ಸೆಪ್ಟೆಂ 23, 2011

Kannada Jnanapeetha awardee, kannadada Aasti "Masti Venkatesh Iyengar"











This article gives the information about the Kannada Jnanapeetha awardee, kannadada Aasti "Masti Venkatesh Iyengar"








Kannada Jnanapeetha awardee "Masti Venkatesh Iyengar"

He was born on June 6th 1891 in masti village of Kolar district.His pen name was Srinivasa.

Education and career


Masti obtained a master's degree in English literature in 1914 from the Madras University.He joined the Indian civil service and served in different parts of Karnataka, which gave him immense inspiration for his literary works and got retired in 1943.He died in 1986 at the age of 95.

Masti started wrting short stories and written many poems. He wrote more than 120 books in Kannada and 17 in English.

Awards


Jnanpith award has been awadred for his historical novel Chikkaveera Rajendra in 1983, which is about last king of kodava. He is the fourth janapeetha awardee among 7 recipients.

Honours


Masti known as Maasti Kannadada Aasti, which means masti is the asset of Kannada.He also called as "Brahma of Kannada Stories" ("Forefather of Short Stories")

Epics written by Masti


Shri Rama Pattabisheka

Novels written by masti


Chikkaveera Rajendra Historical Novel
Channabasava Nayaka Historical Novel (which is last king among Nayakas of Shimoga District)
Subbana

Stories and Anthologies by Masti


Kelavu Sanna Kathegalu (Some Short Stories)
Kaagegalu (Crows)
Rangana Maduve (Ranga's Marriage)
Dombara Chenni

Plays by Masti


Yashodhara
Kakanakote
Kalidasa


Autobiography by Masti


3-volume Bhaava

Other writings


Sankranti
Sheshamma
Shanta
Talikoti
Kannadad Seve
Arun
Tavare

Main Rivers and Dams of Karnataka

Main Rivers and Dams of Karnataka

Main Rivers of Karnataka
  1. Cauvery or Kaveri River: Kaveri river, also called Dakshina Ganga (the Ganges of the south), is one of the great and sacred rivers of India. It has many tributaries including Shimsa, Hemavati, Arkavathi, Kapila, Honnuhole, Lakshmana Tirtha, Kabini, Bhavani, Lokapavani, Noyyal and Amaravati. It is also considered sacred by the Hindus as water will purify all sin. The origin of river Kaveri is Talakaveri located in the Western Ghats in Coorg (Kodagu) district. Talakaveri is a famous pligrimage and tourist spot set amidst Bramahagiri Hills near Mercara (Madikeri) in Coorg (Kodagu) district of Karnataka. It flows south and east for around 765 km, emptying into the Bay of Bengal.

  2. Tungabhadra River: The Tungabhadra is a chief tributary of the Krishna River. The Tungabhadra is formed north of Shimoga at an elevatibn of about 610 metres by the union of twin rivers, the Tunga and the Bhadra, which rise in the eastern slope of the Western Ghats, in the state of Karnataka. The Tungabhadra flows east across the Deccan Plateau, joining the Krishna in Andhra Pradesh state, from where the Krishna continues east to empty into the Bay of Bengal.

  3. Krishna River: The Krishna River is one of the longest rivers of India. It originates at Mahabaleswar in Maharashtra, passes through Karnataka and meets the sea in the Bay of Bengal at Hamasaladeevi in Andhra Pradesh.

  4. Ghataprabha River: The Ghataprabha river rises in the Western Ghats and flows eastwards for a length of 283 km before joining the Krishna. The river debouches by 53 metres at Gokak Falls in Belgaum (Belagaavi) District.

  5. Malaprabha River: The river Malaprabha also rises in Western Ghats at an altitude of 792 metres in Belgaum (Belagaavi) district. The river flows first in easterly and then in north-easterly directions and joins the Krishna at Kudalasangama, about 304 km from its source.

  6. Bhima River: The river Bhima originates in the forest of Bhimashankar in Pune, and flows through the states of Maharashtra and Karnataka. It flows for 861 km before joining the Krishna near Kudlu in Raichur taluk.

  7. Hemavati River: The river Hemavati rises in the Western Ghats at an elevation of about 1,219 metres and joins the river Kaveri near Krishnarajasagar.

  8. Kabini River: Kabini River is a tributary of river Kaveri, it originates in Wayanad District of Kerala state, south India from the confluence of the Panamaram and Mananthavady rivers, and flows eastward to join the Kaveri River at Tirumakudal Narasipur. The total length of the river is about 230 km.

  9. Sharavathi River: The Sharavathi is a river in India that originates at Ambuthirtha in Thirthahalli taluk, flows north-west through the Western Ghats forming the Jog Falls before joining the Arabian Sea at Honavara.

National Parks and Wild Life of Karnataka


1. Bandipur National Park & Tiger Reserve
Area: 874 sq km
Season: March to July, September to October (open throughout the year)
Main wildlife: Elephant, tiger, gaur, sambar, chital, wild dog, sloth bear, Partridge
Forest type: Tropical moist forest, tropical dry deciduous
Nearest town: Gundulupet (20 km)

2. Bhadra Sanctuary
Area: 492 sq km
Season: October to May (open throughout the year)
Main wildlife: Gaur, elephant, panther, wild boar, sloth bear, sambar, chital, barking deer
Forest type: Tropical dry deciduous
Nearest town: Shimoga (30 km)

3. Dandeli Sanctuary
Area: 572 sq km
Season: December to May (open throughout the year)
Main wildlife: Tiger, panther, elephant, gaur, sloth bear, sambar, chital, wild boar
Forest type: Tropical wet evergreen, tropical semi-evergreen
Nearest town: Dandeli (2 km)

4. Bannerghatta National Park
Area: 104.27 sq km
Season: year-round (open throughout the year except Tuesday)
Main wildlife: Elephant, Gaur, Leopard, Jackal, Fox, Wild pig, Sloth bear, Sambar, Spotted deer, Barking deer, Common langur, Bonnet macaque, Porcupine and the Hare. This park also has a Lion and Tiger safari
Forest type: Dry deciduous and thorny scrub
Nearest town: Bangalore (20 km)

5. Ranganathittu Bird Sanctuary
Area: 67 sq km
Season: June to November
Birds: Open bill storks, darters, White Ibis, Little cormorants, Egret, Heron, Partridge, River tern, Stone Plougher, Snake bird, etc.,
Nearest town: Mysore (16 km)

Jnanpeeth Awardees from Karnataka

Jnanpeeth Awardees from Karnataka

Jnanpeeth Awardees from Karnataka | Jnanapeeta Awardees | Jnanpith Award


The Jnanpeeth Award is the highest literary honour conferred in the Republic of India. An Indian citizen who writes in any of the official languages of India is eligible for the honour. The award carries a cheque for Rs. 5,00,000.00 a citation plaque and a bronze replica of Vagdevi. The Jnanpeeth Award was instituted on May 22, 1961 The first award was given in 1965. Its first recipient was Malayalam writer G. Sankara Kurup in 1965.

Kannada has won seven, the highest number of Jnana Peeth Awards, the most prestigious literary award given by the Government of India. The poets who won them are:
  1. Kuvempu for Shri Ramayana Darshanam
  2. Dha. Raa. Bendhre for Naaku thanthi
  3. Shivaram Karanth for Mookajjiya Kanasugalu
  4. Masti Venkatesh Iyengar for Chikkaveera Raajendhra
  5. Vi. Kru. Gokak for Bhaaratha Sindhhu Rashmi
  6. Girish Karnad for his works in Kannada
  7. U. R. Ananthamurthy for his works in Kannada

ಸೆಪ್ಟೆಂ 12, 2011

Manipur Rural Bank (Sponsored by United Bank of India) Recruitment of Officers & Office Assistants 2011

Manipur Rural Bank (Sponsored by United Bank of India) Recruitment of Officers & Office Assistants 2011 (Post Published at News Bird http://news.ravisblognet.com). MRB (UBI) invites Online Applications from eligible candidates for Recruitment as Officer Junior Management Grade Scale-I Group “A” & Office Assistant (Multi Purpose) - Group-“B”.ubi_logoImportant Dates :
  • Online Application Commences from : 12-09-2011
  • Last Date to Apply Online : 11-10-2011
  • Date of Written Examination :
    • Officer JMG Scale – I Recruitment Exam : 08-01-2012
    • Office Assistant (Multipurpose) Recruitment Exam : 18-12-2011
Education Qualification : Any Degree with Proficiency in Local Language & Computer Knowledge.
Age Limit (As on 01-09-2011) : Minimum 18 years Maximum 28 years
Fee : Officer – Rs. 400/-; Office Assistant – Rs. 250/- (Rs.50 for SC/ST/PH/EXS)
How to Apply : Click here to know How to Apply for bank recruitment Exams. A step-by-step Guide.
image

Click here for Recommended / Prescribed Books for Bank Recruitment Exams Available Online. Buy Banking Exam Books online at lowest prices. Special Discount and free shipping within 5-7 days Available all over India.
Search & Buy books at Flipkart.com
and get special discounts.  


ಸೆಪ್ಟೆಂ 4, 2011

ಯು.ಪಿ.ಎಸ್.ಸಿ. ನಡೆಸುವ ಐ.ಎ.ಎಸ್. ಪರೀಕ್ಷೆ


ಯು.ಪಿ.ಎಸ್.ಸಿ. ನಡೆಸುವ ಐ.ಎ.ಎಸ್. ಪರೀಕ್ಷೆ



CSE ( CIVIL SERVICE EXAM )




ಐಎಎಸ್ ಪರೀಕ್ಷೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ , ಕೇಂದ್ರ ಲೋಕ ಸೇವಾ ಆಯೋಗ [ UPSC ] ನಡೆಸುವ ಈ ಪರೀಕ್ಷೆ ಭಾರತದಾದ್ಯಂತ ಅತ್ಯಂತ ಸುಪರಿಚಿತ. ಪ್ರತಿ ವರ್ಷ ಚಾಚೂ ತಪ್ಪದೇ ನಡೆಸಲ್ಪಡುವುದೇ ಈ ಪರೀಕ್ಷೆಯ ಅಗ್ಗಳಿಕೆ. Civil Service Exam ಅಂತ ನಾನು ಏನಕ್ಕೆ ಶೀರ್ಷಿಕೆ ಕೊಟ್ಟೆ ಅಂದ್ರೆ : ಪ್ರತಿ ವರ್ಷ ನಡೆಯೋ ಈ ಪರೀಕ್ಷೆಯಲ್ಲಿ ಒಟ್ಟು 60 ರಿಂದ 90 ಜನ ಮಾತ್ರ IAS ಅಧಿಕಾರಿಗಳನ್ನ ಆರಿಸಲಾಗ್ತದೆ. ಇನ್ನುಳಿದಂತೆ IPS ( Indian Police Service ), IFS ( Indian Foreign service ), IRS ( Indian Revenue Service )... ಹೀಗೆ ಇನ್ನುಳಿದ ಸೇವೆಗಳಿಗೆ ಅಧಿಕಾರಿಗಳನ್ನು ಈ ಪರೀಕ್ಷೆಯಿಂದಲೇ ಆರಿಸಲಾಗುತ್ತದೆ. ಇದರ ಜೊತೆಗೆ ಸದರಿ ಪರೀಕ್ಷೆ IAS ಪರೀಕ್ಷೆ ಅಂತ ಜನಪ್ರಿಯವಾಗಲು ಕಾರಣವೂ ಇಲ್ಲದೇ ಇಲ್ಲ. ಉದಾಹರಣೆಗೆ : 2005 ರಲ್ಲಿ ಪ್ರತಿ ವರ್ಷದಂತೆ ಪರೀಕ್ಷೆ ಬರೆದ ಸುಮಾರು 4,00,000 ಜನರಲ್ಲಿ ಆಯ್ಕೆಯಾದ 425 ಜನರಲ್ಲಿ ತಮಗೆ ನೀಡಬೇಕಾದ ಸೇವೆ ಯಾವುದಿರಲಿ ಅಂತ ಆಯ್ಕೆ ಕೇಳಿದಾಗ 398 ಜನ IAS ಅಂತ ಬರೆದು, 18 ಜನ IFS ಅಂತ ಮತ್ತು ಇನ್ನುಳಿದ 9 ಜನ IPS ಎಂದು ಬರೆದು ಕೊಟ್ಟಿದ್ದನ್ನ ಗಮನಿಸಿದರೆ ಈ ಪರೀಕ್ಷೆಗೆ ಆ ಹೆಸರು ಉಳಿದುಕೊಂಡಿರುವುದಕ್ಕೆ ನಿಮ್ಮಲ್ಲಿ ಸಂಶಯ ಉಳಿಯುವುದಿಲ್ಲ.

ಹಿನ್ನೆಲೆ : ' ಬ್ರಿಟಿಷ್ ರಾಜ್ ' ದಲ್ಲಿ ICS Exam ( Indian Civil Service ) ಆಗಿದ್ದ ಇದು Collector ಗಳೆಂದು ಕರೆಯಲ್ಪಡುತ್ತಿದ್ದ ICS ಅಧಿಕಾರಿಗಳನ್ನ ಆರಿಸುತ್ತಿತ್ತು. ಭ್ರಷ್ಟಾಚಾರ ಸಹಿಸದ ಕಠೋರ ಅಧಿಕಾರಿಗಳು ಆಗಿನ ಕಲೆಕ್ಟರುಗಳು ಎಂಬ ಒಂದು ನಂಬಿಕೆಯೂ ಇತ್ತು. ಇದರ ಜೊತೆಗೆ ಆಗಿನ ಬ್ರಿಟಿಷ್ ಪ್ರಧಾನಿ ಈ ಪರೀಕ್ಷೆಯಲ್ಲಿ ಆರಿಸೋ ಅಧಿಕಾರಿಗಳ ತಂಡವನ್ನ " ನಮ್ಮ Colony ಗಳಲ್ಲಿ ಬ್ರಿಟಿಷ್ Policy ಗಳನ್ನ ಜಾರಿಗೆ ತರಲು ಈ ಅಧಿಕಾರಿಗಳು ಉಕ್ಕಿನ ಚೌಕಟ್ಟಿದ್ದಂತೆ " ಅಂತ ಹೇಳಿದ್ದುಂಟು. ಆದರೆ ನಮ್ಮ ಪ್ರಥಮ ಪ್ರಧಾನಿ ನೆಹರೂಜಿ ಅವರು ಸದರಿ ಪದ್ಧತಿಯಬಗ್ಗೆ " It's Neither Indian Nor Civil Nor A 
Service " ಅಂದಿದಾರೆ, ತಮ್ಮ Discovery of India ಪುಸ್ತಕದಲ್ಲಿ.

ಪೂರ್ವಭಾವಿ , ಮುಖ್ಯ & ವೈಯಕ್ತಿಕ ಸಂದರ್ಶನ ಅಂತ ಹೇಳಿ ಒಟ್ಟು ಮೂರು ಹಂತದಲ್ಲಿ ನಡೆಯುವ ಈ ಪರೀಕ್ಷೆ ಅತ್ಯಂತ ಪಾರದರ್ಶಕ.

ಹಂತ 1 :
ಸುಮಾರು ಡಿಸೆಂಬರ್ ತಿಂಗಳಲ್ಲಿ ಅರ್ಜಿ ಕರೆಯಲಾಗುತ್ತದೆ. ಎಲ್ಲ UPSC ಪರೀಕ್ಷೆಗಳಿಗೆ ಒಂದೇ Common Application Form ಇರುವುದರಿಂದ, ಹತ್ತಿರದ ಮುಖ್ಯ ಅಂಚೆ ಕಚೇರಿಯಲ್ಲಿ 20 ರೂಪಾಯಿ ಪಾವತಿಸಿ ಅದನ್ನ ಪಡೆಯಬಹುದು. ಅರ್ಜಿ ತುಂಬಿದ 
ನಂತರ
 ಮೀಸಾಲಾತಿಗೆ ಅನುಗುಣವಾಗಿ ಪರೀಕ್ಷಾ ಶುಲ್ಕವನ್ನ CRF ( Central Recruitment Fee ) Stamp ನ್ನ ಅರ್ಜಿಯ ಮೇಲೆ ಅಂಟಿಸುವುದರ ಮೂಲಕ ಪಾವತಿಸಬೇಕು. ಹೊಸ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳನ್ವಯ ಎಲ್ಲ ಪರೀಕ್ಷೆಗಳಿಗೆ OnLine ಅರ್ಜಿ ತುಂಬಲು ಅವಕಾಶ ನೀಡುವುದರ ಜೊತೆಗೆ ಪರೀಕ್ಷಾ ಶುಲ್ಕವನ್ನ Credit / Debit Card ಅಥವಾ Online Banking ( eBanking ) ಮೂಲಕವೂ ಪಾವತಿಸುವ ಅವಕಾಶ ಕಲ್ಪಿಸಲಾಗುತ್ತಿದೆ.

ಹಂತ 2 :
ಸರಿಸುಮಾರು ಮೇ ಮಧ್ಯ ಭಾಗದಲ್ಲಿ ನಡೆಯುವ ಪೂರ್ವಭಾವಿ ಪರೀಕ್ಷೆ ಬಹು ಆಯ್ಕೆ ಮಾದರಿ ಪ್ರಶ್ನೆಪತ್ರಿಕೆಯನ್ನೊಳಗೊಂಡಿರುತ್ತದೆ. ಒಟ್ಟು 400 ಅಂಕಗಳಿಗೆ ನಡೆಯುವ ಈ ಪರೀಕ್ಷೆಯಲ್ಲಿ ಸಾಮಾನ್ಯ ಅಧ್ಯಯನ ( General Studies ) ( 200 ಅಂಕ ) ಮತ್ತು CIVIL SERVICE APTITUDE TEST (CSAT)( 200 ಅಂಕ ) ಒಳಗೊಂಡಿರುತ್ತದೆ.
ಹಂತ 3 :
ಸುಮಾರು ಅಕ್ಟೋಬರ್-ನವೆಂಬರ್ ಸಮಯದಲ್ಲಿ ನಡೆಯುವ ಮುಖ್ಯ ಪರೀಕ್ಷೆಗೆ ಆಯ್ಕೆಯಾದಾಗ ನಿಜವಾದ ಸವಾಲು ಎದುರಾಗುತ್ತೆ. ಒಟ್ಟು ಒಂಬತ್ತು Paper ( ವಿವಿಧ ಪರೀಕ್ಷೆ )ಗಳನ್ನ ಪಾಸು ಮಾಡಬೇಕಿರುವ ನೀವು ನಿಮ್ಮ ಸಾಮರ್ಥ್ಯವನ್ನ ಒರೆ ಹಚ್ಚುವ ಸಮಯವಿದು.

: Paper I : 
ಪರೀಕ್ಷೆಗೆ ಅರ್ಹವಿರುವ ಸಂವಿಧಾನದ ಎಂಟನೇ ಅನುಚ್ಛೇದದಲ್ಲಿ ಉಲ್ಲೇಖಿಸಿರುವ ಒಟ್ಟು 22 ಭಾರತೀಯ ಭಾಷೆಗಳಲ್ಲಿ ನೀವು ಆಯ್ಕೆ ಮಾಡುವ ಒಂದು ಭಾಷೆಯ ಪರೀಕ್ಷೆ.[ 100 ಅಂಕಗಳು ] : Paper II : ಇಂಗ್ಲೀಷ್ ಭಾಷಾ ಪರೀಕ್ಷೆ. [ 100 ಅಂಕಗಳು ] Paper I & II ಎರಡೂ ಪರೀಕ್ಷೆಗಳು ಹತ್ತನೇ ತರಗತಿಯ ಮಟ್ಟದ ಪರೀಕ್ಷೆಗಳು. ಮತ್ತು ಎರಡೂ ಪರೀಕ್ಷೆಗಳು ಪಾಸಾದರೆ ಸಾಕು. Rank ನೀಡುವಲ್ಲಿ ಪರಿಗಣಿಸಲಾಗುವುದಿಲ್ಲ. : Paper III : ನಿಬಂಧ ಸ್ವರೂಪದ ಪರೀಕ್ಷೆ [ 200 ಅಂಕಗಳು ] : Paper IV & V : ಸಾಮಾನ್ಯ ಅಧ್ಯಯನ [ ತಲಾ 300 ಅಂಕಗಳು ] : Paper VI, VIIVIII & IX : ನೀವು ಆಯ್ಕೆ ಮಾಡುವ ಎರಡು Optional Paper ಗಳು [ ತಲಾ 300 ಅಂಕಗಳು ]
ಮುಖ್ಯ ಪರೀಕ್ಷೆಯಲ್ಲಿ ಒಟ್ಟು 2000 ಅಂಕಗಳು
ನೀವು ಸಂದರ್ಶನಕ್ಕೆ ಆಯ್ಕೆಯಾಗುವುದನ್ನ ನಿರ್ಧರಿಸ್ತಾವೆ.
ಹಂತ 4 :
ಏಪ್ರಿಲ್ - ಮೇ ತಿಂಗಳಲ್ಲಿ ನಡೆಯುವ ವೈಯಕ್ತಿಕ ಸಂದರ್ಶನಕ್ಕೆ 300 ಅಂಕಗಳನ್ನ ಇಡಲಾಗಿದೆ.

*ಈಗ ಈ 2300 ಅಂಕಗಳಲ್ಲಿ ನಿಮ್ಮ IAS ಆಗುವ ಕನಸಿನ ಸಂಖ್ಯೆ ಅಡಗಿರುತ್ತೆ*


^^^^^^^^^^^^^^^^^^^

ಈ ಪರೀಕ್ಷೆಗಳಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅವರ ಅಂಕಗಳಿಗನುಗುಣವಾಗಿ ಈ ಕೆಳಗಿನ Service ನೀಡಲಾಗುತ್ತೆ. [ Indian Forest Service & Indian Engineering Service ಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತದೆ ]. ಕೊನೆಗೆ ನೀಡಿರುವ State Service Cadre ಗಳಿಗೆ ಪ್ರತಿ ರಾಜ್ಯದಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತೆ. [ ಅಸ್ಸಾಂ-ಮೇಘಾಲಯ : ಮಣಿಪುರ-ತ್ರಿಪುರಾ : ಅರುಣಾಚಲ ಪ್ರದೇಶ-ಗೋವಾ-ಮಿಝೋರಾಮ್-ಕೇಂದ್ರಾಡಳಿತ ಪ್ರದೇಶಗಳು ಗಳಿಗೆ ಮೂರು ಜಂಟಿ Cadre ಗಳಿಗಾಗಿ ಮೂರು ಪ್ರತ್ಯೇಕ ಪರೀಕ್ಷೆಗಳನ್ನ ನಡೆಸಲಾಗುತ್ತೆ ]

Insider-Outsider Ratio ಎಂಬ ಒಂದು ಅಂಶವನ್ನ ರಾಜ್ಯಗಳಿಗೆ ಅಧಿಕಾರಿಗಳನ್ನ ನೇಮಿಸುವಲ್ಲಿ ಪರಿಗಣಿಸಲಾಗುತ್ತೆ.

Central Civil Services - Group "A"
Central Civil Services - Group "B"
State Services

ಆಗ 6, 2011

ಗಾಳಿ, ಜಲ, ಸೌರ ವಿದ್ಯುತ್ ಆಯಿತು. ಈಗ ತೇವಮಣ್ಣಿನ ಸರದಿ



ನಮ್ಮ ಊರುಗಳಲ್ಲಿ ಪವರ್ ಕಟ್ ಎಂದು ನಾವು ಗೊಣಗಾಡುತ್ತಿರುತ್ತೇವೆ. ನಮಗೆ ಪವರ್ ಕಟ್ ಇದ್ದರೂ ದಿನದ ಕೆಲವಾರು ಘಂಟೆಗಳಾದರೂ ವಿದ್ಯುತ್ ಸಿಗುತ್ತದೆ. ಅದೇ ಆಫ್ರಿಕಾದ ಇನ್ನೂರೈವತ್ತು ಮಿಲಿಯನ್ ಜನರಿಗೆ ವಿದ್ಯುತ್ ಭಾಗ್ಯವೇ ಇಲ್ಲ. ಇಂದಿಗೂ ಅವರು ಕತ್ತಲೆಯ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಉಣ್ಣುವ ಊಟಕ್ಕೇ ತಾತ್ವಾರ ಬಂದಿರುವಾಗ ವಿದ್ಯುತ್ ನಂತಹ ಯೋಜನೆಗಳನ್ನು ಹಮ್ಮಿಕೊಳ್ಳುವುದು ಆ ರಾಷ್ಟ್ರಗಳ ಸರಕಾರಗಳಿಗೆ ಗಗನದ ಮರೀಚಿಕೆ. ಈ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ಸ್ಥಳೀಯವಾಗಿ ತಯಾರಿಸಿ ನೀಡಬಹುದಾದ ವಿದ್ಯುತ್ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಕರೆ ನೀಡಿತ್ತು. ಇದು ಸುಮಾರು ಮೂರು ವರ್ಷ ಹಳೆಯ ಕಥೆ. ಹೆಚ್ಚಿನವರು ತಮ್ಮ ಪಾಲಿಗೆ ಲಭಿಸಿದ ಐಶಾರಾಮವನ್ನು ಅನುಭವಿಸುತ್ತಾ ಕುಳಿತಿದ್ದರೆ ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ಆರು ವಿದ್ಯಾರ್ಥಿಗಳು ಆಫ್ರಿಕಾದ ಹಲವು ಹಳ್ಳಿಗಳಿಗೆ ಭೇಟಿ ನೀಡಿ ತಾವೇನಾದರು ಮಾಡಬಹುದೇ ಎಂದು ಪ್ರಯತ್ನಪಟ್ಟರು. ಇವರ ಪ್ರಯತ್ನಗಳಿಗೆ ಈಗ ಸಂಪೂರ್ಣವಲ್ಲದಿದ್ದರೂ ತಕ್ಕ ಮಟ್ಟಿನ ಜಯ ದೊರಕಿದೆ.


ಸಾಮಾನ್ಯ ಬ್ಯಾಟರಿಗಳಲ್ಲಿ ಧನ ಮತ್ತು ಋಣ ಧೃವಗಳಿದ್ದು ಬ್ಯಾಟರಿಯೊಳಗಿನ ರಾಸಾಯನಿಕಗಳ ಪ್ರಕ್ರಿಯೆಯಿಂದ ಧನ ಮತ್ತು ಋಣಧಾತುಗಳ ನಡುವೆ ಚಿಕ್ಕ ವಿದ್ಯುದಾವೇಶ (ವೋಲ್ಟೇಜ್) ಕಂಡುಬರುತ್ತದೆ. ಸಾಮಾನ್ಯವಾಗಿ ಎಲ್ಲಾ ನೆಲದಲ್ಲಿ ಕೊಂಚ ಪ್ರಮಾಣದ ಆರ್ದ್ರತೆ ಇದ್ದೇ ಇರುತ್ತದೆ. ನೆಲದಲ್ಲಿರುವ ಮಣ್ಣಿನ ಆಲ್ಗೇ ಮತ್ತು ಬ್ಯಾಕ್ಟೀರಿಯಾಗಳನ್ನು ಆಧರಿಸಿ ಆ ಮಣ್ಣಿನ ಎರೆಡು ಸ್ತರಗಳಲ್ಲಿ ಎರೆಡು ಬಗೆಯ ಲೋಹಗಳನ್ನು ಹುಗಿಯುವುದರ ಮೂಲಕ ಚಿಕ್ಕ ಪ್ರಮಾಣದ ವೋಲ್ಟೇಜ್ ಪಡೆಯಬಹುದಾಗಿದೆ. ಹೀಗೆ ಒಂದರ ಪಕ್ಕ ಒಂದರಂತೆ ಹಲವಾರು ಗುಂಡಿಗಳನ್ನು ತೋಡಿ ಸೀರೀಸ್ ಜೋಡಣೆಯಿಂದ ಬ್ಯಾಟರಿಯೊಂದನ್ನು ಚಾರ್ಜ್ ಮಾಡಬಹುದಾಗಿದೆ. ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳು ನಿರಂತವಾಗಿ ವೃದ್ಧಿಹೊಂದಿ ಸತತವಾಗಿ ವಿದ್ಯುತ್ ಉತ್ಪಾದಿಸುತ್ತಿರುತ್ತದೆ.
ಸುಮಾರು ಒಂದು ಘನ ಮೀಟರ್ ಮಣ್ಣಿನಿಂದ ಒಂದು ಚಿಕ್ಕ ಎಲ್.ಇ.ಡಿ (ಲೈಟ್ ಎಮಿಟಿಂಗ್ ಡಯೋಡ್) ದೀಪವನ್ನು ಹತ್ತಿಸಬಹುದಾಗಿದೆ. ಅಗತ್ಯತೆಗೆ ತೀರಾ ಅಲ್ಪವೆನ್ನಿಸುವ ಈ ಪ್ರಮಾಣ ಏನೂ ಇಲ್ಲದವರಿಗೊಂದು ಆಶಾಕಿರಣ. ಈ ಸಂಶೋಧನೆಗಾಗಿ ಆ ಆರು ವಿದ್ಯಾರ್ಥಿಗಳಿಗೆ ವಿಶ್ವಬ್ಯಾಂಕಿನ ಎರೆಡು ಲಕ್ಷ ಡಾಲರ್ ಸಹಾಯಧನ ದೊರಕಿದೆ.
ಈ ಪ್ರಯೋಗ ಘಾನಾ ಹಾಗೂ ನಮೀಬಿಯಾ ದೇಶಗಳ ಹಲವು ಹಳ್ಳಿಗಳಲ್ಲಿ ನಡೆಸಲಾಗಿದ್ದು ಸ್ಥಳೀಯರಿಗೆ ತಮಗೆ ಬೇಕಾದ ವಿದ್ಯುತ್ತನ್ನು ತಾವೇ ತಯಾರಿಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ. ಟಾಂಜಾನಿಯಾದಲ್ಲಿ ಒಂದು ಘಟಕವನ್ನು ಸಂಪೂರ್ಣಗೊಳಿಸಲಾಗಿದ್ದು ಸ್ಥಳೀಯರು ಅತೀವ ಆಸಕ್ತಿ ವಹಿಸಿದ್ದಾರೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಲೆಬೋನ್ ಸೊಲ್ಯೂಶನ್ಸ್ ಇನ್ಕ್. ಹೆಚ್ಚಿನ ಸಂಶೋಧನೆಗೆ ಅಣಿಯಾಗುತ್ತಿದೆ.
ಇವರ ಪ್ರಯತ್ನಗಳಿಗೆ ಜಯ ಸಿಗಲಿ ಎಂದು ಆಶಿಸೋಣ ಅಲ್ಲವೇ.

ಬರಲಿದೆ ಬಿದಿರಿನ ಹೆಲ್ಮೆಟ್



ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕೋ ಬೇಡವೋ ಎಂಬ ಸಂದಿಗ್ಧದಲ್ಲಿ ಸರ್ಕಾರ ಹಲವು ಬಾರಿ ಕಾನೂನನ್ನು ಬದಲಿಸಿದೆ. ಆದರೆ ಬೈಕ್ ಸವಾರರು ಹೆಲ್ಮೆಟ್ ತೊಡದೇ ಇರಲು ನೀಡುವ ಕಾರಣಗಳು ಹಲವಾರು. ಹೆಲ್ಮೆಟ್ ಧರಿಸುವುದರಿಂದ ಹೆಚ್ಚುವ ಬಿಸಿ, ಕೆದರುವ ಕೂದಲು ಮೊದಲಾದವು. ಅದೂ ಅಲ್ಲದೇ ಹೆಲ್ಮೆಟ್ ತಯಾರಿಸಲು ಬೇಕಾದ ಕಚ್ಚಾಸಾಮಾಗ್ರಿಗಳು ಪರ್ಯಾವರಣಕ್ಕೆ ಮಾರಕ.

ಈ ನಿಟ್ಟಿನಲ್ಲಿ ಬ್ರಿಟನ್ನಿನ ರೂಫ್ ಸಂಸ್ಥೆ ಸಂಪೂರ್ಣ ಪರಿಸರಸ್ನೇಹಿ ಹೆಲ್ಮೆಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದ ರೂಫ್ ಆರ್.ಒ.ಸಿಕ್ಸ್ ಎಂಬ ಹೆಸರಿನ ಈ ಹೆಲ್ಮೆಟ್ಟನ್ನು ಬಿದಿರಿನಿಂದ ತಯಾರಿಸಿದ್ದು ಒಳಭಾಗವನ್ನು ಹತ್ತಿಯಿಂದ ನಿರ್ಮಿಸಲಾಗಿದೆ. ಈ ಹತ್ತಿಯ ವಿಶೇಷ ವಿನ್ಯಾಸದಿಂದ ತಲೆಬುರುಡೆಗೆ ಅಗತ್ಯವಾದ ಗಾಳಿ ಲಭಿಸಲಿದ್ದು ಹೆಚ್ಚಿನ ಆರಾಮ ನೀಡಲಿದೆ.
ತಲೆಬುರುಡೆಯ ಮೇಲೆ ಹೆಲ್ಮೆಟ್ ಧೃಢವಾಗಿ ಕೂರಲು ಅನುಕೂಲವಾಗುವಂತೆ ಇದರ ಪಟ್ಟಿಯನ್ನೂ ಸೀಟ್ ಬೆಲ್ಟ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣವಾಗಿ ತಿರುಗಬಲ್ಲ ಬೈಫೋಕಲ್ ಮಸೂರ ಯಾವುದೇ ಋತುಮಾನದಲ್ಲಿಯೂ ಚಾಲಕನಿಗೆ ಸ್ಪಷ್ಟದರ್ಶನ ನೀಡುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಮಾದರಿಗಿಂತಲೂ ಈ ಮಾದರಿ ಚಾಲಕನಿಗೆ ಹೆಚ್ಚಿನ ಆರಾಮ ಹಾಗೂ ಸುರಕ್ಷತೆ ನೀಡುತ್ತದೆ ಎಂದು ಸಂಸ್ಥೆ ಪ್ರತಿಪಾದಿಸಿದೆ.
ಬ್ರಿಟನ್ನಿನ ಉತ್ಕೃಷ್ಟತಾ ಪರೀಕ್ಷೆಯಾದ ಇ-22-05 ಪರೀಕ್ಷೆಯನ್ನೂ ಈ ಹೆಲ್ಮೆಟ್ ಯಶಸ್ವಿಯಾಗಿ ತೇರ್ಗಡೆಯಾಗಿದೆ. ಹೊಸತಾಗಿ ಬರುತ್ತಿರುವುದರಿಂದ ಬೆಲೆ ಕೊಂಚ ಹೆಚ್ಚಾಗಿದ್ದರೂ ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ಪಾದನೆ ಬೆಲೆಯನ್ನು ಕಡಿಮೆಗೊಳಿಸಲೂ ಬಹುದು
ಅಂದ ಹಾಗೆ ನಮ್ಮ ಮಲೆನಾಡಿನಲ್ಲಿ ಅಡಿಕೆ ಹಾಳೆಯ ಹೆಲ್ಮೆಟ್ ಒಂದು ಶತಮಾನಗಳಿಂದ ತಲೆಗಳನ್ನು ರಕ್ಷಿಸುತ್ತಾ ಬಂದಿದ್ದು ಈ ಸಂಸ್ಥೆಗೆ ತಿಳಿಯಲಿಲ್ಲವೇನೋ, ಗೊತ್ತಿದ್ದಿದ್ದರೆ ಬಿದಿರಿನ ಬದಲಿಗೆ ಅಡಿಕೆ ಹಾಳೆಗೂ ಕಾಯಕಲ್ಪ ಒದಗುತ್ತಿತ್ತು.

ಜುಲೈ 26, 2011

ಏಕೆ ದಿನವೂ ಹಣ್ಣುಗಳನ್ನು ತಿನ್ನಬೇಕು?


ನಿಮ್ಮ ಜ್ಞಾಪಕಶಕ್ತಿ ಚುರುಕಾಗಿರಬೇಕೆ? ಬುದ್ಧಿ ಮೊನಚಾಗಿರಬೇಕೆ? ಪರೀಕ್ಷೆಗಳಲ್ಲಿ ಒಳ್ಳೆಯ ಮಾರ್ಕ್ಸ್ ಪಡೆಯಬೇಕು ಎಂದುಕೊಂಡಿದ್ದೀರಾ? ಸದಾ ಲವಲವಿಕೆಯಿಂದ ಚೂಟಿಯಾಗಿದ್ದು ಎಲ್ಲರ ಕೈಲೂ `ಭೇಷ್' ಎನಿಸಿಕೊಳ್ಳಬೇಕೆ? ಆರೋಗ್ಯ `ಫಸ್ಟ್ಕ್ಲಾಸ್' ಆಗಿರಬೇಕೆ? ನೀವು ಎಲ್ಲರಿಗಿಂತಲೂ ನಿಧಾನವಾಗಿ ಮುದುಕರಾಗಲು ಇಚ್ಛಿಸುತ್ತೀರಾ? ಇಲ್ಲಿದೆ `ರುಚಿಕರ' ಉಪಾಯ!!

ದಿನವೂ ತಾಜಾ ಹಣ್ಣುಗಳನ್ನು ತಿನ್ನಿ. ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ ಎಂಬುದು ಹಿಂದಿನ ಕಾಲದಿಂದಲೂ ಜನರಿಗೆ ಗೊತ್ತು. ಆದರೆ ಆಧುನಿಕ ಮನುಷ್ಯನ ಆಹಾರದಲ್ಲಿ ಹಣ್ಣಿಗೆ ಸ್ಥಾನವೇ ಇಲ್ಲವಾಗಿದೆ. ಅಥವಾ `ಊಟ ಮಾಡಿದ ನಂತರ ತಿನ್ನುವ' ಕೊನೆಯ ಸ್ಥಾನ ಹಣ್ಣುಗಳಿಗೆ ನೀಡಲಾಗಿದೆ! ಹಣ್ಣುಗಳು ಆರೋಗ್ಯ, ಆಯುಷ್ಯ ಹೆಚ್ಚಿಸುತ್ತವೆ ಎಂಬ ಅಂಶ ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಹಣ್ಣುಗಳು ನಿಮ್ಮ ಆಹಾರದ ಪ್ರಮುಖ ಭಾಗವಾಗಲೇಬೇಕು.

ಈ ಭೂಮಿಯಲ್ಲಿ ಶೇ. 70 ಭಾಗ ನೀರು. ಮನುಷ್ಯ ಶರೀರದಲ್ಲೂ ಶೇ. 80ರಷ್ಟು ನೀರು! ಹಣ್ಣುಗಳ ಶೇ. 80ರಷ್ಟು ಪಾಲೂ ನೀರೇ. ನಿಮಗೆ ಬೇಕಾದ ಪೌಷ್ಟಿಕಾಂಶಗಳೆಲ್ಲವೂ ಇದ್ದು ನಿಮ್ಮ ಶರೀರ ಪ್ರಕೃತಿಗೆ ಹಣ್ಣು ಎಷ್ಟು ಹೊಂದಿಕೊಂಡಿದೆ ನೋಡಿದಿರಾ?

`ಬ್ಯಾಡ್ ಕೊಲೆಸ್ಟೆರಾಲ್' (ರಕ್ತದಲ್ಲಿನ ಒಂದು ರೀತಿಯ ಕೊಬ್ಬಿನಂಶ) ಬಗ್ಗೆ ಕೇಳಿದ್ದೀರಾ? ಅದರಿಂದ ಹೃದಯ ರೋಗಗಳು ಬರುತ್ತವೆ. ಹಣ್ಣಿನಲ್ಲಿ ಅದು ಇಲ್ಲವೇ ಇಲ್ಲ!!

ವ್ಹಾ! ಇದು ಬುದ್ಧಿಶಕ್ತಿ ಹೆಚ್ಚಿಸುವ ಮ್ಯಾಜಿಕ್ ಆಹಾರ! ಹಣ್ಣುಗಳು ಕೇವಲ ಹೊಟ್ಟೆಗೆ ಮಾತ್ರವಲ್ಲ, ಮೆದುಳಿಗೂ ಅತ್ಯುತ್ತಮ ಆಹಾರ!! ತಾಜಾ ಹಣ್ಣು ತಿನ್ನುವವರ ಮೆದುಳೂ `ತಾಜಾ' ಆಗಿರುತ್ತದೆ. ಅವರ ನೆನಪಿನ ಶಕ್ತಿ ಚುರುಕಾಗಿರುತ್ತದೆ. ಅವರಿಗೆ ಓದಿದ್ದು, ಕೇಳಿದ್ದು ಸುಲಭವಾಗಿ ಅರ್ಥವಾಗುತ್ತದೆ. ವಿಷಯಗಳು ಬೇಕೆಂದಾಗ ಚಕ್ಕನೆ, ವೇಗವಾಗಿ ನೆನಪಿಗೆ ಬರುತ್ತವೆ. ``ನಾಲಿಗೆ ತುದೀಲಿದೆ. ಹೇಳ್ತೀನಿ, ಒಂದ್ನಿಮಿಷ ಇರು'' ಎನುವ ಗೋಜೇ ಇಲ್ಲ!

ದಿನವೂ ಹಣ್ಣು ತಿನ್ನುವವರಿಗೆ ಮಾನಸಿಕ ಸಮಸ್ಯೆಯೂ ಕಡಿಮೆಯಂತೆ, ಆತ್ಮವಿಶ್ವಾಸ ಹೆಚ್ಚಂತೆ. ನಾವು ಚೆನ್ನಾಗಿರುವುದಷ್ಟೇ ಮುಖ್ಯವಲ್ಲ. `ನಾವು ಚೆನ್ನಾಗಿದ್ದೇವೆ' ಎಂಬ ಭಾವನೆ ಇಟ್ಟುಕೊಂಡು ನಾವು ನೆಮ್ಮದಿಯಾಗಿರುವುದೂ ಬಹಳ ಮುಖ್ಯ. ಹಣ್ಣುಗಳು ಇಂತಹ ಭಾವನೆಯನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ತಜ್ಞರು.

ತಮ್ಮ ಎಷ್ಟೋ ಕಾಯಿಲೆಗಳು ತುಂಬಾ ಹಣ್ಣು ತಿನ್ನುವುದರಿಂದ ವಾಸಿಯಾಯಿತು ಎನ್ನುವವರು ಇದ್ದಾರೆ. ಈ ಕುರಿತು ಇನ್ನೂ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿವೆ.

ಹಣ್ಣು ತಿನ್ನುವವರು ಯಾವ ಪ್ರ್ರಾಣಿಗಳನ್ನೂ ಕೊಲ್ಲಬೇಕಿಲ್ಲ. ಪಾಪ, ಎಲ್ಲ ಪ್ರಾಣಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ, ಅಲ್ಲವೆ? ಮಾಂಸ ಹೆಚ್ಚು ತಿನ್ನುವುದು ಹೃದಯಕ್ಕೆ ಒಳ್ಳೆಯಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಹಣ್ಣು ಅಪಾಯವಿಲ್ಲದ ಅಹಿಂಸಾ ಆಹಾರ. ಸಾತ್ವಿಕ ಆಹಾರ. ಅದು ದೇವರಿಗೂ ಇಷ್ಟ!

ಹಣ್ಣುಗಳು ದುಬಾರಿ, ನಮ್ಮ ಮಕ್ಕಳಿಗೆ ಕೊಡಿಸುವುದು ಕಷ್ಟ ಎಂಬುದು ಹಲವಾರು ತಾಯಿತಂದೆಯರ ಭಾವನೆ. ಆದರೆ ಅಂತಹ ಅನೇಕರು ತಮ್ಮ ಮಕ್ಕಳಿಗೆ ಕೊಡಿಸುವ `ಕುರ್ ಕುರೇ', `ಮಹಾ ಮಂಚ್', `ಡೈರಿ ಮಿಲ್ಕ್ ಚಾಕೊಲೇಟ್', `ಪೆಪ್ಸಿ, ಕೋಕ್' ಗಳ ಬೆಲೆ ಹಣ್ಣುಗಳಿಗಿಂತಲೂ ದುಬಾರಿ! ಒಂದು ಬಾಳೆಹಣ್ಣಿನ ಬೆಲೆ ಈಗಲೂ ಬರೀ ಎರಡೇ ರೂಪಾಯಿ!!

ಹಣ್ಣುಗಳಲ್ಲಿ ವಿಟಮಿನ್ಗಳು, ಖನಿಜಾಂಶಗಳು ಅಪಾರವಾಗಿವೆ. ಅವು `ಕೆಮಿಕಲ್' ಆಹಾರದಂತಲ್ಲ. ಅವೆಷ್ಟು `ಫ್ರೆಶ್', ಎಷ್ಟೊಂದು ರುಚಿ! ಸಿಹಿ ಸಿಹಿ, ಹುಳಿ ಸಿಹಿ..ವ್ಹಾಹ್!!

ಪೆನ್ಸಿಲ್ ಪುರಾಣ



ಪೆನ್ಸಿಲ್ ಬಗ್ಗೆ ನಿಮಗೆಷ್ಟು ಗೊತ್ತು? ಒಂದಿಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ!

ಅಂದಹಾಗೆ, `ಪೆನ್ಸಿಲ್' ಪದದ ಮೂಲ ಗೊತ್ತೆ? ಅದರ ಮೂಲ ಲ್ಯಾಟಿನ್ ಭಾಷೆಯ `ಪೆನಿಸಿಲಸ್'. ಹಾಗೆಂದರೆ `ಚಿಕ್ಕ ಬಾಲ' ಎಂದರ್ಥ!!

1564ರಲ್ಲಿ ಇಂಗ್ಲೆಂಡಿನಲ್ಲಿ ಗ್ರಾಫೈಟ್ ಪತ್ತೆಯಾಯಿತು. 1565ನಲ್ಲಿ ಪೆನ್ಸಿಲ್ ರೂಪಿಸಲಾಯಿತು. 1662ರಲ್ಲಿ ಜರ್ಮನಿಯ ಫ್ಯಾಕ್ಟರಿಯಲ್ಲಿ ಪೆನ್ಸಿಲ್ ಉತ್ಪಾದನೆ ಆರಂಭವಾಯಿತು. 1795ರಲ್ಲಿ ನಿಕೋಲಸ್ ಜಾಕ್ ಕಾಂಟೆ ಜೇಡಿಮಣ್ಣು ಹಾಗೂ ಗ್ರಾಫೈಟ್ ಮಿಶ್ರಮಾಡಿದ ಪೆನ್ಸಿಲ್ ತಯಾರಿಕೆಯ ಪೇಟೆಂಟ್ ಪಡೆದ.

ಹಿಂದೆ ಬರೆಯಲು ಲೆಡ್ (ಸೀಸ) ಕಡ್ಡಿ ಬಳಸುತ್ತಿದ್ದರು. ಪೆನ್ಸಿಲ್ ತುದಿಯನ್ನು ನಾವು ಈಗಲೂ `ಲೆಡ್' ಎನ್ನುತ್ತೇವಾದರೂ ಅದು ಲೆಡ್ ಅಲ್ಲ, ಗ್ರಾಫೈಟ್. ಹೀಗಾಗಿ ಪೆನ್ಸಿಲ್ ಚುಚ್ಚಿಕೊಂಡು ಗಾಯವಾದರೂ ಸೀಸದ ವಿಷ ಸೋಂಕುವ ಭಯವಿಲ್ಲ.

1828ರಲ್ಲಿ ಪೆನ್ಸಿಲ್ ಶಾರ್ಪನರ್ ರೂಪಿಸಿದವನ ಹೆಸರು ಬರ್ನಾಡ ಲಾಸಸಿಮೋನ್. 1847ರಲ್ಲಿ ಥೆರಿ ಡಿಸ್ ಎಸ್ಟ್ವಾಕ್ಸ್ ಉತ್ತಮ  ಶಾರ್ಪನರ್ ಗಳನ್ನು ಅಭಿವೃದ್ಧಿಪಡಿಸಿದ. ಇವರಿಬ್ಬರೂ ಪ್ರಾನ್ಸ್ ನವರು. ಅದೇ ದೇಶದ ಸಂಶೋಧಕರು ಪೆನ್ಸಿಲ್ ಗುರುತು ಅಳಿಸುವ `ರಬ್ಬರ್' ರೂಪಿಸಿದರು.

ಆರಂಭದಲ್ಲಿ ಪೆನ್ಸಿಲ್ಲಿಗೆ ಬಣ್ಣ ಹಾಕುತ್ತಿರಲಿಲ್ಲ. ಕಾರಣ ಅದರಲ್ಲಿ ಬಳಕೆಯಾಗಿರುವ ಉತ್ತಮ ಗುಣಮಟ್ಟದ ಮರದ ಕವಚದ ಪ್ರದರ್ಶನ! ಆದರೆ 1890ರ ಹೊತ್ತಿಗೆ ಪೆನ್ಸಿಲ್ ಗಳ ಮೇಲೆ ಬಣ್ಣದ ವಿನ್ಯಾಸ ಮಾಡಿ ಬ್ರಾಂಡ್ ನೇಮ್ ಬಳಸುವ ರೂಢಿಯನ್ನು ತಯಾರಿಕಾ ಕಂಪೆನಿಗಳು ಆರಂಭಿಸಿದವು.

18ನೇ ಶತಮಾನದಲ್ಲಿ ಉತ್ತಮ ಗ್ರಾಫೈಟ್ ಚೀನಾದಿಂದ ಸರಬರಾಜಾಗುತ್ತಿತ್ತು. ತಮ್ಮ ಪೆನ್ಸಿಲ್ ನಲ್ಲಿ ಚೀನಾ ಗಾಫೈಟ್ ಇದೆ ಎಂದು ಹೇಳಿಕೊಳ್ಳಲು ಕೆಲವು ಕಂಪೆನಿಗಳು ಪೆನ್ಸಿಲ್ ಮೇಲೆ ಹಳದಿ ಗೆರೆ ಹಾಕುತ್ತಿದ್ದವು (ಚೀನಾದಲ್ಲಿ ಹಳದಿ ವರ್ಣಕ್ಕೆ ವಿಶೇಷ ಗೌರವ ಇತ್ತು). ಈಗಲೂ ಬಹುತೇಕ ಪೆನ್ಸಿಲ್ ಗಳ ಮೇಲೆ ಹಳದಿ ಗೆರೆಗಳಿವೆ!!

ಪೆನ್ಸಿಲ್ ಗಳಿಂದ ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲೂ ಬರೆಯಬಹುದು! ಇಂಕ್ ಪೆನ್ನುಗಳಿಂದ ಸಾಧ್ಯವಿಲ್ಲ.

ಜಗತ್ತಿನ ಅತಿ ದೊಡ್ಡ ಪೆನ್ಸಿಲ್ `ಕ್ಯಾಸ್ಟೆಲ್ 9000' ಮಲೇಷಿಯಾದ ಕ್ವಾಲಾಲಂಪುರ್ ಬಳಿ ಪ್ರದರ್ಶನಕ್ಕಿದೆ. ಅದರ ಎತ್ತರ 85 ಅಡಿ!!

ರಜೆಯಲ್ಲಿ ಮಾಡಲು ಯಾವ ಕೆಲಸವೂ ಇಲ್ಲವೆ? ಒಂದು ಹೊಸ ಪೆನ್ಸಿಲ್ ತೆಗೆದುಕೊಳ್ಳಿ. ಅದು ಮುಗಿಯುವವರೆಗೂ ಬರೆಯಲು ಆರಂಭಿಸಿ. ಅದರಲ್ಲಿ 45,000 ಪದಗಳನ್ನು ಬರೆಯಬಹುದು. ಅಥವಾ ಗೆರೆ ಎಳೆದುಕೊಂಡು ಹೊರಡಿ. 56 ಕಿಲೋಮೀಟರ್ ಗೆರೆ ಎಳೆಯಬಹುದು! ಯಾರೂ ಇನ್ನೂ ಈ ದಾಖಲೆ ನಿರ್ಮಿಸಿಲ್ಲ!!

ಈಗ ಜಗತ್ತಿನಲ್ಲಿ ಉತ್ಪಾದಿಸುವ ಪೆನ್ಸಿಲ್ ಗಳಲ್ಲಿ ಅರ್ಧಭಾಗವನ್ನು ಬರೀ ಚೀನಾ ಒಂದೇ ಉತ್ಪಾದಿಸುತ್ತದೆ. 2004ರಲ್ಲಿ ಚೀನಾ ಫ್ಯಾಕ್ಟರಿಗಳು ತಯಾರಿಸಿದ ಪೆನ್ಸಿಲ್ ಗಳ ಸಂಖ್ಯೆ 1000 ಕೋಟಿ! ಇಷ್ಟು ಪೆನ್ಸಿಲ್ ಗಳಿಂದ ಇಡೀ ಭೂಗೋಳದ ಸುತ್ತ 40 ಬಾರಿ ಗೆರೆ ಎಳೆಯಬಹುದು!!

ವಿಶ್ವದ ದೊಡ್ಡ ಸಸ್ತನಿಗಳು



1) ಭೂಮಿಯ ದೈತ್ಯ, ನೀಲಿ ತಿಮಿಂಗಿಲ

ಭೂಮಿಯ ಅತಿ ದೊಡ್ಡ ಪ್ರಾಣಿ ಸಮುದ್ರದಲ್ಲಿದೆ. ಅದೇ ನೀಲಿ ತಿಮಿಂಗಿಲ. ಅದು 33 ಮೀಟರ್ (110 ಅಡಿ) ಉದ್ದ 181 ಮೆಟ್ರಿಕ್ ಟನ್ (1,80,000 ಕೆ.ಜಿ.!) ತೂಕವಿರುವ ಬೃಹತ್ ಸಸ್ತನಿ. ಅಂದರೆ 8-10 ಅಂತಸ್ತಿನ ಭಾರಿ ಕಟ್ಟಡದಷ್ಟು ಗಾತ್ರ!
ನೀಲಿ ತಿಮಿಂಗಿಲದ ತಲೆ ಎಷ್ಟು ದೊಡ್ಡದೆಂದರೆ ಅದರ ನಾಲಿಗೆಯ ಮೇಲೆ 50 ಜನರು ನಿಂತುಕೊಳ್ಳಬಹುದು! ಅದರ ಹೃದಯ ಒಂದು ಚಿಕ್ಕ ಕಾರ್ನಷ್ಟು ಗಾತ್ರವಿರುತ್ತದೆ. ನೀಲಿ ತಿಮಿಂಗಿಲದ ಮರಿಯೇ ಒಂದು ದೊಡ್ಡ ಆನೆಯಷ್ಟು ತೂಕವಿದ್ದು 25 ಅಡಿ ಉದ್ದವಿರುತ್ತದೆ. ಅದು ತಾನು ಹುಟ್ಟಿದ ಪ್ರಥಮ 7 ತಿಂಗಳಲ್ಲಿ ಪ್ರತಿದಿನವೂ 400 ಲೀಟರ್ ಹಾಲು ಕುಡಿಯುತ್ತದೆ! ಈ ಜೀವಿ 50-80 ವರ್ಷ ಬದುಕಬಲ್ಲುದು. ಆದರೆ ಕ್ರೂರಿ ಮನುಷ್ಯನ ಬೇಟೆಯಿಂದಾಗಿ ನೀಲಿ ತಿಮಿಂಗಿಲದ ಸಂತತಿ ಕಡಿಮೆಯಾಗಿ ಈಗ ಬರೀ 10,000ಕ್ಕೆ ಇಳಿದಿದೆ.

2) ಬೃಹತ್ ಕಾಯದ ಬೃಹತ್ಕಾಯೋಸಾರಸ್

ನೀಲಿ ತಿಮಿಂಗಿಲ ಈಗ ಬದುಕಿರುವ ಎಲ್ಲ ಪ್ರಾಣಿಗಿಂತಲೂ ಬೃಹತ್ ಕಾಯದ ಪ್ರಾಣಿ. ಈ ಭೂಮಿಯ ಇತಿಹಾಸದಲ್ಲೂ ಅದೇ ಬೃಹತ್ ಪ್ರಾಣಿ ಎನ್ನಲಾಗುತ್ತದೆ. ಈಗ ತಿಳಿದಿರುವ ಅನೇಕ ಜಾತಿಯ ಡೈನೋಸಾರ್ಗಳೂ ನೀಲಿ ತಿಮಿಂಗಿಲಕ್ಕಿಂತ ಚಿಕ್ಕ ಗಾತ್ರದವು.
ಆದರೆ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಬೃಹತ್ ಡೈನೋಸಾರ್ನ ಫನೀಕೃತತ ಪಳೆಯುಳಿಕೆ (ಫಾಸಿಲ್) ಸಿಕ್ಕಿದ್ದು ಈ ಜಾತಿಯ ಡೈನೋಸಾರ್ಗಳಿಗೆ `ಬೃಹತ್ ಕಾಯೋಸಾರಸ್' ಎನ್ನಲಾಗಿದೆ.
ಅದರ ಬಗ್ಗೆ ಖಚಿತ ಸಂಶೋಧನೆ ಇನ್ನೂ ಬಾಕಿಯಿದೆ. ಅದೇ ವಿಶ್ವದ ಅತಿ ಬೃಹತ್ ಪ್ರಾಣಿ ಎಂದೂ ಕೆಲವರು ಹೇಳುತ್ತಾರೆ. ಅದು ಸಾಮಾನ್ಯವಾಗಿ ಸುಮಾರು 40 ಮೀಟರ್ (130 ಅಡಿ) ಉದ್ದವಿದ್ದು 14 ಮೀಟರ್ (46 ಅಡಿ) ಎತ್ತರವಿತ್ತು ಎನ್ನಲಾಗಿದೆ. ಅದು 220 ಟನ್ ತೂಕವಿರುತ್ತಿತ್ತು ಎಂದು ಕೆಲವು ತಜ್ಞರ ಅನಿಸಿಕೆ. ಈ ಕುರಿತು ಹೆಚ್ಚಿನ ಅಧ್ಯಯನ ಇನ್ನೂ ನಡೆಯಬೇಕಿದೆ.


3) ದೊಡ್ಡ ಪ್ರಾಣಿ ಆಫ್ರಿಕಾ ಆನೆ



ನೆಲದ ಮೇಲೆ ನಡೆಯುವ ಪ್ರಾಣಿಗಳ ಪೈಕಿ ದೊಡ್ಡ ಪ್ರಾಣಿ ಎಂದರೆ ಆನೆ. ಅದರಲ್ಲೂ ಆಫ್ರಿಕಾದ `ಸವಾನಾ' ಆನೆ ಜಗತ್ತಿನ ಇತರ ಎಲ್ಲ ಪ್ರದೇಶಗಳ ಆನೆಗಳ ಪೈಕಿ ಅತಿ ದೊಡ್ಡದು. ಚೆನ್ನಾಗಿ ಬೆಳೆದ ಸವಾನಾ ಗಂಡು ಆನೆ 7500 ಕೆ.ಜಿ. ತೂಕವಿರುತ್ತದೆ. ಅಂದರೆ 75 ಕೆ.ಜಿ. ತೂಕವಿರುವ 100 ಜನರ ಒಟ್ಟು ತೂಕಕ್ಕೆ ಸಮ! ಆನೆಗಳು ದಿನಕ್ಕೆ 300 ಕೆಜಿಯಷ್ಟು ಆಹಾರ (ಎಲೆ, ಹಣ್ಣು ಇತ್ಯಾದಿ) ಸೇವಿಸುತ್ತವೆ.

4) ಎತ್ತರದ ಪ್ರಾಣಿ - ಜಿರಾಫೆ!!

ಜಗತ್ತಿನ ಅತಿ ಎತ್ತರದ ಸಸ್ತನಿ (ಮ್ಯಾಮಲ್) ಎಂದರೆ ಜಿರಾಫೆ (`ಜಿ-ರಾಫ್' ಶಬ್ದ ಕನ್ನಡದಲ್ಲಿ `ಜಿರಾಫೆ' ಆಗಿದೆ).
ಗಂಡು ಜಿರಾಫೆ ಸುಮಾರು 5.5 ಮೀಟರ್ ಎತ್ತರ ಬೆಳೆಯುತ್ತದೆ. ಅಂದರೆ ಮೂರು ನಾಲ್ಕು ಜನರು ಒಬ್ಬರ ಮೇಲೊಬ್ಬರು ನಿಂತುಕೊಂಡರೆ ಆಗುವ ಎತ್ತರದಷ್ಟು! ಆಫ್ರಿಕಾದ ಸಹಾರಾ ಮರುಭೂಮಿಯ ದಕ್ಷಿಣಕ್ಕೆ ಜಿರಾಫೆಗಳು ವಾಸಿಸುತ್ತವೆ.

5) ಕ್ಯಾಪಿಬಾರಾ -ಹಂದಿಗಾತ್ರದ ಹೆಗ್ಗಣ!

ಮೂಷಿಕಗಳ (ಇಲಿ-ಹೆಗ್ಗಣ) ಪೈಕಿ `ಕ್ಯಾಪಿಬಾರಾ' ಅತಿ ದೊಡ್ಡದು. ಇದು 1.3 ಮೀಟರ್ ಉದ್ದವಿರುವ ಭಾರಿ ಹೆಗ್ಗಣ! ದಕ್ಷಿಣ ಅಮೆರಿಕದ ಹಳ್ಳ-ಕೊಳ್ಳ, ಸರೋವರ ಹಾಗೂ ನದಿಗಳ ಸುತ್ತಮುತ್ತ ವಾಸಿಸುತ್ತದೆ.