು.
ಬಳ್ಳಾರಿಯ ಬಸ್ಸು, ಧೂಳು, ಚಳ್ಳಕೆರೆಯ ದಾಭಾ, ತುಮಕೂರಿನ ಟ್ರಾಫಿಕ್ ಜಾಮ್ ಎಲ್ಲವನ್ನೂ ನಾನು ಮರೆತಿದ್ದೆ. ಹಿರಿಯೂರುವರೆಗಿನ ರಸ್ತೆ ಹಾಗೇ ಇದ್ದರೂ ರಾಷ್ಟ್ರೀಯ ಹೆದ್ದಾರಿಯೀಗ ನಾಲ್ಕು ಪಥಗಳಾಗಿ ಬಿಡಿಸಿಕೊಂಡಿದೆ. ನಾನೂ ನಾಲ್ಕಾರು ಕೆಲಸಗಳನ್ನು ಮಾಡಿ, ನನ್ನ ಅನುಭವ ವಿಸ್ತಾರದ ನೆಪದಲ್ಲಿ ಬೆಂಗಳೂರಿನ ಹತ್ತಾರು ಕಂಪನಿಗಳಲ್ಲಿ ದುಡಿದೆ ; ಸೋಡೆಕ್ಸೋ ಪಾಸ್ ಹೊಡೆದು ಮಜಾ ಮಾಡಿದೆ. ಬಸ್ಸಿನ ಸುಖವನ್ನೇ ಮರೆತ ದರಿದ್ರ ಮನುಷ್ಯನಾದೆ; ಸ್ಕೂಟರಿನಿಂದ ಕಾರಿಗೆ ಜಿಗಿದೆ. ಇಂಟರ್‌ನೆಟ್, ಚಾಟ್ ಎಲ್ಲದಕ್ಕೂ ಪಕ್ಕಾದೆ. ಅವಳು ಎಲ್ಲಿದ್ದಾಳೆ, ಹೇಗಿದ್ದಾಳೆ ಅನ್ನೋದಿರಲಿ, ನನ್ನ ಪ್ರೀತಿಯ ಗೆಳೆಯರನ್ನೂ ಮರೆತು ಹಾಯಾಗಿ ಇರೋದಕ್ಕೆ ಆರಂಭಿಸಿದೆ.
`ಹಾಯ್, ಹ್ಯಾಗಿದೀಯ?’ ಎಂಬ ಒಂದು ಸಾಲಿನ ಪ್ರೈವೇಟ್ ಮೆಸೇಜ್ ನನ್ನ ಖಾಸಗಿ ಜಾಲತಾಣಕ್ಕೆ ಬಂದಾಗಲೇ ಅವಳೂ ಇಲ್ಲೆಲ್ಲೋ ಇದ್ದಾಳೆ ಎಂದು ಅಚ್ಚರಿಯಾಯ್ತು. ಪೋನ್ ಮಾಡಿದರೆ ಅಚ್ಚ ಬೆಂಗಳೂರು ಇಂಗ್ಲಿಶಿನಲ್ಲಿ ಹಾಯ್, ಹೂ ಈಸ್ ದಿಸ್ ಎಂದಳು. ನಾನೇ ಮಾರಾಯ್ತಿ ಎಂದು ನಸುನಕ್ಕಮೇಲೆ ಅವಳ ಭಾಷೆ ಬದಲಾಯ್ತು. ಅವನೆಲ್ಲಿದಾನೆ ಗೊತ್ತ ಅನ್ನೋದೇ ಮೊದಲ ಪ್ರಶ್ನೆ.
ಅವನೀಗ ಮದುವೆಯಾಗಿದಾನೆ ಎಂದೆ. ಅವನಿಗೆ ಒಬ್ಬ ಮಗಳಿದಾಳೆ. ಚಲೋ ಚೂಟಿ ಎಂದೆ. ಹೌದ ಎಂದು ಅಚ್ಚರಿಪಟ್ಟಳು. ಅವಳ ಹೆಸರು ಕೇಳಿದಳು.
`ಮೌನ’
`ಅದೇ ಹೆಸರು….. ಅದು ನಂದೇ ಪ್ರಪೋಸಲ್ ಕಣೋ…’ ಎಂದವಳೇ ಫೋನ್ ಕಟ್ ಮಾಡಿದಳು.
ಕಿಟಕಿಯ ಕರ್ಟನ್ ಸರಿಸಿ ನೋಡಿದೆ. ರಸ್ತೆಯಲ್ಲಿ ಭರ್ರೋ ಎಂದು ರಿಕ್ಷಾಗಳು, ಕಾರುಗಳು,ಸ್ಕೂಟರುಗಳು ಸಾಗುತ್ತಲೇ ಇದ್ದವು.
(ಕೃಪೆ: ಉಷಾಕಿರಣ)

ನಯನ

ನಯನ

- ರಮಾ ಶಾಸ್ತ್ರಿ

ದಿನವೂ ನಡೆದಿತ್ತು
ಅವರೀರ್ವರ
ನಯನಗಳ
ಮಿಲನ ||

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು

- ಹುಯಿಲಗೋಳ ನಾರಾಯಣರಾವ್

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.
ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು.
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.
ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.
ನಯನ
ನನ್ನವಳಾಗುವ
ದಿನ
ಬ೦ದೇ ಬರುವುದು
ಆ ಸುದಿನ
ಎ೦ದಿತು
ಅವನ ಮನ |
ಆದರೆ
ಅವಳಾಗಬೇಕೆ
ಬೇರೊಬ್ಬನಲ್ಲಿ
ವಿಲೀನ ?

ಕನ್ನಡ ರೇಡಿಯೋ ಕೇಳಿ

ಅಂತರಜಾಲದಲ್ಲಿ ಸಾವಿರಾರು ರೇಡಿಯೋ ಕೇಂದ್ರಗಳಿವೆ. ಆಕಾಶವಾಣಿ ಕೂಡ ಇದೆ. ಆದರೆ ಈಗ ಪ್ರಸಾರ ಮಾಡುತ್ತಿಲ್ಲ. ಅದೇನೋ ಸರಿ. ಕನ್ನಡ ರೇಡಿಯೋ ಇಲ್ಲವೇ ಎಂದು ಕೇಳುತ್ತೀರಾ? ಹೌದು. ಇದೆ. ಅದನ್ನು ಆಲಿಸಲು ನೀವು ಭೇಟಿ ಮಾಡಬೇಕಾದ ಜಾಲತಾಣದ ವಿಳಾಸ http://bit.ly/4BxX1v. ರೇಡಿಯೋ ಕೇಂದ್ರ ಎಂದರೆ ನೇರಪ್ರಸಾರ. ಅರ್ಥಾತ್ ನೀವು ಭೇಟಿ ನೀಡಿದಾಗ ಯಾವ ಸಂಗೀತ ಪ್ರಸಾರ ಆಗುತ್ತಿದೆಯೋ ಅದನ್ನು ಆಲಿಸಬೇಕು. ನಿಮಗೆ ಇಷ್ಟವಾದ ಹಾಡನ್ನು ಬೇಕಾದಾಗ ಆಲಿಸಬೇಕಾದರೆ www.kannadaaudio.com ಜಾಲತಾಣಕ್ಕೆ ಭೇಟಿ ನೀಡಿ. ಆದರೆ ನಿಮಗೆ ಇಷ್ಟವಾದ ಹಾಡು ಅಲ್ಲಿರಬೇಕು, ಅಷ್ಟೆ. www.raaga.com ಜಾಲತಾಣದಲ್ಲೂ ಕನ್ನಡ ಹಾಡುಗಳಿವೆ.

ಉಚಿತ ಕನ್ನಡ ತಂತ್ರಾಂಶಗಳು



ಕೇಂದ್ರ ಸರಕಾರದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಲಾಖೆಯವರು ಎಲ್ಲ ಭಾರತೀಯ ಭಾಷೆಗಳಿಗೆ ಅವಶ್ಯ ತಂತ್ರಜ್ಞಾನಗಳ ತಯಾರಿಕೆಗಾಗಿ ಒಂದು ಇಲಾಖೆಯನ್ನು ನಿರ್ಮಿಸಿದ್ದಾರೆ. ಅವರು ತಯಾರಿಸಿದ ಮತ್ತು ಇತರೆ ಹಲವಾರು ಸಂಘ ಸಂಸ್ಥೆಗಳು ತಯಾರಿಸಿದ ಹಲವಾರು ಉಪಯುಕ್ತ ತಂತ್ರಾಂಶಗಳು, ಫಾಂಟ್‌ಗಳು, ಪರಿವರ್ತಕ ತಂತ್ರಾಂಶಗಳು, ಕನ್ನಡ ಕಲಿಯಲು ಉಪಯುಕ್ತ ತಂತ್ರಾಂಶ ಮತ್ತು ಆಟಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ http://bit.ly/7NEZrF
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
http://ganakindi.blogspot.com/search/label/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%A4%E0%B2%82%E0%B2%A4%E0%B3%8D%E0%B2%B0%E0%B2%BE%E0%B2%82%E0%B2%B6

ಹಿಗೊಂದು ವಿಡಿಯೋ


ಜೂನ್ 7, 2011

ಸರ್ದಾರ್ ಜಿ ನಗೆಹನಿಗಳು

Newspaper ಪದಕೋಶ.

ಪ್ರಶ್ನೋತ್ತರ

ಪರೀಕ್ಷೆಯನುಸಾರ ಪ್ರಶ್ನೆಪತ್ರಿಕೆಗಳು

* ಪಶು ವೈದ್ಯಕೀಯ ನಿರೀಕ್ಷಕ ಹುದ್ದೆಯ ಸ್ಪ. ಪರೀಕ್ಷೆ
* ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಸ್ಪ. ಪರೀಕ್ಷೆ
* ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಯ ಸ್ಪ. ಪರೀಕ್ಷೆ
* ಮಾರುಕಟ್ಟೆ ಸಹಾಯಕ / ಗ್ರಂಥಾಲಯ ಅಧಿಕಾರಿ ಹುದ್ದೆಯ ಸ್ಪ. ಪರೀಕ್ಷೆ
* ಕಾರ್ಮಿಕ ನಿರೀಕ್ಷಕ ಹುದ್ದೆಯ ಸ್ಪ. ಪರೀಕ್ಷೆ
* ಸಬ್ ರಿಜಿಸ್ಟ್ರಾರ್ ಹುದ್ದೆಯ ಸ್ಪ. ಪರೀಕ್ಷೆ
* ಕಿರಿಯ ಕಾನೂನು ಅಧಿಕಾರಿ ಹುದ್ದೆಯ ಸ್ಪ. ಪರೀಕ್ಷೆ
* ಪೊಲೀಸ್ ಪೇದೆ ಹುದ್ದೆಯ ಸ್ಪ. ಪರೀಕ್ಷೆ
* ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸ್ಪ. ಪರೀಕ್ಷೆ
* ಅಬಕಾರಿ ಉಪನಿರೀಕ್ಷಕ ಹುದ್ದೆಯ ಸ್ಪ. ಪರೀಕ್ಷೆ
* FDA ಹುದ್ದೆಯ ಸ್ಪ. ಪರೀಕ್ಷೆ
* KAS ಪೂರ್ವಭಾವಿ ಪರೀಕ್ಷೆ
* SDA ಹುದ್ದೆಯ ಸ್ಪ. ಪರೀಕ್ಷೆ
* ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯ ಸ್ಪ. ಪರೀಕ್ಷೆ
* ಪ್ರೌಢಶಾಲಾ ಶಿಕ್ಷಕ ಹುದ್ದೆಯ ಸ್ಪ. ಪರೀಕ್ಷೆ
* ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹುದ್ದೆಯ ಸ್ಪ. ಪರೀಕ್ಷೆ
* B.Ed. Entrance

ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ



ಕನ್ನಡ ಸಾಹಿತ್ಯ


ಕನ್ನಡ ಸಿನೆಮಾ


ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ


ವಿಶ್ವ ರಂಗದಲ್ಲಿ ಕರ್ನಾಟಕ
* ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ
* ನದಿಗಳು - ಉಗಮಸ್ಥಾನಗಳು
* ಕನ್ನಡ ಸಾಹಿತಿಗಳ ಸುಮಧುರ ಗೀತೆಗಳನ್ನ ಬಳಸಿದ ಚಲನಚಿತ್ರಗಳ ಪಟ್ಟಿ
* ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರಗಳ ಪಟ್ಟಿ
* ಕರ್ನಾಟಕದ ಬೀಚ್ ಗಳು
* ವಿಶ್ವವಿದ್ಯಾಲಯ ಆವರಣಗಳು
* ಕನ್ನಡದ / ಕರ್ನಾಟಕದ : ಮೊದಲಿಗರು / ಮೊದಲುಗಳು
* ಶರಣರ ವಚನಗಳ ಅಂಕಿತನಾಮಗಳು
* ದಾಸರ ಪದಗಳ ಅಂಕಿತನಾಮಗಳು
* ಕನ್ನಡ ಸಾಹಿತಿಗಳ ಕಾವ್ಯನಾಮಗಳು
* ದೊಡ್ಡದು - ಚಿಕ್ಕದು
* ಪ್ರಸಿದ್ಧ ನಟ-ನಟಿಯರ ಪ್ರಥಮ ಚಲನಚಿತ್ರಗಳು
* ಮೆಚ್ಚುಗೆಯ ಮಾತುಗಳು
* ಕರ್ನಾಟಕದ ವಿಜ್ಞಾನ ಕ್ಷೇತ್ರದಲ್ಲಿನ ಪ್ರಮುಖ ಘಟನೆಗಳ ಕಾಲಾನುಕ್ರಮಣಿಕೆ
* ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ
* ಕರ್ನಾಟಕದಲ್ಲಿ ರಂಗಭೂಮಿ


* ಕರ್ನಾಟಕ ರಾಜಕೀಯ


* ಪಂಪ ಪ್ರಶಸ್ತಿ ವಿಜೇತರ ಪಟ್ಟಿ
* ಕನ್ನಡಿಗರು ಬರೆದಿರುವ ಪ್ರವಾಸ ಕಥನಗಳು
* ಕನ್ನಡಿಗರ ಆತ್ಮಚರಿತ್ರೆಗಳು
* ಕರ್ನಾಟಕ ಇತಿಹಾಸದಲ್ಲಿ ಈ ದಿನ
* ಸಂಕೇತಾಕ್ಷರಗಳು
* ಕರ್ನಾಟಕದ ಕೋಟೆಗಳು
* ಕರ್ನಾಟಕದ ಪ್ರಮುಖ ಕಲಾ ಶಾಲೆಗಳು
* ಕನ್ನಡ ಸಾಹಿತಿಗಳಿಗೆ ಅರ್ಪಿಸಿದ ಸಂಸ್ಮರಣ / ಅಭಿನಂದನಾ ಗ್ರಂಥಗಳು
* ಕರ್ನಾಟಕ ರಾಜ್ಯದ ಪ್ರಮುಖ ಗ್ರಂಥಾಲಯಗಳು
* ಕನ್ನಡದ ರಾಷ್ಟ್ರಕವಿಗಳು
* ಕರ್ನಾಟಕದಲ್ಲಿ ಶಿಕ್ಷಣ

NCERT BOOKS 3rd to 12th std

ncrt books clik this